ಬೇಡ ಅಂದ್ರು ಆ ನಟ ನಾಲಿಗೆಯಿಂದ ನನ್ನ ಮುಖ ನೆಕ್ಕಿದ..! ಶಾಕಿಂಗ್ ವಿಚಾರ ಬಿಚ್ಚಿಟ್ಟ ನಟಿ ಸದಾ

Sada on Gopichand : ಬಹುಭಾಷಾ ನಟಿ ಸದಾ ತಮ್ಮ ಮೊದಲ ಸಿನಿಮಾ ʼಜಯಂʼ ನಲ್ಲಿ ತಾವು ಅನುಭವಿಸಿದ ನೋವನ್ನು ಬಿಚ್ಚಿಟ್ಟಿದ್ದಾರೆ. ಇಷ್ಟವಿಲ್ಲದಿದ್ದರೂ ನಿರ್ದೇಶಕರು ಬಲವಂತವಾಗಿ ಆ ದೃಶ್ಯದಲ್ಲಿ ನಟಿಸುವಂತೆ ಬಲವಂತ ಪಡಿಸಿದರು ಅಂತ ಹೇಳಿದ್ದಾರೆ.

Written by - Krishna N K | Last Updated : May 4, 2024, 10:16 AM IST
    • ನಟಿ ಸದಾ ಸಿನಿಮಾವೊಂದಲ್ಲಿ ತಮಗಾಗ ಕಹಿ ಅನುಭವ ತೆರೆದಿಟ್ಟಿದ್ದಾರೆ.
    • ತಮ್ಮ ಮೊದಲ ಸಿನಿಮಾ ʼಜಯಂʼ ನಲ್ಲಿ ತಾವು ಅನುಭವಿಸಿದ ನೋವನ್ನು ಬಿಚ್ಚಿಟ್ಟಿದ್ದಾರೆ.
    • ತಮಗೆ ಉಂಟಾಗಿದ್ದ ಮುಜುಗರದ ಸಂಗತಿಯೊಂದನ್ನು ರಿವೀಲ್ ಮಾಡಿದ್ದಾರೆ ಸದಾ.
ಬೇಡ ಅಂದ್ರು ಆ ನಟ ನಾಲಿಗೆಯಿಂದ ನನ್ನ ಮುಖ ನೆಕ್ಕಿದ..! ಶಾಕಿಂಗ್ ವಿಚಾರ ಬಿಚ್ಚಿಟ್ಟ ನಟಿ ಸದಾ title=

Actress Sadha on Jayam movie : ನಟಿ ನಟಿಯರು ಸಿನಿಮಾದಲ್ಲಿ ತಾವು ಅನುಭವಿಸಿದ ನೋವು, ನಲಿವು ಕಷ್ಟ ನಷ್ಟಗಳ ಕುರಿತು ಮುಕ್ತವಾಗಿ ಮಾತನಾಡುತ್ತಾರೆ. ತಮ್ಮ ಅಭಿಮಾನಿಗಳ ಜೊತೆ ಈ ಕುರಿತು ಬಹಿರಂಗವಾಗಿ ಹಂಚಿಕೊಳ್ಳುತ್ತಾರೆ. ಇದೇ ರೀತಿ  'ಮೊನಾಲಿಸಾ', 'ಮೋಹಿನಿ 9886788888', 'ಹುಡುಗ ಹುಡುಗಿ', 'ಮೈಲಾರಿ', 'ಮಲ್ಲಿಕಾರ್ಜುನ', 'ಆರಕ್ಷಕ' ಹೀಗೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದ ನಟಿ ಸದಾ ಸಿನಿಮಾವೊಂದಲ್ಲಿ ತಮಗಾಗ ಕಹಿ ಅನುಭವ ತೆರೆದಿಟ್ಟಿದ್ದಾರೆ.

ಸದಾ ಸಧ್ಯ ಕನ್ನಡ ಸಿನಿರಂಗದಿಂದ ದೂರ ಉಳಿದರೂ ಸಹ, ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ. ಆಗಾಗ ಫೋಟೋಶೂಟ್‌ ಮಾಡಿಸುವ ಬೆಡಗಿ ತಮ್ಮ ಚಿತ್ರಗಳನ್ನು ಪ್ಯಾನ್ಸ್‌ಗಾಗಿ ಇನ್‌ಸ್ಟಾಗ್ರಾಮ್‌ ನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಅಲ್ಲದೆ, ಇತ್ತೀಚಿಗೆ ನಟಿ ತಮ್ಮ ಮೊದಲ ಸಿನಿಮಾ ʼಜಯಂʼ ನಲ್ಲಿ ತಾವು ಅನುಭವಿಸಿದ ನೋವನ್ನು ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ: ಕರೀನಾ ಹೋದ್ರೆ ಏನಂತೆ... ಯಶ್ ಸಿನಿಮಾಗೆ ಎಂಟ್ರಿ ಕೊಟ್ರು ಸೌತ್ ಲೇಡಿ ಸೂಪರ್ ಸ್ಟಾರ್..!

ಈ ಪೈಕಿ ನಟಿ ಸಿನಿಮಾ ಶೂಟಿಂಗ್ ವೊಂದರಲ್ಲಿ ತಮಗೆ ಉಂಟಾಗಿದ್ದ ಮುಜುಗರದ ಸಂಗತಿಯೊಂದನ್ನು ರಿವೀಲ್ ಮಾಡಿದ್ದಾರೆ. 2002 ರಲ್ಲಿ ತೆರೆಕಂಡ ತೆಲುಗು ಬ್ಲಾಕ್ಬಸ್ಟರ್‌ ಹಿಟ್‌ ಸಿನಿಮಾ ʼಜಯಂʼ ಮೂಲಕ ಸಿನಿ ಜರ್ನಿ ಪ್ರಾರಂಭಿಸಿದ ನಟಿ, ಮೊದಲ ಚಿತ್ರದಿಂದಲೇ ಸಾಕಷ್ಟು ಜನ ಮನ್ನಣೆ ಪಡೆದು.

ʼಜಯಂʼ ಬೆಡಗಿಯಾಗಿ ಸದಾ ಗುರುತಿಸಿಕೊಂಡು, ಈ ಸಿನಿಮಾದಲ್ಲಿನ ʼರಾನು ರಾನು ಅಂಟೋಂದಿ ಸಿನ್ನದೋ..ʼ ಎಂಬ ಹಾಡು ಇಂದಿಗೂ ಫೇಮಸ್‌, ಈ ಸಾಂಗ್‌ ಕೇಳಿದ್ರೆ ಥಟ್‌ ಅಂತ ನೆನಪಿಗೆ ಬರೋದೇ ಈ ಸುಂದರಿ, ಅಷ್ಟರ ಮಟ್ಟಿಗ ಈ ಹಾಡು ಫೇಮಸ್‌ ಆಗಿತ್ತು.

ಇದನ್ನೂ ಓದಿ:ತುಂಡು ಬಟ್ಟೆ ತೊಟ್ಟು ಕ್ಯಾಮರಾಗೆ ಹಾಟ್‌ ಪೋಸ್‌ ಕೊಟ್ಟ ರಾಶಿ..! ಫೋಟೋಸ್‌ ಇಲ್ಲಿವೆ

ತೇಜ ನಿರ್ದೇಶನದ ಜಯಂ ಸಿನಿಮಾದಲ್ಲಿ, ನಿತಿನ್ ಹೀರೋ ಆಗಿ ನಟಿಸಿದ್ದರು, ಈ ಸಿನಿಮಾದ ಒಂದು ದೃಶ್ಯವೊಂದರಲ್ಲಿ, ನನಗೆ ಒಂಚೂರು ಇಷ್ಟವಿಲ್ಲದಿದ್ದರೂ, ದೃಶ್ಯವೊಂದರಲ್ಲಿ ನಟಿಸುವಂತೆ ಡೈರೆಕ್ಟರ್‌ ಒತ್ತಾಯ ಹಾಕಿದ್ದರು ಅಂತ ಸ್ಟಾರ್‌ ನಿರ್ದೇಶಕ ತೇಜಾ ವಿರುದ್ಧ ಸದಾ ಆರೋಪ ಮಾಡಿದ್ದಾರೆ.

ಈ ಚಿತ್ರದಲ್ಲಿ ಗೋಪಿ ಚಂದ್‌ ವಿಲನ್‌ ಪಾತ್ರದಲ್ಲಿ ನಟಿಸಿದ್ದರು. ಸೀನ್‌ ಒಂದರಲ್ಲಿ, ಗೋಪಿಚಂದ್ ನನ್ನ ಕೆನ್ನೆಯನ್ನು ನಾಲಿಗೆಯಿಂದ ನೆಕ್ಕುತ್ತಾರೆ. ಈ ದೃಶ್ಯದಲ್ಲಿ ನಟಿಸೋದೇ ಇಲ್ಲ ಅಂತ ನಾನು ಸಾಕಷ್ಟು ಬಾರಿ ಹೇಳಿದ್ದೆ, ಅಲ್ಲದೆ, ಚಿತ್ರದಿಂದ ಹೊರಹೋಗಲು ನಾನು ಸಿದ್ದ ಅಂತ ಹೇಳಿದ್ದೆ. ಆದರೆ, ನಿರ್ದೇಶಕ ತೇಜ ಅದನ್ನು ಮಾಡಿಸಿದರು. ಈ ದೃಶ್ಯದ ಬಳಿಕ ನಾನು 10 ಸಾರಿ ಮುಖ ತೊಳೆದುಕೊಂಡಿದ್ದೆ. ಇದರಿಂದ ನನ್ನ ಮನಸ್ಸಿಗೆ ಸಾಕಷ್ಟು ನೋವು ಕೂಡ ಉಂಟಾಗಿತ್ತು ಅಂತ ಸದಾ ಬೇಸರ ತೋಡಿಕೊಂಡರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News