Biparjoy Latest News: ಭೂಸ್ಪರ್ಷಕ್ಕೆ ಹತ್ತಿರವಾಗುತ್ತಿದೆ ಮಹಾಚಂಡಮಾರುತ ಬಿಪರ್ಜಾಯ್, ದೃಶ್ಯ ಭಯಹುಟ್ಟಿಸುವಂತಿದೆ!

Biparjoy Tracking: ಮಹಾ ಬಯಂಕರ ಚಂಡಮಾರುತ ಬಿಪರ್ಜಾಯ್ ಗೆ ಸಂಬಂಧಿಸಿದಂತೆ ಭಾರತೀಯ ಹವಾಮಾನ ಇಲಾಖೆಯು ವಿವಿಧ ಸ್ಥಳಗಳಲ್ಲಿ ರೆಡ್ ಅಲರ್ಟ್ ಘೋಷಿಸಿದೆ. ಈ ಚಂಡಮಾರುತದಿಂದ ದೊಡ್ಡ ಅಪಾಯವು ಕಛ್-ಸೌರಾಷ್ಟ್ರ ಮತ್ತು ಗುಜರಾತ್ ಕರಾವಳಿ ಪ್ರದೇಶಗಳಲ್ಲಾಗಲಿದೆ, ಗುಜರಾತ್ ಮತ್ತು ಮಹಾರಾಷ್ಟ್ರದ ಕರಾವಳಿ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ರಕ್ಷಣಾ ತಂಡಗಳನ್ನು ನಿಯೋಜಿಸಲಾಗಿದೆ.  

Written by - Nitin Tabib | Last Updated : Jun 15, 2023, 07:29 PM IST
  • ಸೇನೆಯು ಭುಜ್, ಜಾಮ್‌ನಗರ, ಗಾಂಧಿಧಾಮ್ ಮತ್ತು ನಲಿಯಾ, ದ್ವಾರಕಾ ಮತ್ತು ಮಾಂಡವಿಯ ಮುಂಚೂಣಿ ಸ್ಥಳಗಳಲ್ಲಿ 27 ಪರಿಹಾರ ತಂಡಗಳನ್ನು ನಿಯೋಜಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
  • ವಾಯುಪಡೆಯು ವಡೋದರಾ, ಅಹಮದಾಬಾದ್ ಮತ್ತು ದೆಹಲಿಯಲ್ಲಿ ತಲಾ ಒಂದು ಹೆಲಿಕಾಪ್ಟರ್ ಅನ್ನು ಸಿದ್ಧವಾಗಿ ಇರಿಸಿದೆ. ನೌಕಾಪಡೆಯು 10-15 ತಂಡಗಳನ್ನು ನಿಯೋಜಿಸಿದೆ,
  • ತಲಾ ಐವರು ಡೈವರ್‌ಗಳು ಮತ್ತು ಉತ್ತಮ ಈಜುಗಾರರನ್ನು ಓಖಾ, ಪೋರಬಂದರ್ ಮತ್ತು ಬಾಕಾಸುರ್‌ನಲ್ಲಿ ರಕ್ಷಣೆ ಮತ್ತು ಪರಿಹಾರಕ್ಕಾಗಿ ನಿಯೋಜಿಸಲಾಗಿದೆ.
Biparjoy Latest News: ಭೂಸ್ಪರ್ಷಕ್ಕೆ ಹತ್ತಿರವಾಗುತ್ತಿದೆ ಮಹಾಚಂಡಮಾರುತ ಬಿಪರ್ಜಾಯ್, ದೃಶ್ಯ ಭಯಹುಟ್ಟಿಸುವಂತಿದೆ! title=
ಚಿತ್ರ ಕೃಪೆ - ಎಎನ್ಐ

Biparjoy Update: ಇಂದು ಅಂದರೆ ಗುರುವಾರ ತಡರಾತ್ರಿ ಗುಜರಾತ್‌ನ ಜಖೌ ಬಂದರಿನ ಬಳಿ ಬಿಪರ್‌ಜೋಯ್ ಚಂಡಮಾರುತದ  ಭೂಸ್ಪರ್ಶ ಸಂಭವಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಕಾರಣದಿಂದಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಹೊರತುಪಡಿಸಿ, ಭೂಸೇನೆ, ವಾಯುಪಡೆ, ನೌಕಾಪಡೆ ಮತ್ತು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸಿಬ್ಬಂದಿ ಕೂಡ ಪರಿಹಾರ ಕಾರ್ಯಕ್ಕೆ ಸಜ್ಜಾಗಿದ್ದಾರೆ. ಈ ಸಮಯದಲ್ಲಿ ಗರಿಷ್ಠ ಗಾಳಿಯ ವೇಗ ಗಂಟೆಗೆ 140 ಕಿ.ಮೀ ವರೆಗೆ ತಲುಪಬಹುದು ಎಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಪ್ರದೇಶದಲ್ಲಿ ಬಲವಾದ ಗಾಳಿಯೊಂದಿಗೆ ಭಾರೀ ಮಳೆಯಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ, ಎಂಟು ಕರಾವಳಿ ಜಿಲ್ಲೆಗಳಿಂದ ಸುಮಾರು 1 ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ.

ಸೇನೆಯು ಭುಜ್, ಜಾಮ್‌ನಗರ, ಗಾಂಧಿಧಾಮ್ ಮತ್ತು ನಲಿಯಾ, ದ್ವಾರಕಾ ಮತ್ತು ಮಾಂಡವಿಯ ಮುಂಚೂಣಿ ಸ್ಥಳಗಳಲ್ಲಿ 27 ಪರಿಹಾರ ತಂಡಗಳನ್ನು ನಿಯೋಜಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಾಯುಪಡೆಯು ವಡೋದರಾ, ಅಹಮದಾಬಾದ್ ಮತ್ತು ದೆಹಲಿಯಲ್ಲಿ ತಲಾ ಒಂದು ಹೆಲಿಕಾಪ್ಟರ್ ಅನ್ನು ಸಿದ್ಧವಾಗಿ ಇರಿಸಿದೆ. ನೌಕಾಪಡೆಯು 10-15 ತಂಡಗಳನ್ನು ನಿಯೋಜಿಸಿದೆ, ತಲಾ ಐವರು ಡೈವರ್‌ಗಳು ಮತ್ತು ಉತ್ತಮ ಈಜುಗಾರರನ್ನು ಓಖಾ, ಪೋರಬಂದರ್ ಮತ್ತು ಬಾಕಾಸುರ್‌ನಲ್ಲಿ ರಕ್ಷಣೆ ಮತ್ತು ಪರಿಹಾರಕ್ಕಾಗಿ ನಿಯೋಜಿಸಲಾಗಿದೆ.

ಇದನ್ನೂ ಓದಿ-Biparjoy Update: ಗುಜರಾತ್ ನಲ್ಲಿ 94,427 ಜನರು ಶಿಫ್ಟ್, 1521 ಹೋಮ್ ಶೇಲ್ಟರ್ ಗಳ ನಿರ್ಮಾಣ

IMD ತನ್ನ ಇತ್ತೀಚಿನ ಬುಲೆಟಿನ್‌ನಲ್ಲಿ ಸೈಕ್ಲೋನ್‌ನ ಸಮೀಪಿಸುವಿಕೆ ಸಂಜೆ ಆರಂಭಗೊಂಡಿದೆ ಮತ್ತು ಮಧ್ಯರಾತ್ರಿಯವರೆಗೆ ಮುಂದುವರೆಯಲಿದೆ ಎಂದು ಹೇಳಿದೆ. ಸೈಕ್ಲೋನ್‌ ಕಾರಣ ಭಾರೀ ಮಳೆ ಮತ್ತು 2-3 ಮೀಟರ್ ಎತ್ತರದ ಅಲೆಗಳು ಏಳಬಹುದು ಎಂದು ವಿಜ್ಞಾನಿಗಳು ಅಂದಾಜು ವ್ಯಕ್ತಪಡಿಸಿದ್ದಾರೆ. ಚಂಡಮಾರುತದ ಪ್ರಭಾವದಿಂದಾಗಿ ಕಛ್, ದೇವಭೂಮಿ ದ್ವಾರಕಾ, ಪೋರಬಂದರ್, ಜಾಮ್‌ನಗರ ಮತ್ತು ಮೊರ್ಬಿ ಜಿಲ್ಲೆಗಳ ತಗ್ಗು ಪ್ರದೇಶಗಳಲ್ಲಿ ಪ್ರವಾಹದ ಸಾಧ್ಯತೆಯಿದೆ. ಭದ್ರತೆಯ ದೃಷ್ಟಿಯಿಂದ 8 ಜಿಲ್ಲೆಗಳಲ್ಲಿ ಒಟ್ಟು 1,521 ಆಶ್ರಯ ಮನೆಗಳನ್ನು ಸ್ಥಾಪಿಸಲಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

ಇದನ್ನೂ ಓದಿ-Uniform Civil Code ಕುರಿತು ಸಮಾಲೋಚನೆ ಪ್ರಕ್ರಿಯೆಗೆ ಚಾಲನೆ ನೀಡಿದ ಕೇಂದ್ರ ಕಾನೂನು ಆಯೋಗ

ಚಂಡಮಾರುತದ ತೀವ್ರತೆ ಕಡಿಮೆಯಾಗಿದ್ದರೂ ಶುಕ್ರವಾರ ಬಲವಾದ ಗಾಳಿ ಬೀಸಲಿದೆ ಎಂದು ಐಎಂಡಿ ಹೇಳಿದೆ. ಏತನ್ಮಧ್ಯೆ, ಕಛ್, ಜಾಮ್‌ನಗರ, ರಾಜ್‌ಕೋಟ್, ಪೋರಬಂದರ್, ದೇವಭೂಮಿ ದ್ವಾರಕಾ ಮತ್ತು ಅಮ್ರೇಲಿಯ ಹಲವಾರು ಭಾಗಗಳಲ್ಲಿ ಚಂಡಮಾರುತ ಅಪ್ಪಳಿಸುವ ಆರು ಗಂಟೆಗಳಲ್ಲಿ 10-20 ಮಿಮೀ ಭಾರೀ ಮಳೆಯಾಗಿದೆ. ಸೌರಾಷ್ಟ್ರ-ಕಛ್ ಹೊರತುಪಡಿಸಿ, ಗುಜರಾತ್‌ನ ಇತರ ಜಿಲ್ಲೆಗಳಲ್ಲಿ ಗಾಳಿಯ ವೇಗ ಗಂಟೆಗೆ 40 ಕಿಮೀ ತಲುಪುವ ಜೊತೆಗೆ ಲಘು ಮಳೆಯಾಗಬಹುದು ಎಂದು ಐಎಂಡಿ ಅಧಿಕಾರಿಗಳು ತಿಳಿಸಿದ್ದಾರೆ. ಗಮನಾರ್ಹವಾಗಿ, ಮುನ್ನೆಚ್ಚರಿಕೆಯಾಗಿ, 76 ರೈಲುಗಳನ್ನು ರದ್ದುಗೊಳಿಸಲಾಗಿದೆ, 36 ಅನ್ನು ಮಧ್ಯದಲ್ಲಿ ನಿಲ್ಲಿಸಲಾಗಿದೆ ಮತ್ತು 31 ರೈಲುಗಳನ್ನು ಆಯ್ದ ನಿಲ್ದಾಣಗಳಲ್ಲಿ ಮಾತ್ರ ಓಡಿಸಲು ನಿರ್ಧರಿಸಲಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News