ಮೇಘಾಲಯದಲ್ಲಿಂದು ಅಧಿಕಾರದ ಗದ್ದುಗೆ ಏರಲಿದೆ ಬಿಜೆಪಿ ಸರ್ಕಾರ, ಮುಖ್ಯಮಂತ್ರಿಯಾಗಿ ಕಾನ್ರಾಡ್ ಸಂಗ್ಮಾ ಆಯ್ಕೆ

ಸಂಗ್ಮಾ ಸೋಮವಾರ ಸಂಜೆ ಗವರ್ನರ್ ಗಂಗಾ ಪ್ರಸಾದ್ ಅವರನ್ನು ಭೇಟಿಯಾಗಿದ್ದರು ಮತ್ತು 60 ಸದಸ್ಯರ ವಿಧಾನಸಭೆಯಲ್ಲಿ 34 ಶಾಸಕರ ಬೆಂಬಲದೊಂದಿಗೆ ಸರ್ಕಾರ ರಚನೆ ಮಾಡುವುದಾಗಿ ಹೇಳಿದ್ದರು.

Last Updated : Mar 6, 2018, 09:00 AM IST
ಮೇಘಾಲಯದಲ್ಲಿಂದು ಅಧಿಕಾರದ ಗದ್ದುಗೆ ಏರಲಿದೆ ಬಿಜೆಪಿ ಸರ್ಕಾರ, ಮುಖ್ಯಮಂತ್ರಿಯಾಗಿ ಕಾನ್ರಾಡ್ ಸಂಗ್ಮಾ ಆಯ್ಕೆ title=
File photo

ಶಿಲ್ಲಾಂಗ್: ರಾಷ್ಟ್ರೀಯ ಪೀಪಲ್ಸ್ ಪಾರ್ಟಿ (ಎನ್ಪಿಪಿ) ಅಧ್ಯಕ್ಷ ಕಾನ್ರಾಡ್ ಸಂಗ್ಮಾ ಇಂದು ಮೇಘಾಲಯ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಮೇಘಾಲಯ ಗವರ್ನರ್ ಗಂಗಾ ಪ್ರಸಾದ್ ಅವರನ್ನು ರಾಜ್ಯದಲ್ಲಿ ಸರ್ಕಾರ ರಚಿಸುವಂತೆ ಆಹ್ವಾನಿಸಿದ್ದಾರೆ. ಶಪಥ ಸಮಾರಂಭವು ಬೆಳಿಗ್ಗೆ 10:30 ಕ್ಕೆ ನಡೆಯಲಿದೆ. ರಾಜ್ಯದಲ್ಲಿ ಐದು ಪಕ್ಷಗಳು ಮತ್ತು ಸ್ವತಂತ್ರ ಅಭ್ಯರ್ಥಿಗಳ ಬೆಂಬಲದೊಂದಿಗೆ ಬಿಜೆಪಿ ಸರ್ಕಾರ ರಚನೆಯಾಗಲಿದೆ.

ಪ್ರಮಾಣವಚನ ಸಮಾರಂಭದಲ್ಲಿ ಅಮಿತ್ ಶಾ ಮತ್ತು ರಾಜ್ನಾಥ್ ಸಿಂಗ್
"ನನ್ನ ಬಲದಿಂದ, ರಾಜ್ಯಪಾಲರು ನನ್ನನ್ನು ರಾಜ್ಯದಲ್ಲಿ ಸರ್ಕಾರ ರಚಿಸುವಂತೆ ಆಹ್ವಾನಿಸಿರುವುದಾಗಿ  ಕಾನ್ರಾಡ್ ಸಂಗ್ಮಾ ಮಂಗಳವಾರ ಹೇಳಿದರು." ಇದನ್ನು ದೃಢೀಕರಿಸಿದ ರಾಜ್ ಭವನದ ಅಧಿಕಾರಿಯೊಬ್ಬರು, "ಗವರ್ನರ್ ಅವರು ಕಾನ್ರಾಡ್ ಸಂಗ್ಮಾ ಅವರನ್ನು ಸರ್ಕಾರ ರಚಿಸುವಂತೆ ಆಹ್ವಾನಿಸಿದ್ದಾರೆ, ಏಕೆಂದರೆ ಅವರು 34 ಶಾಸಕರ ಬೆಂಬಲವನ್ನು ಹೊಂದಿದ್ದಾರೆ" ಎಂದು ತಿಳಿಸಿದರು. ಪಕ್ಷದ ಅಧ್ಯಕ್ಷ ಅಮಿತ್ ಶಾ ಮತ್ತು ಕೇಂದ್ರ ಗೃಹ ಸಚಿವ ರಾಜ್ನಾಥ್ ಸಿಂಗ್ ಅವರು ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

34 ಶಾಸಕರ ಬೆಂಬಲದೊಂದಿಗೆ ಸಂಗ್ಮಾ
ಸಂಗ್ಮಾ ಸೋಮವಾರ ಸಂಜೆ, 34 ಶಾಸಕರ ಬೆಂಬಲದೊಂದಿಗೆ ಸರ್ಕಾರವನ್ನು ರಚಿಸಲು ಗವರ್ನರ್  ಗಂಗಾ ಪ್ರಸಾದ್ ಎದುರು ಹಕ್ಕು ಪ್ರತಿಪಾದಿಸಿದರು. 60 ಸದಸ್ಯ ಬಲದ ವಿಧಾನಸಭೆಯಲ್ಲಿ 34 ಸದಸ್ಯರ ಬೆಂಬಲದೊಂದಿಗೆ ಸರ್ಕಾರ ರಚಿಸಲು ರಾಜ್ಯಪಾಲರ ಬಳಿ ಅನುಮತಿ ಪಡೆದರು. ಸಭೆಯ ನಂತರ, "ನಾವು ಗವರ್ನರ್ ಭೇಟಿಯಾಗಿ ಇದಾದ 19 ಸದಸ್ಯರು, 6 ಯುನೈಟೆಡ್ ಡೆಮೊಕ್ರಟಿಕ್ ಫ್ರಂಟ್, 4 ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ, 2 ಹಿಲ್ ರಾಜ್ಯ ಡೆಮೋಕ್ರಟಿಕ್ ಪಾರ್ಟಿ (HSPDP), 2 ಬಿಜೆಪಿ ಮತ್ತು ಸ್ವತಂತ್ರ ಅಭ್ಯರ್ಥಿ ಸೇರಿದಂತೆ 34 ಶಾಸಕರ ಬೆಂಬಲ ಪತ್ರಗಳ ಸಲ್ಲಿಸಿರುವುದಾಗಿ ಖಚಿತಪದಿಸಿದರು."

ಕೇಂದ್ರ ಮತ್ತು ಮಣಿಪುರದಲ್ಲಿ ಎನ್ಪಿಪಿ ಬಿಜೆಪಿಗೆ ಬೆಂಬಲ ನೀಡಿದೆ
ಮೇಘಾಲಯದಲ್ಲಿ ಅಸೆಂಬ್ಲಿಯ ಪರಿಸ್ಥಿತಿ ಕಾಂಗ್ರೆಸ್ನ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ, ಅದರ ವಿರೋಧ ರಾಷ್ಟ್ರೀಯ ಪೀಪಲ್ಸ್ ಪಾರ್ಟಿ (ಎನ್ಪಿಪಿ) ಯಿಂದ ಸ್ವಲ್ಪ ವ್ಯತ್ಯಾಸವಿದೆ. ಎನ್ಪಿಪಿ ಕೇಂದ್ರ ಮತ್ತು ಮಣಿಪುರದಲ್ಲಿ ಬಿಜೆಪಿಯ ಮಿತ್ರ ಪಕ್ಷ.

ಕಾಂಗ್ರೆಸಿಗೆ 21 ಸ್ಥಾನ
ರಾಜ್ಯದಲ್ಲಿ ಕಳೆದ ಹತ್ತು ವರ್ಷಗಳಿಂದ ಅಧಿಕಾರದಲ್ಲಿದ್ದ ಕಾಂಗ್ರೆಸ್ ಫೆಬ್ರವರಿ 27 ರಂದು 59 ಕ್ಷೇತ್ರಗಳಲ್ಲಿ 21 ಸ್ಥಾನಗಳನ್ನು ಗೆದ್ದಿದೆ. ಈ ಸಂಖ್ಯೆ ಸಾಮಾನ್ಯ ಬಹುಮತಕ್ಕಿಂತ ಹತ್ತು ಕಡಿಮೆಯಿದೆ. ಕಾಂಗ್ರೆಸ್ ಪಕ್ಷದ ಕಚೇರಿ ಅಧಿಕಾರಿಗಳು ಮತ್ತು ಮುಖಂಡರು ರಾಜ್ಯಪಾಲರೊಂದಿಗೆ ನಡೆದ ಸಭೆಯಲ್ಲಿ ಸರ್ಕಾರ ರಚಿಸುವಂತೆ ಅವರು ಹೇಳಿದರು. ಕಾಂಗ್ರೆಸ್-ಕಮಲ್ ನಾಥ್, ಅಹ್ಮದ್ ಪಟೇಲ್ ಮತ್ತು ಸಿಪಿ ಜೋಷಿಯ ನಿಯೋಗದ ಮೂವರು ಕೇಂದ್ರ ನಾಯಕರು ಗವರ್ನರ್ ಅವರನ್ನು ಶನಿವಾರ ಭೇಟಿ ಮಾಡಿದ್ದರು.

Trending News