ಆಂಧ್ರಪ್ರದೇಶ: ಕಳುವಾಗಿದ್ದ ನಂದಿ ವಿಗ್ರಹ ಪತ್ತೆ, 7 ಜನರ ಸೆರೆ

ಶನಿವಾರದಂದು ಇತ್ತೀಚಿಗೆ ಕಳುವಾಗಿದ್ದ ನಂದಿ ವಿಗ್ರಹ ಪತ್ತೆಯಾಗಿದ್ದು, ಈಗ ಈ ಘಟನೆಗೆ ಸಂಬಂಧಿಸಿದಂತೆ 7 ಜನರನ್ನು ಆಂಧ್ರ ಪ್ರದೇಶದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.

Last Updated : Feb 3, 2019, 12:50 PM IST
ಆಂಧ್ರಪ್ರದೇಶ: ಕಳುವಾಗಿದ್ದ ನಂದಿ ವಿಗ್ರಹ ಪತ್ತೆ, 7 ಜನರ ಸೆರೆ title=
ಸಾಂದರ್ಭಿಕ ಚಿತ್ರ

ಪೂರ್ವ ಗೋದಾವರಿ: ಶನಿವಾರದಂದು ಇತ್ತೀಚಿಗೆ ಕಳುವಾಗಿದ್ದ ನಂದಿ ವಿಗ್ರಹ ಪತ್ತೆಯಾಗಿದ್ದು, ಈಗ ಈ ಘಟನೆಗೆ ಸಂಬಂಧಿಸಿದಂತೆ 7 ಜನರನ್ನು ಆಂಧ್ರ ಪ್ರದೇಶದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.

ಬಾಲಾ ತ್ರಿಪುರ ಸುಂದರಿ ಸಮೇತ ಅಗಸ್ಥೆಶ್ವರ್ ಸ್ವಾಮಿ ರಾಮಚಂದ್ರಪುರಂ ದೇವಾಲಯದಲ್ಲಿದ್ದ ನಂದಿ ವಿಗ್ರಹದಲ್ಲಿ ವಜ್ರಗಳಿವೆ ಎಂದು ಜನವರಿ 23 ರಂದು ಕಳ್ಳತನ ಮಾಡಿದ್ದಾರೆ, ಆದರೆ ಈ ಘಟನೆ ನಡೆದ ನಂತರ ವಿಗ್ರಹ ಐವತ್ತು ಕಿಲೋಮೀಟರ್ ದೂರದಲ್ಲಿ ದುರ್ವ್ಯವಸ್ಥೆ ರೂಪದಲ್ಲಿ ಕಂಡುಬಂದಿದೆ.

ಈ ಘಟನೆ ಕುರಿತಾಗಿ ಮಾತನಾಡಿರುವ ಸಬ್ ಇನ್ಸ್ಪೆಕ್ಟರ್ ಎಸ್ ಲಕ್ಷ್ಮಿ ಕಾಂತಮ್ "ಆರೋಪಿಗಳು ತಿಳಿಸಿರುವಂತೆ ಕಳವು ಸಾಧುಗಳು ಇದರಲ್ಲಿ ಡೈಮಂಡ್ ಮೂರ್ತಿ ಗಳಿವೆ ಎಂದು ಹೇಳಿದ್ದರು, ಅದಕ್ಕೆ ಈ ಮೂರ್ತಿಯನ್ನು ಕಳ್ಳತನ ಮಾಡಿದ್ದರು ಎನ್ನಲಾಗಿದೆ" ಎಂದು ತಿಳಿಸಿದ್ದಾರೆ. ಈಗ ಪೊಲೀಸರು ಆರೋಪಿಗಳನ್ನು ಬಂಧಿಸಿ ಐಪಿಸಿ ಸೆಕ್ಷನ್ 380ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎನ್ನಲಾಗಿದೆ. 

Trending News