ಸೇವಾ ನ್ಯೂನ್ಯತೆ ಎಸಗಿದ ಲುಧಿಯಾನಾದ ಮಶೀನ್ ಟೂಲ್ಸ್ ಕಂಪನಿಗೆ ರೂ. 2,10,000- ದಂಡ ವಿಧಿಸಿ ಪರಿಹಾರ ನೀಡಲು ಆದೇಶ

court news: ಅದರಿಂದ ಗ್ರಾಹಕನಾದ ದೂರುದಾರನಿಗೆ ಮಾನಸಿಕ ತೊಂದರೆ ಮತ್ತು ಆರ್ಥಿಕ ನಷ್ಟ ಉಂಟಾಗಿದೆ ಅಂತಾ ಆಯೋಗ ತನ್ನ ತೀರ್ಪಿನಲ್ಲಿ ಹೇಳಿದೆ. ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಎದುರುದಾರರು ದೂರುದಾರರಿಗೆ ಅವರು ನೀಡಿದ ರೂ.1,50,000/- ಮತ್ತು ಅದರ ಮೇಲೆ ವಾರ್ಷಿಕ ಶೇ 9% ರಂತೆ ದಿ:05/04/2023 ರಿಂದ ಪೂರ್ತಿ ಹಣ ಸಂದಾಯವಾಗುವವರೆಗೆ ಬಡ್ಡಿ ಲೆಕ್ಕ ಹಾಕಿ ಕೊಡಲು ಆದೇಶಿಸಿದೆ. 

Written by - Zee Kannada News Desk | Last Updated : Mar 12, 2024, 10:19 PM IST
  • ಈ ಬಗ್ಗೆ ಎದುರುದಾರರ ಜೊತೆ ದೂರುದಾರ ಪತ್ರ ವ್ಯವಹಾರ ಮಾಡಿದರೂ ಏನೂ ಪ್ರಯೋಜನ ಆಗಲಿಲ್ಲ
  • ಗ್ರಾಹಕನಾದ ದೂರುದಾರನಿಗೆ ಮಾನಸಿಕ ತೊಂದರೆ ಮತ್ತು ಆರ್ಥಿಕ ನಷ್ಟ ಉಂಟಾಗಿದೆ ಅಂತಾ ಆಯೋಗ ತನ್ನ ತೀರ್ಪಿನಲ್ಲಿ ಹೇಳಿದೆ
  • ಅದರಿಂದ ಗ್ರಾಹಕನಾದ ದೂರುದಾರನಿಗೆ ಮಾನಸಿಕ ತೊಂದರೆ ಮತ್ತು ಆರ್ಥಿಕ ನಷ್ಟ ಉಂಟಾಗಿದೆ ಅಂತಾ ಆಯೋಗ ತನ್ನ ತೀರ್ಪಿನಲ್ಲಿ ಹೇಳಿದೆ.
 ಸೇವಾ ನ್ಯೂನ್ಯತೆ ಎಸಗಿದ ಲುಧಿಯಾನಾದ ಮಶೀನ್ ಟೂಲ್ಸ್ ಕಂಪನಿಗೆ ರೂ. 2,10,000- ದಂಡ ವಿಧಿಸಿ ಪರಿಹಾರ ನೀಡಲು ಆದೇಶ title=

ಧಾರವಾಡ: ಹುಬ್ಬಳ್ಳಿಯ ಗೋಕುಲ್ ರಸ್ತೆ ಯ.ಎಮ್.ಎಸ್. ಡೆಕೊ ಸ್ಟೀಲ್ ಇಂಡಸ್ಟ್ರೀಯಲ್‍ನ ಮಾಲೀಕ ನಿಂಗಣ್ಣ ಬಿರಾದಾರ ಎಂಬುವವರು ಲುಧಿಯಾನಾದರಟ್ಟನ್ ಮಶೀನ್ ಟೂಲ್ಸ್ ಇವರಲ್ಲಿ 50 ಟನ್ ಕೆಪ್ಯಾಸಿಟಿಯ ಪಾವರ್ ಪ್ರೇಸ್ ಮಶೀನ್‍ನ್ನು ಖರೀದಿಸಿದ್ದರು. ಆ ಮಶೀನಿನ ಕಿಮ್ಮತ್ತು ರೂ.3,50,000/- ಆಗಿತ್ತು. ಅದರ ಪೈಕಿ ದೂರುದಾರ ಮುಂಗಡ ಅಂತಾ ರೂ.1,50,000/-ಗಳನ್ನು ಎದುರುದಾರರಿಗೆ ಪಾವತಿಸಿದ್ದರು. ಮಶೀನ್ ಬಂದ ಮೇಲೆ ಉಳಿದ ಹಣಕೊಡಬೆಕಾಗಿತ್ತು. ಆದರೆ ಬುಕ್ ಮಾಡಿದ 2-3 ತಿಂಗಳು ಕಳೆದರೂ ಎದುರುದಾರ ಬುಕ್ ಮಾಡಿದ ಮಶೀನನ್ನು ದೂರುದಾರರಿಗೆ ಕಳುಹಿಸಲಿಲ್ಲ.

ಇದನ್ನೂ ಓದಿ: Photo Gallery: ಆನೆಗೊಂದಿ ಉತ್ಸವದಲ್ಲಿ ಜನರ ಗಮನ ಸೆಳೆದ ವಸ್ತು ಪ್ರದರ್ಶನ ಮಳಿಗೆಗಳು..!

ಈ ಬಗ್ಗೆ ಎದುರುದಾರರ ಜೊತೆ ದೂರುದಾರ ಪತ್ರ ವ್ಯವಹಾರ ಮಾಡಿದರೂ ಏನೂ ಪ್ರಯೋಜನ ಆಗಲಿಲ್ಲ. ಎದುರುದಾರ ಲುಧಿಯಾನಾದ ಮಶೀನ್ ಟೂಲ್ಸ್ ಕಂಪನಿಯವರ ಅಂತಹ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯಿದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ಎದುರುದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೋರಿ ದೂರುದಾರ ಧಾರವಾಡ ಜಿಲ್ಲಾಗ್ರಾಹಕರ ಆಯೋಗಕ್ಕೆ ದಿ.20/12/2023 ರಂದು ಈ ದೂರು ಸಲ್ಲಿಸಿದ್ದರು. ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ.ಭೂತೆ ಮತ್ತು ಸದಸ್ಯರಾದ ವಿಶಾಲಾಕ್ಷಿ.ಅ. ಬೋಳಶೆಟ್ಟಿ ಹಾಗೂ ಪ್ರಭು .ಸಿ ಹಿರೇಮಠ ದೂರುದಾರ 50 ಟನ್ ಕೆಪ್ಯಾಸಿಟಿಯ ಪಾವರ್ ಪ್ರೇಸ್ ಮಶೀನು ಒದಗಿಸಲು ರೂ.1,50,000/- ಆರ್.ಟಿ.ಜಿ.ಎಸ್. ಮೂಲಕ ಪಾವತಿಸಿದ ಮೇಲೆ ಒಪ್ಪಂದದಂತೆ ಎದುರುದಾರ ಪಾವರ್ ಪ್ರೆಸ್ ಮಶೀನನ್ನು ದೂರುದಾರರಿಗೆ ಕಳುಹಿಸಬೇಕಾಗಿತ್ತು. ಆದರೆ 2-3 ತಿಂಗಳು ಕಳೆದರೂ ಎದುರುದಾರರು ಮಶೀನ್ ಕಳುಹಿಸದೇ ಇರುವುದು ಗ್ರಾಹಕರ ರಕ್ಷಣಾಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಅಭಿಪ್ರಾಯಪಟ್ಟು ಆಯೋಗ ತೀರ್ಪು ನೀಡಿದೆ.

ಇದನ್ನೂ ಓದಿ: ಯಾಕೆ ನನ್ನನು ಸೋಲಿಸಿದ್ದಿರಿ, ಯಾಕೆ ನನ್ನ ಕೈ ಬಿಟ್ಟಿರಿ - ಶ್ರೀರಾಮುಲು ಅಸಮಾಧಾನ

ಅದರಿಂದ ಗ್ರಾಹಕನಾದ ದೂರುದಾರನಿಗೆ ಮಾನಸಿಕ ತೊಂದರೆ ಮತ್ತು ಆರ್ಥಿಕ ನಷ್ಟ ಉಂಟಾಗಿದೆ ಅಂತಾ ಆಯೋಗ ತನ್ನ ತೀರ್ಪಿನಲ್ಲಿ ಹೇಳಿದೆ. ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಎದುರುದಾರರು ದೂರುದಾರರಿಗೆ ಅವರು ನೀಡಿದ ರೂ.1,50,000/- ಮತ್ತು ಅದರ ಮೇಲೆ ವಾರ್ಷಿಕ ಶೇ 9% ರಂತೆ ದಿ:05/04/2023 ರಿಂದ ಪೂರ್ತಿ ಹಣ ಸಂದಾಯವಾಗುವವರೆಗೆ ಬಡ್ಡಿ ಲೆಕ್ಕ ಹಾಕಿ ಕೊಡಲು ಆದೇಶಿಸಿದೆ. ದೂರು ದಾರರಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ತೊಂದರೆಗಾಗಿ ರೂ.50,000/-ಗಳ ಪರಿಹಾರ ಹಾಗೂ ರೂ.10,000/- ಪ್ರಕರಣದ ಖರ್ಚು ವೆಚ್ಚ ನೀಡುವಂತೆ ಎದುರುದಾರ ಲುಧಿಯಾನಾದರಟ್ಟನ್ ಮಶೀನ್ ಟೂಲ್ಸ್ ಕಂಪನಿಯವರಿಗೆ ಆಯೋಗ ನಿರ್ದೇಶಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

 

Trending News