Parliament Session : ಸಂಸತ್ತಿನಲ್ಲಿ ಭಜ್ಜಿ ಮೊದಲ ಭಾಷಣ : ಶ್ಲಾಘಿಸಿದ ಸಭಾಪತಿಗಳು 

ಅಫ್ಘಾನಿಸ್ತಾನದಲ್ಲಿ ಸಿಖ್ಖರು ಮತ್ತು ಗುರುದ್ವಾರಗಳ ಮೇಲೆ ನಡೆದ ದಾಳಿಯ ಬಗ್ಗೆ ಸರ್ಕಾರವು ಗಮನ ಹರಿಸಬೇಕೆಂದು ಮನವಿ ಮಾಡಿದರು.

Written by - Channabasava A Kashinakunti | Last Updated : Aug 3, 2022, 06:10 PM IST
  • 'ಪ್ರತಿಯೊಬ್ಬ ಸಿಖ್‌ನ ಭಾವನೆಗಳು ಘಾಸಿ'
  • ಕೋವಿಡ್ ಅವಧಿಯನ್ನು ನೆನಪಿಸಿದ
  • ಹರ್ಭಜನ್ ಸಿಂಗ್ ಶ್ಲಾಘಿಸಿದ ಸಭಾಪತಿಗಳು
Parliament Session : ಸಂಸತ್ತಿನಲ್ಲಿ ಭಜ್ಜಿ ಮೊದಲ ಭಾಷಣ : ಶ್ಲಾಘಿಸಿದ ಸಭಾಪತಿಗಳು  title=

Harbhajan Singh in Rajyasabha : ಎಎಪಿ ಸಂಸದ ಹಾಗೂ ಮಾಜಿ ಕ್ರಿಕೆಟರ್ ಹರ್ಭಜನ್ ಸಿಂಗ್ ರಾಜ್ಯಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಮಾತನಾಡಿ, ಅಫ್ಘಾನಿಸ್ತಾನದಲ್ಲಿ ಸಿಖ್ಖರು ಮತ್ತು ಗುರುದ್ವಾರಗಳ ಮೇಲೆ ನಡೆದ ದಾಳಿಯ ಬಗ್ಗೆ ಸರ್ಕಾರವು ಗಮನ ಹರಿಸಬೇಕೆಂದು ಮನವಿ ಮಾಡಿದರು.

'ಪ್ರತಿಯೊಬ್ಬ ಸಿಖ್‌ನ ಭಾವನೆಗಳು ಘಾಸಿ'

ಸಂಸತ್ತಿನಲ್ಲಿ ಮಾತನಾಡಿದ ಹರ್ಭಜನ್ ಸಿಂಗ್, ಗುರುದ್ವಾರಗಳ ಮೇಲಿನ ಈ ದಾಳಿಗಳು ಜಗತ್ತಿನ ಪ್ರತಿಯೊಬ್ಬ ಸಿಖ್ಖರ ಭಾವನೆಗಳಿಗೆ ಧಕ್ಕೆ ತಂದಿವೆ. ಅಲ್ಲದೆ ನಮ್ಮನ್ನು ಯಾಕೆ ಟಾರ್ಗೆಟ್ ಮಾಡಲಾಗುತ್ತಿದೆ? ಇಂತಹ ದಾಳಿಗಳು ನಮ್ಮ ಮೇಲೆ ಮಾತ್ರ ಏಕೆ? ಎಂದು ಪ್ರಶ್ನಿಸಿದರು. ನಮ್ಮನ್ನು ಏಕೆ ಗುರಿಪಡಿಸಲಾಗುತ್ತಿದೆ? ಹರ್ಭಜನ್ ಅವರ ಪ್ರಶ್ನೆಗಳನ್ನು ಮುಗಿಸಿದ ನಂತರ ಸ್ಪೀಕರ್ ವೆಂಕಯ್ಯ ನಾಯ್ಡು ಅವರನ್ನು ಹೊಗಳಿದರು. ಈ ವೇಳೆ ಸಂಸದರು ಶ್ಲಾಘಿಸಿದರು.

ಇದನ್ನೂ ಓದಿ : Patra Chawl Scam Case : ಇಡಿ ಪ್ರಶ್ನೆಗೆ ದಂಗಾದ ಸಂಜಯ್ ರಾವುತ್ : 19 ಪ್ರಶ್ನೆಗಳ ಪಟ್ಟಿ ಇಲ್ಲಿದೆ ನೋಡಿ

ಕೋವಿಡ್ ಅವಧಿಯನ್ನು ನೆನಪಿಸಿದ

ಪ್ರಪಂಚದಾದ್ಯಂತ ಕೋವಿಡ್ ಅವಧಿಯಲ್ಲಿ, ಗುರುದ್ವಾರಗಳು ಆಕ್ಸಿಜನ್, ಔಷಧಿ ಮತ್ತು ಆಹಾರದವರೆಗೆ ಪ್ರತಿಯೊಂದು ಅಗತ್ಯವನ್ನು ಪೂರೈಸಿವೆ. ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಸ್ವಾತಂತ್ರ್ಯದ ನಂತರ ಸಿಖ್ಖರು ತಮ್ಮ ಶೌರ್ಯ, ಕಠಿಣ ಪರಿಶ್ರಮ, ಧೈರ್ಯದಿಂದ ಪ್ರತಿ ಕ್ಷೇತ್ರದಲ್ಲೂ ಹೆಸರುವಾಸಿಯಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ಗುರುದ್ವಾರಗಳ ಮೇಲಿನ ದಾಳಿ ನಮಗೆ ನೋವುಂಟು ಮಾಡಿದೆ ಎಂದರು.

ಕಾಬೂಲ್‌ನ ಗುರುದ್ವಾರಗಳ ಮೇಲೆ ದಾಳಿ

ಜೂನ್ 18 ರಂದು ಕಾಬೂಲ್‌ನ ಗುರುದ್ವಾರ ಕಾರ್ಟೆ ಪರ್ವಾನ್ ಮೇಲೆ ದಾಳಿ ನಡೆದಿದ್ದು, ಇದರಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ. ಈ ಹಿಂದೆ ಮಾರ್ಚ್ 25 ರಂದು ರಾಯಸಾಹೇಬ್ ಗುರುದ್ವಾರದ ಮೇಲೆ ದಾಳಿ ನಡೆಸಲಾಗಿದೆ, ಎರಡು ದಿನಗಳ ನಂತರ ಅದೇ ಗುರುದ್ವಾರದ ಮೇಲೆ ಮತ್ತೆ ದಾಳಿ ನಡೆಸಲಾಗಿದೆ. ಈ ದಾಳಿಯಲ್ಲಿ ಕೆಲ ಜನ ಪ್ರಾಣ ಕಳೆದುಕೊಂಡಿದ್ದಾರೆ. 1980 ರ ದಶಕದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಹಿಂದೂಗಳು ಮತ್ತು ಸಿಖ್ಖರು ಅಫ್ಘಾನಿಸ್ತಾನದಲ್ಲಿ ವಾಸಿಸುತ್ತಿದ್ದರು, ಆದರೆ ಈಗ ಈ ಸಂಖ್ಯೆ ತುಂಬಾ ಕಡಿಮೆಯಾಗಿದೆ ಎಂದು ಅವರು ಹೇಳಿದರು.

ಫ್ಘಾನಿಸ್ತಾನ ಒಂದು ಕಾಲದಲ್ಲಿ ಸಾವಿರಾರು ಸಿಖ್ಖರ ಭದ್ರಕೋಟೆ

ಇದಕ್ಕೂ ಮುನ್ನ ಹರ್ಭಜನ್ ಸಿಂಗ್ ಅವರು ಸದನದಲ್ಲಿ ಅಫ್ಘಾನಿಸ್ತಾನ ಒಂದು ಕಾಲದಲ್ಲಿ ಸಾವಿರಾರು ಸಿಖ್ಖರ ಭದ್ರಕೋಟೆಯಾಗಿತ್ತು. ದಶಕಗಳ ಹೋರಾಟದಿಂದಾಗಿ ಈ ಸಂಖ್ಯೆ ಬೆರಳೆಣಿಕೆಯಷ್ಟು ಕಡಿಮೆಯಾಗಿದೆ. 1980 ರ ದಶಕದಲ್ಲಿ ಅಫ್ಘಾನಿಸ್ತಾನದಲ್ಲಿ 2.20 ಸಾವಿರ ಸಿಖ್ ಮತ್ತು ಹಿಂದೂಗಳು ವಾಸಿಸುತ್ತಿದ್ದರು. 1990 ರ ದಶಕದ ಆರಂಭದಲ್ಲಿ, ಈ ಅಂಕಿ ಅಂಶವು 15 ಸಾವಿರಕ್ಕೆ ಕುಸಿಯಿತು ಮತ್ತು 2016 ರಲ್ಲಿ ಅದು 1350 ಕ್ಕೆ ಇಳಿದಿದೆ. ಈಗ ಅಲ್ಲಿ ಕೇವಲ 150 ಸಿಖ್ಖರು ಮಾತ್ರ ಉಳಿದಿದ್ದಾರೆ ಎಂದು ಅವರು ಹೇಳಿದರು.

ಇದನ್ನೂ ಓದಿ : ಮಹಾರಾಷ್ಟ್ರದ ಬಳಿಕ ಈ ರಾಜ್ಯದಲ್ಲಿ ‘ಆಪರೇಷನ್ ಕಮಲ’ಕ್ಕೆ ಬಿಜೆಪಿ ಮಾಸ್ಟರ್ ಪ್ಲಾನ್!

ಹರ್ಭಜನ್ ಸಿಂಗ್ ಶ್ಲಾಘಿಸಿದ ಸಭಾಪತಿಗಳು 

ಇದಾದ ಬಳಿಕ ಮಾತನಾಡಿದ ಸಭಾಪತಿ ವೆಂಕಯ್ಯ ನಾಯ್ಡು, ಖ್ಯಾತ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರೆ, ನೀವು ಒಳ್ಳೆಯ ವಿಚಾರವನ್ನು ಎತ್ತಿದ್ದೀರಿ. ನೀವು ಎತ್ತಿದ ವಿಷಯ ತುಂಬಾ ಮುಖ್ಯವಾಗಿದೆ. ವಿದೇಶಾಂಗ ಸಚಿವರು ಖಂಡಿತವಾಗಿಯೂ ಈ ಬಗ್ಗೆ ಗಮನ ಹರಿಸುತ್ತಾರೆ ಎಂದು ನಾನು ಭಾವಿಸುತ್ತೇನೆಈ ಎಂದು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News