Aadhaar ನಿಯಮಗಳಲ್ಲಿ ಬದಲಾವಣೆ! ಈ ಬಾರಿ ನಿಮ್ಮಗೆ ಲಾಭವೇ.. ಲಾಭ

NPCI-IAMA ಆಯೋಜಿಸಿದ ಜಾಗತಿಕ ಫಿನ್‌ಟೆಕ್ ಫೆಸ್ಟ್ ಅನ್ನು ಉದ್ದೇಶಿಸಿ ಮಾತನಾಡಿದ UIDAI ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಸೌರಭ್ ಗರ್ಗ್, ಹಣಕಾಸು ತಂತ್ರಜ್ಞಾನ ಕ್ಷೇತ್ರದಲ್ಲಿ ಆಧಾರ್ ಅನ್ನು ಹತೋಟಿಯಲ್ಲಿಡಲು ಅಪಾರ ಸಾಮರ್ಥ್ಯವಿದೆ ಎಂದು ಹೇಳಿದರು.

Written by - Channabasava A Kashinakunti | Last Updated : Sep 29, 2021, 04:04 PM IST
  • ಆಧಾರ್ ನಿಯಮಗಳಲ್ಲಿ ಬದಲಾವಣೆ
  • ದೇಶದಲ್ಲಿ ಆಧಾರ್ ಕಡ್ಡಾಯ ದಾಖಲೆ
  • ಆಧಾರ್ ಪರಿಶೀಲನೆ ದರವನ್ನು 20 ರಿಂದ 3 ರೂ.ಗೆ ಇಳಿಕೆ
Aadhaar ನಿಯಮಗಳಲ್ಲಿ ಬದಲಾವಣೆ! ಈ ಬಾರಿ ನಿಮ್ಮಗೆ ಲಾಭವೇ.. ಲಾಭ title=

ನವದೆಹಲಿ : ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಗ್ರಾಹಕರಿಗೆ ಆಧಾರ್ ಪರಿಶೀಲನೆಯ(Aadhaar Authentication) ಮೊತ್ತವನ್ನು 20 ರೂ. ನಿಂದ 3 ರೂ.ಗೆ ಇಳಿಸಿದೆ. NPCI-IAMA ಆಯೋಜಿಸಿದ ಜಾಗತಿಕ ಫಿನ್‌ಟೆಕ್ ಫೆಸ್ಟ್ ಅನ್ನು ಉದ್ದೇಶಿಸಿ ಮಾತನಾಡಿದ UIDAI ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಸೌರಭ್ ಗರ್ಗ್, ಹಣಕಾಸು ತಂತ್ರಜ್ಞಾನ ಕ್ಷೇತ್ರದಲ್ಲಿ ಆಧಾರ್ ಅನ್ನು ಹತೋಟಿಯಲ್ಲಿಡಲು ಅಪಾರ ಸಾಮರ್ಥ್ಯವಿದೆ ಎಂದು ಹೇಳಿದರು.

ಪರಿಶೀಲನೆ ದರವನ್ನು 20 ರೂ. ನಿಂದ 3 ರೂ.ಗೆ ಇಳಿಕೆ

ಈ ಕುರಿತು ಸಂಪೂರ್ಣ್ ಅಮಾಹಿತಿ ನೀಡಿದ ಸೌರಭ್ ಗರ್ಗ್(Sourabh Garg), "ನಾವು ಪ್ರತಿ ಪರಿಶೀಲನೆ ದರವನ್ನು 20 ರೂ. ನಿಂದ 3 ರೂ.ಗೆ ಇಳಿಸಿದ್ದೇವೆ. ಇದು ಸರ್ಕಾರವು ರಚಿಸಿದ ಡಿಜಿಟಲ್ ಮೂಲಸೌಕರ್ಯವನ್ನು ವಿವಿಧ ಏಜೆನ್ಸಿಗಳು ಮತ್ತು ಸಂಸ್ಥೆಗಳು ಉತ್ತಮವಾಗಿ ಬಳಸಿಕೊಳ್ಳುವುದನ್ನು ಖಾತ್ರಿಪಡಿಸುವ ಗುರಿಯನ್ನು ಹೊಂದಿದೆ. ಘನತೆಯನ್ನು ಹೊಂದಿರುವ ಜನರಿಗೆ ಜೀವನವನ್ನು ಸುಲಭಗೊಳಿಸಲು ಈ ಮೂಲಸೌಕರ್ಯಗಳನ್ನು ಬಳಸುವುದು ಅವಶ್ಯಕ ಎಂದರು.

ಇದನ್ನೂ ಓದಿ : Senior Citizensಗೆ ಮೋದಿ ಸರ್ಕಾರದ ಉಡುಗೊರೆ! ಮತ್ತೆ Job ಮಾಡ್ಬಹುದು

99 ಕೋಟಿ ಜನರು ಬಳಸಿದ್ದಾರೆ

ಇಲ್ಲಿಯವರೆಗೆ, 99 ಕೋಟಿ ಇ-ಕೆವೈಸಿ (ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ) ಗಾಗಿ ಆಧಾರ್ ವ್ಯವಸ್ಥೆಯನ್ನು(Aadhaar e-KYC) ಬಳಸಲಾಗಿದೆ. ಯುಐಡಿಎಐ ಬಯೋಮೆಟ್ರಿಕ್ ಅನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ ಮತ್ತು ಅದರ ಎಲ್ಲಾ ಪಾಲುದಾರರು ಪ್ರಾಧಿಕಾರದಂತೆಯೇ ಅದೇ ಮಟ್ಟದ ಭದ್ರತೆ ಮತ್ತು ಗೌಪ್ಯತೆಯನ್ನು ಕಾಪಾಡಿಕೊಳ್ಳಬೇಕೆಂದು ನಿರೀಕ್ಷಿಸುತ್ತಾರೆ.

ವಾಸ್ತವವಾಗಿ, ಹೊಸ ಆಧಾರ್ ಕಾರ್ಡ್(New Aadhar Card) ಪಡೆಯಲು ಹಣವನ್ನು ಪಾವತಿಸಬೇಕಾಗಿಲ್ಲ. ಆದರೆ, ಹೆಸರು, ವಿಳಾಸ, ಹುಟ್ಟಿದ ದಿನಾಂಕ, ಇ-ಮೇಲ್ ಇತ್ಯಾದಿ ತಿದ್ದುಪಡಿಯಂತಹ ಆಧಾರ್ ಅನ್ನು ನವೀಕರಿಸಲು ನೀವು ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಜನಸಂಖ್ಯಾ ಅಪ್‌ಡೇಟ್‌ಗಾಗಿ 50 ರೂ. ಮತ್ತು ಬಯೋಮೆಟ್ರಿಕ್ ಅಪ್‌ಡೇಟ್‌ಗಾಗಿ 100 ರೂ. (ಜನಸಂಖ್ಯಾ ಅಪ್‌ಡೇಟ್‌ನೊಂದಿಗೆ / ಇಲ್ಲದೆ) ಪಾವತಿಸಬೇಕಾಗುತ್ತದೆ.

ದೇಶದಲ್ಲಿ ಆಧಾರ್ ಕಡ್ಡಾಯ ದಾಖಲೆ

ದೇಶದಲ್ಲಿ ಆಧಾರ್ ಕಡ್ಡಾಯ ದಾಖಲೆಯಾಗಿದೆ. ಕೇಂದ್ರ ಸರ್ಕಾರ ಎಲ್ಲಾ ಯೋಜನೆಗಳನ್ನು ಆಧಾರ್ ನೊಂದಿಗೆ ಲಿಂಕ್ ಮಾಡಿದೆ. 54 ಸಚಿವಾಲಯಗಳ ಸುಮಾರು 311 ಕೇಂದ್ರೀಯ ಯೋಜನೆಗಳು ಆಧಾರ್ ಬಳಸಿ ನೇರ ಲಾಭ ವರ್ಗಾವಣೆ (DBT) ವೇದಿಕೆಯ ಅಡಿಯಲ್ಲಿ ಒಳಗೊಂಡಿದೆ.

ಇದನ್ನೂ ಓದಿ : Gold : ಆಭರಣ ಪ್ರಿಯರಿಗೆ ಸಿಹಿ ಸುದ್ದಿ : 100 ರೂಪಾಯಿಯಲ್ಲಿ ಸಿಗಲಿದೆ ಚಿನ್ನ! 

ಸರ್ಕಾರವು ರೈತರಿಗಾಗಿ ನಡೆಸುತ್ತಿರುವ ಯೋಜನೆಗಳಾದ- PM-Kisan Nidhi Yojana ಆಧಾರ್ ವೇದಿಕೆಯನ್ನು ಆಧರಿಸಿದೆ, ಇದರ ಅಡಿಯಲ್ಲಿ ಸುಮಾರು 10 ಕೋಟಿ ರೈತರು ಪ್ರತಿ ನಾಲ್ಕು ತಿಂಗಳ ನಂತರ 2000 ರೂಪಾಯಿಗಳನ್ನು ನೀಡಲಾಗುತ್ತಿದೆ. ಆಧಾರ್ ಪರಿಶೀಲನೆ ಎಂದರೆ ಯೋಜನೆಯ ಫಲಾನುಭವಿಯನ್ನು ಸರಿಯಾಗಿ ಗುರುತಿಸಲು ಆಧಾರ್ ಸಂಖ್ಯೆಯನ್ನು ಬಳಸಲಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News