ಆಸ್ಕರ್‌ ರೇಸ್‌ನಲ್ಲಿ ಕನ್ನಡಿಗರ ಸಿನಿಮಾ : ʼಕಾಂತಾರʼ, ʼವಿಕ್ರಾಂತ್‌ ರೋಣʼ.. ಜಯ ಯಾರಿಗೆ..?

ಕನ್ನಡ ಸಿನಿಮಾಗಳಿಗೆ ದೇಶಾದ್ಯಂತ ಬಹುಬೇಡಿಕೆ ಹೆಚ್ಚಾಗಿದೆ. ಹೊರ ದೇಶಗಳಲ್ಲಿಯೂ ಸಹ ಕನ್ನಡಿಗರ ಚಿತ್ರಗಳು ಸಖತ್‌ ಸೌಂಡ್‌ ಮಾಡುತ್ತಿವೆ. ಆರ್‌ಆರ್‌ಆರ್‌ ನಂತರ ಇದೀಗ ಆಸ್ಕರ್‌ ಅಂಗಳಕ್ಕೆ ರಿಷಬ್‌ ಶೆಟ್ಟಿ ನಿರ್ದೇಶಿಸಿ ನಟಿಸಿದ್ದ ಕಾಂತಾರ ಮತ್ತು ಅನೂಪ್ ಭಂಡಾರಿ ನಿರ್ದೇಶನ ಕಿಚ್ಚ ಸುದೀಪ್‌ ಅಭಿನಯದ ವಿಕ್ರಾಂತ್‌ ರೋಣ ಪಾದಾರ್ಪಣೆ ಮಾಡಿದೆ. ಆದ್ರೆ ಯಾರ ಮೂಡಿಗೆ ಪ್ರತಿಷ್ಠಿತ 95ನೇ ಆಸ್ಕರ್ ಅಕಾಡಮಿ ಪ್ರಶಸ್ತಿ ಲಭಿಸುತ್ತೆ ಅನ್ನೋದೆ ಯಕ್ಷ ಪ್ರಶ್ನೆಯಾಗಿದೆ.

Written by - Krishna N K | Last Updated : Jan 10, 2023, 02:42 PM IST
  • ಕನ್ನಡ ಸಿನಿಮಾಗಳಿಗೆ ದೇಶಾದ್ಯಂತ ಬಹುಬೇಡಿಕೆ ಹೆಚ್ಚಾಗಿದೆ.
  • ಆರ್‌ಆರ್‌ಆರ್‌ ನಂತರ ಇದೀಗ ಆಸ್ಕರ್‌ ಅಂಗಳಕ್ಕೆ ಕಾಂತಾರ, ವಿಕ್ರಾಂತ್‌ ರೋಣ.
  • ಪ್ರತಿಷ್ಠಿತ 95ನೇ ಆಸ್ಕರ್ ಅಕಾಡಮಿ ಪ್ರಶಸ್ತಿ ಯಾರಿಗೆ ಲಭಿಸುತ್ತೆ ಅನ್ನೋದೆ ಯಕ್ಷ ಪ್ರಶ್ನೆ.
ಆಸ್ಕರ್‌ ರೇಸ್‌ನಲ್ಲಿ ಕನ್ನಡಿಗರ ಸಿನಿಮಾ : ʼಕಾಂತಾರʼ, ʼವಿಕ್ರಾಂತ್‌ ರೋಣʼ.. ಜಯ ಯಾರಿಗೆ..? title=

Kantara vikranth rona Oscar : ಕನ್ನಡ ಸಿನಿಮಾಗಳಿಗೆ ದೇಶಾದ್ಯಂತ ಬಹುಬೇಡಿಕೆ ಹೆಚ್ಚಾಗಿದೆ. ಹೊರ ದೇಶಗಳಲ್ಲಿಯೂ ಸಹ ಕನ್ನಡಿಗರ ಚಿತ್ರಗಳು ಸಖತ್‌ ಸೌಂಡ್‌ ಮಾಡುತ್ತಿವೆ. ಆರ್‌ಆರ್‌ಆರ್‌ ನಂತರ ಇದೀಗ ಆಸ್ಕರ್‌ ಅಂಗಳಕ್ಕೆ ರಿಷಬ್‌ ಶೆಟ್ಟಿ ನಿರ್ದೇಶಿಸಿ ನಟಿಸಿದ್ದ ಕಾಂತಾರ ಮತ್ತು ಅನೂಪ್ ಭಂಡಾರಿ ನಿರ್ದೇಶನ ಕಿಚ್ಚ ಸುದೀಪ್‌ ಅಭಿನಯದ ವಿಕ್ರಾಂತ್‌ ರೋಣ ಪಾದಾರ್ಪಣೆ ಮಾಡಿದೆ. ಆದ್ರೆ ಯಾರ ಮೂಡಿಗೆ ಪ್ರತಿಷ್ಠಿತ 95ನೇ ಆಸ್ಕರ್ ಅಕಾಡಮಿ ಪ್ರಶಸ್ತಿ ಲಭಿಸುತ್ತೆ ಅನ್ನೋದೆ ಯಕ್ಷ ಪ್ರಶ್ನೆಯಾಗಿದೆ.

ವಿಕ್ರಾಂತ್‌ ರೋಣ ಮತ್ತು ಕಾಂತಾರ ಆಸ್ಕರ್‌ ಅರ್ಹತೆ ವಿಭಾಗದಲ್ಲಿ ಆಯ್ಕೆಯಾಗಿವೆ. ಕನ್ನಡದ ಎರಡು ಚಿತ್ರಗಳು ಈ ಬಾರಿ ಆಸ್ಕರ್ ಅಂಗಳದಲ್ಲಿವೆ. ವಿಶ್ವದಾದ್ಯಂತ ಒಟ್ಟು 301 ಸಿನಿಮಾಗಳು ಅರ್ಹತೆ ಸುತ್ತಿನಲ್ಲಿ ಪಾಸಾಗಿವೆ. ಈಗಾಗಲೇ ರಿಷಬ್‌ ಶೆಟ್ಟಿ ಕಾಂತಾರ ಸಿನಿಮಾ ಅತ್ಯುತ್ತಮ ಚಿತ್ರ ಹಾಗೂ ಅತ್ಯುತ್ತಮ ನಟ ವಿಭಾಗದ ಅರ್ಹತಾ ಸುತ್ತನ್ನು ಪಾಸ್‌ ಮಾಡಿದೆ. ಆದ್ರೆ, ಸಿನಿಮಾ ಮುಂದಿನ ಹಂತಕ್ಕೆ ಹೊಗ್ಬೇಕು ಅಂದ್ರೆ ಆಸ್ಕರ್‌ ಸದಸ್ಯರು ಮತ ಚಲಾಯಿಸಬೇಕು. ಒಂದು ವೇಳೆ ಬಹುಮತಗಳು ಬಂದ್ರೆ ಕಾಂತಾರ ಮುಂದಿನ ವಿಭಾಗಕ್ಕೆ ಹೋಗುತ್ತದೆ.

ಇದನ್ನೂ ಓದಿ: Pathaan trailer : ಜೈಹಿಂದ್‌.. ಘೋಷಣೆ, ಸೈನಿಕನ ದೇಶ ಭಕ್ತಿ, ʼಪಠಾಣ್‌ʼ ಟ್ರೇಲರ್‌ ಸೂಪರ್‌..!

‘ಹೊಂಬಾಳೆ ಫಿಲ್ಮ್ಸ್​​’ ಬ್ಯಾನರ್​ ಅಡಿ ಮೂಡಿಬಂದಿರುವ ‘ಕಾಂತಾರ’ದಲ್ಲಿ ತುಳುನಾಡಿನ ಸಂಸ್ಕೃತಿ ಕಂಬಳ, ಭೂತಕೋಲ, ದೈವಾರಾಧನೆ ಬಗ್ಗೆ ಅದ್ಭುತವಾಗಿ ಕಟ್ಟಿಕೊಡಲಾಗಿದೆ. ರಿಷಬ್​ ಶೆಟ್ಟಿಗೆ ನಾಯಕಿಯಾಗಿ ಸಪ್ತಮಿಗೌಡ ನಟಿಸಿದ್ದಾರೆ. ಅಚ್ಯುತ್​ ಕುಮಾರ್​, ಪ್ರಮೋದ್​​ ಶೆಟ್ಟಿ, ಕಿಶೋರ್​ ಸೇರಿದಂತೆ ಹಲವಾರು ನಟ-ನಟಿಯರು ಅಭಿನಯಿಸಿದ್ದಾರೆ.

ವಿಕ್ರಾಂತ್‌ ರೋಣ ನಿರ್ದೇಶಕ ಅನೂಪ್ ಅವರ ಮರ್ಡರ್ ಮಿಸ್ಟರಿ ಥ್ರಿಲ್ಲರ್ ಕಥೆ ಆಧಾರಿತ ಚಿತ್ರ. ಕರಾವಳಿ ಸೊಗಡಿನ ನಡುವೆ ಮರ್ಡರ್ ಮಿಸ್ಟರಿಯನ್ನು ಭೇದಿಸಲು ಬರುವ ಪೊಲೀಸ್ ಅಧಿಕಾರಿ ವಿಕ್ರಾಂತ್ ರೋಣ ಪಾತ್ರದಲ್ಲಿ ಸುದೀಪ್ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ವಿಕ್ರಾಂತ್ ರೋಣ ನಿಗೂಢ ಕೊಲೆಯ ಸುತ್ತ ತನ್ನದೆ ಸ್ಟೈಲ್‌ನಲ್ಲಿ  ಪ್ರಕರಣ ಭೇದಿಸುವ ರೋಚಕತೆ ಹಾಗೂ ಕೊಲೆಗಾರ ಯಾರು ಎನ್ನುವ ಸಸ್ಪೆನ್ಸ್ ಮದ್ಯ ಚಿತ್ರ ಸಾಗುತ್ತದೆ.

ಇದನ್ನೂ ಓದಿ:  ಎಷ್ಟೊಂದು ಸುಮಧುರವಾಗಿದೆ ‘ಕಡಲತೀರದ ಭಾರ್ಗವ’ ಚಿತ್ರದ ‘ಮಧುರ ಮಧುರ’ ಹಾಡು

ದಿ ಡಿವೈನ್‌ ಬ್ಲಾಕ್ಬಸ್ಟರ್‌ ಸಿನಿಮಾ ಕಾಂತಾರ ಕೇವಲ 18 ಕೋಟಿ ರೂ.ನಲ್ಲಿ ನಿರ್ಮಾಣವಾದ ಸಿನಿಮಾ. ಈ ಸಿನಿಮಾವನ್ನು ರಿಷಬ್‌ ಶೆಟ್ಟಿ ನಿರ್ದೇಶಿಸಿ ನಟಿಸಿದ್ದಾರೆ. ಬಾಕ್ಸ್ ಆಫೀಸ್‍ನಲ್ಲಿ ಕಾಂತಾರ ಬರೋಬ್ಬರಿ 400 ಕೋಟಿ ರೂ.ಗೂ ಹೆಚ್ಚಿ ಗಳಿಕೆ ಮಾಡಿದೆ. ಅಲ್ಲದೆ, ರಿಷಬ್‌ ನಟನೆಗೆ ಭಾರತೀಯ ಚಿತ್ರರಂಗದ ದಿಗ್ಗಜರು ಸಹ ಶಬ್ಬಾಸ್‌ಗಿರಿ ನೀಡಿದ್ದರು. ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಯಲ್ಲಿ ರಿಲೀಸ್ ಆಗಿತ್ತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News