ಮೋದಿ ಅಭಿವೃದ್ಧಿ ಪರ್ವ ಅರಿಯದವರಿಗೆ ದೇಶದ ಜನರೇ ಅವರ ಸ್ಥಾನ ತೋರಿದ್ದಾರೆ : ಜೋಶಿ ಟಾಂಗ್

ಮೋದಿಯವರು ಪ್ರಧಾನಿಯಾದ ಮೇಲೆ ದೇಶದ ಅರ್ಥ ವ್ಯವಸ್ಥೆ ಬದಲಾಗುತ್ತಿದೆ. ಮೋದಿ ಅವರ ಅವಧಿಯಲ್ಲಿನ ಆಡಳಿತ- ಅಭಿವೃದ್ಧಿ ಬಗೆಗಿನ ವ್ಯತ್ಯಾಸವನ್ನು ಅರ್ಥ ಮಾಡಿಕೊಳ್ಳದವರಿಗೆ ದೇಶದ ಜನ ಅವರ ಸ್ಥಾನವನ್ನು ತೋರಿಸಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಹೇಳಿದರು.

Written by - Krishna N K | Last Updated : Feb 25, 2024, 09:40 PM IST
  • ಮೋದಿಯವರು ಪ್ರಧಾನಿಯಾದ ಮೇಲೆ ದೇಶದ ಅರ್ಥ ವ್ಯವಸ್ಥೆ ಬದಲಾಗುತ್ತಿದೆ
  • ಅರ್ಥ ಮಾಡಿಕೊಳ್ಳದವರಿಗೆ ದೇಶದ ಜನ ಅವರ ಸ್ಥಾನವನ್ನು ತೋರಿಸಿದ್ದಾರೆ
  • ನಾವಿಂದು ಒಂದೇ ದಿನದಲ್ಲಿ 5 AIIMSಗಳನ್ನು ಉದ್ಘಾಟಿಸುತ್ತಿದ್ದೇವೆ
ಮೋದಿ ಅಭಿವೃದ್ಧಿ ಪರ್ವ ಅರಿಯದವರಿಗೆ ದೇಶದ ಜನರೇ ಅವರ ಸ್ಥಾನ ತೋರಿದ್ದಾರೆ : ಜೋಶಿ ಟಾಂಗ್ title=

ಆಂಧ್ರಪ್ರದೇಶ : ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಭಾರತ ಸಮಗ್ರ ಬದಲಾವಣೆ ಕಾಣುತ್ತಿದೆ. ಇದನ್ನು ಅರ್ಥ ಮಾಡಿಕೊಳ್ಳದವರಿಗೆ ದೇಶದ ಜನರೇ ಅವರ ಸ್ಥಾನ ಏನೆಂಬುದನ್ನು ತೋರಿಸಿದ್ದಾರೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಕಾಂಗ್ರೆಸ್‌ಗೆ ಟಾಂಗ್ ಕೊಟ್ಟರು.

ಆಂಧ್ರಪ್ರದೇಶದ ಮಂಗಳಗಿರಿಯಲ್ಲಿ ನಡೆದ AIIMS ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿ, ಮೋದಿಯವರು ಪ್ರಧಾನಿಯಾದ ಮೇಲೆ ದೇಶದ ಅರ್ಥ ವ್ಯವಸ್ಥೆ ಬದಲಾಗುತ್ತಿದೆ ಎಂದು ಪ್ರತಿಪಾದಿಸಿದರು. ಅಲ್ಲದೆ, ಹಿಂದಿನ ಆಡಳಿತ-ಅರ್ಥ ವ್ಯವಸ್ಥೆ, ಅಭಿವೃದ್ಧಿ ಮತ್ತು ಮೋದಿ ಅವರ ಅವಧಿಯಲ್ಲಿನ ಆಡಳಿತ- ಅಭಿವೃದ್ಧಿ ಬಗೆಗಿನ ವ್ಯತ್ಯಾಸವನ್ನು ಅರ್ಥ ಮಾಡಿಕೊಳ್ಳದವರಿಗೆ ದೇಶದ ಜನ ಅವರ ಸ್ಥಾನವನ್ನು ತೋರಿಸಿದ್ದಾರೆ ಎಂದು ಜೋಶಿ ಹೇಳಿದರು.

ಇದನ್ನೂ ಓದಿ: ರಾತ್ರಿ ಮಲಗುವ ಮುನ್ನ ಬ್ರಾ ಧರಿಸಿದರೆ ಸ್ತನ ಕ್ಯಾನ್ಸರ್ ಬರುತ್ತದೆಯೇ.? ಸತ್ಯ ಇಲ್ಲಿದೆ

ಮೋದಿಯವರು ಅಧಿಕಾರಕ್ಕೆ ಬರುವ ಮೊದಲು ದೇಶದಲ್ಲಿದ್ದ ಒಟ್ಟು AIIMS ಸಂಖ್ಯೆ 7 ಅಷ್ಟೇ. ಆದರೆ, ನಾವಿಂದು ಒಂದೇ ದಿನದಲ್ಲಿ 5 AIIMSಗಳನ್ನು ಉದ್ಘಾಟಿಸುತ್ತಿದ್ದೇವೆ. ಇದು ನಮ್ಮ ಅಭಿವೃದ್ಧಿ ಪರ್ವಕ್ಕೆ ನಿದರ್ಶನ. 
AIIMS ಆಂಧ್ರಪ್ರದೇಶದ ಅತ್ಯುತ್ತಮ ಹಾಗೂ ಕೈಗೆಟುಕುವ ಆಸ್ಪತ್ರೆಗಳಲ್ಲಿ ಒಂದಾಗಿದೆ ಮತ್ತು ಯಾವುದೇ ಕಾರ್ಪೊರೇಟ್ ಆಸ್ಪತ್ರೆಗಿಂತ ಕಡಿಮೆಯಿಲ್ಲ. ಆಂಧ್ರಪ್ರದೇಶದ ಬಡ ರೋಗಿಗಳಿಗೆ ಮೋದಿಯವರು ಈ ಮೂಲಕ ಅತ್ಯುನ್ನತ ಸೌಲಭ್ಯ ಒದಗಿಸಿದ್ದಾರೆ ಎಂದು ಸಚಿವ ಜೋಶಿ ಬಣ್ಣಿಸಿದರು.

ಇದನ್ನೂ ಓದಿ:  ತೂಕ ಇಳಿಸಿಕೊಳ್ಳಲು ಪ್ರತಿದಿನ ಗುಲಾಬಿ ಚಹಾ ಕುಡಿಯಿರಿ..! ಮಾಡುವ ವಿಧಾನ ಇಲ್ಲಿದೆ

ರಾಜ್ ಕೋಟ್ ನಿಂದ AIIMS ಗೆ ಪ್ರಧಾನಿ ಮೋದಿ ಚಾಲನೆ: ರಾಜ್ ಕೋಟ್ ನಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರು 5 AIIMS ಮತ್ತು ರಾಷ್ಟ್ರವ್ಯಾಪಿ ಮೆಗಾ ಆರೋಗ್ಯ ಯೋಜನೆಗಳನ್ನು ದೇಶಕ್ಕೆ ಅರ್ಪಿಸಿದ್ದಾರೆ.

ಯೋಜನೆಗಳ ಲೋಕಾರ್ಪಣೆ ಸಮಾರಂಭದಲ್ಲಿ ಆಂಧ್ರಪ್ರದೇಶದ ರಾಜ್ಯಪಾಲರಾದ ಎಸ್. ಅಬ್ದುಲ್ ನಜೀರ್, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವಿಯಾ, ಸಚಿವರಾದ ಡಾ.ಭಾರತಿ ಪವಾರ್, ರಾಜ್ಯ ಆರೋಗ್ಯ ಸಚಿವೆ ವಿಡದಲಾ ರಜಿನಿ ಉಪಸ್ಥಿತರಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News