Yuva Movie: ʻಕವಿತೆ, ಕವಿತೆ… ನಿನ್ನ ಅರಿತೇʼ: ಯುವ ಚಿತ್ರದ ಮೊತ್ತೊಂದು ಸಾಂಗ್‌ ಔಟ್!

Yuva 2nd Song: ಸ್ಯಾಂಡಲ್‌ವುಡ್‌ನ ದೊಡ್ಮನೆ ಕುಡಿ ಯುವ ರಾಜ್‌ಕುಮಾರ್‌ ನಟನೆಯ ಯುವ ಸಿನಿಮಾದ ಮೊತ್ತೊಂದು ಸಾಂಗ್‌ ʻಕವಿತೆ, ಕವಿತೆ… ನಿನ್ನ ಅರಿತೇʼ ರಿಲೀಸ್‌ ಆಗಿದೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.  

Written by - Zee Kannada News Desk | Last Updated : Mar 10, 2024, 10:25 AM IST
  • ಮೌನದಲ್ಲೇ ಮಾತನಾಡುವ ಮಾಯೆ ನೀನೆ… ಕವಿತೆ, ಕವಿತೆಯ ಲಿರಿಕಲ್‌ ಸಾಂಗ್‌ನಲ್ಲಿ ಯುವರಾಜ್​-ಸಪ್ತಮಿ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ.
  • ಯುವ ಸಿನಿಮಾದ ಹಾಡುಗಳನ್ನು ಸಂಗೀತ ಸಂಯೋಜಕ ಅಜನೀಶ್‌ ಲೋಕನಾಥ್‌ ಕಂಪೋಸ್‌ ಮಾಡಿದ್ದು, ಈಗಾಗಲೇ ಚಿತ್ರದ ಮೊದಲ ಹಾಡಿನ್ನು ಅಭಿಮಾನಿಗಳು ಕೊಂಡಾಡಿದ್ದಾರೆ.
  • ನಟ ಯುವ ರಾಜ್‌ಕುಮಾರ್‌ ಚಿತ್ರದ ಮೊದಲ ಸಾಂಗ್‌ನಲ್ಲಿ ರಗಡ್‌ ಲುಕ್‌ನಲ್ಲಿ ಕಾಣಿಕೊಂಡರೇ, ಎರಡನೇ ಹಾಡಿನಲ್ಲಿ ರೊಮ್ಯಾಂಟಿಕ್ ಬಾಯ್ ಆಗಿರುವುದನ್ನು ನೋಡಬಹುದು.
Yuva Movie: ʻಕವಿತೆ, ಕವಿತೆ… ನಿನ್ನ ಅರಿತೇʼ: ಯುವ ಚಿತ್ರದ ಮೊತ್ತೊಂದು ಸಾಂಗ್‌ ಔಟ್! title=

Kavithe Kavithe Ninne Arithe Song Released: ಸ್ಯಾಂಡಲ್‌ವುಡ್‌ ಹೊಸ ಪ್ರತಿಭೆ ಯುವ ರಾಜ್‌ಕುಮಾರ್‌ ಅಭಿನಯದ ಬಹುನಿರೀಕ್ಷಿತ ಯುವ ಸಿನಿಮಾದ ಇನ್ನೇನು ರಿಲೀಸ್‌ಗೆ ಕೌಂಟ್ಡೌನ್‌ ಶುರುವಾಗಿದೆ. ಕೆಲವು ದಿನಗಳ ಹಿಂದೆಯಷ್ಟೇ ಯುವ ಚಿತ್ರತಂಡ ಚಾಮರಾಜನಗರದಲ್ಲಿ ಸಿನಿಮಾದ ಮೊದಲ ಹಾಡು ರಿಲೀಸ್‌ ಮಾಡಿತ್ತು. ಇದೀಗ ಚಿತ್ರದ ಮೊತ್ತೊಂದು ಸಾಂಗ್‌ ರಿಲೀಸ್‌ ಮಾಡಿದೆ. ನಿನ್ನೆ ʻಕವಿತೆ, ಕವಿತೆ… ನಿನ್ನ ಅರಿತೇʼ ಹಾಡು ಬಿಡುಗಡೆಯಾಗಿದೆ.

ಯುವ ಚಿತ್ರದ ಎರಡನೇ ಹಾಡು ಮೌನದಲ್ಲೇ ಮಾತನಾಡುವ ಮಾಯೆ ನೀನೆ… ಕವಿತೆ, ಕವಿತೆಯ ಲಿರಿಕಲ್‌ ಸಾಂಗ್‌ನಲ್ಲಿ ಯುವರಾಜ್​-ಸಪ್ತಮಿ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. ಇಷ್ಟೇ ಅಲ್ಲದೆ ಈ ಲಿರಿಕಲ್‌ ಹಾಡಿನ ಸಾಲುಗಳಿಗೆ ಜೀವ ತುಂಬಿದ ಕನ್ನಡದ ಹೆಮ್ಮೆಯ ಗಾಯಕ ಸಂಚಿತ್ ಹೆಗ್ಡೆ ಕೂಡ ಕಾಣಬಹುದು. ಕವಿತೆ ಕವಿತೆ ಸಾಂಗ್‌ನ ಅಧ್ಬುತ ಸಾಲುಗಳನ್ನು ಪ್ರಮೋದ್ ಮರವಂತೆ ಬರೆದಿದ್ದಾರೆ.

ಇದನ್ನೂ ಓದಿ: Sridevi's Sister : ಸೌತ್‌ ಸುಂದರಿ ಶ್ರೀದೇವಿ ತಂಗಿಯನ್ನು ನೋಡಿದ್ದೀರಾ..? ಅಂದದಲ್ಲಿ ಅಕ್ಕನನ್ನೇ ಮೀರಿಸ್ತಾಳೆ ಈ ಚೆಲುವೆ!

ಯುವ ಸಿನಿಮಾದ ಹಾಡುಗಳನ್ನು ಸಂಗೀತ ಸಂಯೋಜಕ ಅಜನೀಶ್‌ ಲೋಕನಾಥ್‌ ಕಂಪೋಸ್‌ ಮಾಡಿದ್ದು, ಈಗಾಗಲೇ ಚಿತ್ರದ ಮೊದಲ ಹಾಡಿನ್ನು ಅಭಿಮಾನಿಗಳು ಕೊಂಡಾಡಿದ್ದಾರೆ. ಜೊತೆಗೆ ಕರ್ನಾಟಕ ರತ್ನ ಪುನೀತ್‌ ರಾಜ್‌ಕುಮಾರ್‌ ಅನ್ನು ಸಹ ನೆನೆಪು ಮಾಡಿಕೊಂಡಿದ್ದಾರೆ. ಆದರೆ ಸಿನಿಮಾದ ಎರಡನೇ ಸಾಂಗ್‌ ಕವಿತೆ, ಕವಿತೆ ಸಾಂಗ್‌ಗೆ ಫ್ಯಾನ್ಸ್‌ ತಲೆದೂಗಿದ್ದಾರೆ. ಇನ್ನೂ ಈ ಹಾಡುಗಳ ಸಂಯೋಜಕ ಅಜನೀಶ್‌ಗೆ ಮ್ಯೂಸಿಕ್‌ ಸೂಪರ್‌ ಎಂದು ಹೊಗಳಿದ್ದಾರೆ.

ನಟ ಯುವ ರಾಜ್‌ಕುಮಾರ್‌ ಚಿತ್ರದ ಮೊದಲ ಸಾಂಗ್‌ನಲ್ಲಿ ರಗಡ್‌ ಲುಕ್‌ನಲ್ಲಿ ಕಾಣಿಕೊಂಡರೇ, ಎರಡನೇ ಹಾಡಿನಲ್ಲಿ ರೊಮ್ಯಾಂಟಿಕ್ ಬಾಯ್ ಆಗಿರುವುದನ್ನು ನೋಡಬಹುದು. ಸದ್ಯ ‘ಯುವ’ ಪಕ್ಕಾ ಆ್ಯಕ್ಷನ್ ಪ್ಯಾಕ್ಡ್ ಸಿನಿಮಾ ಎನ್ನಲಾಗ್ತಿದ್ದು, ಈ ಚಿತ್ರ ಇದೇ ಮಾರ್ಚ್​ 29ರಂದು ರಾಜ್ಯಾದ್ಯಂತ ತೆರೆಕಾಣಲಿದೆ. ಇನ್ನೂ ಈ ಸಿನಿಮಾಗೆ ಡೈರೆಕ್ಟರ್‌ ಸಂತೋಷ್‌ ಆನಂದ್‌ ರಾಮ್‌ ಆಕ್ಷನ್‌ ಕಟ್‌ ಹೇಳಿದ್ದು, ದೊಡ್ಮನೆ ಮೊಮ್ಮಗನನ್ನು ಮಾಸ್ ಅವತಾರದಲ್ಲಿ ತೋರಿಸಲು ನಿರ್ದೇಶಕರು ಪ್ಲಾನ್ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News