ಶ್ರೀರಾಮ ಇನ್ನು ವನವಾಸದಲ್ಲಿದ್ದಾನೆ, ಬಿಜೆಪಿ ಮಾತ್ರ ಕುಂಭಕರ್ಣನ ಹಾಗೆ ನಿದ್ರಿಸುತ್ತಿದೆ- ಶಿವಸೇನಾ

ರಾಮಮಂದಿರ ನಿರ್ಮಿಸಲು ವಿಳಂಭ ಧೋರಣೆ ಅನುಸರಿಸುತ್ತಿರುವ  ಬಿಜೆಪಿ ಸರ್ಕಾರವನ್ನು ತರಾಟೆಗೆ ತಗೆದುಕೊಂಡಿರುವ ಮಿತ್ರಪಕ್ಷ ಶಿವಸೇನಾ" ಬಿಜೆಪಿ ಇನ್ನೂ ಕುಂಭಕರ್ಣನ ಹಾಗೆ ನಿದ್ರಿಸುತ್ತಿದೆ ನಾವು ಅವರನ್ನು ಈಗ ಎಬ್ಬಿಸಲು ಬಂದಿದ್ದೇವೆ ಎಂದು ತಿಳಿಸಿದೆ.

Last Updated : Nov 24, 2018, 05:29 PM IST
ಶ್ರೀರಾಮ ಇನ್ನು ವನವಾಸದಲ್ಲಿದ್ದಾನೆ, ಬಿಜೆಪಿ ಮಾತ್ರ ಕುಂಭಕರ್ಣನ ಹಾಗೆ ನಿದ್ರಿಸುತ್ತಿದೆ- ಶಿವಸೇನಾ    title=

ಲಖನೌ: ರಾಮಮಂದಿರ ನಿರ್ಮಿಸಲು ವಿಳಂಭ ಧೋರಣೆ ಅನುಸರಿಸುತ್ತಿರುವ  ಬಿಜೆಪಿ ಸರ್ಕಾರವನ್ನು ತರಾಟೆಗೆ ತಗೆದುಕೊಂಡಿರುವ ಮಿತ್ರಪಕ್ಷ ಶಿವಸೇನಾ" ಬಿಜೆಪಿ ಇನ್ನೂ ಕುಂಭಕರ್ಣನ ಹಾಗೆ ನಿದ್ರಿಸುತ್ತಿದೆ ನಾವು ಅವರನ್ನು ಈಗ ಎಬ್ಬಿಸಲು ಬಂದಿದ್ದೇವೆ ಎಂದು ತಿಳಿಸಿದೆ.

ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ಅಯೋಧ್ಯೆಗೆ ಭೇಟಿ ನೀಡುತ್ತಿರುವ ಹಿನ್ನಲೆಯಲ್ಲಿ ಶಿವಸೇನಾ ಮುಖವಾಣಿ ಸಾಮ್ನಾ ತನ್ನ ಸಂಪಾದಕೀಯದಲ್ಲಿ "ನೀವು ನಿಮ್ಮ  ವೈಯಕ್ತಿಕ ಹಿತಾಸಕ್ತಿಗಾಗಿ ಹಲವು ವಾಲ್ಯರನ್ನು (ವಾಲ್ಮೀಕಿ) ಶುದ್ದಿಕರಣ ಮಾಡಿದ್ದೀರಿ.ಆದರೆ ನಿಮ್ಮ ರಾಜಕೀಯ ಭವಿಷ್ಯವನ್ನು ರೂಪಿಸಿದ ಶ್ರೀರಾಮ ಮಾತ್ರ ಇನ್ನು ವನವಾಸದಲ್ಲಿದ್ದಾನೆ"ಎಂದು ತಿಳಿಸಿದೆ.

ಇದೇ ವೇಳೆ ಶಿವಸೇನಾ ಪಕ್ಷದ ಹಿರಿಯ ನಾಯಕ ಗುಲಾಬ್ ರಾವ್ ಪಾಟೀಲ್ ಮಾತನಾಡುತ್ತಾ ಬಿಜೆಪಿ ಹಿಂದುತ್ವ ಅಜೆಂಡಾವನ್ನು ಮರೆತಿದೆ ಶಿವಸೇನಾ ನಿಜವಾದ ಹಿಂದುತ್ವದ ಪಕ್ಷ ಎಂದು ತಿಳಿಸಿದರು.ನಾವು ನಿಜವಾದ ಹಿಂದುತ್ವದ ಪಕ್ಷ,  ಕುಂಬಕರ್ಣನ ಹಾಗೆ ಅವರು ನಿದ್ರಿಸುತ್ತಿದ್ದಾರೆ ಎಂದು ನಾವು ಅವರಿಗೆ ಹೇಳಬೇಕಾಗಿದೆ, ನಾವು ಅವರನ್ನು ಈಗ ಎಬ್ಬಿಸಲು ಬಂದಿದ್ದೇವೆ ಎಂದು ಅವರು ತಿಳಿಸಿದರು.

ಶಿವಸೇನೆಯ ಇನ್ನೊಬ್ಬ ನಾಯಕ ವಿಜಯ್ ಶಿವತಾರೆ ಕೂಡ ಬಿಜೆಪಿ ವಿರುದ್ದ ಟೀಕಾ ಪ್ರಹಾರ ನಡೆಸಿ " ಕೆಲವು ವರ್ಷಗಳ ಹಿಂದೆ ಸುಷ್ಮಾ ಸ್ವರಾಜ್ ಅವರು ರಾಮಮಂದಿರ ಎನ್ನುವುದು  ಏನ್ ಕ್ಯಾಶ್ ಮಾಡಿಕೊಂಡ ಚೆಕ್ ಇದ್ದಹಾಗೆ ಎಂದು ಹೇಳಿದ್ದರು.ಇದು ರಾಮಮಂದಿರದ ಕುರಿತಾದ ಬಿಜೆಪಿ ಮನೋಭಾವವನ್ನು ತೋರಿಸುತ್ತದೆ ಎಂದು ಅವರು ತಿಳಿಸಿದರು.

 

Trending News