ಮಲ್ಲಿ ಮಿಸ್ಸಿಂಗ್‌ ಕುರಿತು ಹೆಚ್ಚಿದ ಅನುಮಾನ: ಸಿನಿಮಾ ಬ್ಯಾನರ್‌ ಇನ್ನೂ ಆಕ್ಟೀವ್‌..!

Mallikarjun Missing: ಏಳು ವರ್ಷಗಳ ಹಿಂದೆ ಕಾಣೆಯಾಗಿದ್ದ ಮಲ್ಲಿಕಾರ್ಜುನ್‌ ಕೇಸ್‌ ಮತ್ತೇ ಸದ್ದು ಮಾಡುತ್ತಿದೆ. ಏನಿದು ಸ್ಟೋರಿ? ಮುಂದೆ ಓದಿ...   

Written by - Zee Kannada News Desk | Last Updated : Jun 15, 2024, 03:17 PM IST
  • ದರ್ಶನ್‌ರ ಮಾಜಿ ಮ್ಯಾನೇಜರ್‌ ಮಲ್ಲಿಕಾರ್ಜುನ್‌ ಕಾಣೆಯಾಗಿ ಇವತ್ತಿಗೆ 7 ವರ್ಷಗಳು ಕಳೆದಿವೆ.
  • ಮಲ್ಲಿಕಾರ್ಜುನ್‌ ನಾಪತ್ತೆಯ ಸುತ್ತ ಅನುಮಾನದ ಉತ್ತ.
  • 10 ಕೋಟಿ ರೂಪಾಯಿಗಳ ಸಾಲವನ್ನು ತಲೆ ಮೇಲೆ ಹೊತ್ತುಕೊಂಡಿದ್ದ ಈತ ಸಡನ್‌ ಆಗಿ ಕಾಣೆಯಾಗಿದ್ದ.
ಮಲ್ಲಿ ಮಿಸ್ಸಿಂಗ್‌ ಕುರಿತು ಹೆಚ್ಚಿದ ಅನುಮಾನ: ಸಿನಿಮಾ ಬ್ಯಾನರ್‌ ಇನ್ನೂ ಆಕ್ಟೀವ್‌..! title=

Mallikarjun: ರೇಣುಕಾಸ್ವಾಮಿ ಕೇಸ್‌ನಲ್ಲಿ ಅರೆಸ್ಟ್‌ ಆಗಿರುವ ಡೆವಿಲ್‌ ವಿಚಾರಣೆ ಇನ್ನೂ ಮುಂದುವರೆದಿದೆ. ಈ ಮಧ್ಯೆ ದರ್ಶನ್‌ರ ಹಳೆ ಕೇಸ್‌ಗಳು ಒಂದಾದ ಮೇಲೆ ಒಂದರಂತೆ ಹೊರ ಬರುತ್ತಿವೆ. ಅದರಲ್ಲೂ ಹೆಚ್ಚು ಸದ್ದು ಮಾಡುತ್ತಿರುವುದು ಡಿ ಬಾಸ್‌ರ ಮಾಜಿ ಮ್ಯಾನೇಜರ್‌ ಮಲ್ಲಿಕಾರ್ಜುನ್‌ ಮಿಸ್ಸಿಂಗ್‌ ಕೇಸ್‌.

ಹೌದು, ದರ್ಶನ್‌ರ ಮಾಜಿ ಮ್ಯಾನೇಜರ್‌ ಮಲ್ಲಿಕಾರ್ಜುನ್‌ ಕಾಣೆಯಾಗಿ ಇವತ್ತಿಗೆ 7 ವರ್ಷಗಳು ಕಳೆದಿವೆ. ಅದರೆ ಡಿ ಬಾಸ್‌ ಅರೆಷ್ಟ್‌ ಆದ ಬೆನ್ನಲ್ಲೇ ಮಲ್ಲಿಕಾರ್ಜುನ್‌ ನಾಪತ್ತೆಯ ಸುತ್ತ ಅನುಮಾನದ ಉತ್ತ ಹುಟ್ಟಿಕೊಂಡಿದೆ.

ಇದನ್ನೂ ಓದಿ: ಗರ್ಭಿಣಿ ಪತ್ನಿ ಜೊತೆ ಡಾರ್ಲಿಂಗ್ ಕೃಷ್ಣ, ರೊಮ್ಯಾಂಟಿಕ್ ಫೋಟೋಶೂಟ್ ನಲ್ಲಿ ಲವ್ ಮಾಕ್ಟೇಲ್ ಜೋಡಿ ..!

ಯಶ್‌ ಅನ್ನು ಹೀರೋ ಆಗಿ ಹಾಕಿಕೊಂಡು ಮಲ್ಲಿಕಾರ್ಜುನ್‌ ತಮ್ಮ ಮೊದಲ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಆದರೆ ಸಿನಿಮಾ ನಿರೀಕ್ಷೆಯಂತೆ ಹಿಟ್‌ ಕಾಣಲಿಲ್ಲ. ಇದರಿಂದಾಗಿ ಲಾಸ್‌ ಆಗಿದ್ದ ಮಲ್ಲಿಕಾರ್ಜುನ್‌ ದರ್ಶನ್‌ ಬಳಿ ಮ್ಯಾನೇಜರ್‌ ಆಗಿ ಕೆಲಸಕ್ಕೆ ಸೇರಿಕೊಂಡದ್ದ. ದರ್ಶನ್‌ರವರ ಸಿನಿಮಾ ಡೇಟ್ಸ್‌ ಹಾಗೂ ಎಲ್ಲಾ ವ್ಯವಹಾರಗನ್ನು ಈತನೇ ನೋಡಿಕೊಂಡಿದ್ದ. ಇದಷ್ಟೇ ಅಲ್ಲದೆ ಜೊತೆ ಜೊತೆಗೆ ಸಿನಿಮಾ ಡಿಸ್ರ್ಟಿಬ್ಯೂಷನ್‌ ಕೆಲಸಕ್ಕೆ ಕೈ ಹಾಕಿದ್ದ ಮಲ್ಲಿಕಾರ್ಜುನ್‌ ಗೆ ಈ ಕೆಲಸ ಕೈ ಹಿಡಿಯಲಿಲ್ಲ. 10 ಕೋಟಿ ರೂಪಾಯಿಗಳ ಸಾಲವನ್ನು ತಲೆ ಮೇಲೆ ಹೊತ್ತುಕೊಂಡಿದ್ದ ಈತ ಸಡನ್‌ ಆಗಿ ಕಾಣೆಯಾಗಿಬಿಟ್ಟಿದ್ದ. ನಿರ್ಮಾಕರ ಬಳಿ ಅಷ್ಟೇ ಅಲ್ಲದೆ ದರ್ಶನ್‌ ಬಳಿಯೂ ಕೂಡ ಮಲ್ಲಿಕಾರ್ಜುನ್‌ ಸಾಲಮಾಡಿಕೊಂಡಿದ್ದ.

ಯೋಗೀಶ್ ನಾರಾಯಣ್ ಜೊತೆ ಸೇರಿ ಮಲ್ಲಿಕಾರ್ಜುನ್‌ 'ಕರ್ನಾಟಕ ಟಾಕೀಸ್' ಎಂಬ ಸಿನಿಮಾ ಬ್ಯಾನರ್‌ ನಡಿ ಸಿನಿಮಾ ಡಿಸ್ರ್ಟಿಬ್ಯೂಷನ್‌ ಕೆಲಸ ನಿರ್ವಹಿಸಲಾಗುತ್ತಿತ್ತು. ಆದರೆ ಮಲ್ಲಿಕಾರ್ಜುನ್‌ ಕಾಣೆಯಾದ ನಂತರವೂ ಈ ಬ್ಯಾನರ್‌ ಆಕ್ಟಿವ್‌ ಆಗಿಯೇ ಇದೆ. ಇದೊಂದು ಕಾರಣ ಇದೀಗ ಎಲ್ಲರಲ್ಲೂ ಅನುಮಾನ ಹುಟ್ಟುಹಾಕಿದೆ. ಒಂದೆಡೆ ಮಲ್ಲಿಕಾರ್ಜುನ್‌ನ ಪಾರ್ಟ್‌ನರ್‌ ಯೋಗೇಶ್‌ ಈ ಬ್ಯಾನರ್‌ ಅನ್ನು ಮರು ನೊಂದಣಿ ಮಾಡಿಕೊಂಡಿದ್ದಾರೆ ಅಂತಲೂ ಹೇಳಲಾಗುತ್ತಿದೆ. ಆದರೆ ಸತ್ಯ ಏನು? ಎನ್ನುವುದು ಯಾರಿಗೂ ಗೊತ್ತಿಲ್ಲ.

ಇದನ್ನೂ ಓದಿ:  ದರ್ಶನ್ ಬಗ್ಗೆ ಸಹೋದರ ದಿನಕರ್ ತೂಗುದೀಪ ಮೊದಲ ರಿಯಾಕ್ಷನ್

ಅಷ್ಟಕ್ಕೂ ಏಳು ವರ್ಷಗಳ ಹಿಂದೆ ಮಿಸ್ಸಿಂಗ್‌ ಆಗಿದ್ದ ಮಲ್ಲಿಕಾರ್ಜುನ್‌ ಕೇಸ್‌ ಮತ್ತೆ ಬೆಳಕಿಗೆ ಬರ್ತಿರೋ ಕಾರಣ ಏನು ಅಂದರೆ. ಮಲ್ಲಿಕಾರ್ಜುನ್‌ ನಾಪತ್ತೆಯಾಗುವುದರ ಹಿಂದೆ ರೇಣುಕಾಸ್ವಾಮಿ ಕೇಸ್‌ನಲ್ಲಿ ಅಂದರ್‌ ಆಗಿರುವ ದರ್ಶನ್‌ ಕೈವಾಡ ಇದೆಯಾ ಎಂದು ಹಲವರು ಅನುಮಾನ ವ್ಯಕ್ತಪಡಿಸುತ್ತಿರುವುದು. 

ಏನೇ ಆಗಲಿ ಈ ಎಲ್ಲಾ ಅನುಮಾನಗಳಿಗೆ ತೆರೆ ಎಳಿಯಬೇಕೆಂದರೆ ಸ್ವತಃ ಮಲ್ಲಿಕಾರ್ಜುನ್‌ ಪ್ರತ್ಯಕ್ಷವಾಗಿ ನನಗೆ ಏನು ಆಗಿಲ್ಲ ಅಂತಾ ಹೇಳಬೇಕು ಅಷ್ಟೇ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News