ಜಮ್ಮು-ಕಾಶ್ಮೀರ: ಪ್ರಪಾತಕ್ಕೆ ಬಸ್ ಉರುಳಿ 11 ಮಂದಿ ಸಾವು

ಘಟನೆಯಲ್ಲಿ 11 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. 

Last Updated : Dec 8, 2018, 12:11 PM IST
ಜಮ್ಮು-ಕಾಶ್ಮೀರ: ಪ್ರಪಾತಕ್ಕೆ ಬಸ್ ಉರುಳಿ 11 ಮಂದಿ ಸಾವು title=
ಚಿತ್ರ ಕೃಪೆ: ANI

ಶ್ರೀನಗರ: ಚಲಿಸುತ್ತಿದ್ದ ಬಸೊಂದು ಚಾಲಕನ ನಿಯಂತ್ರಣ ತಪ್ಪಿ ಆಳವಾದ ಪ್ರಪಾತಕ್ಕೆ ಬಿದ್ದ ಪರಿಣಾಮ ಕನಿಷ್ಠ 11 ಮಂದಿ ಸಾವನ್ನಪ್ಪಿದ್ದ ಧಾರುಣ ಘಟನೆ ಶನಿವಾರ ನಡೆದಿದೆ. 

ಪೂಂಚ್ ಜಿಲ್ಲೆಯ ಮಂಡಿ ತೆಹ್ಸಿಲ್ ನಲ್ಲಿರುವ ಪ್ಲೇರ ಬಳಿ ಬಸ್ಸೊಂದು ಆಯ ತಪ್ಪಿ ಆಳವಾದ ಕಂದಕಕ್ಕೆ ಉರುಳಿ ಬಿದ್ದಿದೆ. ಈ ಘಟನೆಯಲ್ಲಿ 11 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಅಪಘಾತಕ್ಕೊಳಗಾದ ಬಸ್ ಲೋರಾನ್ ನಿಂದ ಪೂಂಚ್ ಗೆ ತೆರಳುತ್ತಿತ್ತು ಎನ್ನಲಾಗಿದೆ.  

ಕೂಡಲೇ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಾರ್ವಜನಿಕರ ಸಹಾಯದೊಂದಿಗೆ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. 

ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.

Trending News