ಸ್ವಾತಂತ್ರ್ಯ ವೀರ್‌ ಸಾವರ್ಕರ್‌ ಚಿತ್ರದ ಟೀಸರ್‌ ರಿಲೀಸ್‌..! ಗಾಂಧೀಜಿ ಕೆಟ್ಟವರಲ್ಲ ಆದರೆ....

Swatantrya Veer Savarkar Teaser : ಬಾಲಿವುಡ್‌ ನಟ ರಣದೀಪ್ ಹೂಡಾ ಅವರ ಚೊಚ್ಚಲ ನಿರ್ದೇಶನದ ಸ್ವಾತಂತ್ರ್ಯ ವೀರ್ ಸಾವರ್ಕರ್ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಚಿತ್ರ ತನ್ನ ಮೊದಲ ನೋಟದಲ್ಲೇ ಪ್ರೇಕ್ಷಕರ ಹೃದಯ ಗೆದ್ದಿದೆ. ವಿಡಿಯೋದಲ್ಲಿರುವ ಡೈಲಾಗ್‌ ಕೇಳಿದ್ರೆ ಕೂದಲು ಎದ್ದು ನಿಲ್ಲುತ್ತವೆ. 

Written by - Krishna N K | Last Updated : May 28, 2023, 07:03 PM IST
  • ಸ್ವಾತಂತ್ರ್ಯ ವೀರ್ ಸಾವರ್ಕರ್ ಸಿನಿಮಾದ ಟೀಸರ್ ಬಿಡುಗಡೆ.
  • ಬಾಲಿವುಡ್‌ ನಟ ರಣದೀಪ್ ಹೂಡಾ ಅವರ ಚೊಚ್ಚಲ ನಿರ್ದೇಶನದ ಸಿನಿಮಾ.
  • ಚಿತ್ರ ತನ್ನ ಮೊದಲ ನೋಟದಲ್ಲೇ ಪ್ರೇಕ್ಷಕರ ಹೃದಯ ಗೆದ್ದಿದೆ.
ಸ್ವಾತಂತ್ರ್ಯ ವೀರ್‌ ಸಾವರ್ಕರ್‌ ಚಿತ್ರದ ಟೀಸರ್‌ ರಿಲೀಸ್‌..! ಗಾಂಧೀಜಿ ಕೆಟ್ಟವರಲ್ಲ ಆದರೆ.... title=

Swatantrya Veer Savarkar Teaser : ಕೊನೆಗೂ ನಟ ರಣದೀಪ್ ಹೂಡಾ ಅವರ ಬಹುನಿರೀಕ್ಷಿತ 'ಸ್ವಾತಂತ್ರ್ಯ ವೀರ್ ಸಾವರ್ಕರ್' ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಈ ಚಿತ್ರವು ಸ್ವಾತಂತ್ರ ಹೋರಾಟಗಾರ ವಿನಾಯಕ್ ದಾಮೋದರ್ ಸಾವರ್ಕರ್ ಅವರ ಜೀವನವನ್ನು ಆಧರಿಸಿದೆ. ಇಂದು ಸಾವರ್ಕರ್ ಅವರ 140ನೇ ಜಯಂತಿ. ಈ ಪ್ರಯುಕ್ತ ಚಿತ್ರತಂಡ ಸಿನಿಮಾ ಟೀಸರ್‌ ಬಿಡುಗಡೆ ಮಾಡಿದೆ.

ಹೌದು.. ಸ್ವಾತಂತ್ರ್ಯ ವೀರ್‌ ಸಾವರ್ಕರ್‌ ಚಿತ್ರದ ಟೀಸರ್‌ ರಿಲೀಸ್‌ ಆಗಿದೆ. ಚಿತ್ರ ತನ್ನ ಮೊದಲ ನೋಟದಲ್ಲೇ ಪ್ರೇಕ್ಷಕರ ಹೃದಯ ಗೆದ್ದಿದೆ. ವಿಡಿಯೋದಲ್ಲಿರುವ ಡೈಲಾಗ್‌ ಕೇಳಿದ್ರೆ ಕೂದಲು ಎದ್ದು ನಿಲ್ಲುತ್ತವೆ. ಅಲ್ಲದೆ, ರಣದೀಪ್ ಹೂಡಾ ವೀರ್ ಸಾವರ್ಕರ್ ಪಾತ್ರ ಪರಕಾಯ ಪ್ರವೇಶ ಮಾಡಿದ್ದಾರೆ. ಥೇಟ್‌ ಸಾವರ್ಕರ್‌ ರೀತಿಯಲ್ಲಿ ಕಾಣಿಸುತ್ತಿದ್ದಾರೆ. ಇನ್ನು ಟೀಸರ್‌ ಪ್ರಾರಂಭದಲ್ಲಿ ನಗರದೆಲ್ಲೆಡೆ ಬೆಂಕಿ ಕಾಣಿಸಿಕೊಳ್ಳುತ್ತದೆ. ಇದಾದ ನಂತರ ವೀರ ಸಾವರ್ಕರ್‌ ಅವರು ನದಿಗೆ ಹಾರುವುದನ್ನು ಕಾಣಬಹುದು. ಅಲ್ಲದೆ, ಬೆಂಕಿಯ ಮಧ್ಯೆ, ಬ್ರಿಟಿಷ್ ಅಧಿನದ ಪೋಲೀಸ್‌ ಅವರ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯಗಳು ಟೀಸರ್‌ನಲ್ಲಿವೆ.

ಇದನ್ನೂ ಓದಿ: ನಟ ʼಜೂ. ಎನ್‌ಟಿಆರ್‌ʼ ಆಂಧ್ರಪ್ರದೇಶದ ಮುಂದಿನ ʼಮುಖ್ಯಮಂತ್ರಿʼ..!?

ಅಲ್ಲದೆ, ಸ್ವಾತಂತ್ರ್ಯ ಹೋರಾಟವು 90 ವರ್ಷಗಳ ಕಾಲ ನಡೆಯಿತು. ಆದರೆ ಕೆಲವೇ ಜನರು ಈ ಯುದ್ಧದಲ್ಲಿ ಹೋರಾಡಿದರು. ಉಳಿದವರೆಲ್ಲ ಅಧಿಕಾರಕ್ಕಾಗಿ ಹಸಿದಿದ್ದರು. ಗಾಂಧೀಜಿ ಕೆಟ್ಟವರಲ್ಲ, ಆದರೆ ಅವರು ತಮ್ಮ ಅಹಿಂಸಾತ್ಮಕ ಚಿಂತನೆಗೆ ಅಂಟಿಕೊಳ್ಳದಿದ್ದರೆ, ಭಾರತವು 35 ವರ್ಷಗಳ ಹಿಂದೆ ಸ್ವತಂತ್ರವಾಗುತ್ತಿತ್ತು ಎಂದು ಡೈಲಾಗ್‌ಗಳು ಕೇಳಿ ಬರುತ್ತವೆ. 

 

ಟೀಸರ್ ಪ್ರಕಾರ, ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್, ಖುದಿರಾಮ್ ಬೋಸ್ ಮತ್ತು ಸಶಸ್ತ್ರ ಕ್ರಾಂತಿಗೆ ಪ್ರೇರಣೆ ನೀಡಿದವರು ವೀರ್ ಸಾವರ್ಕರ್. ಬ್ರಿಟಿಷರು ಅತ್ಯಂತ ಭಯಪಡುತ್ತಿದ್ದ ಕ್ರಾಂತಿಕಾರಿಗಳಲ್ಲಿ ಅವರು ಒಬ್ಬರು ಎಂದು ಹೇಳಲಾಗುತ್ತದೆ. ಶಕ್ತಿಯುತ ಡೈಲಾಗ್‌ಗಳು ಟೀಸರ್‌ನ ಪ್ರಮುಖ ಆಕರ್ಷಣೆ. ಅಲ್ಲದೆ, ಈ ಚಿತ್ರಕ್ಕಾಗಿ ರಣದೀಪ್‌ ಯಾವ ರೀತಿ ದೈಹಿಕವಾಗಿ ಬದಲಾಗಿದ್ದಾರೆ ಎನ್ನುವುದು ಸ್ಟಷ್ಟವಾಗಿ ತಿಳಿಯುತ್ತಿದೆ.

ಇದನ್ನೂ ಓದಿ:  ಕನ್ನಡದ ಪ್ರತಿಷ್ಠಿತ ಆನಂದ್ ಆಡಿಯೋ ಸಂಸ್ಥೆಗೆ ದೊರಕಿದೆ ಡೈಮಂಡ್ ಬಟನ್‌ 

'ಸ್ವಾತಂತ್ರ್ಯ ವೀರ್ ಸಾವರ್ಕರ್' ಚಿತ್ರವನ್ನು ರಣದೀಪ್ ಹೂಡಾ ನಿರ್ದೇಶಿಸಿದ್ದಾರೆ. ನಿರ್ದೇಶಕರಾಗಿ ಇದು ಅವರ ಮೊದಲ ಚಿತ್ರ. ಈ ಚಿತ್ರಕ್ಕಾಗಿ ನಟ ಸಾಕಷ್ಟು ಶ್ರಮಿಸಿದ್ದಾರೆ ಎಂಬುದು ಟೀಸರ್‌ನಿಂದಲೇ ತಿಳಿಯುತ್ತದೆ. ನಟ ನೋಟ ಮತ್ತು ದೇಹದ ರೂಪಾಂತರ ಅದ್ಭುತ. ಚಿತ್ರದ ಶೀರ್ಷಿಕೆಗೆ #WhoKilledHisStory ಎಂಬ ಅಡಿಬರಹವನ್ನು ಸೇರಿಸಲಾಗಿದೆ. ಸದ್ಯ ಚಿತ್ರದ ಬಿಡುಗಡೆ ದಿನಾಂಕ ಪ್ರಕಟವಾಗಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News