BBK10: ಸ್ನೇಹಿತ್‌ ಮೇಲೆ ಕೂಗಾಡಿದ ಕಾರ್ತಿಕ್‌: ಗಳಗಳನೇ ಕಣ್ಣೀರು ಸುರಿಸಿದ ಸಂಗೀತಾ!

Bigg Boss kannada: ಬಿಗ್ ಬಾಸ್‌ ಕನ್ನಡ ಸೀಸನ್‌ 10ರ ಕಾರ್ಯಕ್ರಮದಲ್ಲಿ ಕಾರ್ತಿಕ್ ಮಹೇಶ್ ಅನ್ನದ ವಿಚಾರಕ್ಕೆ ಸ್ನೇಹಿತ್‌ ಕೊಂಚ ಜಾಸ್ತಿ ಅನ್ನ ಬಡಿಸಿಕೊಂಡರು ಎಂದು ಕೂಗಾಡಿದಾಗ, ಅದನ್ನು ಅಪಾರ್ಥ ಮಾಡಿಕೊಂಡ ಸಂಗೀತಾ ತನಗೆ ಹೇಳಿದರು ಎಂದು ಗಳಗಳನೇ ಕಣ್ನೀರಿಟ್ಟರು. 

Written by - Zee Kannada News Desk | Last Updated : Nov 22, 2023, 11:12 AM IST
  • ಕಾರ್ತಿಕ್ ಸ್ನೇಹಿತ್ ಹೆಚ್ಚು ಬಡಿಸಿಕೊಂಡಿದ್ದನ್ನ ಕಂಡು ಏನಿದು ಎಂದು ಕೇಳಿದರು. ಅದಕ್ಕೆ ವಿನಯ್ ನಾನು ಹಾಲು ಕುಡಿದೆ. ಎಲ್ಲರೂ ತಿನ್ನಲಿ ಅಂತ ಹೇಳಿದರು.
  • ವಿನಯ್ ಅರ್ಧ ಅರ್ಧ ತಿನ್ನೋಣ ಬಾ ಎಂದು ಕಾರ್ತಿಕ್‌ಗೆ ಹೇಳಿದಾಗ, ಸಿರಿಯು ಸಹ ಶೇರ್ ಮಾಡೋಣ ಬನ್ನಿ ಕಾರ್ತಿಕ್ ಎಂದು ಕರೆದರು.
  • ಸಂಗೀತಾ ನನಗೆ ಹೊಟ್ಟೆ ಹಸಿದಿತ್ತು. ನಾನಿನ್ನೂ ಊಟ ಬಾಯಿಗೆ ಹಾಕಿರಲಿಲ್ಲ. ಯಾರಾದರೂ ಅನ್ನದ ಬಗ್ಗೆ ಹಾಗೆ ಮಾತನಾಡುತ್ತಾರಾ? ನನಗೇನೂ ಬೇಡ ಎಂದು ಅತ್ತರು.
BBK10: ಸ್ನೇಹಿತ್‌ ಮೇಲೆ ಕೂಗಾಡಿದ ಕಾರ್ತಿಕ್‌: ಗಳಗಳನೇ ಕಣ್ಣೀರು ಸುರಿಸಿದ ಸಂಗೀತಾ! title=

Karthik Scolded Snehith:ಬಿಗ್‌ಬಾಸ್‌ ಮನೆಯಲ್ಲಿ ಕಾರ್ತಿಕ್ ಸ್ನೇಹಿತ್‌ ಹೆಸರನ್ನು ತೆಗೆದುಕೊಳ್ಳದೇ  ಆತನ ಮೇಲೆ ಕೂಗಾಡಿದರೆ, ಇತ್ತ ಸಂಗೀತಾ ಅದನ್ನ ಪರ್ಸನಲ್ ಆಗಿ ತಗೊಂಡು ಗಳಗಳನೆ ಕಣ್ಣೀರು ಹಾಕಿದ್ದಾರೆ. ಕಾರ್ತಿಕ್  ಅನ್ನ ಖಾಲಿನಾ ಅಂತ ಸಿರಿಗೆ ಕೇಳಿದಾಗ ಇಷ್ಟೇ ಇರೋದು ಈಗ.. ಯಾರ್ಯಾರು ಇದ್ದಾರೋ ಇನ್ನೂ ಇಷ್ಟರಲ್ಲೇ ತಿನ್ನಬೇಕು ಎಂದರು. ಆಗ ಕಾರ್ತಿಕ್ ಸ್ನೇಹಿತ್ ಹೆಚ್ಚು ಬಡಿಸಿಕೊಂಡಿದ್ದನ್ನ ಕಂಡು ಏನಿದು ಎಂದು ಕೇಳಿದರು. ಅದಕ್ಕೆ ವಿನಯ್ ನಾನು ಹಾಲು ಕುಡಿದೆ. ಎಲ್ಲರೂ ತಿನ್ನಲಿ ಅಂತ ಹೇಳಿದರು. ಅದಕ್ಕೆ ಕಾರ್ತಿಕ್‌ ತಲೆಯಲ್ಲಿ ಇರಬೇಕು. ಏನಾದರೂ ಮಾಡಲಿ.. ಎಷ್ಟಾದರೂ ಟಾಸ್ಕ್ ಇರಲಿ.. ಎಲ್ಲರೂ ಊಟ ಮಾಡಬೇಕು ಅನ್ನೋದು ತಲೆಯಲ್ಲಿ ಇರಬೇಕು.

ಅದಕ್ಕೆ ವಿನಯ್ ಅರ್ಧ ಅರ್ಧ ತಿನ್ನೋಣ ಬಾ ಎಂದು ಕಾರ್ತಿಕ್‌ಗೆ ಹೇಳಿದಾಗ, ಸಿರಿಯು ಸಹ ಶೇರ್ ಮಾಡೋಣ ಬನ್ನಿ ಕಾರ್ತಿಕ್ ಎಂದು ಕರೆದರು. ಆಗ ಕಾರ್ತಿಕ್ - ಎಲ್ಲಿ ಸಾಲುತ್ತೆ? ಯಾರಾದರೂ ಒಬ್ಬರು ಹೊಟ್ಟೆ ತುಂಬಿಸಿಕೊಳ್ಳಿ, ನಾನು ಅಡುಗೆ ಮಾಡುವಾಗೆಲ್ಲಾ, ಎಲ್ಲರಿಗೂ ಸಮಾನವಾಗಿ ಸಿಗಲಿ ಅಂತ ನನಗೆ ಕಮ್ಮಿ ಮಾಡಿಕೊಂಡು ಬಡಿಸುತ್ತೀನಲ್ವಾ.. ಇದು ನನಗೆ ಆಗಬೇಕು ಎಂದರು. ಅದನ್ನು ಅಪಾರ್ಥ ಮಾಡಿಕೊಂಡ ಸಂಗೀತಾ,ಅವರಿಗೆ ಯಾರ ಹತ್ತಿರ ಪ್ರಾಬ್ಲಂ ಆಗಿದೆ. ಅದನ್ನ ಡೈರೆಕ್ಟ್ ಆಗಿ ಹೇಳಬಹುದು ಅಲ್ವಾ ಎಂದಿದಕ್ಕೆ  ಆ ವೇಳೆ ಸಿರಿ  ಗೊತ್ತಿಲ್ಲ ಎಂದಾಗ ಸಂಗೀತಾ  ಹೀಗೆ ಹೇಳಿದರೆ ತಿನ್ನುವವರಿಗೆ ಬೇಜಾರು ಆಗಲ್ವಾ ಎಂದರು.

ಇದನ್ನೂ ಓದಿ: BBK10: ತನಿಷಾ ಹಾಗೂ ವರ್ತೂರ್‌ ಸಂತೋಷ್‌ಗೆ ಹಸಿ ಮೆಣಸಿನಕಾಯಿ ತಿನ್ನಿಸಿದ ಸಂಗೀತಾ ಶೃಂಗೇರಿ!

ಆ ವೇಳೆ ಸ್ನೇಹಿತ್  ಕಾರ್ತಿಕ್ ಬನ್ನಿ.. ನಾನು ಅರ್ಧ ಕೊಡ್ತೀನಿ ಎಂದಾಗ ಕಾರ್ತಿಕ್ - ಮಾಡಿ ಸ್ನೇಹಿತ್, ಹಾಕಿಕೊಳ್ಳುವ ಮುನ್ನ ಯೋಚನೆ ಮಾಡಬೇಕಿತ್ತು. ಮನೆಯಲ್ಲಿರುವ ಎಲ್ಲರಿಗೂ ಊಟ ಸರಿಹೋಗಬೇಕು ಅಂತ ಯೋಚನೆ ಮಾಡಿಬಿಟ್ಟು ಹಾಕೋಬೇಕು. ನಾನು ಯಾರಿಗಾದರೂ ಹೆಚ್ಚು, ಕಮ್ಮಿ ಬಡಿಸಿದ್ದೀನಾ? ಇಲ್ಲ ತಾನೇ? ಅಂತ ಮಾತನಾಡಿದಾಗ ವಿನಯ್, ತಿನ್ನುವಾಗ ಮಾತಾಡಬೇಡ ಎಂದರು. ಆಗ ಕಾರ್ತಿಕ್ ಇದು ಮತ್ತೆ ರಿಪೀಟ್ ಆಗಬಾರದು ಅಂತ ಹೇಳ್ತಿರೋದು, ತಿನ್ನುವವರು ಯೋಚನೆ ಮಾಡಬೇಕು, ಎಲ್ಲರಿಗೂ ಸಾಲಬೇಕು ಅಂತ ಹೇಳಿದಾಗ, ವಿನಯ್ ಅಕ್ಕಿ ಇದೆ ಅಲ್ವಾ ಮನೆಯಲ್ಲಿ. ಇರೋದ್ರಲ್ಲಿ ಹಂಚಿಕೊಂಡು ತಿನ್ನೋಣ ಎಂದು ಹೇಳಿದರು.

ಆ ಸಮಯದಲ್ಲಿ ಸಂಗೀತಾ "ನನಗೆ ಹೊಟ್ಟೆ ಹಸಿದಿತ್ತು. ನಾನಿನ್ನೂ ಊಟ ಬಾಯಿಗೆ ಹಾಕಿರಲಿಲ್ಲ. ಯಾರಾದರೂ ಅನ್ನದ ಬಗ್ಗೆ ಹಾಗೆ ಮಾತನಾಡುತ್ತಾರಾ? ನನಗೇನೂ ಬೇಡ. ನನಗೆ ಇಲ್ಲಿ ಬಂದಿದ್ದೇ ಸಾಕಾಗಿದೆ. ಊಟಕ್ಕೋಸ್ಕರ ಇಷ್ಟು ಮಾತಾಡ್ತೀವಿ ಅಂದ್ರೆ ನಾವು ದುಡಿಯೋದೇ ತಿನ್ನೋಕೆ. ತಿನ್ನಲು ಈಗ ಮನಸ್ಸಿಲ್ಲ. ತಟ್ಟೆಗೆ ಹಾಕೊಂಡಿರುವಾಗ ಜಾಸ್ತಿ ಹಾಕೊಂಡಿದ್ದೀರಾ ಅಂದ್ರೆ ಬೇಜಾರಾಗಲ್ವಾ? ಇಲ್ಲಿ ಎಷ್ಟು ದಿನ ಇರ್ತೀನೋ.. ಅಷ್ಟು ದಿನ ಬರೀ ಹಣ್ಣು ತಿಂದು ಇರುತ್ತೇನೆ. ತಿನ್ನುವಾಗ ಅವರು ಯಾಕೆ ಹೇಳಬೇಕು?" ಎಂದು ಗಳಗಳನೆ ಅತ್ತುಬಿಟ್ಟರು.ಸಂಗೀತಾ  ಗೋಳಾಟ ಕಂಡ ಕಾರ್ತಿಕ್‌, "ನಾನು ಅವಳಿಗೆ ಹೇಳಿಲ್ಲ. ಅವರು ಮನಸ್ಸಿಗೆ ತಗೊಂಡರೆ ನಾನೇನೂ ಮಾಡೋಕೆ ಆಗಲ್ಲ. ಎಲ್ಲಾ ನನಗೇ ಹೇಳಿದರು, ನನಗೇ ಮಾಡಿದರು ಅಂದುಕೊಂಡರೆ ನಾನೇನು ಮಾಡಲಿ? ನಾನು ಸ್ನೇಹಿತ್‌ಗೆ ಹೇಳ್ತಿರೋದು" ಎಂದು ಕಾರ್ತಿಕ್ ಸ್ಪಷ್ಟಪಡಿಸಿದ ಬಳಿಕ ಸಂಗೀತಾ ಅನ್ನ-ಸಾರು ಊಟ ಮಾಡಿದರು. ವಿನಯ್‌ಗೂ ಸಂಗೀತಾ ತಿನ್ನಿಸಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News