ರಕ್ತದಲ್ಲಿನ ಅಧಿಕ ಸಕ್ಕರೆ ರೋಗಿಗಳಿಗೆ ಸಂಜೀವನಿ ಈ ಗಿಡಮೂಲಿಕೆ, ಟ್ರೈ ಮಾಡಿ ನೋಡಿ

Diabetics: ಇತ್ತೀಚಿನ ದಿನಗಳಲ್ಲಿ ಜನರು ಆಯುರ್ವೇದ ಔಷಧಿಗಳತ್ತ ಹೆಚ್ಚು ವಾಲುತ್ತಿದ್ದಾರೆ.ಅಂತಹುದೇ ಒಂದು ಔಷಧದ ಕುರಿತು ಈ ಲೇಖನದಲ್ಲಿ ನಾವು ಮಾಹಿತಿಯನ್ನು ನೀಡುತ್ತಿದ್ದು. ಈ ಆಯುರ್ವೇದ ಗಿಡಮೂಲಿಕೆ ಸಕ್ಕರೆ ರೋಗಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದರ ಜೊತೆಗೆ ಈ ಕಹಿ ಪದಾರ್ಥ ಹಲವು ರೋಗಗಳನ್ನು ಬುಡಸಮೇತ ನಿವಾರಿಸುತ್ತದೆ.  

Written by - Nitin Tabib | Last Updated : Aug 27, 2023, 10:20 PM IST
  • ಸಾಕಷ್ಟು ಓಡಾಟದಿಂದ ಕೂಡಿದ ಇಂದಿನ ಜೀವನಶೈಲಿ ಮತ್ತು ಕೆಲಸದ ಹೊರೆಯಿಂದಾಗಿ ಹೆಚ್ಚಿನ ಜನರಲ್ಲಿ ಒತ್ತಡದ ಸಮಸ್ಯೆ ಕಂಡುಬರುತ್ತಿಕೆ.
  • ನೆಲಬೇವಿನ ಕಷಾಯವನ್ನು ಕುಡಿಯುವುದರಿಂದ ಒತ್ತಡವನ್ನು ನಿವಾರಿಸಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
  • ಇದರಲ್ಲಿರುವ ಸ್ವಾರ್ತಿಯಾ ಮಾರ್ಟಿನ್ ಎಂಬ ಅಂಶವು ಒತ್ತಡವನ್ನು ನಿಯಂತ್ರಿಸುವ ಗುಣಗಳನ್ನು ಹೊಂದಿದೆ. ಕಾಲಮೇಘ ಕಷಾಯವು ಯಕೃತ್ತನ್ನು ನಿರ್ವಿಷಗೊಳಿಸಲು ಸಹ ಕೆಲಸ ಮಾಡುತ್ತದೆ.
 ರಕ್ತದಲ್ಲಿನ ಅಧಿಕ ಸಕ್ಕರೆ ರೋಗಿಗಳಿಗೆ ಸಂಜೀವನಿ ಈ ಗಿಡಮೂಲಿಕೆ, ಟ್ರೈ ಮಾಡಿ ನೋಡಿ title=

Diabetics: ಇತ್ತೀಚಿನ ದಿನಗಳಲ್ಲಿ ಆಯುರ್ವೇದ ಔಷಧವನ್ನು ಭಾರತದಲ್ಲಿ ಮಾತ್ರವಲ್ಲದೆ ವಿಶ್ವಾದ್ಯಂತ ಅತ್ಯಂತ ವೇಗವಾಗಿ ಅಳವಡಿಸಿಕೊಳ್ಳಲಾಗುತ್ತಿದೆ. ಆಯುರ್ವೇದದ ಕಡೆಗೆ ಹೊರ ದೇಶಗಳಲ್ಲಿನ ಜನರ ವಿಶ್ವಾಸವೂ ವೇಗವಾಗಿ ಹೆಚ್ಚುತ್ತಿದೆ. ಆಯುರ್ವೇದದ ವಿಶೇಷತೆ ಎಂದರೆ ಅದರ ಔಷಧಿಗಳು ಅಲೋಪಥಿಗಳಿಗೆ ಹೋಲಿಸಿದರೆ ದೇಹದ ಮೇಲೆ ತುಂಬಾ ಕಡಿಮೆ ಅಡ್ಡಪರಿಣಾಮಗಳನ್ನು ಉಂಟುಮಾಡುತ್ತವೆ ಅಥವಾ ಅವುಗಳ ಅಡ್ಡಪರಿಣಾಮಗಳು ಅತ್ಯಲ್ಪ ಎನ್ನಲಾಗುತ್ತದೆ. ಇಂತಹ ಆಯುರ್ವೇದ ಔಷಧಿಯ ಬಗ್ಗೆ ಇಂದು ನಾವು ನಿಮಗೆ ಮಾಹಿತಿಯನ್ನು ನೀಡುತ್ತಿದ್ದು, ಇದು ಅನೇಕ ಅಪಾಯಕಾರಿ ರೋಗಗಳನ್ನು ಬೇರುಸಹಿತವಾಗಿ ತೆಗೆದುಹಾಕುತ್ತದೆ. ಇದರ ಸೇವನೆಯಿಂದ ದೇಹವು ಇತರ ಹಲವು ಪ್ರಯೋಜನಗಳನ್ನು ಪಡೆಯುತ್ತದೆ.

ಇದನ್ನೂ ಓದಿ-ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಬೇಕೆ? ಸಲಾಡ್ ಗೆ ಈ ಒಂದು ಪದಾರ್ಥ ಬೆರೆಸಿ ಸೇವಿಸಿ ಸಾಕು!

ಸಕ್ಕರೆ ರೋಗಿಗಳಿಗೆ 'ಅಮೃತ'ಕ್ಕೆ ಸಮಾನ
ಆಯುರ್ವೇದದ ತಜ್ಞರು ಕಾಲಮೇಘ ಅಥವಾ ಚಿರತಾ ಅನೇಕ ರೋಗಗಳನ್ನು ಗುಣಪಡಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳುತ್ತಾರೆ. ಕಾಲಮೇಘ ಬಳಕೆಯಿಂದ ಜ್ವರ, ಶೀತ ಮತ್ತು ಗಂಟಲು ನೋವು ಸೇರಿದಂತೆ ಅನೇಕ ಸಮಸ್ಯೆಗಳಿಂದ ಪರಿಹಾರ ಒದಗಿಸುತ್ತದೆ. ಕನ್ನಡದಲ್ಲಿ ನೆಲಬೇವು ಎಂದೂ ಕರೆಯಲಾಗುವ ಈ ಗಿಡಮೂಲಿಕೆ ಮಧುಮೇಹದಿಂದ ಬಳಲುತ್ತಿರುವ ರೋಗಿಗಳಿಗೆ ರಾಮಬಾಣದಂತೆ ಕೆಲಸ ಮಾಡುತ್ತದೆ. ನೆಲಬೇವಿನ  ನೀರನ್ನು ಕುದಿಸಿ ಕುಡಿಯುವುದರಿಂದ ಅಥವಾ ಅದರ ಕಷಾಯವನ್ನು ಮಾಡಿ ಸೇವಿಸುವುದರಿಂದ, ಸಕ್ಕರೆ ರೋಗಿಗಳಿಗೆ ಸಾಕಷ್ಟು ಪ್ರಯೋಜನವಾಗುತ್ತದೆ ಮತ್ತು ದೇಹದಲ್ಲಿ ಇನ್ಸುಲಿನ್ ಸಮತೋಲನವು ಕಾಪಾಡುತ್ತದೆ.

ಇದನ್ನೂ ಓದಿ-ಬೆಳಗ್ಗೆ ಹಳಸಿದ ಬಾಯಿಯಿಂದ ಈ ಎಲೆಗಳನ್ನು ಅಗೆಯಿರಿ, ರಕ್ತದಲ್ಲಿನ ಸಕ್ಕರೆ ಮಟ್ಟ ತಕ್ಷಣಕ್ಕೆ ನಿಯಂತ್ರಣಕ್ಕೆ ಬರುತ್ತದೆ!

ಒತ್ತಡವನ್ನು ನಿವಾರಿಸುತ್ತದೆ
ಸಾಕಷ್ಟು ಓಡಾಟದಿಂದ ಕೂಡಿದ ಇಂದಿನ ಜೀವನಶೈಲಿ ಮತ್ತು ಕೆಲಸದ ಹೊರೆಯಿಂದಾಗಿ ಹೆಚ್ಚಿನ ಜನರಲ್ಲಿ ಒತ್ತಡದ ಸಮಸ್ಯೆ ಕಂಡುಬರುತ್ತಿಕೆ. ನೆಲಬೇವಿನ ಕಷಾಯವನ್ನು ಕುಡಿಯುವುದರಿಂದ ಒತ್ತಡವನ್ನು ನಿವಾರಿಸಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಇದರಲ್ಲಿರುವ ಸ್ವಾರ್ತಿಯಾ ಮಾರ್ಟಿನ್ ಎಂಬ ಅಂಶವು ಒತ್ತಡವನ್ನು ನಿಯಂತ್ರಿಸುವ ಗುಣಗಳನ್ನು ಹೊಂದಿದೆ. ಕಾಲಮೇಘ ಕಷಾಯವು ಯಕೃತ್ತನ್ನು ನಿರ್ವಿಷಗೊಳಿಸಲು ಸಹ ಕೆಲಸ ಮಾಡುತ್ತದೆ. ಇದನ್ನು ಸೇವಿಸುವುದರಿಂದ ಕಾಮಾಲೆಯಂತಹ ಅಪಾಯಕಾರಿ ಕಾಯಿಲೆಯ ಅಪಾಯ ಕಡಿಮೆಯಾಗುತ್ತದೆ. ನೆಲಬೇವಿನ ಸಾರವು ಮೂತ್ರಪಿಂಡಗಳನ್ನು ಹಾನಿಯಿಂದ ರಕ್ಷಿಸುತ್ತದೆ ಮತ್ತು ಮಲೇರಿಯಾದ ಪರಿಣಾಮವನ್ನು ಕಡಿಮೆ ಮಾಡುತ್ತದೆ.

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News