ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ದೂರು

ನಿಯಮಗಳನ್ನು ಗಾಳಿಗೆ ತೂರಿ ಒಬ್ಬ ಶಾಸಕರಿಗೆ ಎರಡು ಹುದ್ದೆ ನೀಡಲು ಪತ್ರ ಬರೆದಿರುವ ಸಿಎಂ ವಿರುದ್ದ ಪೋಲೀಸ್ ಮಹಾಸಂಘದ ಅಧ್ಯಕ್ಷ ಶಶಿಧರ್ ದೂರು ನೀಡಿದ್ದಾರೆ. 

Last Updated : Sep 19, 2017, 12:01 PM IST
ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ದೂರು title=

ಬೆಂಗಳೂರು: ಶಾಸಕ ಎಂ.ಟಿ.ಬಿ.ನಾಗರಾಜ್ ಅವರಿಗೆ ಎರಡು ಹುದ್ದೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದಿರುವ ಕುರಿತು ವಿಚಾರಣೆ ನಡೆಸಲು ಅನುಮತಿ ಕೋರಿ ಪೋಲೀಸ್ ಮಹಾಸಂಘದ ಅಧ್ಯಕ್ಷ ಶಶಿಧರ್ ರಾಜ್ಯಪಾಲ ವಜುಬಾಯಿ ವಾಲಾ ಅವರಿಗೆ ಪತ್ರ ಬರೆದಿದ್ದಾರೆ. 

ಮುಖ್ಯಮಂತ್ರಿ ಸಿದ್ದರಾಮಯ್ಯ, ಶಾಸಕ ಎಂ.ಟಿ.ಬಿ.ನಾಗರಾಜ್ ಅವರಿಗೆ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷರನ್ನಾಗಿ ಮಾಡಲು ಮತ್ತು ಬಯಾಪ ಚೇರ್ಮನ್ ಮಾಡಿ, ಸಂಪುಟ ದರ್ಜೆ ಸ್ಥಾನ ನೀಡುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ರವಾನಿಸಿದ್ದರು. 

ಮುಖ್ಯಮಂತ್ರಿಗಳ ಈ ಶಿಫಾರಸ್ಸಿನಿಂದಾಗಿ ಒಬ್ಬ ಶಾಸಕರಿಗೆ ಏಕಕಾಲದಲ್ಲಿ ಎರಡು ಹುದ್ದೆ ನೀಡಿದಂತಾಗುತ್ತದೆ, ಇದು ಮುಖ್ಯಮಂತ್ರಿಗಳೇ ನಿಯಮಗಳನ್ನು ಗಾಳಿಗೆ  ತೂರಿದಂತಾಗಿದೆ ಎಂದು ಶಶಿಧರ್ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.

Trending News