Weather Updates : ಹತ್ತು ರಾಜ್ಯಗಳಲ್ಲಿ ಭಾರೀ ಮಳೆ ಸಂಭವ, IMD ಮುನ್ನೆಚ್ಚರಿಕೆ

ಹವಾಮಾನ ಇಲಾಖೆ ಗುಜರಾತ್‌ನಲ್ಲಿ ಮಳೆಯ ಕುರಿತು ಆರೆಂಜ್ ಅಲರ್ಟ್ ಘೋಷಿಸಿದೆ. ಅಲ್ಲಿ ಡಿಸೆಂಬರ್ 1 ಮತ್ತು 2 ರಂದು ಮಳೆಯಾಗುವ ಸಂಭವವಿದೆ. ಇನ್ನು ಮುಂಬೈನಲ್ಲಿ ಇಂದಿನಿಂದ ಗುರುವಾರದವರೆಗೆ ಮಳೆಯ ಎಚ್ಚರಿಕೆಯನ್ನೂ ನೀಡಲಾಗಿದೆ. 

Written by - Ranjitha R K | Last Updated : Dec 1, 2021, 08:30 AM IST
  • ಗುಜರಾತ್‌ನಲ್ಲಿ ಆರೆಂಜ್ ಅಲರ್ಟ್
  • ಡಿಸೆಂಬರ್ 5 ಮತ್ತು 6 ರಂದು ದೆಹಲಿಯಲ್ಲಿ ಮಳೆ ಎಚ್ಚರಿಕೆ
  • ಮಳೆ ಮತ್ತು ಹಿಮಪಾತದ ನಂತರ ಹೆಚ್ಚಾಗಲಿದೆ ಚಳಿ
Weather Updates : ಹತ್ತು ರಾಜ್ಯಗಳಲ್ಲಿ ಭಾರೀ ಮಳೆ ಸಂಭವ, IMD ಮುನ್ನೆಚ್ಚರಿಕೆ  title=
ಡಿಸೆಂಬರ್ 5 ಮತ್ತು 6 ರಂದು ದೆಹಲಿಯಲ್ಲಿ ಮಳೆ ಎಚ್ಚರಿಕೆ (file photo)

ನವದೆಹಲಿ : ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಹವಾಮಾನ (Weather update) ಬದಲಾಗಿವೆ. ಕೆಲವೆಡೆ ಪ್ರವಾಹದಿಂದ ವಿನಾಶ ಸಂಭವಿಸಿದರೆ, ಕೆಲವೆಡೆ ಜ್ವಾಲಾಮುಖಿ ಸ್ಫೋಟಗೊಳ್ಳುತ್ತಿದೆ. ಭಾರತದಲ್ಲಿಯೂ ಅಕಾಲಿಕ ಮಳೆಯಿಂದಾಗಿ ಪರಿಸ್ಥಿತಿ ಹದಗೆಟ್ಟಿದೆ. ಪರ್ವತ ಪ್ರದೇಶಗಳಲ್ಲಿ ಹಿಮಪಾತವಾದರೆ, ಬಯಲು ಸೀಮೆಯಲ್ಲಿ ಚಳಿ ಹೆಚ್ಚುತ್ತಿದೆ. ಹವಾಮಾನ ಇಲಾಖೆ (IMD) ಪ್ರಕಾರ, ಡಿಸೆಂಬರ್ 1 ಮತ್ತು 6 ರ ನಡುವೆ ಇಡೀ ಉತ್ತರ ಮಧ್ಯ ಭಾರತದಲ್ಲಿ ಮಳೆಯಾಗುವ ಸಾಧ್ಯತೆಗಳಿವೆ (rain alert). ಕೆಲವು ರಾಜ್ಯಗಳಿಗೆ ಮಳೆಯ ಎಚ್ಚರಿಕೆ ನೀಡಲಾಗಿದೆ.

ಈ ರಾಜ್ಯಗಳಿಗೆ ಮಳೆಯ ಎಚ್ಚರಿಕೆ :
ಹವಾಮಾನ ಇಲಾಖೆ ಗುಜರಾತ್‌ನಲ್ಲಿ ಮಳೆಯ ಕುರಿತು ಆರೆಂಜ್ ಅಲರ್ಟ್ (Orange alert) ಘೋಷಿಸಿದೆ. ಅಲ್ಲಿ ಡಿಸೆಂಬರ್ 1 ಮತ್ತು 2 ರಂದು ಮಳೆಯಾಗುವ ಸಂಭವವಿದೆ. ಇನ್ನು ಮುಂಬೈನಲ್ಲಿ ಇಂದಿನಿಂದ ಗುರುವಾರದವರೆಗೆ ಮಳೆಯ ಎಚ್ಚರಿಕೆಯನ್ನೂ ನೀಡಲಾಗಿದೆ. ಇದಲ್ಲದೇ ಡಿಸೆಂಬರ್ 5 ಮತ್ತು 6 ರಂದು ದೇಶದ ರಾಜಧಾನಿ ದೆಹಲಿಯಲ್ಲಿ (Delhi) ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.   ಈ ಸಮಯದಲ್ಲಿ ಪರ್ವತ ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಮತ್ತು ಹಿಮಪಾತದ ಎಚ್ಚರಿಕೆಯನ್ನು ಕೂಡಾ ನೀಡಲಾಗಿದೆ. ಇದಲ್ಲದೆ, ಮಧ್ಯಪ್ರದೇಶ, ರಾಜಸ್ಥಾನ, ಹರಿಯಾಣ, ಉತ್ತರ ಪ್ರದೇಶ ಸೇರಿದಂತೆ ಉತ್ತರಾಖಂಡ, ಹಿಮಾಚಲ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಮಳೆಯಾಗುವ ಸಾಧ್ಯತೆ ಇದೆ. 

ಇದನ್ನೂ ಓದಿ : ಪಿಂಚಣಿದಾರರು ಈಗ ನೀಡಬೇಕಾಗಿಲ್ಲ 'Life Certificate', ಏನು ಹೇಳುತ್ತದೆ ಹೊಸ ನಿಯಮ ?

ಮಳೆಯ ನಂತರ ಏರಲಿದೆ ಚಳಿ : 
ಹವಾಮಾನ ಇಲಾಖೆ (IMD) ಪ್ರಕಾರ, ಉತ್ತರ ಭಾರತದ ರಾಜ್ಯಗಳಲ್ಲಿ ಮಳೆಯ ನಂತರ, ಚಳಿ ಹೆಚ್ಚಾಗುತ್ತದೆ.  ಪರ್ವತ ಪ್ರದೇಶಗಳಲ್ಲಿ ಮಳೆಯ ಎಚ್ಚರಿಕೆ (rain alert) ನೀಡಲಾಗಿದೆ. ಹೀಗಾಗಿ ಬಯಲು ಪ್ರದೇಶಗಳಲ್ಲಿ ಚಳಿ ಹೆಚ್ಚಾಗಲಿದೆ. 

ದಕ್ಷಿಣದಲ್ಲಿಯೂ ಮಳೆಯ ಅಬ್ಬರ : 
ಉತ್ತರ ಭಾರತದಲ್ಲಿ ಮಳೆಯ ಎಚ್ಚರಿಕೆ (imd alert) ನೀಡಿದ್ದರೆ, ದೇಶದ ದಕ್ಷಿಣದಲ್ಲಿ ಭಾರೀ ಮಳೆ ಇನ್ನೂ ಸಮಸ್ಯೆಯಾಗಿದೆ. ರಾಮೇಶ್ವರಂನಲ್ಲಿ ಕಳೆದ 5 ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಭಾರೀ ಮಳೆಯ ಎಚ್ಚರಿಕೆಯನ್ನೂ ನೀಡಲಾಗಿದೆ. ಇದರೊಂದಿಗೆ ತಮಿಳುನಾಡು, ಪುದುಚೇರಿ ಮತ್ತು ಆಂಧ್ರಪ್ರದೇಶದಲ್ಲಿ ಮಳೆ ಮುಂದುವರಿದಿದೆ. ಡಿಸೆಂಬರ್ 2ರವರೆಗೆ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಕಾರಣ, ಒಡಿಶಾ ಮತ್ತು ಆಂಧ್ರಪ್ರದೇಶದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ : Jio ಬಳಕೆದಾರರು ಗಮನಿಸಿ: ಹೊಸ ದರ ನಿಗದಿಗೆ ಮುನ್ನ ಈ ಕೆಲಸ ಮಾಡಿದರೆ ಉಳಿಸಬಹುದು 480 ರೂಪಾಯಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ. 

Trending News