ನವದೆಹಲಿ: ಇಂದು ದೇಶಾದ್ಯಂತ ಶ್ರೀ ಕೃಷ್ಣಾ ಜನ್ಮಾಷ್ಟಮಿ ಸಂಭ್ರಮ. ಗೋಪಿ ಲೋಲಾ, ನಂದ ಕಿಶೋರ ಎಂದೆಲ್ಲಾ ಕರೆಯಲ್ಪಡುವ ಶ್ರೀ ಕೃಷ್ಣನ ಜನ್ಮವನು ಸಂಭ್ರಮಿಸುವ ದಿನ. ಈ ಸಂಭ್ರಮದ ದಿನದಂದು ದೇಶದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಜನತೆಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯ ಕೋರಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಈ ಶುಭ ಸಂದರ್ಭದಲ್ಲಿ ಎಲ್ಲರಿಗೂ ಶುಭಾಶಯ ಕೋರಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "श्रीकृष्ण जन्माष्टमी के पावन अवसर पर सभी को हार्दिक शुभकामनाएं। जय श्रीकृष्ण!” ಎಂದಿದ್ದಾರೆ.
Janmashtami greetings to everyone.
श्रीकृष्ण जन्माष्टमी के पावन अवसर पर सभी को हार्दिक शुभकामनाएं। जय श्रीकृष्ण!
— Narendra Modi (@narendramodi) September 3, 2018
ರಾಷ್ಟ್ರಪತಿ ರಾಮ್ ನಾಥ್ ಕೊವಿಂದ್ ಅವರೂ ಸಹ "ದೇಶದ ಜನತೆಗೆ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು. ಕೃಷ್ಣನ ಬೋಧನೆಗಳು ಸಾರ್ವತ್ರಿಕ ಸಂದೇಶವನ್ನು ಹೊಂದಿವೆ. ಶ್ರೀಕೃಷ್ಣನ ಬೋಧನೆಗಳನ್ನು ಪದ ಮತ್ತು ಕಾರ್ಯಗಳಲ್ಲಿ ಅಳವಡಿಸಿಕೊಂಡು, ಸದ್ಗುಣ ಮತ್ತು ನೀತಿಯ ಪಥವನ್ನು ಪಾಲಿಸಲು ಈ ಹಬ್ಬವು ನಮಗೆ ಸ್ಫೂರ್ತಿ ನೀಡಲಿ" ಎಂದಿದ್ದಾರೆ.
Greetings and good wishes to fellow citizens on the auspicious occasion of Janmashtami. The teachings of Lord Krishna have a universal message - Nishkam Karma. May this festival inspire us to follow the path of virtue and righteousness in thought, word and deed #PresidentKovind
— President of India (@rashtrapatibhvn) September 3, 2018
ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರೂ ಸಹ ದೇಶದ ಜನತೆಗೆ ಈ ಸಂದರ್ಭದಲ್ಲಿ ಶುಭ ಹಾರೈಸಿದ್ದಾರೆ.
श्री कृष्ण जन्माष्टमी के पावन अवसर पर आप सभी को हार्दिक शुभकामनाएं। #Janmashtami #जन्माष्टमी pic.twitter.com/PtjitKeLTY
— Arun Jaitley (@arunjaitley) September 3, 2018