ಪಿತೃ ಪಕ್ಷದಲ್ಲಿ ಕನಸಿನಲ್ಲಿ ಪೂರ್ವಜರನ್ನು ಕಂಡರೆ ಶುಭವೋ ಅಶುಭವೋ? ಏನು ಹೇಳುತ್ತದೆ ಈ ಕನಸು

ನಮಗೆ ಬೀಳುವ ಪ್ರತಿ ಕನಸಿಗೂ ಅದರದ್ದೇ ಅರ್ಥ ಇದೆ. ಸ್ವಪ್ನ ಶಾಸ್ತ್ರದಲ್ಲಿ ಪ್ರತಿ ಕನಸಿನ ಅರ್ಥವನ್ನು ಹೇಳಲಾಗಿದೆ. 

Written by - Ranjitha R K | Last Updated : Sep 9, 2024, 05:35 PM IST
  • ರಾತ್ರಿ ಮಲಗುವಾಗ ಹಲವು ರೀತಿಯ ಕನಸುಗಳು ಬರುತ್ತವೆ.
  • ಕನಸುಗಳ ಅರ್ಥಗಳನ್ನು ಜ್ಯೋತಿಷ್ಯ ಮತ್ತು ಸ್ವಪ್ನ ಶಾಸ್ತ್ರದಲ್ಲಿ ವಿವರಿಸಲಾಗಿದೆ.
  • ಕನಸುಗಳು ಭವಿಷ್ಯದಲ್ಲಿ ಘಟಿಸುವ ಘಟನೆಗಳನ್ನು ಸೂಚಿಸುತ್ತವೆ.
ಪಿತೃ ಪಕ್ಷದಲ್ಲಿ ಕನಸಿನಲ್ಲಿ ಪೂರ್ವಜರನ್ನು ಕಂಡರೆ ಶುಭವೋ ಅಶುಭವೋ? ಏನು ಹೇಳುತ್ತದೆ ಈ ಕನಸು  title=

ಬೆಂಗಳೂರು : ರಾತ್ರಿ ಮಲಗುವಾಗ ಹಲವು ರೀತಿಯ ಕನಸುಗಳು ಬರುತ್ತವೆ.ಈ ಕನಸುಗಳ ಅರ್ಥಗಳನ್ನು ಜ್ಯೋತಿಷ್ಯ ಮತ್ತು ಸ್ವಪ್ನ ಶಾಸ್ತ್ರದಲ್ಲಿ ವಿವರಿಸಲಾಗಿದೆ. ಕನಸುಗಳು ಭವಿಷ್ಯದಲ್ಲಿ ಘಟಿಸುವ ಘಟನೆಗಳನ್ನು ಸೂಚಿಸುತ್ತವೆ.ಈ ಕನಸುಗಳು  ಮಂಗಳಕರವೋ ಅಥವಾ ಅಶುಭಕರವೋ ಎನ್ನುವುದನ್ನು ಸ್ವಪ್ನ ಶಾಸ್ತ್ರದಲ್ಲಿ ಹೇಳಲಾಗಿದೆ.ಪಿತೃ ಪಕ್ಷವು ಶೀಘ್ರದಲ್ಲೇ ಪ್ರಾರಂಭವಾಗಲಿದೆ.ಈ ಸಮಯದಲ್ಲಿ  ಪೂರ್ವಜರ ಆತ್ಮಕ್ಕೆ ಶಾಂತಿಗಾಗಿ ಶ್ರಾದ್ಧ,ಪಿಂಡಪ್ರದಾನ,ತರ್ಪಣ ಇತ್ಯಾದಿಗಳನ್ನು ಮಾಡಲಾಗುತ್ತದೆ.ಪಿತೃಪಕ್ಷದ ಸಮಯದಲ್ಲಿ ಅಥವಾ ಅದಕ್ಕೆ ಮೊದಲು ಪೂರ್ವಜರು ಕನಸಿನಲ್ಲಿ ಕಾಣಿಸಿಕೊಂಡರೆ, ಅದರ ಅರ್ಥ ಏನು ಎನ್ನುವುದನ್ನು ಕೂಡಾ ಸ್ವಪ್ನ ಶಾಸ್ತ್ರದಲ್ಲಿ ಹೇಳಲಾಗಿದೆ.

ಕನಸಿನಲ್ಲಿ ಪೂರ್ವಜರನ್ನು ನೋಡುವುದು : 
ಸತ್ತ ತಂದೆ-ತಾಯಿಗಳು ಕನಸಿನಲ್ಲಿ ಕಂಡರೆ,ಅದು ತುಂಬಾ ಮಂಗಳಕರವಾಗಿದೆ. ಅವರ ಆಶೀರ್ವಾದ ನಿಮ್ಮೊಂದಿಗಿದೆ ಮತ್ತು ನೀವು ಶೀಘ್ರದಲ್ಲೇ ಕೆಲಸದಲ್ಲಿ ಗೌರವ ಮತ್ತು ಪ್ರತಿಷ್ಠೆಯನ್ನು ಪಡೆಯಬಹುದು ಎನ್ನುವುದನ್ನು ಈ ಕನಸು ತೋರಿಸುತ್ತದೆ.  

ಇದನ್ನೂ ಓದಿ:  Astro Tips: ಈ ದಿನಾಂಕದಲ್ಲಿ ಜನಿಸಿದವರು ರಾಜರಂತೆ ಬದುಕುತ್ತಾರೆ, ಅಪಾರ ಸುಖ-ಸಂಪತ್ತು ಗಳಿಸುತ್ತಾರೆ!

ಕನಸಿನ ಶಾಸ್ತ್ರದ ಪ್ರಕಾರ,ನಿಮ್ಮ ಕನಸಿನಲ್ಲಿ ಸತ್ತ ಸಂಬಂಧಿ,ಆಪ್ತ ಸ್ನೇಹಿತರು ಬಂದರೆ ನೀವು ಅವರನ್ನು ಮರೆತಿಲ್ಲ ಎನ್ನುವುದನ್ನು ಸೂಚಿಸುತ್ತದೆ.ಅವರ ಕಡೆಗೆ ಇರುವ ನಿಮ್ಮ ಬಾಂಧವ್ಯವನ್ನು ತೋರಿಸುತ್ತದೆ. 

ನಿಮ್ಮ ಪೂರ್ವಜರು ನಿಮ್ಮ ಕನಸಿನಲ್ಲಿ ನಗುತ್ತಿರುವುದನ್ನು ನೋಡಿದರೆ, ಇದು ತುಂಬಾ ಶುಭ ಸಂಕೇತವಾಗಿದೆ.ನಿಮ್ಮ ಪೂರ್ವಜರು ನೀವು ಮಾಡಿದ ದಾನದಿಂದ ಸಂತೋಷಪಟ್ಟಿದ್ದಾರೆ ಮತ್ತು ನಿಮಗೆ ಸಾಕಷ್ಟು ಸಂಪತ್ತನ್ನು ನೀಡಲಿದ್ದಾರೆ ಎನ್ನುವುದನ್ನು ಇದು ಹೇಳುತ್ತದೆ. 

ಕನಸಿನಲ್ಲಿ ಪೂರ್ವಜರು ಅಳುವುದು ಅಥವಾ ಕೋಪಗೊಳ್ಳುವುದನ್ನು ನೋಡುವುದು ತುಂಬಾ ಅಶುಭ.ಇಂಥಹ ಕನಸು ಪೂರ್ವಜರಲ್ಲಿ ಕ್ಷಮೆಯಾಚಿಸಿ ಎನ್ನುವುದನ್ನು ಹೇಳುತ್ತದೆ.ಪೂರ್ವಜರ ಯಾವುದೇ ಆಸೆ ಈಡೇರದೆ ಉಳಿದಿದ್ದರೆ ಅದನ್ನು ಬೇಗ ಈಡೇರಿಸಿ ಎನ್ನುವುದನ್ನು ಈ ಕನಸು ಹೇಳುತ್ತದೆ. 

ಇದನ್ನೂ ಓದಿ: ಮನೆ ಹೀಗಿದ್ದರೆ ಬೆಟ್ಟದಷ್ಟಿದ್ದ ಐಶ್ವರ್ಯ ಕೂಡಾ ಕರಗಿ ಹೋಗುವುದು!ಇಂಥಹ ಮನೆಯಲ್ಲಿ ಲಕ್ಷ್ಮೀ ನಿಲ್ಲುವುದೇ ಇಲ್ಲ!ನಿಮ್ಮ ಬಡತನಕ್ಕೂ ಇದೇ ಕಾರಣವಾಗಿರಬಹುದು

ನಿಮ್ಮ ಪೂರ್ವಜರು ನಿಮ್ಮ ಕನಸಿನಲ್ಲಿ ನಿಮ್ಮೊಂದಿಗೆ ಮಾತನಾಡಿದರೆ,ಭವಿಷ್ಯದಲ್ಲಿ ಸಂಭವಿಸಬಹುದಾದ ಕೆಲವು ಅಪಘಾತದ ಬಗ್ಗೆ ಅವರು ಸೂಚಿಸುತ್ತಿದ್ದಾರೆ ಎಂಬುದರ ಸಂಕೇತವಾಗಿದೆ.ಅಂತಹ ಪರಿಸ್ಥಿತಿಯಲ್ಲಿ ಎಚ್ಚರಿಕೆಯಿಂದ ಕೆಲಸ ಮಾಡಬೇಕು. 

 

(ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ.ZEE NEWS ಇದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News