Mahesh-Rajamouli: ಟಾಲಿವುಡ್‌ ಪ್ರಿನ್ಸ್‌ಗೆ ಖಡಕ್‌ ವಾರ್ನಿಂಗ್‌ ಕೊಟ್ಟ ರಾಜಮೌಳಿ! ಕಾರಣವೇನು?

Rajamouli: ಪ್ಯಾನ್‌ ಇಂಡಿಯಾ ಸ್ಟಾರ್‌ ಡೈರೆಕ್ಟರ್‌  ರಾಜಮೌಳಿ ಮತ್ತು ಮಹೇಶ್‌ ಬಾಬು ಇಬ್ಬರೂ ಒಟ್ಟಾಗಿ ಸಿನಿಮಾವೊಂದು ಮಾಡಲಿದ್ದು,  ಸದ್ಯ ಶೂಟಿಂಗ್‌ ಪ್ರಾರಂಭವಾಗುವ ಮುಂಚೆಯೇ  ರಾಜಮೌಳಿ ನಟ ಮಹೇಶ್‌ ಬಾಬು ಖಡಕ್‌ ಆಗಿ ವಾರ್ನಿಂಗ್‌ ಕೊಟ್ಟಿದ್ದಾರೆ.  ಇಲ್ಲಿದೆ ಇದರ ಸಂಪೂರ್ಣ ಮಾಹಿತಿ.  

Written by - Zee Kannada News Desk | Last Updated : Feb 23, 2024, 10:09 AM IST
  • ಇದೇ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಶೂಟಿಂಗ್ ಆರಂಭವಾಗುವ ಸಾಧ್ಯತೆಗಳಿದ್ದು, ಎಸ್ ಎಸ್ ರಾಜಮೌಳಿ ನಟ ಮಹೇಶ್‌ ಬಾಬುಗೆ ಒಂದು ಖಡಕ್ ಸೂಚನೆ ನೀಡಿದ್ದಾರೆ ಅಂತೆ.
  • ಮಹೇಶ್‌ ಬಾಬು ಹೊಸ ಗೆಟಪ್‌ ಗೆಟಪ್ ಹೇಗಿದೆ ಎಂಬುದು ಯಾರಿಗೂ ಗೊತ್ತಾಗಬಾರದೆಂದು ಖಡಕ್ ಸೂಚನೆ ನೀಡಿದ್ದಾರೆ.
  • ಮೊದಲಿನಿಂದಲೂ ಡೈರೆಕ್ಟರ್‌ ರಾಜಮೌಳಿ ಸಿನಿಮಾ ಅಂದ್ರೇ ಹೈ ಬಜೆಟ್‌ ಆಗಿರುತ್ತದೆ ಎಂದು ತಿಳಿದು ಬಂದಿದ್ದು, ಸದ್ಯ ಮಹೇಶ್‌ ಬಾಬು ಹಾಗೂ ರಾಜಮೌಳಿ ಕಾಂಬೋದ ಚಿತ್ರ ಸಹ ಬಜೆಟ್‌ ಮ್ಯಾಟರ್‌ನಲ್ಲಿ ಎಲ್ಲರ ಗಮನ ಸೆಳೆಯುವಂತಾಗುತ್ತಿದೆ.
Mahesh-Rajamouli: ಟಾಲಿವುಡ್‌ ಪ್ರಿನ್ಸ್‌ಗೆ ಖಡಕ್‌ ವಾರ್ನಿಂಗ್‌ ಕೊಟ್ಟ ರಾಜಮೌಳಿ! ಕಾರಣವೇನು? title=

Rajamouli Warns Mahesh Babu: ಟಾಲಿವುಡ್‌ ನಟ ಪ್ರಿನ್ಸ್‌ ಮಹೇಶ್‌ ಬಾಬು ಹಾಗೂ ಡೈರೆಕ್ಟರ್‌ ರಾಜಮೌಳಿ ಕಾಂಬೋದಲ್ಲಿ ಹೊಸ ಸಿನಿಮಾವೊಂದು ಮೂಡಿಬರುವ ವಿಷಯ ಈಗಾಗಲೇ ಎಲ್ಲರಿಗೂ ತಿಳಿದಿದೆ.  ಈ ಚಿತ್ರ ಇದೇ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಶೂಟಿಂಗ್ ಆರಂಭವಾಗುವ ಸಾಧ್ಯತೆಗಳಿದ್ದು, ಇದರ ಮಧ್ಯೆಯೇ ಎಸ್ ಎಸ್ ರಾಜಮೌಳಿ ನಟ ಮಹೇಶ್‌ ಬಾಬುಗೆ ಒಂದು ಖಡಕ್ ಸೂಚನೆ ನೀಡಿದ್ದಾರೆ ಅಂತೆ. ಅದೇನೂ ಅಂದರೇ  ನಟ ಮಹೇಶ್‌ ಬಾಬು ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳಬಾರದು ಅಂತ ಹೇಳಿದ್ದಾರೆ.

ಹೌದು... ಮಹೇಶ್‌ ಬಾಬು ತಮ್ಮ  ಕುಟುಂಬ ಸದಸ್ಯರ ಜೊತೆಗೆ ಓಡಾಡುತ್ತಿದ್ದು, ಆಗಾಗ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾರೆ.  ಆದರೇ ಇನ್ಮೇಲೆ ಇದೆಲ್ಲಾ ಕೆಲವು ಕಾಲ ಬಂದ್‌  ಆಗಲಿದೆ.  ಇದಕ್ಕೆ ಕಾರಣ ಡೈರೆಕ್ಟರ್‌ ರಾಜಮೌಳಿ ತಮ್ಮ ಸಿನಿಮಾದ ಹೀರೋಗಳ ಲುಕ್‌ನಿಂದ ಹಿಡಿದು ಪ್ರತಿ ಚಲನವಲನದ ಮೇಲೂ ಕಣ್ಣಿಡುತ್ತಿರುವುದರಿಂದ ಈ ಚಿತ್ರಕ್ಕಾಗಿ ಮಹೇಶ್‌ ಬಾಬು ತಮ್ಮ ಲುಕ್‌ ಬದಲಿಸಿಕೊಳ್ಳಲಿದ್ದಾರೆ.  ಹಾಗೆಯೇ ಈ ನಟ ಬಾಡಿ ಬಿಲ್ಡ್ ಕೂಡ ಮಾಡಲಿದ್ದಾರೆ.  ಆದರಿಂದ ಈ ನಟನ ಹೊಸ ಗೆಟಪ್‌ ಗೆಟಪ್ ಹೇಗಿದೆ ಎಂಬುದು ಯಾರಿಗೂ ಗೊತ್ತಾಗಬಾರದೆಂದು ಖಡಕ್ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಈ ನಟಿ ಮಾಡಿದ ಆ ಒಂದು ತಪ್ಪು ʻಶ್ರೀದೇವಿʼಗೆ ಸ್ಟಾರ್ ಪಟ್ಟ ನೀಡಿತು.!

ಸದ್ಯ ರಾಜಮೌಳಿ ಮತ್ತು ಮಹೇಶ್‌ ಬಾಬು ಕಾಂಬಿನೇಷನ್‌ನ ಈ ಸಿನಿಮಾಕ್ಕೆ 'ಮಹಾರಾಜ್'  ಅಥವಾ  'ಚಕ್ರವರ್ತಿ' ಎಂಬ ಟೈಟಲ್‌ ಈ ಚಿತ್ರದ ನಿರ್ದೇಶಕ ಯೋಚನೆ ಮಾಡಿದ್ದಾರೆಂಬ ಮಾಹಿತಿ ದೊರಕಿದೆ.   ಆದರಿಂದ ಇವೆರಡು ಹೆಸರುಗಳಲ್ಲಿ  ಯಾವ ಹೆಸರು ಫಿಕ್ಸ್ ಆಗಲಿದೆ ಅಥವಾ ಬೇರೆಯೇ ಟೈಟಲ್ ಫೈನಲ್‌ ಆಗಲಿದೆಯೇ ಎಂಬ ಚರ್ಚೆ ಇದೀಗ ಸೋಷಿಯಲ್‌ ಮಿಡಿಯಾದಲ್ಲಿ ಶುರುವಾಗಿದೆ. ಇದರ ಜೊತಗೆ ಈ ಸಿನಿಮಾ  ಎರಡು ಪಾರ್ಟ್‌ನಲ್ಲಿ ಬರಲಿದೆ ಎಂಬ ವಿಚಾರ ತಿಳಿದು ಬಂದಿದೆ.  ಮತ್ತೆ ಇನ್ನೂ ಬಜೆಟ್‌ ವಿಚಾರದಲ್ಲಿಯೂ ಕೂಡ ಸದ್ದು ಮಾಡ್ತಾಯಿದೆ.

ಮೊದಲಿನಿಂದಲೂ ಡೈರೆಕ್ಟರ್‌  ರಾಜಮೌಳಿ ಸಿನಿಮಾ ಅಂದ್ರೇ ಹೈ ಬಜೆಟ್‌ ಆಗಿರುತ್ತದೆ ಎಂದು ತಿಳಿದು ಬಂದಿದ್ದು,  ಸದ್ಯ ಮಹೇಶ್‌ ಬಾಬು  ಹಾಗೂ ರಾಜಮೌಳಿ ಕಾಂಬೋದ  ಚಿತ್ರ ಸಹ  ಬಜೆಟ್‌ ಮ್ಯಾಟರ್‌ನಲ್ಲಿ  ಎಲ್ಲರ ಗಮನ ಸೆಳೆಯುವಂತಾಗುತ್ತಿದೆ. ಇನ್ನೂ ಈ ಸಿನಿಮಾ ಸುಮಾರು ಒಂದು ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿ ಎಂಬ ಮಾತು ಹರಿದಾಡುತ್ತಿದೆ.  ಹಾಗೇ ಈ ಸಿನಿಮಾದಲ್ಲಿ ನಟ  ನಾಗಾರ್ಜುನ ಕೂಡ ಕಾಣಿಸಿಕೊಳ್ಳಲಿದ್ದು, ಮುಖ್ಯ ಪಾತ್ರವನ್ನು ನಿರ್ವಹಿಸಿಕೊಳ್ಳಲಿದ್ದಾರೆ. ಇದು ಖಲಿತ ಎನ್ನಲಾಗಿದ್ದು, ಆದರೆ ಇಲ್ಲಿಯವರೆಗೂ ಚಿತ್ರತಂಡ ಯಾವುದೇ ಮಾಹಿತಿ ನೀಡಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News