BBK10: ತನಿಷಾ ಹಾಗೂ ವರ್ತೂರ್‌ ಸಂತೋಷ್‌ಗೆ ಹಸಿ ಮೆಣಸಿನಕಾಯಿ ತಿನ್ನಿಸಿದ ಸಂಗೀತಾ ಶೃಂಗೇರಿ!

Bigg Boss Season 10: ಬಿಗ್‌ಬಾಸ್‌ ಮನೆಯಲ್ಲಿ ಸಂಗೀತಾ, ತನ್ನ ಎದುರಾಳಿ ತಂಡದ ತನಿಷಾ ಮತ್ತು ವರ್ತೂರ್‌ ಸಂತೋಷ್‌ಗೆ ಹಸಿ ಮೆಣಸಿನ ಕಾಯಿ ಸವಾಲ್‌ ಎಸಗಿ ಇವರಿಬ್ಬರು ತಿನ್ನುವಂತೆ ಮಾಡಿದ್ದಾರೆ.  

Written by - Zee Kannada News Desk | Last Updated : Nov 21, 2023, 05:33 PM IST
  • ಬಿಗ್‌ಬಾಸ್‌ ಮನೆಯ 'ಗಜಕೇಸರಿ' ಹಾಗೂ 'ಸಂಪತ್ತಿಗೆ ಸವಾಲ್' ತಂಡಗಳ ನಡುವಿನ ಟಾಸ್ಕ್‌ಗಳಲ್ಲಿ ತಿಕ್ಕಾಟವನ್ನು ಮತ್ತಷ್ಟು ಹೆಚ್ಚಿಸಿದೆ.
  • ಸಂಗೀತಾ ತಮ್ಮ ಎದುರಾಳಿ ತಂಡದ ತುಕಾಲಿ ಹಾಗೂ ಕಾರ್ತಿಕ್ ಕ್ಲೀನ್ ಶೇವ್ ಮಾಡಿಕೊಳ್ಳಬೇಕು ಎನ್ನುವ ಸವಾಲು ನೀಡಿದರು.
  • ಇಬ್ಬರು ಕಷ್ಟ ಬೀಳುವುದನ್ನು ನೋಡಿ ಉಳಿದ ಸ್ಪರ್ಧಿಗಳ ಕಂಗಾಲಾಗಿ, ಟಾಸ್ಕ್ ಸಾಕು ನಿಲ್ಲಿಸಿ ಎಂದರೂ ಕೇಳದೇ ಕಷ್ಟ ಬಿದ್ದು ಇಬ್ಬರೂ ಮೆಣಸಿನ ಕಾಯಿ ತಿಂದಿದ್ದಾರೆ.
BBK10: ತನಿಷಾ ಹಾಗೂ ವರ್ತೂರ್‌ ಸಂತೋಷ್‌ಗೆ ಹಸಿ ಮೆಣಸಿನಕಾಯಿ ತಿನ್ನಿಸಿದ ಸಂಗೀತಾ ಶೃಂಗೇರಿ! title=

Varthur Santosh and Tanisha: ಬಿಗ್‌ಬಾಸ್‌ ಮನೆಯಲ್ಲಿ 7ನೇ ವಾರ 'ಗಜಕೇಸರಿ' ಹಾಗೂ 'ಸಂಪತ್ತಿಗೆ ಸವಾಲ್' ಎಂಬ ಎರಡು ತಂಡಗಳಾಗಿದ್ದು, ಈ ತಂಡಗಳ ನಡುವಿನ ಟಾಸ್ಕ್‌ಗಳಲ್ಲಿ ತಿಕ್ಕಾಟವನ್ನು ಮತ್ತಷ್ಟು ಹೆಚ್ಚಿಸಿದ್ದು, 6 ವಾರಗಳ ಬಳಿಕ ಆಟ ಮತ್ತಷ್ಟು ರೋಚಕ ಘಟ್ಟ ತಲುಪಿದೆ. ಸ್ಪರ್ಧಿಗಳು ಒಬ್ಬರನ್ನು ಒಬ್ಬರು ನಂಬಲು ಸಿದ್ಧರಾಗದೆ, ವೈಯಕ್ತಿಕ ದಾಳಿ, ಆರೋಪ ಪ್ರತ್ಯಾರೋಪ ಹೆಚ್ಚಾಗುತ್ತಿದೆ. ಸ್ನೇಹಿತರಾಗಿದ್ದವರೇ ಇದೀಗ ಶತ್ರುಗಳು ಎನ್ನುವಂತಾಗಿಬಿಟ್ಟಿದ್ದಾರೆ. 

ಕಳೆದ ವಾರ ಬಿಗ್‌ಬಾಸ್‌ ಮನೆಯಿಂದ ಇಬ್ಬರು ಎಲಿಮಿನೇಟ್ ಆಗಿ ಹೊರ ಬಂದ ಬಳಿಕ, ಇನ್ನುಳಿದವರು 2 ತಂಡಗಳಾಗಿ ಆಡುತ್ತಿದ್ದಾರೆ. 'ಸಂಪತ್ತಿಗೆ ಸವಾಲ್' ತಂಡದಲ್ಲಿ ತನಿಷಾ, ವರ್ತೂರು ಸಂತೋಷ್, ಮೈಕಲ್, ನೀತು, ಕಾರ್ತಿಕ್ ಹಾಗೂ ತುಕಾಲಿ ಸಂತೋಷ್ ಇದ್ದಾರೆ. ಮತ್ತೊಂದು ಕಡೆ 'ಗಜಕೇಸರಿ' ತಂಡದಲ್ಲಿ ಸ್ನೇಹಿತ್, ವಿನಯ್, ಸಂಗೀತಾ, ನಮ್ರತಾ, ಸಿರಿ, ಪ್ರತಾಪ್ ಇದ್ದಾರೆ. ಈ ವಾರ ಎದುರಾಳಿ ತಂಡಕ್ಕೆ ಸವಾಲುಗಳನ್ನು ನೀಡಲು ಮತ್ತೊಂದು ತಂಡಕ್ಕೆ ಬಿಗ್‌ಬಾಸ್ ಟಾಸ್ಕ್ ನೀಡಿದ್ದಾರೆ. 

ಇದನ್ನು ಓದಿ: BBK 10: ಬಿಗ್‌ಬಾಸ್ ಮನೆಯಲ್ಲಿ ಅತಿರೇಕಕ್ಕೆ ಏರಿದ ಗೆಲ್ಲುವ ಹಟ! ರಕ್ತ ಬಂದ್ರೂ ಡೋಂಟ್ ಕೇರ್‌.. ಕಡಿವಾಣ ಬೀಳುತ್ತಾ?

ಸಂಗೀತಾ ತಮ್ಮ ಎದುರಾಳಿ ತಂಡದ ತುಕಾಲಿ ಹಾಗೂ ಕಾರ್ತಿಕ್ ಕ್ಲೀನ್ ಶೇವ್ ಮಾಡಿಕೊಳ್ಳಬೇಕು ಎನ್ನುವ ಸವಾಲು ನೀಡಿದ್ದು, ಅದಕ್ಕೆ ಇಬ್ಬರೂ ಒಪ್ಪಿದ್ದರು. ಈಗಾಗಲೇ ಇಬ್ಬರು ತಲೆ ಬೋಳಿಸಿಕೊಂಡಿದ್ದು ಮುಂದಿನ ಸವಾಲನ್ನು ಎದುರಿಸಿದ್ದಾರೆ. ಇತ್ತ ತನಿಷಾ ಹಾಗೂ ವರ್ತೂರು ಸಂತೋಷ್ ಹಸಿ ಮೆಣಸಿನ ಕಾಯಿ ತಿನ್ನಬೇಕು ಎಂದು ಸಂಗೀತಾ ಸವಾಲು ಎಸೆದಿಕೊಂಡು, ಕೂಡಲೇ ಸಂತೋಷ್ ಒಪ್ಪಿಕೊಳ್ಳಿ ಎಂದು ಹೇಳಿದ್ದರು. ಸವಾಲು ಸ್ವೀಕರಿಸಿದ ಸಂತೋಷ್, ತನಿಷಾ ಹಸಿ ಮೆಣಸಿನ ಕಾಯಿ ತಿನ್ನುತ್ತಾ ಹೋಗಿದ್ದಾರೆ. 

ಇಬ್ಬರು ಕಷ್ಟ ಬೀಳುವುದನ್ನು ನೋಡಿ ಉಳಿದ ಸ್ಪರ್ಧಿಗಳ ಕಂಗಾಲಾಗಿ, ಟಾಸ್ಕ್ ಸಾಕು ನಿಲ್ಲಿಸಿ ಎಂದರೂ ಕೇಳದೇ ಕಷ್ಟ ಬಿದ್ದು ಇಬ್ಬರೂ ಮೆಣಸಿನ ಕಾಯಿ ತಿಂದಿದ್ದಾರೆ. ಪಟ್ಟು ಬಿಡದೇ ಗೆಲ್ಲಲು ಹಠ ಸಾಧಿಸಿದ್ದಾರೆ. "ಸವಾಲೆಸೆಯೋ ಆಟದಲ್ಲಿ ಸೋತು ಗೆಲ್ಲೋರು ಯಾರು? ಗೆದ್ದು ಸೋಲೋರು ಯಾರು?" ಎಂದು ಪ್ರೋಮೊ ರಿಲೀಸ್ ಆಗಿ ವೈರಲ್ ಆಗಿದೆ. "ಟಾಸ್ಕ್ ಮಾಡಬಾರ್ದು ಅಂತ ನಾವು ಕೊಡುತ್ತಿರೋದು. ಅವ್ರು ಮಾಡ್ತಿದ್ದಾರೆ. ಅದು ನಮ್ಮ ತಪ್ಪಲ್ಲ, ಅವರ ತಪ್ಪು" ಎನ್ನುವ ವಿನಯ್ ಮಾತು ಪ್ರೋಮೊದಲ್ಲಿ ಹೈಲೆಟ್ ಆಗಿದೆ. ಬ್ರಹ್ಮಾಂಡ ಗುರೂಜಿ ಸಾಕು ಬಿಡ್ರೋ ಎಂದರೂ ಕೇಳದೇ ಇಬ್ಬರೂ ಮೆಣಸಿನ ಕಾಯಿ ತಿಂದಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News