ʼನಿರ್ಮಾಪಕರು ಹಣ ಕೊಟ್ಟಿದ್ದು ನಿಜʼ.. ಆದ್ರೆ..! ʼಕಿಚ್ಚ ಸುದೀಪ್‌ ಕೇಸ್‌ʼಗೆ ನಂದ ಕಿಶೋರ್‌ ಟ್ವೀಸ್ಟ್‌

Kichcha sudeep cheating case : ಖ್ಯಾತ ನಿರ್ಮಾಪಕ ಎಂ. ಎನ್. ಕುಮಾರ್ ಕಿಚ್ಚ ಸುದೀಪ್ ಅವರ ವಿರುದ್ಧ ಗಂಭೀರ ಆರೋಪವೊಂದನ್ನು ಮಾಡಿದ್ದರು. ಸುದೀಪ್ ಅವರು ತಮ್ಮ ಬಳಿ ಅಡ್ವಾನ್ಸ್ ಪಡೆದು ಎಂಟು ವರ್ಷಗಳಿಂದ ಚಿತ್ರ ಮಾಡದೇ ಕೈಕೊಟ್ಟಿದ್ದಾರೆ ಎಂದು ಆರೋಪಿಸಿದ್ದರು. ಇದೀಗ ಕುಮಾರ್‌ ಆರೋಪಕ್ಕೆ ನಿರ್ದೇಶಕ ನಂದಕಿಶೋರ್‌ ಸ್ಪಷ್ಟತೆ ನೀಡಿದ್ದಾರೆ.

Written by - Krishna N K | Last Updated : Jul 4, 2023, 10:00 PM IST
  • ಖ್ಯಾತ ನಿರ್ಮಾಪಕ ಎಂ. ಎನ್. ಕುಮಾರ್ ಕಿಚ್ಚ ಸುದೀಪ್ ಅವರ ವಿರುದ್ಧ ಗಂಭೀರ ಆರೋಪ ಮಾಡಿದಾರೆ.
  • ಸುದೀಪ್ ಅವರು ತಮ್ಮ ಬಳಿ ಅಡ್ವಾನ್ಸ್ ಪಡೆದು ಎಂಟು ವರ್ಷಗಳಿಂದ ಚಿತ್ರ ಮಾಡದೇ ಕೈಕೊಟ್ಟಿದ್ದಾರೆ ಎಂದು ದೂರಿದ್ದಾರೆ.
  • ಕಿಚ್ಚನ ಮೇಲಿನ ನಿರ್ಮಾಪಕ ಕುಮಾರ್‌ ಆರೋಪಕ್ಕೆ ನಿರ್ದೇಶಕ ನಂದಕಿಶೋರ್‌ ಅವರು ಸ್ಪಷ್ಟತೆ ನೀಡಿದ್ದಾರೆ.
ʼನಿರ್ಮಾಪಕರು ಹಣ ಕೊಟ್ಟಿದ್ದು ನಿಜʼ.. ಆದ್ರೆ..! ʼಕಿಚ್ಚ ಸುದೀಪ್‌ ಕೇಸ್‌ʼಗೆ ನಂದ ಕಿಶೋರ್‌ ಟ್ವೀಸ್ಟ್‌ title=

Nanda kishore and Kiccha sudeep : ಕಿಚ್ಚ ಸುದೀಪ್‌ ಅವರು ಕಾಲ್‌ ಶೀಟ್‌ ನೀಡುವುದಾಗಿ ಹೇಳಿ ಹಣ ಪಡೆದು ಮೋಸ ಮಾಡಿದ್ದಾರೆ ಎಂಬ ನಿರ್ಮಾಪಕ ಎಂ. ಎನ್‌. ಕುಮಾರ್‌ ಅವರ ಹೇಳಿಕೆ ಕುರಿತು ಇದೀಗ ನಿರ್ದೇಶಕ ನಂದಕಿಶೋರ್‌ ಕುಮಾರ್‌ ಹಣ ಕೊಟ್ಟಿರುವುದು ನಿಜ ಎಂದು ಹೇಳಿಕೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಹೌದು.. ಮೊನ್ನೆಯಷ್ಟೇ ಕಿಚ್ಚ ಸುದೀಪ್ ಅವರ ಮುಂದಿನ ಚಿತ್ರ ಕಿಚ್ಚ46ನ ಮೊದಲ ನೋಟ ಬಿಡುಗಡೆಯಾಗಿತ್ತು. ವಿಜಯ್ ಕಾರ್ತಿಕೇಯ ಈ ಚಿತ್ರವನ್ನು ನಿರ್ದೇಶನ ಮಾಡುವುದಾಗಿ ಸುದ್ದಿಯಾಗಿತ್ತು. ಅಲ್ಲದೆ ಚಿತ್ರದ ಪೋಸ್ಟರ್‌ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುವ ಮೂಲಕ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿತ್ತು.

ಇದನ್ನೂ ಓದಿ: ವಿವಾದದ ಬೆನ್ನಲ್ಲೇ ಸುದೀಪ್ ಟ್ವೀಟ್.. ಸೈಲೆಂಟ್‌ ಆಗೇ ಖಡಕ್‌ ಉತ್ತರ ಕೊಟ್ಟ ಕಿಚ್ಚ.!

ಇದರ ಬೆನ್ನಲ್ಲೆ ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ಮಾಪಕ ಎಂ ಎನ್ ಕುಮಾರ್ ಕಿಚ್ಚ ಸುದೀಪ್ ಅವರ ವಿರುದ್ಧ ಗಂಭೀರ ಆರೋಪವೊಂದನ್ನು ಮಾಡಿದ್ದರು. ಸುದೀಪ್ ಅವರು ತಮ್ಮ ಬಳಿ ಅಡ್ವಾನ್ಸ್ ಪಡೆದು ಎಂಟು ವರ್ಷಗಳಿಂದ ಚಿತ್ರ ಮಾಡದೇ ಕೈಕೊಟ್ಟಿದ್ದಾರೆ ಎಂದು ಆರೋಪಿಸಿದ್ದರು. 

ನಿರ್ಮಾಪಕ ಎನ್ ಕುಮಾರ್ 2016ರಲ್ಲಿ'ಮುಕುಂದ ಮುರಾರಿ' ಸಿನಿಮಾ ನಂತರ ಸುದೀಪ್‌ ಜೊತೆ ಮತ್ತೊಂದು ಸಿನಿಮಾ ಒಪ್ಪಂದ ಮಾಡಿಕೊಂಡಿದ್ದರಂತೆ. ಅಲ್ಲದೆ ಸುಮಾರು 8 ವರ್ಷಗಳ ಹಿಂದೆ ಕಿಚ್ಚ ಸುದೀಪ್‌ಗೆ ಮುಂಗಡ ಹಣ ಪಾವತಿಸಿದ್ದರಂತೆ. ಆದ್ರೆ, ಅಲ್ಲಿಂದ ಇಲ್ಲಿವರೆಗೂ ಕಾಲ್‌ಶೀಟ್ ಕೊಡದೆ ತಪ್ಪಿಸಿಕೊಂಡು ಓಡಾಡುತ್ತಿದ್ದಾರೆ ಎಂದು ದೂರಿದ್ದರು.

ಇದನ್ನೂ ಓದಿ: ಸಖತ್‌ ಹಾಟ್‌ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ರಣವೀರ್ - ಆಲಿಯಾ ಲುಕ್ಸ್‌..! ಫೋಟೋಸ್‌ ನೋಡಿ

ಇದೀಗ ಈ ಕುರಿತು ಪಾಪ್‌ಕಾರ್ನ್ ಕನ್ನಡ ಎಂಬ ಯುಟ್ಯೂಬ್ ಚಾನೆಲ್‌ಗೆ ನೀಡಿದ್ದ ಸಂದರ್ಶನದಲ್ಲಿ ನಿರ್ದೇಶಕ ನಂದಕಿಶೋರ್ ಕ್ಲಾರೀಟಿ ನೀಡಿದ್ದಾರೆ. ಅಲ್ಲದೆ, 56000 ರೂಪಾಯಿ ಹಣವನ್ನು ಚಿತ್ರಕ್ಕಾಗಿ ಅಡ್ವಾನ್ಸ್ ರೂಪದಲ್ಲಿ ನೀಡಿದ್ದಲ್ಲ, ಬದಲಾಗಿ ಕುಮಾರ್ ಅವರು ತಮಗೆ ವೈಯಕ್ತಿಕವಾಗಿ ನೀಡಿದ ದುಡ್ಡು ಸ್ಪಷ್ಟತೆ ನೀಡಿದ್ದಾರೆ. ಅಲ್ಲದೇ ಕಿಚ್ಚ ಸುದೀಪ್ ಅವರು ಕನ್ನಡದ ಸ್ಟಾರ್ ನಟ, ಅವರಿಗೆ ಕೇವಲ 56000 ರೂ. ಮುಂಗಡ ಹಣ ಯಾವ ನಿರ್ಮಾಪಕರಾದ್ರೂ ನೀಡ್ತಾರಾ ಎಂದು ವ್ಯಂಗ್ಯವಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News