ಮಲೆ ಮಹದೇಶ್ವರ ಬೆಟ್ಟದಲ್ಲಿ ಮಧ್ಯ ಮುಕ್ತ ಆಂದೋಲನ

 ತನ್ನ ಪವಾಡದಿಂದಲೇ ಹೆಸುರುವಾಸಿಯಾಗಿರುವ ಮಲೆ ಮಹದೇಶ್ವರ ಬೆಟ್ಟದಲ್ಲಿ ಈಗ ಮದ್ಯದ ಘಾಟು ಹೆಚ್ಚಾಗಿ ಸದ್ದು ಮಾಡ್ತಯಿದೆ. ಸ್ವತಃ ಸಿಎಂ ಸಿದ್ದರಾಮಯ್ಯ ಮದಪ್ಪನ ಸನ್ನಿಧಾನಕ್ಕೆ ಬಂದಾಗ ಈ ಕುರಿತು ಚರ್ಚೆ ನಡೆಸಿ ಅಬಕಾರಿ ಇಲಾಖೆಗೆ ಖಡಕ್ ವಾರ್ನಿಂಗ್ ನೀಡಿದ್ರು. ಯಾವಾಗ ಸ್ವತಃ ಸಿಎಂ ಎಚ್ಚರಿಕೆ ನೀಡಿದ್ರೊ ಈಗ ಅಬಕಾರಿ ಇಲಾಖೆ ಫುಲ್ ಆಕ್ಟಿವ್ ಆಗಿದ್ದು ಮದ್ಯ ಮುಕ್ತ ಮಹದೇಶ್ವರ ಬಟ್ಟ ಮಾಡ್ಲಿಕ್ಕೆ ಮುಂದಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ನಿಮ್ಮ ಮುಂದೆ.

Written by - Manjunath N | Last Updated : Feb 4, 2024, 12:19 PM IST
  • ಸಿಎಂ ಖಡಕ್ ವಾರ್ನಿಂಗ್ ಕೊಟ್ಟ ಬೆನ್ನಲ್ಲೇ ಈಗ ಎಚ್ಚೆತ್ತ ಅಬಕಾರಿ ಇಲಾಖೆ ವಿಶೇಷ ತಂಡವನ್ನ ಮಾಡಿಕೊಂಡು ಸ್ಪೆಷಲ್ ಡ್ರೈವ್ ಮಾಡ್ತಯಿದೆ.
  • ಅಕ್ರಮವಾಗಿ ದಿನಸಿ ಅಂಗಡಿಯಲ್ಲಿ ಮದ್ಯ ಮಾರಾಟ ಮಾಡುತ್ತಿದ್ದವರ ಮೇಲೆ ಕೇಸ್ ಬುಕ್ ಮಾಡುವ ಮೂಲಕ ಬಿಸಿ ಮುಟ್ಟಿಸಿದೆ.
  • ಮಲೆ ಮಹದೇಶ್ವರ ಬೆಟ್ಟದ ಅಂಗಡಿ ಮಾಲೀಕರಿಗೆ ಲಿಕ್ಕರ್ ನೀಡದಂತೆ ಎಚ್ಚರಿಕೆ ನೀಡಿದ್ದಾರೆ.
ಮಲೆ ಮಹದೇಶ್ವರ ಬೆಟ್ಟದಲ್ಲಿ ಮಧ್ಯ ಮುಕ್ತ ಆಂದೋಲನ title=

ಚಾಮರಾಜನಗರ: ತನ್ನ ಪವಾಡದಿಂದಲೇ ಹೆಸುರುವಾಸಿಯಾಗಿರುವ ಮಲೆ ಮಹದೇಶ್ವರ ಬೆಟ್ಟದಲ್ಲಿ ಈಗ ಮದ್ಯದ ಘಾಟು ಹೆಚ್ಚಾಗಿ ಸದ್ದು ಮಾಡ್ತಯಿದೆ. ಸ್ವತಃ ಸಿಎಂ ಸಿದ್ದರಾಮಯ್ಯ ಮದಪ್ಪನ ಸನ್ನಿಧಾನಕ್ಕೆ ಬಂದಾಗ ಈ ಕುರಿತು ಚರ್ಚೆ ನಡೆಸಿ ಅಬಕಾರಿ ಇಲಾಖೆಗೆ ಖಡಕ್ ವಾರ್ನಿಂಗ್ ನೀಡಿದ್ರು. ಯಾವಾಗ ಸ್ವತಃ ಸಿಎಂ ಎಚ್ಚರಿಕೆ ನೀಡಿದ್ರೊ ಈಗ ಅಬಕಾರಿ ಇಲಾಖೆ ಫುಲ್ ಆಕ್ಟಿವ್ ಆಗಿದ್ದು ಮದ್ಯ ಮುಕ್ತ ಮಹದೇಶ್ವರ ಬಟ್ಟ ಮಾಡ್ಲಿಕ್ಕೆ ಮುಂದಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ನಿಮ್ಮ ಮುಂದೆ.

ಇದನ್ನೂ ಓದಿ: ಕವಿಪವಿ ವೆಬಿನಾರ್: ಯಾವುದೇ ಮಾಧ್ಯಮದ ಭವಿಷ್ಯ ಆತಂಕದಲ್ಲಿಲ್ಲ; ಸಂಪಾದಕರ ಅಭಿಮತ

ಮಲೆ ಮಹದೇಶ್ವರ ಬೆಟ್ಟ ಈ ಹೆಸ್ರು ಕೇಳಿದ್ರೆ ಸಾಕು..ಶಿವನ ಭಕ್ತರು ಬಕ್ತಿ ಪರವಶವಾಗಿ ಬಿಡ್ತಾರೆ. ತನ್ನದೆ ಪವಾಡದಿಂದ ರಾಜ್ಯ ಹೊರ ರಾಜ್ಯದಿಂದ ಅಪಾರ ಭಕ್ತಗಣವನ್ನ ಹೊಂದಿರುವ ಈ ಪುಣ್ಯ ಕ್ಷೇತ್ರಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಮಾದಪ್ಪನ ಕೃಪೆಗೆ ಪಾತ್ರರಾಗುತ್ತಾರೆ. ಇಂತ ಪವಿತ್ರ ಸ್ಥಳದಲ್ಲಿ ಈಗ ಮದ್ಯದ ಘಾಟು ಹೆಚ್ಚಾಗುತ್ತಿದೆ.ಪ್ರವಾಸಿಗರಿಗೆ ಅಕ್ರಮವಾಗಿ ಮದ್ಯ ಮಾರಾಟ ಮಾಡುವ ಮೂಲಕ ಕೆಲ ಅಂಗಡಿ ವ್ಯಾಪಾರಸ್ಥರು ಅಕ್ರಮವಾಗಿ ಹಣ ಮಾಡುತ್ತಿದ್ದಾರೆಂಬ ಆರೋಪಗಳು ಕೇಳಿ ಬಂದಿತ್ತು. ಸ್ವತಃ ಸಿಎಂ ಸಿದ್ದರಾಮಯ್ಯರೇ ಈ ಕುರಿತು ಚಾಮರಾಜನಗರದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ವಿಚಾರವನ್ನ ಪ್ರಸ್ಥಾಪಿಸಿದ್ರು. ಅಬಕಾರಿ ಇಲಾಖೆಯ ಸಿಬ್ಬಂದಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ರು. ಈಗ ಅಬಕಾರಿ ಇಲಾಖೆ ಸ್ಪೆಷಲ್ ಡ್ರೈವ್ ಗಳನ್ನ ಮಾಡುವ ಮೂಲಕ ಮದ್ಯ ಮುಕ್ತ ಮಹದೇಶ್ವರ ಬೆಟ್ಟವನ್ನಾಗಿಸಲು ಮುಂದಾಗಿದ್ದಾರೆ.

ಇದನ್ನೂ ಓದಿ:ಮಳೆಗಾಲದ ದಿನಗಳಲ್ಲಿ ಈ ರೀತಿಯಾಗಿ ಬಟ್ಟೆಗಳನ್ನು ಒಣಗಿಸಿ, ವಾಸನೆ ಮತ್ತು ತೇವಾಂಶದ ಕುರುಹು ಇರುವುದಿಲ್ಲ!

ಸಿಎಂ ಖಡಕ್ ವಾರ್ನಿಂಗ್ ಕೊಟ್ಟ ಬೆನ್ನಲ್ಲೇ ಈಗ ಎಚ್ಚೆತ್ತ ಅಬಕಾರಿ ಇಲಾಖೆ ವಿಶೇಷ ತಂಡವನ್ನ ಮಾಡಿಕೊಂಡು ಸ್ಪೆಷಲ್ ಡ್ರೈವ್ ಮಾಡ್ತಯಿದೆ. ಅಕ್ರಮವಾಗಿ ದಿನಸಿ ಅಂಗಡಿಯಲ್ಲಿ ಮದ್ಯ ಮಾರಾಟ ಮಾಡುತ್ತಿದ್ದವರ ಮೇಲೆ ಕೇಸ್ ಬುಕ್ ಮಾಡುವ ಮೂಲಕ. ಬಿಸಿ ಮುಟ್ಟಿಸಿದೆ. ಸಾಲ್ದು ಅಂತ ಮದ್ಯ ಮಾರಾಟಗಾರರ ಸಂಘದವರ ಜತೆ ಸಭೆ ನಡೆಸಿ ಯಾವುದೇ ಕಾರಣಕ್ಕೂ ಮಲೆ ಮಹದೇಶ್ವರ ಬೆಟ್ಟದ ಅಂಗಡಿ ಮಾಲೀಕರಿಗೆ ಲಿಕ್ಕರ್ ನೀಡದಂತೆ ಎಚ್ಚರಿಕೆ ನೀಡಿದ್ದಾರೆ. ಇದರಿಂದ ಮಲೆ ಮಹದೇಶ್ವರ ಬೆಟ್ಟದಲ್ಲಿ ಮದ್ಯ ಸರಬರಾಜು ಆಗದಂತೆ ಎಚ್ಚರಿಕೆ ನೀಡಿದ್ದಾರೆ.

ಒಟ್ಟಾರೆ ಮದ್ಯಮುಕ್ತ ಮಹದೇಶ್ವಯ ಬೆಟ್ಟಕ್ಕೆ ಅಬಕಾರಿ ಇಲಾಖೆ ಮುಂದಾಗಿದ್ದು ಅಬಕಾರಿ ಇಲಾಖೆಯ ಈ ಕಾರ್ಯ ವೈಖರಿ ಎಷ್ಟರ ಮಟ್ಟಿಗೆ ಮುಂಬರುವ ದಿನಗಳಲ್ಲಿ ಇಂಪ್ಯಾಕ್ಟ್ ಆಗಲಿದೆಯೊ ಕಾದು ನೋಡ್ಬೇಕಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News