ಕೇರಳದ ಶಶಿ ತರೂರ್ ಕಚೇರಿ ಮೇಲೆ ಬಿಜೆಪಿ ಕಾರ್ಯಕರ್ತರ ದಾಳಿ

     

Last Updated : Jul 16, 2018, 06:15 PM IST
ಕೇರಳದ ಶಶಿ ತರೂರ್ ಕಚೇರಿ ಮೇಲೆ ಬಿಜೆಪಿ ಕಾರ್ಯಕರ್ತರ ದಾಳಿ title=

ತಿರುವನಂತಪುರಂ: ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಕೇರಳದ ಕಚೇರಿಗೆ ಬಿಜೆಪಿ ಕಾರ್ಯಕರ್ತರು ನುಗ್ಗಿ ದಾಳಿ ಮಾಡಿದ್ದಾರೆ.

 ಶಶಿ ತರೂರ್ ಇತ್ತಿಚೆಗೆ ಬಿಜೆಪಿ 2019 ರಲ್ಲಿ ಮತ್ತೆ ಅಧಿಕಾರಕ್ಕೆ ಬಂದದ್ದೆ ಆದಲ್ಲಿ ಅದು ಹಿಂದೂ ಪಾಕಿಸ್ತಾನ್ ಆಗಲಿದೆ ಎಂದು ಅವರು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಬಿಜೆಪಿ ತೀವ್ರವಾದ ಆಕ್ಷೇಪವನ್ನು ವ್ಯಕ್ತಪಡಿಸಿತ್ತು. ಈಗ ಈ ಹೇಳಿಕೆಯನ್ನು ಖಂಡಿಸಿ ಬಿಜೆಪಿ ಯುವ ಕಾರ್ಯಕರ್ತರು ಕೇರಳದಲ್ಲಿರುವ ಆಫಿಸ್ ಗೆ ದಾಳಿ ಮಾಡಿ ಕಪ್ಪು ಮಸಿ ಬಳೆದಿದ್ದಾರೆ.

ಈ ದಾಳಿಯನ್ನು ಖಂಡಿಸಿರುವ ಶಶಿ ತರೂರ್ " ಜನರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಇಲ್ಲಿಗೆ ಬಂದಿರುತ್ತಾರೆ ಆದರೆ ನೀವು ಅವರನ್ನು ಇಲ್ಲಿಂದ ಹೆದರಿ ಹೋಗುವ ಹಾಗೆ ಮಾಡಿದ್ದಿರಿ. ಇದೆಲ್ಲ ನಮ್ಮ ದೇಶಕ್ಕೆ ಬೇಕಾಗಿದೆಯಾ? ಇದನ್ನು ನಾನು ಈ ದೇಶದ ಪ್ರಜೆಯಾಗಿ ಕೇಳುತ್ತಿದ್ದೇನೆ ಹೊರತು ಸಂಸದನಾಗಿ ಅಲ್ಲ.ಇದು ನಾನು ತಿಳಿದಿರುವ ಹಿಂದು ಧರ್ಮವಲ್ಲ ಎಂದು ಅವರು ತಿಳಿಸಿದರು.

ಈ ಘಟನೆ ನಡೆದಾಗ ಶಶಿ ತರೂರ್ ಆಫೀಸ್ ನಲ್ಲಿ ಇದ್ದಿರಲಿಲ್ಲ. ಆ ಸಂದರ್ಭದಲ್ಲಿ ಅವರು ಶಶಿ ತರೂರ್ ವಿರುದ್ದ ಘೋಷಣೆಗಳನ್ನು ಕೂಗಿದ್ದಲ್ಲದೆ ಹಿಂದೂ ಪಾಕಿಸ್ತಾನ್ ಬ್ಯಾನರ್ ನ್ನು ಆಫಿಸ್ ಗೆ ನೇತು ಹಾಕುವ ಪ್ರಯತ್ನವನ್ನು ಬಿಜೆಪಿ ಕಾರ್ಯಕರ್ತರು ಮಾಡಿದ್ದರು ಎಂದು ತಿಳಿದುಬಂದಿದೆ.

 

Trending News