ಕಿಚ್ಚನ ಅಭಿಮಾನಿಗಳಿಗೆ ನಿರಾಸೆ , ಸದ್ಯಕ್ಕಿಲ್ಲ ಬೆಳ್ಳಿ ಪರದೆ ಮೇಲೆ ವಿಕ್ರಾಂತ ರೋಣನ ದರ್ಶನ ..!

ಅಭಿಮಾನಿಗಳು ವಿಕ್ರಾಂತ್ ರೋಣ (Vikrant Rlona Film) ಸಿನಿಮಾ ರಿಲೀಸ್ ಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಆದರೆ ಚಿತ್ರದ ಬಿಡುಗಡೆಯನ್ನು ಚಿತ್ರ ತಂಡ ಮುಂದೂಡಿದೆ.   

Written by - Malathesha M | Last Updated : Feb 23, 2022, 06:23 PM IST
  • ಕಿಚ್ಚ ಅಭಿಮಾನಿಗಳಿಗೆ ನಿರಾಸೆ
  • ಸದ್ಯಕ್ಕಿಲ್ಲ ವಿಕ್ರಾಂತ ರೋಣನ ದರ್ಶನ
  • ಚಿತ್ರ ಬಿಡುಗಡೆ ಮುಂದೂಡಿದ ಚಿತ್ರ ತಂಡ
ಕಿಚ್ಚನ  ಅಭಿಮಾನಿಗಳಿಗೆ ನಿರಾಸೆ , ಸದ್ಯಕ್ಕಿಲ್ಲ ಬೆಳ್ಳಿ ಪರದೆ ಮೇಲೆ ವಿಕ್ರಾಂತ ರೋಣನ ದರ್ಶನ ..! title=
ಸದ್ಯಕ್ಕಿಲ್ಲ ವಿಕ್ರಾಂತ ರೋಣನ ದರ್ಶನ (file photo)

ಬೆಂಗಳೂರು : ಕಿಚ್ಚ ಸುದೀಪ್ (Kichcha Sudeep) ಅಭಿಮಾನಿಗಳ ಪಾಲಿಗೆ ಇದೊಂದು ಕಹಿ ಸುದ್ದಿ. ಹೌದು ಅಭಿಮಾನಿಗಳು ವಿಕ್ರಾಂತ್ ರೋಣ (Vikrant Rlona Film) ಸಿನಿಮಾ ರಿಲೀಸ್ ಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಆದರೆ ಚಿತ್ರದ ಬಿಡುಗಡೆಯನ್ನು ಚಿತ್ರ ತಂಡ ಮುಂದೂಡಿದೆ. 

ಎಲ್ಲವು ಅಂದುಕೊಂಡಂತೆ ನಡೆದರೆ ಫೆಬ್ರವರಿ 24 ರಂದು,  ವಿಕ್ರಾಂತ ರೋಣ (Vikrant Rona release) ತೆರೆಕಾಣಬೇಕಿತ್ತು. ಆದರೆ, COVID-19 ಹಿನ್ನೆಲೆಯಲ್ಲಿ  ಫೆಬ್ರವರಿ 24 ರಂದು ಚಿತ್ರವನ್ನು ಬಿಡುಗಡೆ ಮಾಡದಿರಲು ಚಿತ್ರ ತಂಡ ನಿರ್ಧರಿಸಿದೆ. ಈ ಬಗ್ಗೆ ಚಿತ್ರ ತಂಡ ಅಧಿಕೃತ ಪ್ರಕಟಣೆ ನೀಡಿದೆ. ಪ್ರಸ್ತುತ COVID ಪರಿಸ್ಥಿತಿ ಮತ್ತು ಅದಕ್ಕೆ ಸಂಬಂಧಿಸಿದ ನಿಯಮಾವಳಿ ಹಿನ್ನೆಲೆಯಲ್ಲಿ ಚಿತ್ರ ಬಿಡುಗಡೆಗೆ ಪರಿಸ್ಥಿತಿ ಅನುಕೂಲಕರವಾಗಿಲ್ಲ ಎಂದು ಚಿತ್ರ ತಂಡ  ಹೇಳಿದೆ.  ಅಲ್ಲದೆ, ಭಾರತದ ಮೊದಲ ಅಡ್ವೆಂಚರ್ ಹಿರೋನನ್ನು ಪರಿಚಯಿಸುವ ಹೊಸ ದಿನಾಂಕವನ್ನು ಶೀಘ್ರವೇ ಪ್ರಕಟಿಸುವುದಾಗಿಯೂ ಹೇಳಿದೆ. 

ಇದನ್ನೂ ಓದಿ : Suraj Nambiar ಜೊತೆ ಸಪ್ತಪದಿ ತುಳಿದ Mouni Roy, ವಿವಾಹದ ವಿಡಿಯೋ ಇಲ್ಲಿದೆ

ಈ ಹಿಂದೆ ಫೆಬ್ರವರಿ 24ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಣೆ ಮಾಡಿತ್ತು. ಅಷ್ಟು ಮಾತ್ರವಲ್ಲ, 50-50 ಪರಸೆಂಟ್ ಸೀಟು ಭರ್ತಿಗೆ ಅವಕಾಶವಿದ್ದರೂ ಪರವಾಗಿಲ್ಲ ಚಿತ್ರ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿತ್ತು. ಆದರೆ, ಇದೀಗ  ಸಿನಿಮಾ ರಿಲೀಸ್ (Vikrant Rona release date) ವಿಚಾರದಲ್ಲಿ  ಮನಸ್ಸು ಬದಲಾಯಿಸಿದೆ

ಜಾಕ್‌ಮಂಜು ನಿರ್ಮಾಣದ ಈ ಚಿತ್ರಕ್ಕೆ ಅನೂಪ್ ಭಂಡಾರಿ (Anup Bhandari) ಆಕ್ಷನ್ ಕಟ್ ಹೇಳಿದ್ದಾರೆ.  ಚಿತ್ರದಲ್ಲಿ ಸುದೀಪ್ (Kichcha Sudeep) ಜೊತೆ ನಿರೂಪ್ ಭಂಡಾರಿ, ನೀತಾ ಅಶೋಕ್, ರವಿಶಂಕರ್ ಗೌಡ (Ravishankar Gowda), ಮಧುಸೂದನ್ ರಾವ್ ಕಾಣಿಸಿಕೊಂಡಿದ್ದಾರೆ. ಅಲ್ಲದೆ, ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್ (Jacqueline fernandez) ಒಂದು ಹಾಡಿನಲ್ಲಿ ಮೋಡಿ ಮಾಡಿದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತವಿದೆ. 

ಇದನ್ನೂ ಓದಿ : ಸಮಂತಾ-ನಾಗ ಚೈತನ್ಯ ಪ್ಯಾಚ್-ಅಪ್! ಮೊದಲು ವಿಚ್ಛೇದನ ಅರ್ಜಿ ಸಲ್ಲಿಸಿದ್ಯಾರು? ತಂದೆ ನಾಗಾರ್ಜುನ ಬಿಚ್ಚಿಟ್ಟರು ಸತ್ಯ!

ಅದ್ದೂರಿ ವೆಚ್ಚದಲ್ಲಿ ನಿರ್ಮಾಣವಾಗಿರುವ ವಿಕ್ರಾಂತ ರೋಣ ಚಿತ್ರ ರಸಿಕರಲ್ಲಿ ಭಾರೀ ನಿರೀಕ್ಷೆಯನ್ನೇ ಮೂಡಿಸಿದೆ. ಅಲ್ಲದೆ ಕಿಚ್ಚ ಸುದೀಪ್ ಈ ಚಿತ್ರದಲ್ಲಿ ಡಿಫರೆಂಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.   

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News