ಈ ಮೂರು ಸೊಪ್ಪು ತಿಂದರೆ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರುತ್ತದೆ ಬ್ಲಡ್ ಶುಗರ್

ಮಧುಮೇಹ ರೋಗಿಗಳು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ  ಹಾಗಿದ್ದರೆ ಆ ಮೂರು ಸೊಪ್ಪು ಯಾವುದು ನೋಡೋಣ.    

Written by - Ranjitha R K | Last Updated : Jul 24, 2023, 03:01 PM IST
  • ಮಧುಮೇಹ ರೋಗವನ್ನು ನಿಯಂತ್ರಿಸುತ್ತದೆ ಈ ಆಯುರ್ವೇದ ಸಸ್ಯಗಳು
  • ಮಧುಮೇಹಿಗಳು ಆರೋಗ್ಯಕರ ಆಹಾರವನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ.
  • ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ
ಈ ಮೂರು ಸೊಪ್ಪು ತಿಂದರೆ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರುತ್ತದೆ ಬ್ಲಡ್ ಶುಗರ್  title=

ಬೆಂಗಳೂರು : ಮಧುಮೇಹವು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಅನೇಕ ಜನರನ್ನು ಕಾಡುವಂಥಹ ಕಾಯಿಲೆಯಾಗಿದೆ. ಇದು ಆನುವಂಶಿಕ ಕಾರಣಗಳಿಂದಲೂ ಕಾಣಿಸಿಕೊಳ್ಳುತ್ತದೆ. ಆದರೆ, ಸಾಮಾನ್ಯವಾಗಿ ಗೊಂದಲಮಯ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಗಳೇ ಇದಕ್ಕೆ ಮುಖ್ಯ ಕಾರಣ. ಒಮ್ಮೆ ಯಾರಿಗಾದರೂ ಈ ಕಾಯಿಲೆ ಬಂದರೆ, ಮತ್ತೆ ಆ ಕಾಯಿಲೆ ಜೀವನಪರ್ಯಂತ ಬೆನ್ನು ಬಿಡುವುದಿಲ್ಲ.  ದೊಡ್ಡ ದೊಡ್ಡ ವಿಜ್ಞಾನಿಗಳು ಸಹ ಅದಕ್ಕೆ ಶಾಶ್ವತ  ಔಷಧವನ್ನು ಕಂಡುಹಿಡಿಯುವಲ್ಲಿ ವಿಫಲರಾಗಿದ್ದಾರೆ. ಹೀಗಿರುವಾಗ ಮಧುಮೇಹ ರೋಗಿಗಳು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ.

ಮಧುಮೇಹ ರೋಗವನ್ನು ನಿಯಂತ್ರಿಸುತ್ತದೆ ಈ ಆಯುರ್ವೇದ ಸಸ್ಯಗಳು : 
ಮಧುಮೇಹಿಗಳು ಆರೋಗ್ಯಕರ ಆಹಾರವನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ. ಇಲ್ಲದಿದ್ದರೆ ಅಧಿಕ ರಕ್ತದೊತ್ತಡ, ಮೂತ್ರಪಿಂಡದ ಕಾಯಿಲೆ ಮತ್ತು ಹೃದಯಾಘಾತದ ಅಪಾಯವನ್ನು ಎದುರಿಸಬೇಕಾಗುತ್ತದೆ. ಖ್ಯಾತ ಆಹಾರ ತಜ್ಞ ಆಯುಷಿ ಯಾದವ್ ಪ್ರಕಾರ  3 ವಿಶೇಷ ಸೊಪ್ಪನ್ನು ಸೇವಿಸಿದರೆ, ದೇಹದಲ್ಲಿ ಇನ್ಸುಲಿನ್ ಉತ್ಪಾದನೆಯು ಹೆಚ್ಚಾಗುತ್ತದೆ. ಈ ಕಾರಣದಿಂದಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ  ಹಾಗಿದ್ದರೆ ಆ ಮೂರು ಸೊಪ್ಪು ಯಾವುದು ನೋಡೋಣ.  

ಇದನ್ನೂ ಓದಿ : ಈ ಒಂದು ಬೀಜವನ್ನು ಸೇವಿಸಿದರೆ ಸಾಕು ತಿಂಗಳೊಳಗೆ ಕರಗುವುದು ಹೊಟ್ಟೆ ಭಾಗದ ಕೊಬ್ಬು

1. ಸಬ್ಬಸಿಗೆ ಸೊಪ್ಪು : 
ಸಬ್ಬಸಿಗೆ ಸೊಪ್ಪನ್ನು ಆಯುರ್ವೇದದಲ್ಲಿ ವರವೆಂದೇ ಕರೆಯಲಾಗುತ್ತದೆ.   ಇದು ಮಧುಮೇಹದಿಂದ ಬಳಲುತ್ತಿರುವವರಿಗೆ ರಾಮಬಾಣ ಔಷಧಿ.  ಅದರ ಸಹಾಯದಿಂದ, ಇನ್ಸುಲಿನ್ ಸ್ರವಿಸುವಿಕೆಯನ್ನು ಹೆಚ್ಚಿಸಬಹುದು.  ಸಬ್ಬಸಿಗೆ ಸೊಪ್ಪನ್ನು ಅನೇಕ ರೀತಿಯಲ್ಲಿ ಅಡುಗೆಯಲ್ಲಿ ಬಳಸಿ ಸೇವಿಸಬಹುದು. ಇದನ್ನೂ ಒಂದು ಪಾಟ್ ನಲ್ಲಿ ಹಾಕಿಯೂ ಮನೆಯಲ್ಲಿಯೇ ಬೆಳಸಬಹುದು. 

2. ಅಲೋವೆರಾ : 
ಅಲೋವೆರಾವನ್ನು ಔಷಧೀಯ ಗುಣಗಳ ನಿಧಿ ಎಂದು ಪರಿಗಣಿಸಲಾಗುತ್ತದೆ. ಇದು ನಮ್ಮ ಕೂದಲು ಮತ್ತು ಚರ್ಮದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಈ ಸಸ್ಯದ ಸಹಾಯದಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಹ ನಿಯಂತ್ರಿಸಬಹುದು. ಇದಕ್ಕಾಗಿ ಅಲೋವೆರಾ ಎಲೆಗಳಿಂದ ಜೆಲ್ ಅನ್ನು ಹೊರತೆಗೆದು ಅದರ ರಸವನ್ನು ತಯಾರಿಸಿ ಕುಡಿಯಬೇಕು. ಹೀಗೆ ಈ ಜ್ಯೂಸ್ ಅನ್ನು ಕೆಲವೇ ದಿನಗಳವರೆಗೆ ಕುಡಿದರೆ ಸಾಕು ಡಯಾಬಿಟೀಸ್ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರುತ್ತದೆ. 

ಇದನ್ನೂ ಓದಿ : Elaichi Benefits: ಏಲಕ್ಕಿ ಸೇವಿಸಿ ಈ ರೋಗಗಳನ್ನು ದೂರಗೊಳಿಸಿ..

3. ಇನ್ಸುಲಿನ್ ಸಸ್ಯ : 
ಇನ್ಸುಲಿನ್ ಸಸ್ಯದ ವೈಜ್ಞಾನಿಕ ಹೆಸರು ಕಾಸ್ಟಸ್ ಇಗ್ನಿಯಸ್. ಇದರ ಎಲೆಗಳು ಔಷಧೀಯ ಗುಣಗಳಿಂದ ತುಂಬಿವೆ. ಮತ್ತು ಇದನ್ನು ನಿರಂತರವಾಗಿ ಸೇವಿಸಿದರೆ, ರಕ್ತದಲ್ಲಿನ ಗ್ಲೂಕೋಸ್ ಮಟ್ಟವು ನಿಯಂತ್ರಣದಲ್ಲಿ ಇರುತ್ತದೆ. ಮನೆಯ ಅಂಗಳದಲ್ಲಿಯೂ ಈ ಗಿಡವನ್ನು ಬೆಳೆಸಬಹುದು.

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News