ಸೊಸೆಯಾಗಿ ಬಂದ ಐಶ್ವರ್ಯಾಗೆ ಆ ಮಾತು ಕೊಟ್ಟಿದ್ದ ಅಮಿತಾಬ್!‌ ಆದ್ರೆ ಅದನ್ನು ಉಳಿಸಿಕೊಳ್ಳಲೇ ಇಲ್ಲ ಬಚ್ಚನ್‌ ಫ್ಯಾಮಿಲಿ...

Amitabh Bachchan promise Aishwarya Rai: 2008ರಲ್ಲಿ ಬಿಗ್ ಬಿ, ಅಭಿಷೇಕ್, ಜಯಾ ಮತ್ತು ಐಶ್ವರ್ಯ ರೈ ಬಚ್ಚನ್ ಅವರೊಂದಿಗೆ ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯ ದೌಲತ್‌ಪುರ ಗ್ರಾಮದಲ್ಲಿ ಐಶ್ವರ್ಯಾ ಹೆಸರಿನಲ್ಲಿ ಕಾಲೇಜಿಗೆ ಅಡಿಪಾಯ ಹಾಕಿದ್ದರು. ಅಂದಿಗೆ ಇದು ಹೆಮ್ಮೆ ಮತ್ತು ಭರವಸೆಯ ಕ್ಷಣವಾಗಿತ್ತು.  

Written by - Bhavishya Shetty | Last Updated : Aug 4, 2024, 02:59 PM IST
    • ಬಾಲಿವುಡ್‌ʼನ ಪ್ರತಿಷ್ಠಿತ ಮನೆತನಗಳಲ್ಲಿ ಒಂದು ಎಂದು ಎಣಿಸಲ್ಪಟ್ಟಿರುವ ಬಚ್ಚನ್ ಕುಟುಂಬ
    • ಬಚ್ಚನ್‌ ಕುಟುಂಬವು ಇದೀಗ ವಿಚ್ಛೇದನ ವದಂತಿಯಿಂದ ಮುಖ್ಯಾಂಶದಲ್ಲಿದೆ
    • ಬಚ್ಚನ್‌ ಕುಟುಂಬವು ಇದನ್ನು 'ಐಶ್ವರ್ಯ ಬಚ್ಚನ್ ಕನ್ಯಾ ಮಹಾವಿದ್ಯಾಲಯ' ಎಂದು ಹೆಸರಿಸಿತ್ತು
ಸೊಸೆಯಾಗಿ ಬಂದ ಐಶ್ವರ್ಯಾಗೆ ಆ ಮಾತು ಕೊಟ್ಟಿದ್ದ ಅಮಿತಾಬ್!‌ ಆದ್ರೆ ಅದನ್ನು ಉಳಿಸಿಕೊಳ್ಳಲೇ ಇಲ್ಲ ಬಚ್ಚನ್‌ ಫ್ಯಾಮಿಲಿ...  title=
File Photo

Amitabh Bachchan promise Aishwarya Rai: ಬಾಲಿವುಡ್‌ʼನ ಪ್ರಖ್ಯಾತ ಮತ್ತು ಪ್ರತಿಷ್ಠಿತ ಮನೆತನಗಳಲ್ಲಿ ಒಂದು ಎಂದು ಎಣಿಸಲ್ಪಟ್ಟಿರುವ ಬಚ್ಚನ್ ಕುಟುಂಬವು ಇದೀಗ ವಿಚ್ಛೇದನ ವದಂತಿಯಿಂದ ಮುಖ್ಯಾಂಶದಲ್ಲಿದೆ. ದಶಕಗಳಿಂದ ಜನಮನ ಗೆಲ್ಲುತ್ತಿರುವ ಸ್ಟಾರ್ ಅಮಿತಾಭ್ ಬಚ್ಚನ್, ಒಂದೊಮ್ಮೆ ದೊಡ್ಡ ಭರವಸೆಯನ್ನು ನೀಡಿದ್ದರು. ಆದರೆ ಇದೀಗ ಆ ಕನಸು ಈಡೇರದೆ ಅರ್ಧಕ್ಕೆ ನಿಂತಿದೆ.

2008ರಲ್ಲಿ ಬಿಗ್ ಬಿ, ಅಭಿಷೇಕ್, ಜಯಾ ಮತ್ತು ಐಶ್ವರ್ಯ ರೈ ಬಚ್ಚನ್ ಅವರೊಂದಿಗೆ ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯ ದೌಲತ್‌ಪುರ ಗ್ರಾಮದಲ್ಲಿ ಐಶ್ವರ್ಯಾ ಹೆಸರಿನಲ್ಲಿ ಕಾಲೇಜಿಗೆ ಅಡಿಪಾಯ ಹಾಕಿದ್ದರು. ಅಂದಿಗೆ ಇದು ಹೆಮ್ಮೆ ಮತ್ತು ಭರವಸೆಯ ಕ್ಷಣವಾಗಿತ್ತು.

ಇದನ್ನೂ ಓದಿ: ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗನ ಪತ್ನಿ ಜೊತೆ ಡೇಟಿಂಗ್ ಮಾಡಿದ್ರಾ ವಿರಾಟ್!? ಕ್ಯಾಮರಾ ನೋಡ್ತಿದ್ದಂತೆ ಮುಖ ಮುಚ್ಚಿಕೊಂಡ ಸುಂದರಿ!! ಫೋಟೋ ವೈರಲ್

ಬಚ್ಚನ್‌ ಕುಟುಂಬವು ಇದನ್ನು 'ಐಶ್ವರ್ಯ ಬಚ್ಚನ್ ಕನ್ಯಾ ಮಹಾವಿದ್ಯಾಲಯ' ಎಂದು ಹೆಸರಿಸಿತ್ತು. ಇದು ಹೈಯರ್ ಸೆಕೆಂಡರಿ ವಿದ್ಯಾರ್ಥಿಗಳಿಗಾಗಿ ನಿರ್ಮಾಣ ಮಾಡಲಾಗಿದ್ದ ವಿದ್ಯಾಸಂಸ್ಥೆಯಾಗಿತ್ತು. ಆದರೆ ಇದೀಗ ಯೋಜನೆಗಳ ಹೊರತಾಗಿ, ಕಾಲೇಜು ಕೇವಲ ನೀಲನಕ್ಷೆಯಾಗಿ ಉಳಿದಿತ್ತು. ಜಯಪ್ರದಾ ಅವರ ನೇತೃತ್ವದ ನಿಷ್ಠಾ ಫೌಂಡೇಶನ್‌ʼಗೆ ಅಮಿತಾಬ್ ಯೋಜನೆಯನ್ನು ಹಸ್ತಾಂತರಿಸಿದ್ದಾರೆ ಎಂದು ವರದಿಗಳು ಹೇಳುತ್ತವೆ.

ಇದನ್ನೂ ಓದಿ: ಡಿವೋರ್ಸ್‌ ಸುದ್ದಿ ನಡುವೆ ಐಶ್ವರ್ಯಾ ರೈ ಕುರಿತು ಮೆಚ್ಚುಗೆ ಮಾತುಗಳನ್ನಾಡಿದ ಅಭಿಷೇಕ್..!

ಆದರೆ ಈ ಯೋಜನೆಯ ಬಗ್ಗೆ ಉತ್ಸುಕರಾಗಿದ್ದ ಗ್ರಾಮಸ್ಥರು ತಾವೇ ಮುತವರ್ಜಿ ವಹಿಸಿ ಈ ಶಾಲೆಯ ನಿರ್ಮಾಣಕ್ಕಾಗಿ 10,000 ಚದರ ಮೀಟರ್‌ʼಗಿಂತಲೂ ಹೆಚ್ಚು ಭೂಮಿಯನ್ನು ನೀಡಿದರು. ಗ್ರಾಮದ 40 ವರ್ಷದ ಶಿಕ್ಷಕ ಸತ್ಯವಾನ್ ಶುಕ್ಲಾ ಅವರು ಗ್ರಾಮಸ್ಥರೊಂದಿಗೆ ಉಪಕ್ರಮದ ನೇತೃತ್ವ ವಹಿಸಿ ಕಾಲೇಜಿಗೆ ಸುಮಾರು 60 ಲಕ್ಷ ರೂ. ನೀಡಿದರು. ಅಷ್ಟೇ ಅಲ್ಲದೆ, ಶುಕ್ಲಾ ಅವರ ತಂದೆ ಮತ್ತು ಸಹೋದರ ಕಾಲೇಜಿಗಾಗಿ 10,000 ಚದರ ಮೀಟರ್ ಭೂಮಿಯನ್ನು ದಾನ ಮಾಡಿ, ಕಾಲೇಜನ್ನು ಸ್ಥಾಪಿಸಿದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News