ಮಂಡ್ಯ ಹತ್ತಿರ ಕಾಲುವೆಗೆ ಉರುಳಿದ ಬಸ್; 24 ಪ್ರಯಾಣಿಕರ ದುರ್ಮರಣ

ಮಂಡ್ಯ ಜಿಲ್ಲೆಯಲ್ಲಿರುವ ಕನಗನಮರಡಿಯ ಕಾಲುವೆ ಖಾಸಗಿ ಬಸ್ ಉರುಳಿ 24 ಅಧಿಕ ಪ್ರಯಾಣಿಕರು  ದುರ್ಮರಣಕ್ಕಿಡಾಗಿದ್ದಾರೆ.

Last Updated : Nov 24, 2018, 02:24 PM IST
ಮಂಡ್ಯ ಹತ್ತಿರ ಕಾಲುವೆಗೆ ಉರುಳಿದ ಬಸ್; 24 ಪ್ರಯಾಣಿಕರ ದುರ್ಮರಣ  title=
photo:ANI

ಬೆಂಗಳೂರು: ಮಂಡ್ಯ ಜಿಲ್ಲೆಯಲ್ಲಿರುವ ಕನಗನಮರಡಿಯ ಕಾಲುವೆ ಖಾಸಗಿ ಬಸ್ ಉರುಳಿ 24 ಅಧಿಕ ಪ್ರಯಾಣಿಕರು  ದುರ್ಮರಣಕ್ಕಿಡಾಗಿದ್ದಾರೆ.

ಕಾಲುವೆಯಲ್ಲಿ ಉರುಳಿರುವ ಬಸ್ ಖಾಸಗಿಯದ್ದು ಎಂದು ತಿಳಿದುಬಂದಿದೆ.ಅದು ಪಾಂಡವಪುರದಿಂದ ಮಂಡ್ಯಕ್ಕೆ ಹೋಗುತ್ತಿರುವ ವೇಳೆ ಕಾಲುವೆಗೆ ಉರುಳಿ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿಹೋಗಿದೆ .ವರದಿಗಳ ಪ್ರಕಾರ ಬಸ್ ನಲ್ಲಿ  ಒಟ್ಟು 40 ಮಂದಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಅದರಲ್ಲಿ ಈಗ 20 ಶವಗಳನ್ನು ಈವರೆಗೂ ಹೊರತೆಗೆಯಲಾಗಿದೆ ಎಂದು ತಿಳಿದುಬಂದಿದೆ.

ಈ ದುರ್ಘಟನೆ ಮದ್ಯಾಹ್ನ 12 ಗಂಟೆಗೆ ಸಂಭವಿಸಿದ್ದು. ಚಾಲಕ ವೇಗವಾಗಿ ಬಸ್ ನ್ನು ಚಲಾಯಿಸಿದ್ದರಿಂದ ಅದು ನಿಯಂತ್ರಣ ತಪ್ಪಿ ಕಾಲುವೆಯಲ್ಲಿ ಬಿದ್ದಿದೆಎಂದು ಹೇಳಲಾಗುತ್ತಿದೆ. ಈಗ ಈ ಘಟನೆಯ ವಿಚಾರವಾಗಿ ಪಾಂಡವಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.

ಈ ಬಸ್ ದುರಂತದ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಸಿಎಂ ಕುಮಾರಸ್ವಾಮಿ ಜಿಲ್ಲಾಡಳಿತಕ್ಕೆ ಸೂಕ್ತ ಕ್ರಮಗಳನ್ನು ತಗೆದುಕೊಳ್ಳಲು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

Trending News