Shocking: ಸನಿಕೆಯಿಂದ ಹೊಡೆದು ಪತ್ನಿ ಕೊಂದ ಪಾಪಿ ಪತಿ ಮಾಡಿದ ಈ ಕೆಲಸ..!

ಸನಿಕೆಯಿಂದ ಹೊಡೆದು ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನೇ ಹತ್ಯೆ ಮಾಡಿದ್ದಾನೆ.

Written by - Puttaraj K Alur | Last Updated : Aug 12, 2021, 06:26 PM IST
  • ಕಾನ್ಪುರ್ ನಲ್ಲಿ ಸನಿಕೆಯಿಂದ ಹೊಡೆದು 23 ವರ್ಷದ ಪತ್ನಿಯನ್ನು ಹತ್ಯೆ ಮಾಡಿದ ವ್ಯಕ್ತಿ
  • ಕೊಲೆ ಮಾಡಿ ತನ್ನ ಹಂಡತಿ ಶವ ತೆಗೆದುಕೊಂಡು ಹೋಗುವಂತೆ ಪೊಲೀಸ್ ಠಾಣೆಗೆ ಹೋದ ವ್ಯಕ್ತಿ
  • ವರದಕ್ಷಿಣೆಗಾಗಿ ತಮ್ಮ ಪುತ್ರಿಯನ್ನು ಹತ್ಯೆ ಮಾಡಲಾಗಿದೆ ಎಂದು ಆರೋಪಿಸಿದ ತಂದೆ
Shocking: ಸನಿಕೆಯಿಂದ ಹೊಡೆದು ಪತ್ನಿ ಕೊಂದ ಪಾಪಿ ಪತಿ ಮಾಡಿದ ಈ ಕೆಲಸ..! title=
ಸನಿಕೆಯಿಂದ ಹೊಡೆದು ಪತಿಯಿಂದ ಪತ್ನಿಯ ಹತ್ಯೆ

ಕಾನ್ಪುರ್: ಆಘಾತಕಾರಿ ಘಟನೆಯೊಂದರಲ್ಲಿ ವ್ಯಕ್ತಿಯೊಬ್ಬ ಸನಿಕೆಯಿಂದ ತನ್ನ 23 ವರ್ಷದ ಪತ್ನಿಯನ್ನು ಹತ್ಯೆ ಮಾಡಿದ್ದಾನೆ. ಬಳಿಕ ಪೊಲೀಸ್ ಠಾಣೆಗೆ ತೆರಳಿ ತನ್ನ ಪತ್ನಿಯ ಶವವನ್ನು ತೆಗೆದುಕೊಂಡು ಹೋಗುವಂತೆ ಪೊಲೀಸರಿಗೇ ಹೇಳಿದ್ದಾನೆ. ಉತ್ತರ ಪ್ರದೇಶ(Uttar Pradesh)ದ ಕಾನ್ಪುರ್ ನ ದೆಹತ್ ನಲ್ಲಿ ಈ ಘಟನೆ ನಡೆದಿದ್ದು, ವರದಕ್ಷಿಣೆಗಾಗಿ ತಮ್ಮ ಪುತ್ರಿಯನ್ನು ಪತಿ ಹತ್ಯೆ ಮಾಡಿದ್ದಾನೆಂದು ಮೃತ ಮಹಿಳೆಯ ಪೋಷಕರು ಆರೋಪಿಸಿದ್ದಾರೆ.

‘ಬಂಧಿತ ಆರೋಪಿ ಬೀದಿ ಬದಿ ವ್ಯಾಪಾರಿ ರಾಮ್ ಕುಮಾರ್, ತನ್ನ ಪತ್ನಿ ಉಮಾಳನ್ನು ಹತ್ಯೆ ಮಾಡಿದ್ದಾನೆ. ಬಳಿಕ ಕೊಲೆಯಾಗಿರುವ ತನ್ನ ಪತ್ನಿಯ ಶವವನ್ನು ತೆಗೆದುಕೊಂಡು ಹೋಗಲು ತನ್ನ ಮನೆಗೆ ಬರುವಂತೆ ಠಾಣೆಗೆ ಬಂದು ಪೊಲೀಸ(Kanpur Police)ರಲ್ಲಿ ಕೇಳಿಕೊಂಡಿದ್ದಾನೆ’ ಅಂತಾ ಭೋಗ್ನಿಪುರದ ಸರ್ಕಲ್ ಆಫೀಸರ್ ಪ್ರಭಾತ್ ಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ: viral video : ಸಪ್ತಪದಿ ವೇಳೆ ಬೆಂಕಿಯಿಂದ ವಧುವನ್ನು ರಕ್ಷಿಸಿದ ವರ..!

'ತಂದೆ -ತಾಯಿ ಮನೆಗೆ ಭೇಟಿ ನೀಡುವ ವಿಚಾರವಾಗಿ ದಂಪತಿ ಪದೇ ಪದೇ ಜಗಳವಾಡುತ್ತಿದ್ದರು. ಪ್ರತಿದಿನವೂ ಮನೆಯಲ್ಲಿ ಗಂಡ-ಹೆಂಡತಿ ನಡುವೆ ಜಗಳವಾಗುತ್ತಿತ್ತು. ಕಿರುಕುಳದಿಂದ ಬೇಸತ್ತಿದ್ದ ಪತ್ನಿ ಉಮಾ ಮಂಗಳವಾರ ತಡರಾತ್ರಿ ಇಟ್ಟಿಗೆಯಿಂದ ಗಂಡನ ಮೇಲೆ ಹಲ್ಲೆ ನಡೆಸಿದ್ದಳು. ಇದರಿಂದ ಕುಪಿತಕೊಂಡ ಪತಿ ಆಕೆಯ ಮೇಲೆ ಸನಿಕೆಯಿಂದ ಹೊಡೆದು ಹಲ್ಲೆ ನಡೆಸಿದ್ದಾನೆ. ಅವಳು ಪ್ರಜ್ಞೆ ತಪ್ಪಿ ಬಿದ್ದಾಗ, ಆತ ಆಕೆಯನ್ನು ಎಳೆದುಕೊಂಡು ಹೋಗಿ ತನ್ನ ಕೋಣೆಯಲ್ಲಿಟ್ಟಿದ್ದನು. ಬಳಿಕ ಪೊಲೀಸ್ ಠಾಣೆ(Police Station)ಗೆ ತೆರಳಿ ತನ್ನ ಪತ್ನಿಯ ಶವವನ್ನು ತೆಗೆದುಕೊಂಡು ಹೋಗುವಂತೆ ಪೊಲೀಸರಿಗೆ ಮನವಿ ಮಾಡಿದ್ದಾನೆ' ಅಂತಾ ಪ್ರಭಾತ್ ಕುಮಾರ್ ಹೇಳಿದ್ದಾರೆ.

ಬಳಿಕ ಘಟನಾ ಸ್ಥಳಕ್ಕೆ ಆಗಮಿಸಿದ ಕಾನ್ಪುರ್ ಪೊಲೀಸ(Kanpur Police)ರು ಹತ್ಯೆಗೆ ಬಳಸಿದ ಸನಿಕೆಯನ್ನು ವಶಪಡಿಸಿಕೊಂಡರು. ಕೊಲೆಯಾದ ಉಮಾಳ ತಂದೆ ಚಂದ್ರಪಾಲ್ ಕೂಡ ಸ್ಥಳಕ್ಕೆ ಆಗಮಿಸಿದ್ದರು. ‘ತಮ್ಮ ಮನೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಮಗಳು ಕೂಡ ಬಂದಿದ್ದಳು. ಎರಡು ದಿನಗಳ ಹಿಂದಷ್ಟೇ ಪತಿ ರಾಮ್ ಕುಮಾರ್ ಉಮಾಳನ್ನು ತವರು ಮನೆಯಿಂದ ಕರೆದುಕೊಂಡು ಹೋಗಿದ್ದ. ನನ್ನ ಮಗಳನ್ನು ವರದಕ್ಷಿಣೆಗಾಗಿಯೇ ಕೊಲೆ ಮಾಡಲಾಗಿದೆ’ ಎಂದು ಚಂದ್ರಪಾಲ್ ಪೊಲೀಸರಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: Caught on CCTV: ಹಣ ಕೇಳಿದ್ದಕ್ಕೆ ಅಂಗಡಿ ಮಾಲೀಕನಿಗೆ ಮನಬಂದಂತೆ ಥಳಿಸಿದ ಗ್ರಾಹಕ..!

ವರದಕ್ಷಿಣೆ(Dowry)ಗಾಗಿ ತಮ್ಮ ಪುತ್ರಿಯನ್ನು ಹತ್ಯೆ ಮಾಡಲಾಗಿದೆ. ತನ್ನ ಅಳಿಯ ರಾಮ್ ಕುಮಾರ್, ಅತ್ತೆ, ಮಾವ ಮತ್ತು ಇತರ ಸಂಬಂಧಿಗಳು ಸೇರಿಕೊಂಡು ತಮ್ಮ ಮಗಳನ್ನು ಹತ್ಯೆ ಮಾಡಿದ್ದಾರೆ. ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ಕೊಡಿಸಬೇಕೆಂದು ಚಂದ್ರಪಾಲ್ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿ ರಾಮ್ ಕುಮಾರ್ ನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News