PM Modi ಲೇಹ್-ಲಡಾಖ್ Surprise Visit ಶಿ ಜಿನ್ಪಿಂಗ್ ಗೆ ಒಂದು ಸ್ಪಷ್ಟ ಸಂದೇಶ

ರಕ್ಷಣಾ ತಜ್ಞರ ಅಭಿಪ್ರಾಯದಲ್ಲಿ ಉದ್ವಿಗ್ನತೆಯ ನಡುವೆ ಪ್ರಧಾನಿ ಮೋದಿಯವರು ಲೇಹ್‌ಗೆ ನೀಡಿರುವುದು ಕಾರ್ಯತಂತ್ರದ ದೃಷ್ಟಿಯಿಂದ ಭಾರತಕ್ಕೆ ಇಟ್ಟಿರುವ ಒಂದು ಉತ್ತಮ ಹೆಜ್ಜೆಯಾಗಿದೆ.

Last Updated : Jul 3, 2020, 02:53 PM IST
PM Modi ಲೇಹ್-ಲಡಾಖ್ Surprise Visit ಶಿ ಜಿನ್ಪಿಂಗ್ ಗೆ ಒಂದು ಸ್ಪಷ್ಟ ಸಂದೇಶ title=

ನವದೆಹಲಿ: ಚೀನಾದೊಂದಿಗಿನ ಗಡಿ ವಿವಾದದ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಇದ್ದಕ್ಕಿದ್ದಂತೆ ಲೇಹ್ ತಲುಪಿದ್ದಾರೆ. ಇಲ್ಲಿ ಅವರು ಮುಂಚೂಣಿಯಲ್ಲಿರುವ ಪೋಸ್ಟ್ ನಲ್ಲಿರುವ ಸೇನಾ ಯೋಧರನ್ನು ಭೇಟಿಯಾಗಿ ಅವರಿಂದ ಪರಿಸ್ಥಿತಿಯ ಕುರಿತು ಮಾಹಿತಿ ಪಡೆದಿದ್ದರೆ.. ಪ್ರಧಾನಿ ಮೋದಿಯವರ ಈ ಅಚ್ಚರಿಯ ಭೇಟಿ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ಗೆ ಯಾವುದೇ ಸಂದರ್ಭದಲ್ಲೂ ಭಾರತ ಹಿಂದೆ ಸರಿಯುವುದಿಲ್ಲ ಎಂಬ ಬಲವಾದ ಸಂದೇಶ ರವಾನಿಸಿದೆ.

ರಕ್ಷಣಾ ತಜ್ಞರ ಅಭಿಪ್ರಾಯದಲ್ಲಿ ಉದ್ವಿಗ್ನತೆಯ ನಡುವೆ ಪ್ರಧಾನಿ ಮೋದಿಯವರು ಲೇಹ್‌ಗೆ ನೀಡಿರುವುದು ಕಾರ್ಯತಂತ್ರದ ದೃಷ್ಟಿಯಿಂದ ಭಾರತಕ್ಕೆ ಇಟ್ಟಿರುವ ಒಂದು ಉತ್ತಮ ಹೆಜ್ಜೆಯಾಗಿದೆ. ಪ್ರಧಾನಿ ಅವರ ಈ ಭೇಟಿಯ ಮೂರು ಸ್ಪಷ್ಟ ಪ್ರಯೋಜನಗಳಿವೆ. ಮೊದಲನೆಯದಾಗಿ, ನಮ್ಮ ಸೈನಿಕರ ಸ್ಥೈರ್ಯ ಹೆಚ್ಚಾಗಲಿದೆ. ಏಕೆಂದರೆ ಯಾವುದೇ ಸೈನ್ಯವು ತನ್ನ ಪ್ರಧಾನಿಯನ್ನು ಯುದ್ಧಭೂಮಿಯಲ್ಲಿ ನೋಡಿದಾಗ, ಅದರ ವಿಶ್ವಾಸವು ಹಲವಾರು ಪಟ್ಟು ಹೆಚ್ಚಾಗುತ್ತದೆ. ಎರಡನೆಯದಾಗಿ, ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಹಳೆಯ ಸ್ಥಾನಕ್ಕೆ ಮರಳಲು ಚೀನಾದ ಮೇಲೆ ಒತ್ತಡವಿರಲಿದೆ ಮತ್ತು ಮೂರನೆಯದಾಗಿ ಭಾರತವು ಯಾವುದೇ ಸಂದರ್ಭದಲ್ಲೂ ಹಿಂದೆ ಸರಿಯುವುದಿಲ್ಲ ಎಂಬ ಸ್ಪಷ್ಟ ಸಂದೇಶ ಇಡೀ ಜಗತ್ತಿಗೆ ನೀಡಿದಂತಾಗುತ್ತದೆ.

ಪ್ರಧಾನಿ ಮೋದಿಯವರ ಈ ಭೇಟಿಯು ಚೀನಾದ ದಾದಗಿರಿ ಮುಗಿಸುವ ದಿಕ್ಕಿನಲ್ಲಿ ಒಂದು ಬಹುಮುಖ್ಯ ಹೆಜ್ಜೆಯಾಗಿದೆ ಎಂದು ರಕ್ಷಣಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದರಿಂದ ನಾವು ಹಿಂದೆ ಸರಿಯುವುದಿಲ್ಲ ಎಂಬ ಸಂದೇಶ ಚೀನಾ ಖಂಡಿತವಾಗಿ ರವಾನೆಯಾಗಿದೆ. ಚೀನಾದ ಸೈನಿಕರು ಎಲ್‌ಎಸಿಯ ಮೇಲೆ ನಿಂತರೆ, ನಮ್ಮ ಸೈನಿಕರು ಸಹ ನಿಲ್ಲುತ್ತಾರೆ, ನಾವು ಯಾವುದೇ ಪರಿಸ್ಥಿತಿಯಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂಬುದೇ ಇದರ ಸ್ಪಷ್ಟ ಸಂದೇಶ ಎಂದು ರಕ್ಷಣಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಭಾರತ-ಚೀನಾ ವ್ಯವಹಾರಗಳ ಬಗ್ಗೆ ತಿಳಿದಿರುವ ಪ್ರಸೂನ್ ಶರ್ಮಾ ಹೇಳುವ ಪ್ರಕಾರ, ಪ್ರಧಾನ ಮಂತ್ರಿಯ ಈ ಭೇಟಿ ಚೀನಾ ಜೊತೆಗೆ ಪಾಕಿಸ್ತಾನಕ್ಕೂ ಕೂಡ  ಬಲವಾದ ಸಂದೇಶವನ್ನು ನೀಡಿದೆ. ಭಾರತದ ವಿರುದ್ಧ ಯಾವುದೇ ರೀತಿಯ ಯುದ್ಧದಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದು ಇಬ್ಬರೂ ಅರ್ಥಮಾಡಿಕೊಂಡಿರಬೇಕು. ಪ್ರಧಾನಿ ಲೇಹ್‌ಗೆ ಹಠಾತ್ ಆಗಮನವು ಭಾರತವು ಚೀನಾದೊಂದಿಗೆ ಸ್ಪರ್ಧಿಸಲು ಸಂಪೂರ್ಣವಾಗಿ ಸಿದ್ಧವಾಗಿದೆ ಮತ್ತು ಇಡೀ ದೇಶವು ತನ್ನ ಸೈನ್ಯದೊಂದಿಗೆ ನಿಂತಿದೆ ಎಂದು ತೋರಿಸುತ್ತದೆ. ಪ್ರಧಾನಮಂತ್ರಿಯ ಭೇಟಿಯು ಮುಂಚೂಣಿಯಲ್ಲಿರುವ ಸೇನಾ ಸಿಬ್ಬಂದಿಗೆ ಶಕ್ತಿ, ಸ್ಥೈರ್ಯ ಮತ್ತು ಶಕ್ತಿಯನ್ನು ನೀಡುತ್ತದೆ.

ಇನ್ನೊಂದೆಡೆ ಈ ಕುರಿತು ಹೇಳಿಕೆ ನೀಡಿರುವ ಇತರೆ ಕೆಲ ರಕ್ಷಣಾ ತಜ್ಞರು. ಲೇಹ್‌ಗೆ ಹೋಗುವ ಮೂಲಕ, ಪ್ರಧಾನಮಂತ್ರಿಗೆ  ಗ್ರೌಂಡ್ ರಿಯಾಲಿಟಿ ಬಗ್ಗೆ ಮಾಹಿತಿ ಸಿಗುತ್ತದೆ. ಅಲ್ಲದೆ, ಪ್ರಸ್ತುತ ಪರಿಸ್ಥಿತಿ ಹೇಗೆ ಮತ್ತು ಮಿಲಿಟರಿ ಸನ್ನದ್ಧತೆಯ ದಿಕ್ಕಿನಲ್ಲಿ ಇನ್ನೇನು ಮಾಡಬೇಕಾಗಿದೆ ಎಂಬುದನ್ನು ಅವರು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ವಿಶೇಷವೆಂದರೆ, ಇದಕ್ಕೂ ಮೊದಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸಿಡಿಎಸ್ ಬಿಪಿನ್ ರಾವತ್ ಅವರೊಂದಿಗೆ ಲೇಹ್‌ಗೆ ಭೇಟಿ ನೀಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಇದ್ದಕ್ಕಿದ್ದಂತೆ ಪ್ರಧಾನಿ ಮೋದಿ ಅಲ್ಲಿಗೆ ತಲುಪಿದ್ದಾರೆ. ಪಿಎಂ ಅವರೊಂದಿಗೆ ಸಿಡಿಎಸ್ ಬಿಪಿನ್ ರಾವತ್ ಮತ್ತು ಸೇನಾ ಮುಖ್ಯಸ್ಥ ಮನೋಜ್ ಮುಕುಂದ್ ನರ್ವಾನೆ ಕೂಡ ಉಪಸ್ಥಿತರಿದ್ದರು.

Trending News