ಯಡಿಯೂರಪ್ಪ ಸಂಪುಟದಲ್ಲಿ ಲಿಂಗಾಯತರದ್ದೇ ಪ್ರಾಬಲ್ಯ, ಇಲ್ಲಿದೆ ಪಟ್ಟಿ...

ಬೆಳಗ್ಗೆ 10.30 ರಿಂದ 11.30 ರ ರೊಳಗೆ ರಾಜಭವನದ ಗಾಜಿನಮನೆಯಲ್ಲಿ ನಡೆಯುವ ಸರಳ ಸಮಾರಂಭದಲ್ಲಿ ಸಂಪುಟದ ಹೊಸ 17 ಶಾಸಕರು ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. 

Last Updated : Aug 20, 2019, 10:10 AM IST
ಯಡಿಯೂರಪ್ಪ ಸಂಪುಟದಲ್ಲಿ ಲಿಂಗಾಯತರದ್ದೇ ಪ್ರಾಬಲ್ಯ, ಇಲ್ಲಿದೆ ಪಟ್ಟಿ... title=
File Image

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರದ ಸಂಪುಟ ವಿಸ್ತರಣೆ ಕುತೂಹಲಕ್ಕೆ ಇಂದು ತೆರೆ ಬಿದ್ದಿದೆ.  ಬೆಳಗ್ಗೆ 10.30 ರಿಂದ 11.30 ರ ರೊಳಗೆ ರಾಜಭವನದ ಗಾಜಿನಮನೆಯಲ್ಲಿ ನಡೆಯುವ ಸರಳ ಸಮಾರಂಭದಲ್ಲಿ ಸಂಪುಟದ ಹೊಸ 17 ಶಾಸಕರು ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. 
ಯಡಿಯೂರಪ್ಪ ಸಂಪುಟದಲ್ಲಿ ಲಿಂಗಾಯತರ ಪ್ರಾಬಲ್ಯ ಹೆಚ್ಚಾಗಿದೆ.

ಇಂದು ಒಟ್ಟು 17 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದು ಜಾತಿ ಲೆಕ್ಕಾಚಾರದಲ್ಲಿ 7 ಲಿಂಗಾಯತ ಶಾಸಕರು, 3 ಒಕ್ಕಲಿಗ ಶಾಸಕರು,  4 ಎಸ್‌ಸಿ ಎಸ್‌ಟಿ ಶಾಸಕರು, 2 ಹಿಂದುಳಿದ ವರ್ಗದ ಶಾಸಕರು ಹಾಗೂ 1 ಬ್ರಾಹ್ಮಣ ಶಾಸಕರಿಗೆ ಮಣೆ ಹಾಕಲಾಗಿದೆ.

ಇಂದು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿರುವವರ ಸಂಪೂರ್ಣ ಪಟ್ಟಿ ಇಲ್ಲಿದೆ:

7 ಲಿಂಗಾಯತ ಸಚಿವರು

  • 1. ಲಕ್ಷ್ಮಣ್ ಸವಧಿ
  • 2. ಜಗದೀಶ್ ಶೆಟ್ಟರ್
  • 3. ವಿ. ಸೋಮಣ್ಣ
  • 4. ಬಸವರಾಜ್ ಬೊಮ್ಮಾಯಿ
  • 5. ಜೆ.ಸಿ. ಮಾಧುಸ್ವಾಮಿ
  • 6. ಸಿ.ಸಿ. ಪಾಟೀಲ್
  • 7. ಶಶಿಕಲಾ ಜೊಲ್ಲೆ 

 3 ಒಕ್ಕಲಿಗ

  • 1. ಆರ್. ಅಶೋಕ್
  • 2. ಡಾ. ಅಶ್ವತ್ಥ ನಾರಾಯಣ
  • 3. ಸಿ.ಟಿ.ರವಿ

4 ಎಸ್‌ಸಿ ಎಸ್‌ಟಿ

  • 1. ಶ್ರೀರಾಮುಲು
  • 2. ಗೋವಿಂದ ಕಾರಜೋಳ
  • 3. ನಾಗೇಶ್
  • 4. ಪ್ರಭು ಚೌವ್ಹಾಣ್

2 ಹಿಂದುಳಿದ ವರ್ಗ

  • 1. ಎಸ್.ಈಶ್ವರಪ್ಪ
  • 2. ಕೋಟಾ ಶ್ರೀನಿವಾಸ್ ಪೂಜಾರಿ

1 ಬ್ರಾಹ್ಮಣ

  • 1. ಸುರೇಶ್ ಕುಮಾರ್

Trending News