BBK 10: ದೊಡ್ಮನೆಯಲ್ಲಿ ಸಂಗೀತಾ-ಪ್ರತಾಪ್‌ ಕಣ್ಣಿಗೆ ಬಲವಾದ ಪಟ್ಟು ಬಿದಿದ್ದು ನಿಜಾನಾ ಅಥವಾ Sympathy ಗಿಟ್ಟಿಸಿಕೊಳ್ಳುತ್ತಿದ್ದಾರಾ?

Bigg Boss Kannada: ಇತ್ತೀಚೆಗೆ ಬಿಗ್‌ ಬಾಸ್‌ ಮನೆಯಲ್ಲಿ ಎಲ್ಲವೂ ಕಾಮನ್‌ ಎನ್ನುವಂತಾಗಿದೆ.. ಟಾಸ್ಕ್‌ನಲ್ಲಿ ಮನುಷ್ಯತ್ವವನ್ನೇ ಮರೆತು ಸೋಪು ನೀರು ಎರಚಿ ರಾಕ್ಷಸರ ತಂಡ ಕ್ರೌರ್ಯ ಮರೆದಿದೆ.. ಆದರೆ ಇದೀಗ ಸಂಗೀತಾ ಹಾಗೂ ಪ್ರತಾಪ್‌ ಕಣ್ಣಿಗೆ ಬಲವಾಗಿ ಪೆಟ್ಟಾಗಿದೆಯಾ ಅಥವಾ ನಾಟಕ ಮಾಡುತ್ತಿದ್ದಾರಾ? ಎನ್ನುವುದೇ ವೀಕ್ಷಕರ ಪ್ರಶ್ನೆ..  

Written by - Savita M B | Last Updated : Dec 11, 2023, 08:46 AM IST
  • ಬಿಗ್‌ ಬಾಸ್‌ ಮನೆಯಲ್ಲಿ ಒಂಬತ್ತನೇ ವಾರ ‘ರಾಕ್ಷಸರು ವರ್ಸಸ್ ಗಂಧರ್ವರು’ ಟಾಸ್ಕ್‌ ನೀಡಲಾಗಿತ್ತು.
  • ಇನ್ನು ವಾರದ ಕಥೆ ಕಿಚ್ಚನ ಜೊತೆ ನಡೆಯುವ ಸಂದರ್ಭದಲ್ಲಿ ಸಂಗೀತಾ ಡ್ರೋನ್‌ ಬಿಗ್‌ ಬಾಸ್‌ ಮನೆಗೆ ವಾಪಸ್ಸಾದರು.
  • ಇಬ್ಬರ ಕಣ್ಣಿಗೂ ಬಲವಾಗಿ ಪೆಟ್ಟಾಗಿದ್ದರಿಂದ ಕನ್ನಡಕ ಧರಿಸಿದ್ದರು..
BBK 10: ದೊಡ್ಮನೆಯಲ್ಲಿ ಸಂಗೀತಾ-ಪ್ರತಾಪ್‌ ಕಣ್ಣಿಗೆ ಬಲವಾದ ಪಟ್ಟು ಬಿದಿದ್ದು ನಿಜಾನಾ ಅಥವಾ Sympathy ಗಿಟ್ಟಿಸಿಕೊಳ್ಳುತ್ತಿದ್ದಾರಾ?  title=

BBK 10: ಬಿಗ್‌ ಬಾಸ್‌ ಮನೆಯಲ್ಲಿ ಒಂಬತ್ತನೇ ವಾರ ‘ರಾಕ್ಷಸರು ವರ್ಸಸ್ ಗಂಧರ್ವರು’ ಟಾಸ್ಕ್‌ ನೀಡಲಾಗಿತ್ತು. ಇದರ ಅನುಸಾರ ‘ಚೇರ್‌ ಆಫ್‌ ಥಾರ್ನ್ಸ್’ ಎನ್ನುವ ಆಟವನ್ನು ಕೊಡಲಾಗಿತ್ತು.. ಇದರಲ್ಲಿ ಸಂಗೀತಾ ಹಾಗೂ ಡ್ರೋನ್‌ ಪ್ರತಾಪ್‌ ಮೇಲೆ ರಕ್ಕಸ ತಂಡದವರು ಅಂದರೆ.. ವರ್ತೂರು ಸಂತೋಷ್‌, ವಿನಯ್, ನಮ್ರತಾ, ಪವಿ ಪೂವಪ್ಪ, ಮೈಕಲ್ ಹಾಗೂ ತುಕಾಲಿ ಸಂತು ಸೋಪು ನೀರನ್ನು ಮೇಲಿಂದ ಮೇಲೆ ಎರಚಿರುವ ಕಾರಣ ಅವರು ಅವರಿಬ್ಬರು ಆಸ್ಪತ್ರೆಗೆ ದಾಖಲಾಗಿದ್ದರು.. ಇದು ವೀಕ್ಷಕರ ಕೆಂಗಣ್ಣಿಗೆ ಕಾರಣವಾಗಿದೆ.. 

ಇನ್ನು ವಾರದ ಕಥೆ ಕಿಚ್ಚನ ಜೊತೆ ನಡೆಯುವ ಸಂದರ್ಭದಲ್ಲಿ ಸಂಗೀತಾ ಡ್ರೋನ್‌ ಬಿಗ್‌ ಬಾಸ್‌ ಮನೆಗೆ ವಾಪಸ್ಸಾದರು.. ಇಬ್ಬರಿಗೂ ಕಣ್ಣಿಗೆ ಬಲವಾಗಿ ಪೆಟ್ಟಾಗಿದ್ದರಿಂದ ಕನ್ನಡಕ ಧರಿಸಿದ್ದರು.. ಅದನ್ನು ನೋಡಿದ ತನಿಷಾ ಹಾಗೂ ಕಾರ್ತಿಕ್‌ ಕಣ್ಣೀರು ಹಾಕಿದರು.. ತುಕಾಲಿ.. ವರ್ತೂರು ಗಾಬರಿಯಾದರು.. 

ಇದನ್ನೂ ಓದಿ-ಹೊಸ ಪ್ರೊಡಕ್ಷನ್ ಹೌಸ್ ಘೋಷಿಸಿದ ಸಮಂತಾ… ನಿರ್ಮಾಣ ಸಂಸ್ಥೆಗೆ ಸ್ಯಾಮ್ ಇಟ್ಟಿದ್ದು ಈ ಹೆಸರು

ಮನೆಮಂದಿ ಎಲ್ಲರೂ ಸಂಗೀತಾ ಹಾಗೂ ಡ್ರೋನ್‌ಗೆ ಏನಾಯ್ತು ಎಂದು ವಿಚಾರಿಸುತ್ತಿದ್ದರೆ.. ಮಾನವೀಯತೆಯನ್ನೇ ಮರೆತು ಕ್ರೌರ್ಯ ಮೆರೆದ ವಿನಯ್‌ ಮತ್ತು ನಮ್ರತಾ ಮಾತ್ರ ಅವರಿಬ್ಬರ ಹತ್ತಿರ ಬರಲೇ ಇಲ್ಲ.. ಡ್ರೋನ್‌ ಹಾಗೂ ಸಂಗೀತಾ ಅವರನ್ನು ಮಾತಾಡಿಸಲೂ ಇಲ್ಲ.. ಇಬ್ಬರೂ ಹೇಗಿದ್ದಾರೆ ಎಂದು ರಾಕ್ಷಸರ ತಂಡ ವಿಚಾರಿಸದೇ ನೆಟ್ಟಿಗರ ಆಕ್ರೋಶಕ್ಕೆ ಕಾಣವಾಯ್ತು..

ಆದರೆ ಸದ್ಯ ವೀಕ್ಷಕರಲ್ಲಿ ಮೂಡಿರುವ ಪ್ರಶ್ನೆ ಏನೆಂದರೇ ಈ ಹಿಂದೆ ತಂಡ ಬದಲಿಸಿದ ಸಂಗೀತಾ ಇದೀಗ ಅದೇ ತಂಡದ ವಿರುದ್ಧವಾಗಿದ್ದಾರೆ.. ಹೀಗಾಗಿ ಇಲ್ಲಿ ಡ್ರೋನ್‌ ಹಾಗೂ ಸಂಗೀತಾ ಜನರಿಂದ sympathy ಗಿಟ್ಟಿಸಿಕೊಳ್ಳುತ್ತಿದ್ದಾರಾ? ಅಥವಾ ಅವರ ಕಣ್ಣಿಗೆ ಪೆಟ್ಟಾಗಿದ್ದು ನಿಜನಾ? ಅನ್ನೋದು.. ಸದ್ಯದ ಮಾಹಿತಿಯ ಪ್ರಕಾರ ಅವರಿಬ್ಬರ ಕಣ್ಣಿಗೆ ಗಾಯವಾಗಿದ್ದು ನಿಜ.. ಏಕೆಂದರೆ ಅಮಾನವೀಯ ರೀತಿಯಲ್ಲಿ ವಿನಯ್‌ ಅವರ ಮೇಲೆ ದಾಳಿ ಮಾಡಿದ್ದನ್ನು ನಾವೆಲ್ಲರೂ ಕಣ್ಣಾರೆ ನೋಡಿದ್ದೇವೆ.. 

ಇದನ್ನೂ ಓದಿ-“ಎಲ್ಲವೂ ಹೇಳಿದೆ, ಎಲ್ಲವನ್ನೂ ಮಾಡಿದೆ”- ಸೊಸೆ ಐಶ್ವರ್ಯಾರನ್ನ ಅನ್’ಫಾಲೋ ಮಾಡಿದ ಬೆನ್ನಲ್ಲೇ ಅಮಿತಾಬ್ ವಿಚಿತ್ರ ಪೋಸ್ಟ್!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News