3.5 ಕೋಟಿ ಸಾಲ.. ವಿಚ್ಛೇದನದ ಬಳಿಕ ಬೀದಿಗೆ ಬಂತು ಸ್ಟಾರ್‌ ನಟಿಯ ಬದುಕು! 20 ರೂಪಾಯಿ ಊಟಕ್ಕೂ ಪರದಾಟ !

Rashmi Desai Life Story: ಈ ನಟಿ ಇತ್ತೀಚೆಗೆ ಮನೆಯಿಂದ ಹೊರಹಾಕಲ್ಪಟ್ಟಾಗ ಎದುರಿಸಿದ ಕಷ್ಟದ ದಿನಗಳ ಕುರಿತು ಹೇಳಿಕೊಂಡಿದ್ದಾರೆ. 

Written by - Chetana Devarmani | Last Updated : Jul 31, 2024, 11:24 AM IST
  • 3.5 ಕೋಟಿ ಸಾಲ ಮಾಡಿ ಬೀದಿಗೆ ಬಂದಿದ್ದೇನೆ
  • ವಿಚ್ಛೇದನದ ಬಳಿಕ ಬೀದಿಗೆ ಬಂತು ಬದುಕು
  • ಕಷ್ಟದ ದಿನಗಳ ಕುರಿತು ಹೇಳಿಕೊಂಡ ನಟಿ
3.5 ಕೋಟಿ ಸಾಲ.. ವಿಚ್ಛೇದನದ ಬಳಿಕ ಬೀದಿಗೆ ಬಂತು ಸ್ಟಾರ್‌ ನಟಿಯ ಬದುಕು! 20 ರೂಪಾಯಿ ಊಟಕ್ಕೂ ಪರದಾಟ !  title=

Rashmi Desai Life Story: ಈ ನಟಿ ಇತ್ತೀಚೆಗೆ ಮನೆಯಿಂದ ಹೊರಹಾಕಲ್ಪಟ್ಟಾಗ ಎದುರಿಸಿದ ಕಷ್ಟದ ದಿನಗಳ ಕುರಿತು ಹೇಳಿಕೊಂಡಿದ್ದಾರೆ. 3.5 ಕೋಟಿ ಸಾಲ ಮಾಡಿ ಬೀದಿಗೆ ಬಂದಿದ್ದೇನೆ ಎಂದು ಅಳಲು ತೋಡಿಕೊಂಡಿದ್ದಾರೆ. ಬ್ಯಾಗ್ ನಲ್ಲಿ ಸಿಕ್ಕ 20 ರೂಪಾಯಿಯಿಂದಲೇ ಆಹಾರ ತಿನ್ನಬೇಕಾದ ದುಸ್ಥಿತಿಗೆ ಬಂದಿದ್ದೆ ಎಂದಿದ್ದಾರೆ.

ರಶ್ಮಿ ದೇಸಾಯಿ ಸಿನಿಮಾ, ಟಿವಿ ಸೀರಿಯಲ್‌ ಮತ್ತು ವೆಬ್ ಸಿರೀಸ್‌ಗಳಲ್ಲಿ ವಿಭಿನ್ನ ಪಾತ್ರಗಳನ್ನು ಮಾಡಿ ಪ್ರಸಿದ್ಧರಾಗಿದ್ದಾರೆ. ನಟಿ ಇತ್ತೀಚೆಗೆ ತಾನು ನಿರಾಶ್ರಿತರಾಗಿದ್ದಾಗ ಜೀವನದಲ್ಲಿ ಎದುರಿಸಿದ ಕಷ್ಟದ ಸಮಯದ ಬಗ್ಗೆ ಬಹಿರಂಗಪಡಿಸಿದ್ದಾರೆ. ಯೂಟ್ಯೂಬ್ ಚಾನೆಲ್‌ನಲ್ಲಿ ಪರಾಸ್ ಛಾಬ್ರಾ ಅವರೊಂದಿಗಿನ ಪಾಡ್‌ಕಾಸ್ಟ್ ನಲ್ಲಿ, ರಶ್ಮಿ ದೇಸಾಯಿ ತಮ್ಮ ಪತಿ ನಂದೀಶ್ ಸಂಧು ಅವರೊಂದಿಗಿನ ವಿಚ್ಛೇದನದ ನಂತರ ಅವರು 3.5 ಕೋಟಿ ರೂಪಾಯಿ ಸಾಲವನ್ನು ಹೊಂದಿದ್ದರು. ಇದರಿಂದಾಗಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಈ ಸಮಯದಲ್ಲಿ ನಿರಾಶ್ರಿತರಾದರು ಮತ್ತು ತನ್ನ ಕಾರಿನಲ್ಲಿಯೇ ಮಲಗಬೇಕಾಗಿತ್ತು ಎಂದು ತಿಳಿಸಿದ್ದಾರೆ. 

ರಶ್ಮಿ ದೇಸಾಯಿ, 2017 ರಲ್ಲಿ ನಾನು ಕುಟುಂಬ ಸಂಬಂಧಿ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಆರ್ಥಿಕವಾಗಿ ತುಂಬಾ ದುರ್ಬಲವಾಗಿದ್ದೆ. ನನ್ನ ತಲೆ ಮೇಲೆ ಕೋಟಿಗಟ್ಟಲೆ ಸಾಲ ಇತ್ತು. ನಾನು ಅದನ್ನು ಹೇಗೆ ತೀರಿಸಬೇಕು, ಅದಕ್ಕಾಗಿ ಏನು ಮಾಡಬೇಕು ಎಂದು ನನಗೆ ಅರ್ಥವಾಗಲಿಲ್ಲ. ಆಗ ನನಗೆ ‘ದಿಲ್ ಸೆ ದಿಲ್ ತಕ್’ ಕಾರ್ಯಕ್ರಮದ ಆಫರ್ ಬಂತು ಎಂದು ಹೇಳಿದ್ದಾರೆ.

ಇದನ್ನೂ ಓದಿ: Sudeep: ನಟ ಸುದೀಪ್‌ ಸಿನಿಮಾ ಇದೇ ವಾರ ರಿಲೀಸ್‌! ಕಿಚ್ಚನ ಫ್ಯಾನ್ಸ್‌ಗೆ ಹ್ಯಾಪಿ ನ್ಯೂಸ್‌ 

ರಶ್ಮಿ ದೇಸಾಯಿ ಈ ಬಗ್ಗೆ ಮಾತನಾಡಿ, ಆ ಸಮಯದಲ್ಲಿ ನಾನು ಮನೆ ಖರೀದಿಸಿದ್ದೆ. ನಾನು ಅಂದಾಜು 3.5 ಕೋಟಿ ರೂಪಾಯಿ ಸಾಲ ಮಾಡಿದ್ದೆ. ತುಂಬಾ ಚಿಂತೆ ಕಾಡುತ್ತಿತ್ತು. ಆದರೆ ಮುಂದೊಂದು ದಿನ ಎಲ್ಲವೂ ಸರಿಹೋಗುತ್ತದೆ ಎಂದು ನಾನು ಭಾವಿಸಿದೆ. ನಾಲ್ಕು ದಿನ ರಸ್ತೆಯಲ್ಲೇ ಇದ್ದೆ. ನನ್ನ ಬಳಿ Audi A6 ಇತ್ತು. ಆ ಕಾರಿನಲ್ಲಿ ಮಲಗುತ್ತಿದ್ದೆ. ನನ್ನ ಎಲ್ಲಾ ಸಾಮಾನುಗಳು ನನ್ನ ಮ್ಯಾನೇಜರ್ ಮನೆಯಲ್ಲಿತ್ತು. ನಾನು ಕುಟುಂಬದಿಂದ ಸಂಪೂರ್ಣವಾಗಿ ದೂರವಿದ್ದೆ ಎಂದಿದ್ದಾರೆ.

ನಟಿ ಮಾತನಾಡಿ, ‘‘ಆ ಕಾಲದಲ್ಲಿ ರಿಕ್ಷಾ ಚಾಲಕರಿಗೆ 20 ರೂ.ಗೆ ಊಟ ಸಿಗುತ್ತಿತ್ತು. ಅದಕ್ಕೊಂದು ಪ್ಲಾಸ್ಟಿಕ್ ಚೀಲದಲ್ಲಿ ಬೇಳೆ, ಅನ್ನ ಬೆರೆಸಿ ಅದರ ಜೊತೆಗೆ ಎರಡು ರೊಟ್ಟಿಯನ್ನೂ ಕೊಟ್ಟರು. ಅದರಲ್ಲಿ ಕೆಲವು ಕಲ್ಲುಗಳು ಇರಬಹುದು, ಆದರೆ ನಾನು ಅದನ್ನು ಹೇಗಾದರೂ ತಿನ್ನುತ್ತೇನೆ. ಈ ನಾಲ್ಕು ದಿನಗಳು ತುಂಬಾ ಕಷ್ಟಕರವಾಗಿತ್ತು.

ನಾನು ನನ್ನ ಗಂಡನಿಂದ ವಿಚ್ಛೇದನ ಪಡೆದಿದ್ದೇನೆ. ನನ್ನ ಎಲ್ಲಾ ನಿರ್ಧಾರಗಳು ತಪ್ಪು ಎಂದು ನನ್ನ ಕುಟುಂಬ ಭಾವಿಸಿದೆ. ನಾನು ಹೇಗೋ ನನ್ನ ಸಾಲವನ್ನು ತೀರಿಸಿದ್ದೇನೆ. ನನಗೆ ನಿದ್ದೆ ಬರುತ್ತಿರಲಿಲ್ಲ. ನಾನು ನಿರಂತರವಾಗಿ ಕೆಲಸ ಮಾಡುತ್ತಲೇ ಇದ್ದೆ. ಆ ಸಮಯದಲ್ಲಿ ನನಗೂ ಸಾಯುವ ಯೋಚನೆ ಶುರುವಾಯಿತು ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಭಾರತದ ಶ್ರೀಮಂತ ನಟಿ... ಪತಿಗಿಂತ ಮೂರು ಪಟ್ಟು ಹೆಚ್ಚು ಆಸ್ತಿ ಹೊಂದಿರುವ ಆ ಸ್ಟಾರ್‌ಹೀರೋಯಿನ್‌ ಇವರೇ.!

ರಶ್ಮಿಯ ನಿಜವಾದ ಹೆಸರು ದಿವ್ಯಾ ದೇಸಾಯಿ. 2006 ರಲ್ಲಿ 'ರಾವಣ' ಮೂಲಕ ಕಿರುತೆರೆಗೆ ಪದಾರ್ಪಣೆ ಮಾಡಿದರು. ಬಳಿಕ 'ಪಾರಿ ಹೂನ್ ಮೈ' ನಲ್ಲಿ ದ್ವಿಪಾತ್ರದಲ್ಲಿ ನಟಿಸಿದರು. 'ಉತ್ತರನ್' ಸೀರಿಯಲ್‌ಮೂಲಕ ಜನ ಮನ್ನಣೆ ಪಡೆದರು. ಇದರಲ್ಲಿ ಅವರು ತಪಸ್ಯ ಠಾಕೂರ್ ಪಾತ್ರವನ್ನು ನಿರ್ವಹಿಸಿದ್ದಾರೆ. ಇದಾದ ನಂತರ ಅವರು ಹಿಂತಿರುಗಿ ನೋಡಲೇ ಇಲ್ಲ. 'ದಿಲ್ ಸೆ ದಿಲ್ ತಕ್',  'ರಾತ್ರಿ ಕೇ ಯಾತ್ರಿ', 'ಅಧುರಿ ಕಹಾನಿ ಹಮಾರಿ', 'ನಾಗಿನ್', 'ಮಹಾ ಸಂಗಮ' ಹೀಗೆ ಮುಂತಾದ ಶೋಗಳಲ್ಲಿ ಕಾಣಿಸಿಕೊಂಡರು. 

'ಜರಾ ನಚ್ಕೆ ದಿಖಾ 2', 'ಖತ್ರೋನ್ ಕೆ ಖಿಲಾಡಿ 6' ಮತ್ತು 'ಬಿಗ್ ಬಾಸ್ 13' ನಂತಹ ಶೋಗಳಲ್ಲಿ ಭಾಗವಹಿಸಿದ್ದಾರೆ. 'ದಬಾಂಗ್ 2' ಚಿತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಹಿಂದಿಯಲ್ಲದೆ ಭೋಜ್‌ಪುರಿ, ಮಣಿಪುರಿ, ಅಸ್ಸಾಮಿ ಮತ್ತು ಬೆಂಗಾಲಿ ಚಲನಚಿತ್ರಗಳಲ್ಲಿಯೂ ಕಾಣಿಸಿಕೊಂಡರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News