"ನಾನು ಮದ್ಯವ್ಯಸನಿ ಆಗಲು ಅಪ್ಪ-ಅಮ್ಮನೇ ಕಾರಣ": ಸೌತ್‌ ನಟಿ ಶೃತಿ ಹಾಸನ್‌ ಹೀಗಂದಿದ್ಯಾಕೆ?

Shruthi Hassan: ಸೌತ್‌ ಸಿನಿಮಾರಂಗದ ಬೆಡಗಿ ನಟಿ ಶೃತಿ ಹಾಸನ್‌ ತಾವು ಮದ್ಯವ್ಯಸನಿಯಾಗೋಕೆ ತಮ್ಮ ಅಪ್ಪ-ಅಮ್ಮಾನೇ ಕಾರಣವೆಂದು ಹೇಳಿದ್ದಾರೆ. ಈ ನಟಿ ಈ ರೀತಿ ಹೇಳಿರುವುದಕ್ಕೆ ಕಾರಣವನ್ನು ತಿಳಿದರೆ, ಬೇಸರವಾಗುವುತ್ತದೆ. ಇದರ ಸಂಪೂರ್ಣ ಮಾಹಿತಿ ನೋಡೋಣ. 

Written by - Zee Kannada News Desk | Last Updated : Oct 30, 2023, 01:01 PM IST
  • ನಟಿ ಶೃತಿ ಹಾಸನ್‌ ಅಪ್ಪನ ನೆರಳಲ್ಲಿ ವೃತ್ತಿ ಬದುಕನ್ನು ಕಟ್ಟಿಕೊಳ್ಳದೆ, ಸ್ವಂತ ಶ್ರಮದಿಂದ ಹೆಸರುಮಾಡಿದಾರೆ.
  • ಶೃತಿ ಮದ್ಯವ್ಯಸನಿ ಆಗೋಕೆ ಅಪ್ಪ-ಅಮ್ಮನೇ ಕಾರಣ ಎಂದಿದ್ದಾರೆ.
  • ಅಪ್ಪ-ಅಮ್ಮ ವಿಚ್ಛೇದನವೇ ನಟಿ ಶೃತಿ ಖಿನ್ನತೆಗೆ ಕಾರಣ.
"ನಾನು ಮದ್ಯವ್ಯಸನಿ ಆಗಲು ಅಪ್ಪ-ಅಮ್ಮನೇ ಕಾರಣ": ಸೌತ್‌ ನಟಿ ಶೃತಿ ಹಾಸನ್‌ ಹೀಗಂದಿದ್ಯಾಕೆ? title=

South Actress Shruthi Hassan: ದಕ್ಷಿಣ ಸಿನಿಮಾರಂಗದ ನಟಿ ಶ್ರುತಿ ಹಾಸನ್ ತಮ್ಮ ಸಿನಿಮಾಗಳಿಂದ ಎಷ್ಟು ಹೆಸರು ಮಾಡಿದ್ದಾರೋ ಅಷ್ಟೆ ವಿವಾದಗಳಲ್ಲೂ ಸಿಕ್ಕಿಕೊಂಡಿದ್ದು, ಕೆಲವು ಬಾರಿ ಈ ನಟಿ  ಕುಡಿತದ ಚಟಕ್ಕೆ ದಾಸಿಯಾಗಿದ್ದಾರೆ ಅಂತಾನೂ ಸುದ್ದಿಯಾಗಿತ್ತು. ಈ  ಸುದ್ದಿ ಬಗ್ಗೆ ಪ್ರತಿಕ್ರಿಯೆ ನೀಡಿದ  ನಟಿ ಶೃತಿ, ತಮ್ಮ ವೈಯಕ್ತಿಕ ವಿಚಾರಗಳಿಂದ ದಿಢೀರನೇ ಸುದ್ದಿ ಆಗಿಬಿಡುತ್ತಾರೆ.

ನಟಿ ಶೃತಿ ಹಾಸನ್‌, ಕಮಲ್ ಹಾಸನ್ ಹಾಗೂ ನಟಿ ಸಾರಿಕಾ ಪುತ್ರಿಯಾದರೂ, ಅಪ್ಪನ ನೆರಳಲ್ಲಿ ವೃತ್ತಿ ಬದುಕನ್ನು ಕಟ್ಟಿಕೊಳ್ಳದೆ, ಸ್ವಂತ ಶ್ರಮದಿಂದ ಬೆಳೆದು ನಿಂತಿದ್ದಾರೆ. ಸದ್ಯ ದಕ್ಷಿಣ ಭಾರತದ ಜನಪ್ರಿಯ ನಟಿಯರಲ್ಲಿ ಈಕೆ ಕೂಡ ಒಬ್ಬರಾಗಿ, ಸ್ಟಾರ್ ನಟರೊಂದಿಗೆ  ನಾಯಕಿಯಾಗಿ ನಟಿಸಿ ಗೆದ್ದಿದ್ದಾರೆ.

ಇದನ್ನು ಓದಿ: ಪುನೀತ್‌ಗೆ ಪೂಜೆ ಸಲ್ಲಿಸುವಾಗ ಭಾವುಕರಾದ ಕುಟುಂಬಸ್ಥರು

ಈ ಮುಂಚೆ ನಟ ಕಮಲ್ ಹಾಸನ್ ಪುತ್ರಿ ಮಾನಸಿಕ ಆರೋಗ್ಯ ಕೆಟ್ಟಿದ್ದು, ಆಲ್ಕೋಹಾಲ್‌ಗೆ ದಾಸಿಯಾಗಿದ್ದಾರೆ ಅನ್ನೋ ಸುದ್ದಿಗಳೆಲ್ಲ ಹಬ್ಬಿದ್ದವು. ಈ ವಿಚಾರವಾಗಿ  ಈ ನಟಿ ಸಂದರ್ಶನವೊಂದರಲ್ಲಿ ಪ್ರತಿಕ್ರಿಯೆ ನೀಡಿದಾಗ "ಕುಡಿತದ ಚಟಕ್ಕೆ ಬಿದ್ದಿದ್ದು ಅಪ್ಪ-ಅಮ್ಮನಿಂದಲೇ" ಎಂದು ಮಾತನಾಡಿದ್ದು, ಸದ್ಯ ಹೇಳಿಕೆಗಳು ವೈರಲ್ ಆಗಿವೆ.

ನಟಿ ಶೃತಿ ಹಾಸನ್‌ 18 ವರ್ಷ  ಇದ್ದಾಗ ಅಪ್ಪ ಕಮಲ್ ಹಾಸನ್ ಹಾಗೂ ಅಮ್ಮ ಸಾರಿಕಾ ಇಬ್ಬರೂ ವೈವಾಹಿಕ ಜೀವನದಿಂದ ದೂರ ಉಳಿಯುವುದಕ್ಕೆ ನಿರ್ಧರಿಸಿದ್ದು, ಈ ವಿಚಾರ ಈಕೆಯ ಮನಸ್ಸಿನ ಮೇಲೆ ತುಂಬಾನೇ ದೊಡ್ಡ ಪರಿಣಾಮ ಬೀರಿದ್ದು ಕುಡತದ ಚಟಕ್ಕೆ ಕಾರಣವಾಗಿದೆ. ಅಪ್ಪ-ಅಮ್ಮ ವಿಚ್ಛೇದನದಿಂದ ಈ ನಟಿ ಖಿನ್ನತೆಗೆ ಒಳಗಾಗಿದ್ದು, ಇದರಿಂದ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಹಲವರು ಸಲಹೆ ನೀಡಿದ್ದರಿಂದ ಈಕೆ ಮಾನಸಿಕ ಆರೋಗ್ಯ ತಜ್ಞರನ್ನು ಭೇಟಿ ಮಾಡಿದ್ದರು. 

ಇದನ್ನು ಓದಿ: ಬಿಗ್‌ಬಾಸ್‌ ಮನೆಯಲ್ಲಿ ತುಕಾಲಿ ಸಂತೋಷ್‌ಗೆ ಚೈನ್‌ ಭಾಗ್ಯ ನೀಡಿದ ಸುದೀಪ್:‌ ಹೆಚ್ಚಾಯ್ತು ಸಿರಿಯ ಖುಷಿ

ಅದಕ್ಕೆ  ಈ ನಟಿಗೆ ಎಲ್ಲಾರೂ ಹುಚ್ಚಿಯಾಗಿದ್ದಾಳೆಂದು ಹೇಳಿರುವುದರಿಂದ, ಮಾನಸಿಕ ತಜ್ಞರನ್ನು ಭೇಟಿಯಾದ ಮಾತ್ರಕ್ಕೆ ಹುಚ್ಚಿಯಾಗುವುದಿಲ್ಲ ಎಂದು ಶ್ರುತಿ ಹಾಸನ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಶೃತಿ ಮದ್ಯಸೇವನೆಯ ಚಟದಿಂದ ಹೊರಬರಲು ಚಿಕಿತ್ಸೆಗಾಗಿ ಲಂಡನ್‌ಗೆ ತೆರೆಳಿದ್ದು, ಈಗ ಅದರಿಂದ ಸಂಪೂರ್ಣವಾಗಿ ಹೊರ ಬಂದಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News