ಅಡುಗೆಗೆ ನಿತ್ಯ ಬಳಸುವ ಈ ಎಲೆಯ ಜ್ಯೂಸ್ ಕುಡಿದರೆ ಕರಗುವುದು ಬೊಜ್ಜು ! ಈ ಕಾಯಿಲೆಗಳಿಂದಲೂ ಸಿಗುವುದು ರಿಲೀಫ್

Curry Leaf Juice For Weight Loss:ನಾವು ನಿತ್ಯ ಅಡುಗೆಯಲ್ಲಿ ಬಳಸುವ ಈ ಎಲೆಯನ್ನು ಬಳಸುವ ಮೂಲಕ ತೂಕ ಹೆಚ್ಚಳದ ಸಮಸ್ಯೆಯನ್ನು ನಿಯಂತ್ರಿಸಬಹುದು. 

Written by - Ranjitha R K | Last Updated : Dec 29, 2023, 10:43 AM IST
  • ತೂಕ ಹೆಚ್ಚಾಗುವುದು ಬಹುತೇಕರು ಎದುರಿಸುತ್ತಿರುವ ಸಮಸ್ಯೆ.
  • ಕರಿಬೇವಿನ ಎಲೆಗಳು ತೂಕವನ್ನು ಕಡಿಮೆ ಮಾಡುತ್ತದೆ
  • ನಾವು ಪ್ರತೀ ಅಡುಗೆಯ ಒಗ್ಗರಣೆಗೂ ಇದನ್ನು ಬಳಸುತ್ತೇವೆ.
ಅಡುಗೆಗೆ ನಿತ್ಯ ಬಳಸುವ ಈ ಎಲೆಯ ಜ್ಯೂಸ್ ಕುಡಿದರೆ ಕರಗುವುದು ಬೊಜ್ಜು ! ಈ ಕಾಯಿಲೆಗಳಿಂದಲೂ ಸಿಗುವುದು ರಿಲೀಫ್  title=

Curry Leaf Juice For Weight Loss : ಈಗಿನ ಕಾಲದಲ್ಲಿ ತೂಕ ಹೆಚ್ಚಾಗುವುದು ಬಹುತೇಕರು ಎದುರಿಸುತ್ತಿರುವ ಸಮಸ್ಯೆ. ಭಾರತದಲ್ಲಿ ಮಾತ್ರವಲ್ಲ, ಪ್ರಪಂಚದಾದ್ಯಂತ ಅನೇಕ ಜನರು ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇದರಿಂದಾಗಿ ಅಧಿಕ ಕೊಲೆಸ್ಟ್ರಾಲ್, ಬಿಪಿ, ಮಧುಮೇಹ, ಹೃದಯಾಘಾತದಂತಹ ಸಮಸ್ಯೆಗಳ ಅಪಾಯ ಎದುರಾಗುತ್ತದೆ. ನಿಮ್ಮ ಆಹಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡರೆ ಎದುರಾಗಬಹುದಾದ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ. ಇಲ್ಲದಿದ್ದರೆ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಹೋಗುತ್ತದೆ. ಆದರೆ, ಗಾಬರಿಯಾಗುವ ಬದಲು  ನಾವು ನಿತ್ಯ ಅಡುಗೆಯಲ್ಲಿ ಬಳಸುವ ಈ ಎಲೆಯನ್ನು ಬಳಸುವ ಮೂಲಕ ತೂಕ ಹೆಚ್ಚಳದ ಸಮಸ್ಯೆಯನ್ನು ನಿಯಂತ್ರಿಸಬಹುದು. 

ಕರಿಬೇವಿನ ಎಲೆಗಳು ತೂಕವನ್ನು ಕಡಿಮೆ ಮಾಡುತ್ತದೆ : 
ಕರಿಬೇವಿನ ಎಲೆಗಳು ತುಂಬಾ ಪರಿಮಳಯುಕ್ತವಾಗಿವೆ. ಈ ಕಾರಣದಿಂದಾಗಿಯೇ ನಾವು ಪ್ರತೀ ಅಡುಗೆಯ ಒಗ್ಗರಣೆಗೂ ಇದನ್ನು ಬಳಸುತ್ತೇವೆ. ಈ ಎಲೆಯನ್ನು ಉಪಯೋಗಿಸಿ ಚಟ್ನಿ ಪುಡಿಯನ್ನು ಕೂಡಾ ತಯಾರಿಸಲಾಗುತ್ತದೆ. ಒಗ್ಗರಣೆಗೆ ಬಳಸುವ ಕರಿಬೇವು ಅಡುಗೆಯ ಘಮ ಮತ್ತು ರುಚಿ ಹೆಚ್ಚಿಸುತ್ತದೆ. ಮಾತ್ರವಲ್ಲ  ದೇಹದ ಅನೇಕ ಆರೋಗ್ಯ ಸಮಸ್ಯೆಗಳನ್ನು ಕೂಡಾ ಇದು ಗುಣಪಡಿಸುತ್ತದೆ.  ಅವುಗಳಲ್ಲಿ ಬಹಳ ಮುಖ್ಯವಾದದ್ದು ಬೊಜ್ಜು. 

ಇದನ್ನೂ ಓದಿ : ಚಳಿಗಾಲದಲ್ಲಿ ಜ್ಯೂಸ್ ಕುಡಿಯುವುದು ಒಳ್ಳೆಯದೋ ಕೆಟ್ಟದ್ದೋ? ಆಯುರ್ವೇದ ತಜ್ಞರು ಹೇಳುವುದೇನು ?

ಕರಿಬೇವಿನ ಸೊಪ್ಪಿನಲ್ಲಿ ಪೋಷಕಾಂಶಗಳು: 
ಖ್ಯಾತ ಆಹಾರ ತಜ್ಞ ಆಯುಷಿ ಯಾದವ್ ಪ್ರಕಾರ, ಕರಿಬೇವಿನ ಎಲೆಗಳಲ್ಲಿ ಕಬ್ಬಿಣ, ಕ್ಯಾಲ್ಸಿಯಂ, ರಂಜಕ, ವಿಟಮಿನ್ ಸಿ ಮುಂತಾದ ಹಲವು ಪ್ರಮುಖ ಪೋಷಕಾಂಶಗಳು ಕಂಡು ಬರುತ್ತವೆ. ಇವು ನಮ್ಮ ದೇಹಕ್ಕೆ ನಾನಾ ರೀತಿಯಲ್ಲಿ  ಪ್ರಯೋಜನಕಾರಿಯಾಗಿದೆ. 

ಬೊಜ್ಜು ಕಡಿಮೆ ಮಾಡುವಲ್ಲಿ ಪರಿಣಾಮಕಾರಿ:
ಹೆಚ್ಚಾಗಿ ಯಾರೇ ದಪ್ಪ ಆದರೂ ಮೊದಲು ಕೊಬ್ಬು ಅಥವಾ ಬೊಜ್ಜು ಸಂಗ್ರಹವಾಗುವುದೇ ಹೊಟ್ಟೆ ಮತ್ತು ಸೊಂಟದ ಸುತ್ತ.  ಹೀಗಾದಾಗ ಇದನ್ನೂ ಕಡಿಮೆ ಮಾಡಲು ಕರಿಬೇವಿನ ಎಲೆಗಳನ್ನು ಸೇವಿಸಬಹುದು. ಕರಿಬೇವಿನ ಎಲೆಗಳಲ್ಲಿ ಆಲ್ಕಲಾಯ್ಡ್‌ಗಳು ಕಂಡುಬರುತ್ತವೆ. ಇದರ ಸಹಾಯದಿಂದ ಲಿಪಿಡ್‌ಗಳು ಮತ್ತು ಕೊಬ್ಬನ್ನು ಕಡಿಮೆ ಮಾಡಬಹುದು. ಇದರ ಜ್ಯೂಸ್ ಕುಡಿದರೆ ಕೆಟ್ಟ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಮಟ್ಟವೂ ಕಡಿಮೆಯಾಗುತ್ತದೆ. ಈ ಮೂಲಕ ರಕ್ತದಲ್ಲಿನ ಸಕ್ಕರೆಯ ಪ್ರಮಾಣ ನಿಯಂತ್ರಣದಲ್ಲಿ ಇರುತ್ತದೆ. 

ಇದನ್ನೂ ಓದಿ : Benefits of Elaichi: ಪ್ರತಿದಿನ ಏಲಕ್ಕಿ ಸೇವಿಸಿದ್ರೆ ಏನಾಗುತ್ತೆ ಗೊತ್ತಾ..?

ಕರಿಬೇವಿನ ರಸವನ್ನು ತಯಾರಿಸುವುದು ಹೇಗೆ? : 
ಕರಿಬೇವಿನ ರಸವನ್ನು ತಯಾರಿಸಲು, ಮೊದಲು ಕರಿಬೇವಿನ ಎಲೆಗಳನ್ನು ತೊಳೆದು ನೀರಿನಲ್ಲಿ ಕುದಿಸಿ. ಸ್ವಲ್ಪ ಸಮಯದ ನಂತರ ಈ ನೀರನ್ನು ಫಿಲ್ಟರ್ ಸಹಾಯದಿಂದ ಫಿಲ್ಟರ್ ಮಾಡಿ ಉಗುರು ಬೆಚ್ಚಗಿರುವಾಗಲೇ ಕುಡಿಯಿರಿ. ಇನ್ನೊಂದು ವಿಧಾನದ ಪ್ರಕಾರ ಇದರ ಎಲೆಗಳನ್ನು ಅರೆದು ನಿಂಬೆ ಮತ್ತು ಜೇನುತುಪ್ಪ ಬೆರೆಸಿ ಸೇವಿಸಬಹುದು. ಕರಿಬೇವಿನ ಎಲೆಯ ರಸವನ್ನು ಖಾಲಿ ಹೊಟ್ಟೆಯಲ್ಲಿಯೇ ಸೇವಿಸಬೇಕು ಎನ್ನುವುದು ನೆನಪಿರಲಿ.  

(ಸೂಚನೆ: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News