ಡೆಂಗ್ಯೂ ಆತಂಕದ ನಡುವೆ ವಾರದಿಂದ ಕಲುಷಿತ ನೀರು ಪೂರೈಕೆ: ನಗರಸಭೆ ವಿರುದ್ಧ ಆಕ್ರೋಶ

ಚಾಮರಾಜನಗರದ 17 ನೇ ವಾರ್ಡ್ ನಲ್ಲಿ ಉಪ್ಪಾರ ಬೀದಿಯಲ್ಲಿ ನೂರಾರು ಮ‌ನೆಗಳಿದ್ದು ಕಳೆದ 1 ವಾರಗಳಿಂದ ಚರಂಡಿ ಮಿಶ್ರಿತ ನೀರು ಪೂರೈಕೆ ಆಗುತ್ತಿದ್ದು  ಕುಡಿಯಲು ಬಳಸಲಾಗದೇ, ಮನೆ ಬಳಕೆಗೂ ಉಪಯೋಗಿಸಲಾರದೇ ಜನರು ಪರದಾಡುತ್ತಿದ್ದಾರೆ.

Written by - Yashaswini V | Last Updated : Jul 2, 2024, 02:55 PM IST
  • ಕಳೆದ 1 ವಾರಗಳಿಂದ ಚಾಮರಾಜನಗರದ 17 ನೇ ವಾರ್ಡ್ ನ ಉಪ್ಪಾರ ಬೀದಿಗೆ ಕೊಳಚೆ ನೀರು ಪೂರೈಕೆ
  • ಚಾಮರಾಜನಗರ ನಗರಸಭೆ ಸಿಬ್ಬಂದಿ ನಿರ್ಲಕ್ಷ್ಯದಿಂದ ಚರಂಡಿ ನೀರು ಮಿಶ್ರಿತ ನೀರು ಪೂರೈಕೆ
  • ಕುಡಿಯುವ ನೀರು, ಮನೆ ಬಳಕೆಗೆ ನೀರು ಇಲ್ಲದೇ ಜನರ ಪರದಾಟ
ಡೆಂಗ್ಯೂ ಆತಂಕದ ನಡುವೆ ವಾರದಿಂದ ಕಲುಷಿತ ನೀರು ಪೂರೈಕೆ: ನಗರಸಭೆ ವಿರುದ್ಧ ಆಕ್ರೋಶ title=

ಚಾಮರಾಜನಗರ: ಬರೋಬ್ಬರಿ 7 ದಿನಗಳಿಂದ ಕಲುಷಿತ ನೀರು (Contaminated Water) ಪೂರೈಕೆ ಆಗುತ್ತಿದ್ದು ಜನರು ಕುಡಿಯಲು ನೀರಿಲ್ಲದೇ ಪರದಾಡುತ್ತಿರುವ ಘಟನೆ ಚಾಮರಾಜನಗರದ 17ನೇ ವಾರ್ಡ್ ನ ಉಪ್ಪಾರ ಬೀದಿಯಲ್ಲಿ ನಡೆದಿದೆ.

ಚಾಮರಾಜನಗರದ 17 ನೇ ವಾರ್ಡ್ ನಲ್ಲಿ ಉಪ್ಪಾರ ಬೀದಿಯಲ್ಲಿ ನೂರಾರು ಮ‌ನೆಗಳಿದ್ದು ಕಳೆದ 1 ವಾರಗಳಿಂದ ಚರಂಡಿ ಮಿಶ್ರಿತ ನೀರು ಪೂರೈಕೆ ಆಗುತ್ತಿದ್ದು  ಕುಡಿಯಲು ಬಳಸಲಾಗದೇ, ಮನೆ ಬಳಕೆಗೂ ಉಪಯೋಗಿಸಲಾರದೇ ಜನರು ಪರದಾಡುತ್ತಿದ್ದಾರೆ.

ಚರಂಡಿ ನೀರು ಮಿಶ್ರಿತ ನೀರು: 
ಕುಡಿಯುವ ನೀರಿನ ಪೈಪ್ (Drinking Water Pipe) ಗೆ ಚರಂಡಿ ನೀರು ಮಿಶ್ರಿತವಾಗುತ್ತಿದ್ದು ದುರ್ವಾಸನೆ ಹಾಗೂ ನೊರೆಯುಕ್ತ ನೀರು ಪೂರೈಕೆ ಮಾಡಲಾಗುತ್ತಿದೆ. ಸ್ನಾನ ಮಾಡಿದರೇ ಮೈ ತುರಿಕೆ ಬರುತ್ತಿದ್ದು ಸ್ನಾನಕ್ಕೂ ಕೂಡ ಈ ನೀರು ಬಳಕೆ ಮಾಡದ ಸ್ಥಿತಿ ಇದೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ. 

ಇದನ್ನೂ ಓದಿ- ಕೆ.ಸಿ ಜನರಲ್ ಜನಪ್ರಿಯ ಆಸ್ಪತ್ರೆಯಾಗಿಸಲು 200 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯ: ಸಚಿವ ದಿನೇಶ್ ಗುಂಡೂರಾವ್

ಭಾನುವಾರದಂದು ಶಾಸಕ ಸಿ.ಪುಟ್ಟರಂಗಶೆಟ್ಟಿ (MLA Puttaranga Shetty) ವಾರ್ಡ್ ನ ಮನೆಗಳಿಗೆ ಭೇಟಿ ಕೊಟ್ಟು ಕಲುಷಿತ ನೀರು ಪೂರೈಕೆ ಬಗ್ಗೆ ಮಾಹಿತಿ ಪಡೆದು ನಗರಸಭೆ ಸಿಬ್ಬಂದಿಗೆ ತರಾಟೆಗೆ ತೆಗೆದುಕೊಂಡು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರೂ ನೀರು ಪೂರೈಕೆಯಲ್ಲಿ ಬದಲಾವಣೆ ಆಗಿಲ್ಲ.

ಮಕ್ಕಳಿಗೆ ಸೋಂಕು: 
ವಾರ್ಡ್ ನ ನಿವಾಸಿ ಅಶ್ವಿನಿ ಎಂಬವರು ಮಾತನಾಡಿ, ನಾವು  1 ವಾರಗಳಿಂದ ಟ್ಯಾಂಕರ್ ನೀರು (Tanker Water) ತರಿಸಿಕೊಳ್ಳುತ್ತಿದ್ದೇವೆ, ಆ ನೀರಿನಲ್ಲಿ ಮಕ್ಕಳಿಗೆ ಸ್ನಾನ ಮಾಡಿಸಿದರೇ ಸೋಂಕು ಅಂಟುತ್ತಿದೆ,  ಕಾವೇರಿ ನೀರಿಗೆ ಚರಂಡಿ ನೀರು ಮಿಶ್ರಣಗೊಂಡು ಈ ಅವಾಂತರ ಸೃಷ್ಟಿಯಾಗಿದೆ, ನಗರಸಭೆಗೆ ಎಷ್ಟೇ ಬಾರಿ ಮನವಿ ಮಾಡಿದರೂ ಕ್ರಮ ಕೈಗೊಂಡಿಲ್ಲ ಎಂದು ಕಿಡಿಕಾರಿದರು.

ಇದನ್ನೂ ಓದಿ- ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಸಿಎಂ

ಡೆಂಘಿ, ಕಾಲರಾ ಭೀತಿ ಆವರಿಸುತ್ತಿರುವ ಹೊತ್ತಿನಲ್ಲಿ 1 ವಾರದಿಂದ ಕಲುಷಿತ ನೀರು ಪೂರೈಕೆ ಮಾಡುತ್ತಿರುವುದು ನಗರಸಭೆ ಸಿಬ್ಬಂದಿಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಈ ಕೂಡಲೇ ಪೈಪ್ ಲೈನ್  ದುರಸ್ತಿಪಡಿಸಿ ಸಮರ್ಪಕ ನೀರು ಪೂರೈಕೆ ಮಾಡಬೇಕು ಎಂದು ನಿವಾಸಿಗಳಾದ ಜಯಕುಮಾರ್, ರೂಪಾ ಒತ್ತಾಯಿಸಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News