ವಿಶ್ವ ಕ್ಯಾನ್ಸರ್ ದಿನದಂದು ಪರಿಕ್ಕರ್ ನೀಡಿದ ಸಂದೇಶವೇನು ಗೊತ್ತೇ?

ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಈಗ ವಿಶ್ವ ಕ್ಯಾನ್ಸರ್ ದಿನದಂದು ಹೊಸ ಸಂದೇಶ ನೀಡಿದ್ದಾರೆ.

Last Updated : Feb 4, 2019, 04:19 PM IST
ವಿಶ್ವ ಕ್ಯಾನ್ಸರ್ ದಿನದಂದು ಪರಿಕ್ಕರ್ ನೀಡಿದ ಸಂದೇಶವೇನು ಗೊತ್ತೇ? title=

ನವದೆಹಲಿ: ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಈಗ ವಿಶ್ವ ಕ್ಯಾನ್ಸರ್ ದಿನದಂದು ಹೊಸ ಸಂದೇಶ ನೀಡಿದ್ದಾರೆ.

ಇಂತಹ ಗಂಭೀರ್ ಕಾಯಿಲೆಗಳಿಂದ ಬಳಲುತ್ತಿದ್ದರೆ ಅದರಿಂದ ಹೊರ ಬರುವುದು ಹೇಗೆ ಎನ್ನುವ ವಿಚಾರವಾಗಿ ಈಗ ಅವರು ಟ್ವೀಟ್ ಮೂಲಕ "ಮನುಷ್ಯನ ಮನಸ್ಥಿತಿ ಎಂತಹ ಕಾಯಿಲೆಯನ್ನು ಕೂಡ ಗುಣಪಡಿಸುತ್ತದೆ" ಎಂದು ತಿಳಿಸಿದ್ದಾರೆ.

ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ಅವರು ಗೋವಾ ಮುಂಬೈ, ದೆಹಲಿ,ಮುಂಬೈನಲ್ಲಿ ಚಿಕಿತ್ಸೆಯನ್ನು ಪಡೆದುಕೊಂಡಿದ್ದರು.ಅಮೆರಿಕಾದ ಬಂದ ನಂತರ ಸಂಪಾದಕರೊಂದಿಗೆ ಮಾತನಾಡುತ್ತಾ ಈ ಕಾಯಿಲೆ ವಿಚಾರವಾಗಿ ಭಯಭೀತಿಗೊಂಡಿರಲಿಲ್ಲ ಎಂದು ತಿಳಿಸಿದರು.

ಸ್ಥಳೀಯ ಸಂಪಾದಕರೊಬ್ಬರು ಹೇಳುವಂತೆ " ಅವರು ಕಾಯಿಲೆಯಿಂದ ಬಳಲುತ್ತಿದ್ದಾಗ ಯಾವುದೇ ಒತ್ತಡಕ್ಕೆ ಒಳಗಾಗಿರಲಿಲ್ಲ, ಇದರಿಂದ ಹೊರಬರಲು ತಮಗೆ ಅಂತಹ ಸದೃಢ ಮನಸ್ಥಿತಿ ಇದೆ" ಎಂದು ಹೇಳಿದ್ದರು ಎಂದು ಸಂಪಾದಕರೊಬ್ಬರು ತಿಳಿಸಿದ್ದರು.

 

Trending News