ದಿನಕರನ್ ಬೆಂಬಲಿಗರಾದ ಆರು ಪದಾಧಿಕಾರಿಗಳನ್ನು ಪಕ್ಷದಿಂದ ಉಚ್ಚಾಟಿಸಿದ AIADMK

ಎಐಎಡಿಎಂಕೆ ಪ್ರತಿಪಕ್ಷದ ನಾಯಕ ಟಿಟಿವಿ ದಿನಕರನ್ ಬೆಂಬಲಿಸಿದ ಪಕ್ಷದ ಆರು ಪದಾಧಿಕಾರಿಗಳನ್ನು  AIADMK ಪಕ್ಷದಿಂದ ಉಚ್ಚಾಟಿಸಿದೆ.

Last Updated : Dec 25, 2017, 04:35 PM IST
ದಿನಕರನ್ ಬೆಂಬಲಿಗರಾದ ಆರು ಪದಾಧಿಕಾರಿಗಳನ್ನು ಪಕ್ಷದಿಂದ ಉಚ್ಚಾಟಿಸಿದ AIADMK title=

ಚೆನ್ನೈ: AIADMK ಪ್ರತಿಪಕ್ಷದ ನಾಯಕ ಟಿಟಿವಿ ದಿನಕರನ್ ಅವರನ್ನು ಬೆಂಬಲಿಸಿದ ಕಾರಣಕ್ಕಾಗಿ AIADMK ತನ್ನ ಪಕ್ಷದ ಆರು ಪದಾಧಿಕಾರಿಗಳನ್ನು ಉಚ್ಚಾಟಿಸಿದೆ. ಟಿಟಿವಿ ದಿನಕರನ್ ಕಳೆದ ವಾರ ನಡೆದ ಆರ್.ಕೆ. ನಗರ ಉಪಚುನಾವಣೆಯಲ್ಲಿ ತಮ್ಮ ಎದುರಾಳಿ ಹಾಗೂ ಎಐಎಡಿಎಂಕೆ ಪಕ್ಷದ ಅಭ್ಯರ್ಥಿ ಇ. ಮಧುಸೂದನನ್ನು 40,000 ಕ್ಕೂ ಹೆಚ್ಚು ಮತಗಳೊಂದಿಗೆ ಸೋಲಿಸಿದರು. ಟಿಟಿವಿ ದಿನಕರನ್ ಒಟ್ಟು 89013 ಮತಗಳನ್ನು ಪಡೆದರು, ಎಐಎಡಿಎಂಕೆನ ಪ್ರತಿಸ್ಪರ್ಧಿ ಇ. ಮಧುಸೂದಾನ್ ಅವರು 48,306 ಮತಗಳನ್ನು ಪಡೆದರು. ಬಿಜೆಪಿ ಕೇವಲ 1417 ಮತಗಳನ್ನು ಪಡೆದಿದೆ. ಜಯಲಲಿತಾ 2015ರ ಉಪ ಚುನಾವಣೆ ಹಾಗೂ 2016 ರ ವಿಧಾನಸಭೆ ಚುನಾವಣೆಯಲ್ಲಿ ಆರ್.ಕೆ. ನಗರದಿಂದ ಜಯ ಸಾಧಿಸಿದ್ದರು.

ಪಕ್ಷದ ಮೂಲಗಳ ಪ್ರಕಾರ, ಟಿಟಿವಿ ಯೊಂದಿಗೆ ಸಂಯೋಜನೆ ಮಾಡಲು ಹೇಳಿದಾಗ ಆರು ಪದಾಧಿಕಾರಿಗಳನ್ನು ಉಚ್ಚಾಟಿಸಲಾಗಿದೆ. ಆದಾಗ್ಯೂ, ಅವರ ಹೆಸರುಗಳು ಇಲ್ಲಿಯವರೆಗೆ ಕಂಡುಬಂದಿಲ್ಲ. ಈ ಸಂದರ್ಭದಲ್ಲಿ ಕೂಡ ಪಕ್ಷದಿಂದ ಯಾವುದೇ ಹೇಳಿಕೆಯನ್ನು ನೀಡಲಾಗಿಲ್ಲ.

ತಮ್ಮ ಗೆಲುವಿನ ಬಗ್ಗೆ ದಿನಕರನ್ ಹೀಗೆ ಹೇಳಿದ್ದಾರೆ:
ವಿಜಯದ ಉತ್ತುಂಗದಲ್ಲಿ ತೇಲಾಡುತ್ತಿರುವ ದಿನಕರನ್, "ನಾವು ನಿಜವಾದ ಎಐಎಡಿಎಂಕೆ ... ... ಆರ್ ಕೆ ನಗರದ ಜನರು ಅಮ್ಮಾ ಅವರ ಉತ್ತರಾಧಿಕಾರಿಗಳನ್ನು ಆಯ್ಕೆ ಮಾಡಿದ್ದಾರೆ" ಎಂದು ಅವರು ಮಾಧ್ಯಮಗಳಿಗೆ ತಿಳಿಸಿದರು. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಪಳನಿ ಸ್ವಾಮಿಯವರು ನೇತೃತ್ವದ ಎಐಎಡಿಎಂಕೆ ಸರ್ಕಾರವನ್ನು ದಾಳಿ ಮಾಡಿದ್ದಾರೆ. ಚುನಾವಣೆಯ ಈ ಅಂತರವು ಜನರು ಅಧಿಕಾರದಲ್ಲಿ ಬದಲಾವಣೆಯನ್ನು ಬಯಸುತ್ತಾರೆ ಎಂದು ಸೂಚಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

Trending News