ತಮಿಳುನಾಡಿನ ನೂತನ ಸಚಿವ ಸಂಪುಟದಲ್ಲಿ ಸ್ಟಾಲಿನ್, ಗಾಂಧಿ, ನೆಹರು...!

ಡಿಎಂಕೆ ಎಂ.ಕೆ.ಸ್ಟಾಲಿನ್ ಅವರು ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಮೇ 7 ರಂದು ಪ್ರಮಾಣ ವಚನ ಸ್ವೀಕರಿಸಲು ಸಜ್ಜಾಗುತ್ತಿದ್ದಂತೆ, ಅವರ ಸಚಿವ ಸಂಪುಟದಲ್ಲಿ ಗಾಂಧಿ ಜೊತೆಗೆ ಮಂತ್ರಿಗಳಾಗಿ ನೆಹರೂ ಪ್ರಮಾಣವಚನ ಸ್ವೀಕರಿಸಲಿದ್ದಾರೆ.ಸ್ಟಾಲಿನ್ ಘೋಷಿಸಿದ ಹೊಸ ಕ್ಯಾಬಿನೆಟ್‌ಗೆ ಹೆಸರಿಸಲಾದ 34 ಸದಸ್ಯರಲ್ಲಿ, ರಾಷ್ಟ್ರದ ರಾಜಕೀಯಕ್ಕೆ ಸಂಬಂಧಿಸಿದಂತೆ, ಕೆಲವು ಅಸಾಮಾನ್ಯ ಮತ್ತು ವಿಶಿಷ್ಟ ಹೆಸರುಗಳು ಹೊರಬಂದಿವೆ.

Last Updated : May 7, 2021, 02:12 AM IST
  • ಡಿಎಂಕೆ ಎಂ.ಕೆ.ಸ್ಟಾಲಿನ್ ಅವರು ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಮೇ 7 ರಂದು ಪ್ರಮಾಣ ವಚನ ಸ್ವೀಕರಿಸಲು ಸಜ್ಜಾಗುತ್ತಿದ್ದಂತೆ, ಅವರ ಸಚಿವ ಸಂಪುಟದಲ್ಲಿ ಗಾಂಧಿ ಜೊತೆಗೆ ಮಂತ್ರಿಗಳಾಗಿ ನೆಹರೂ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
  • ಸ್ಟಾಲಿನ್ ಘೋಷಿಸಿದ ಹೊಸ ಕ್ಯಾಬಿನೆಟ್‌ಗೆ ಹೆಸರಿಸಲಾದ 34 ಸದಸ್ಯರಲ್ಲಿ, ರಾಷ್ಟ್ರದ ರಾಜಕೀಯಕ್ಕೆ ಸಂಬಂಧಿಸಿದಂತೆ, ಕೆಲವು ಅಸಾಮಾನ್ಯ ಮತ್ತು ವಿಶಿಷ್ಟ ಹೆಸರುಗಳು ಹೊರಬಂದಿವೆ.
 ತಮಿಳುನಾಡಿನ ನೂತನ ಸಚಿವ ಸಂಪುಟದಲ್ಲಿ ಸ್ಟಾಲಿನ್, ಗಾಂಧಿ, ನೆಹರು...! title=

ನವದೆಹಲಿ: ಡಿಎಂಕೆ ಎಂ.ಕೆ.ಸ್ಟಾಲಿನ್ ಅವರು ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಮೇ 7 ರಂದು ಪ್ರಮಾಣ ವಚನ ಸ್ವೀಕರಿಸಲು ಸಜ್ಜಾಗುತ್ತಿದ್ದಂತೆ, ಅವರ ಸಚಿವ ಸಂಪುಟದಲ್ಲಿ ಗಾಂಧಿ ಜೊತೆಗೆ ಮಂತ್ರಿಗಳಾಗಿ ನೆಹರೂ ಪ್ರಮಾಣವಚನ ಸ್ವೀಕರಿಸಲಿದ್ದಾರೆ.ಸ್ಟಾಲಿನ್ ಘೋಷಿಸಿದ ಹೊಸ ಕ್ಯಾಬಿನೆಟ್‌ಗೆ ಹೆಸರಿಸಲಾದ 34 ಸದಸ್ಯರಲ್ಲಿ, ರಾಷ್ಟ್ರದ ರಾಜಕೀಯಕ್ಕೆ ಸಂಬಂಧಿಸಿದಂತೆ, ಕೆಲವು ಅಸಾಮಾನ್ಯ ಮತ್ತು ವಿಶಿಷ್ಟ ಹೆಸರುಗಳು ಹೊರಬಂದಿವೆ.

ಸ್ಟಾಲಿನ್, ಮುನ್ಸಿಪಲ್ ಆಡಳಿತದ ಸಚಿವರಾಗಿ ಕೆ.ಎನ್ ನೆಹರೂ ಅವರ ಹೆಸರನ್ನು ಪ್ರಸ್ತಾಪಿಸಿದ್ದಾರೆ ಮತ್ತು ಅವರು ನಗರ ಮತ್ತು ನೀರು ಸರಬರಾಜಿನ ಉಸ್ತುವಾರಿ ವಹಿಸಲಿದ್ದಾರೆ. ಮತ್ತೊಬ್ಬ ಮಂತ್ರಿ ಆರ್ ಗಾಂಧಿಯನ್ನು ಕೈಮಗ್ಗ ಮತ್ತು ಜವಳಿ, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಮತ್ತು ಬೂಧನ್ ಮತ್ತು ಗ್ರಾಮಧಾನ್ ಗೆ ಹೆಸರಿಸಲಾಗಿದೆ.

ಇದನ್ನೂ ಓದಿ: 'ಮೂರನೇ ಕೊರೊನಾ ಅಲೆಗೆ ಈಗಲೇ ಸಿದ್ಧರಾಗಿ"- ಕೇಂದ್ರಕ್ಕೆ ಸುಪ್ರೀಂ ಸೂಚನೆ

ಪಕ್ಷದ ಹಿರಿಯ ನಾಯಕ ಕೆ.ಎನ್. ನೆಹರು ಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿದ್ದು, ತಿರುಚಿ ಪಶ್ಚಿಮ ಕ್ಷೇತ್ರದ ಶಾಸಕರಾಗಿದ್ದಾರೆ. ಅವರು 1989 ರಲ್ಲಿ ತಮ್ಮ ಮೊದಲ ಚುನಾವಣೆಯಲ್ಲಿ ಗೆದ್ದಾಗಿನಿಂದ ಅವರು ಪಕ್ಷದ ಪ್ರಬಲ ವ್ಯಕ್ತಿಯಾಗಿದ್ದಾರೆ.ಅವರ ತಂದೆ ಜವಾಹರಲಾಲ್ ನೆಹರೂ ಪ್ರಿಯರಾಗಿದ್ದರು ಅಷ್ಟೇ ಕಾಂಗ್ರೆಸ್ ಪಕ್ಷದ ನಾಯಕರಾಗಿದ್ದರು. ಈ ಕುಟುಂಬವು 1960 ರ ದಶಕದ ಅಂತ್ಯದಲ್ಲಿ ಡಿಎಂಕೆಗೆ ನಿಷ್ಠೆಯನ್ನು ಬದಲಾಯಿಸಿತು.

ಆದರೆ, ಆರ್ ಗಾಂಧಿ ರಾಣಿಪೇಟೆ ಕ್ಷೇತ್ರದ ಶಾಸಕರಾಗಿದ್ದಾರೆ.ಅವರ ಹೆಂಡತಿ ಮತ್ತು ಮಗನೊಂದಿಗೆ ಅಸಮಾನವಾದ ಆಸ್ತಿ ಪ್ರಕರಣದಲ್ಲಿ ಸಿಲುಕಿಕೊಂಡಿದ್ದರು, ಆದರೆ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಆರೋಪಗಳನ್ನು ನ್ಯಾಯಾಲಯ ರದ್ದುಗೊಳಿಸಿತು.

ಇದನ್ನೂ ಓದಿ: NEET-JEE ಪರೀಕ್ಷೆಗಳ ಮುಂದೂಡುವಿಕೆಯ ಕುರಿತು ಟ್ವೀಟ್ ಮಾಡಿದ Sonu Sood ಮಾಡಿದ ಮನವಿ ಏನು?

ಸ್ಟಾಲಿನ್ ನೇತೃತ್ವದ ಡಿಎಂಕೆ ಮಂಗಳವಾರ ತಮಿಳುನಾಡಿನಲ್ಲಿ ಶಾಸಕಾಂಗ ಪಕ್ಷದ ನಾಯಕರಾಗಿ ಸರ್ವಾನುಮತದಿಂದ ಆಯ್ಕೆಯಾದರು. 234 ಸದಸ್ಯರ ವಿಧಾನಸಭೆಯಲ್ಲಿ ಡಿಎಂಕೆ  ಆದ 133 ಸ್ಥಾನಗಳನ್ನು ಗೆದ್ದುಕೊಂಡಿತು ಮತ್ತು ಕಾಂಗ್ರೆಸ್ ಸೇರಿದಂತೆ ಇತರ ಕೆಲವು ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆಯನ್ನು ಎದುರಿಸಿತು.

ಇದನ್ನೂ ಓದಿ : Oxygen ಕೊರತೆಯಿಂದಾಗಿ ಭಯಪಡಬೇಡಿ, ಸರ್ಕಾರ ನಿಮ್ಮ ಮನೆ ಬಾಗಿಲಿಗೆ ಸಿಲಿಂಡರ್‌ ತಲುಪಿಸಲಿದೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News