ಲೀಲಮ್ಮನ ಅಂತಿಮ ದರ್ಶನಕ್ಕೆ ಚೆನೈನಿಂದ ಬಂದ ಮೊಮ್ಮಗ...!

Leelavathi: ರಂಗಭೂಮಿ ಹಾಗೂ ಚಂದನವನದ ಹಿರಿಯ ನಟಿ ಲೀಲಾವತಿ ವಿಧಿವಶರಾದ ಸುದ್ದಿ ಕೇಳಿ ಚೆನೈನಿಂದ ಮೊಮ್ಮಗ ಯುವರಾಜ್‌ ಮತ್ತು ಸೊಸೆ ಅನು ಬೆಂಗಳೂರಿಗೆ ಬಂದಿದ್ದು, ಅಂತಿಮ ವಿಧಿವಿಧಾನಗಳಲ್ಲಿ ಭಾಗಿಯಾಗುತ್ತಿದ್ದಾರೆ.

Written by - Zee Kannada News Desk | Last Updated : Dec 9, 2023, 02:14 PM IST
  • ಹಿರಿಯ ನಟಿ ಲೀಲಾವತಿ ಡಿಸೆಂಬರ್‌ 8 ರಂದು ಶುಕ್ರವಾರ ನಿಧನರಾಗಿದ್ದರಿಂದ, ಈ ನಟಿಯ ಅಂತಿಮ ದರ್ಶನಕ್ಕೆ ಮೊಮ್ಮಗ ಮತ್ತು ಸೊಸೆ ಬಂದಿದ್ದಾರೆ.
  • ಸುಮಾರು ದಿನ ಕಣ್ಣುಮುಚ್ಚಿಕೊಂಡೇ ಮಲಗಿರುತ್ತಿದ್ದ ಲೀಲಮ್ಮ ಮೊಮ್ಮಗ ಬಂದು ಅಜ್ಜೀ... ಎಂದು ಕರೆದಾಗ ಕೂಡಲೇ ಕಣ್ಣು ಬಿಟ್ಟಿರು.
  • ಕೆಲವು ತಿಂಗಳ ಹಿಂದೆ, ಮಗನ ಮದುವೆಯಾಗಿರುವ ವಿಷಯವನ್ನು ಯಾಕೆ ಇಷ್ಟು ದಿನ ಮುಚ್ಚಿಟ್ಟಿದ್ದೀರಿ ಅಂತ ಕೇಳಿದ ಪ್ರಶ್ನೆಗೆ ಲೀಲಾವತಿ ನನ್ನ ಮಗನ ಮದುವೆ ಆಗಿದೆ ಎಂದು ಉತ್ತರಿಸಿದರು.
ಲೀಲಮ್ಮನ ಅಂತಿಮ ದರ್ಶನಕ್ಕೆ ಚೆನೈನಿಂದ ಬಂದ ಮೊಮ್ಮಗ...! title=

Leelavathi Grandson: ಹಿರಿಯ ನಟಿ ಲೀಲಾವತಿ ಡಿಸೆಂಬರ್‌ 8 ರಂದು ಶುಕ್ರವಾರ ನಿಧನರಾಗಿದ್ದರಿಂದ,  ಈ ನಟಿಯ ಅಂತಿಮ ದರ್ಶನಕ್ಕೆ  ಮೊಮ್ಮಗ ಮತ್ತು ಸೊಸೆ ಬಂದಿದ್ದಾರೆ. ಚೆನ್ನೈನಲ್ಲಿ ವಾಸಿಸುತ್ತಿರುವ ವಿನೋದ್‌ ರಾಜ್ ಪತ್ನಿ ಅನು ಹಾಗೂ ಮಗ ಯುವರಾಜ್‌ ಲೀಲಾವತಿ ವಿಧಿವಶರಾದ ಸುದ್ದಿ ಕೇಳಿ ಬೆಂಗಳೂರಿಗೆ ಬಂದಿದ್ದು, ಅಂತಿಮ ವಿಧಿವಿಧಾನಗಳಲ್ಲಿ ಭಾಗಿಯಾಗುತ್ತಿದ್ದಾರೆ. ಇತ್ತೀಚೆಗೆ ಲೀಲಾವತಿ ವಯೋಸಹಜ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾಗ, ಮೊಮ್ಮಗ ಯುವರಾಜ್ ಮತ್ತು ಸೊಸೆ ಅನು ಚೆನ್ನೈನಿಂದ ನೋಡಲು ಬಂದಿದ್ದರು. 

ಸುಮಾರು  ದಿನ ಕಣ್ಣುಮುಚ್ಚಿಕೊಂಡೇ ಮಲಗಿರುತ್ತಿದ್ದ ಲೀಲಮ್ಮ ಮೊಮ್ಮಗ ಬಂದು ಅಜ್ಜೀ... ಎಂದು  ಕರೆದಾಗ ಕೂಡಲೇ ಕಣ್ಣು ಬಿಟ್ಟಿರುವುದನ್ನು ನೋಡಿದರೇ, ಮೊಮ್ಮಗನನ್ನು ತುಂಬಾ ಹಚ್ಚಿಕೊಂಡಿದ್ದರು ಎಂದು ತಿಳಿದು ಬರುತ್ತದೆ. ಈ ಹಿಂದೆ ವಿನೋದ್‌ ರಾಜ್‌ ಮದುವೆಯಾಗಲಿಲ್ಲ ಎಂದು ಹೇಳಲಾಗಿದ್ದು, ಆದರೆ ಕಳೆದ 8 ತಿಂಗಳ ಹಿಂದೆ, ವಿನೋದ್‌ ರಾಜ್‌ಗೆ ಮದುವೆಯಾಗಿದೆ ಎಂಬ ವಿಷಯ ಹೊರಬಂದಿದ್ದು,  ಪತ್ನಿ ಅನು ಮತ್ತು ಮಗ ಯುವರಾಜ್‌ ಚೆನ್ನೈನಲ್ಲಿ ನೆಲೆಸಿದ್ದಾರೆ ಎಂದು ಸುದ್ದಿಯಾಗಿತ್ತು. ಇನ್ನು ಲೀಲಾವತಿ ಅವರ ಸೊಸೆ ಅನು ತಮಿಳುನಾಡಿನ ಪ್ರತಿಷ್ಠಿತ ಕುಟುಂಬದಲ್ಲಿ ಹುಟ್ಟಿ ಬೆಳೆದಾಕೆ ಐಪಿಎಸ್ ಅಧಿಕಾರಿಯೊಬ್ಬರ ತಂಗಿ ಎನ್ನಲಾಗಿದೆ. ವಿನೋದ್‌ ರಾಜ್‌ ಮಗ ಇದೀಗ ಇಂಜಿನೀಯರಿಂಗ್ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Leelavathi : ಚಂದನವನದ ನಗುಮೊಗದ ʼಲೀಲಮ್ಮʼನವರ ಅಪರೂಪದ ಫೋಟೋಸ್‌ ಇಲ್ಲಿವೆ..!

ಕೆಲವು ತಿಂಗಳ ಹಿಂದೆ, ಮಗನ ಮದುವೆಯಾಗಿರುವ ವಿಷಯವನ್ನು ಯಾಕೆ ಇಷ್ಟು ದಿನ ಮುಚ್ಚಿಟ್ಟಿದ್ದೀರಿ ಅಂತ ಕೇಳಿದ ಪ್ರಶ್ನೆಗೆ ಲೀಲಾವತಿ ನನ್ನ ಮಗನ ಮದುವೆ ಆಗಿದೆ. ಅದರಲ್ಲಿ ಮುಚ್ಚಿಡುವಂಥದ್ದು ಏನೂ ಇಲ್ಲ. ಆದರೆ, ಸಿಂಪಲ್ ಆಗಿ ಮದುವೆ ಮಾಡಿದೆ. ನನ್ನ ಹತ್ತಿರ ದುಡ್ಡಿಲ್ಲದ್ದಕ್ಕೆ  ತಿರುಪತಿ ಬೆಟ್ಟದ ಮೇಲೆ ಮಾಡಿದೆ.  ನನ್ನ ಮಗ ಪವಿತ್ರವಾಗಿದ್ದಾನೆ. ಒಳ್ಳೆಯ ಮಗನಾಗಿದ್ದಾನೆ. ತಿರುಪತಿ ಬೆಟ್ಟದ ಮೇಲೆ ಮದುವೆ ಮಾಡಿಸಿದ್ದೇನೆ. ಎಲ್ಲರಿಗೂ ಗೊತ್ತಾಗಿ ಕೊಂಕು ಮಾತನ್ನು ಕೇಳುವ ಬದಲೂ, ಪರಿಶುದ್ಧವಾದ ಜಾಗದಲ್ಲಿ ಮದುವೆ ಮಾಡಿಸಿದ್ದೇನೆ. ಕೇವಲ ಏಳೇ ಜನ ಕನ್ನಡಿಗರು ಈ ಮದುವೆಯಲ್ಲಿ ಭಾಗವಹಿಸಿದ್ದರು ಎಂದು ಸ್ಪಷ್ಟಪಡಿಸಿದ್ದರು.
 
ಇರೋ ಒಬ್ಬ ಮಗನ ಮದುವೆ ವಿಜ್ರಂಭಣೆಯಿಂದ ಮಾಡೋಕೆ ಆಗಲಿಲ್ವೇ ಎಂದು ಅನಿಸಿದೆ. ಪರಮಾತ್ಮನ್ನ ಕೇಳೋದೆ ಆಯ್ತು. ಯಾವ ತಾಯಿಯೂ ತನ್ನ ಮಕ್ಕಳ ಭವಿಷ್ಯ ಚೆನ್ನಾಗಿ ಆಗದಿರಲಿ ಎಂದು ಬಯಸುವುದಿಲ್ಲ. ಚೆನ್ನಾಗಿ ಆಗಲಿ ಎಂದೇ ಬಯಸ್ತಾಳೆ. ಸೊಸೆ ಮೊಮ್ಮಕ್ಕಳು ಚಿನ್ನದ ಹಾಗಿದ್ದಾರೆ ಎಂದು ಸ್ಪಷ್ಟಪಡಿಸಿದ್ದರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News