ರೇಣುಕಾಸ್ವಾಮಿ ಮೇಲಿನ ಹಲ್ಲೆ ವಿಡಿಯೋ ರೆಕಾರ್ಡ್:  3 ಸೆಕೆಂಡ್ ವಿಡಿಯೋದಲ್ಲಿದೆ ದರ್ಶನ್ ಕರಾಳತೆ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸರು ತನಿಖೆಯ ವೇಳೆ ಬಗೆದಷ್ಟು ಕರಾಳ‌ಸತ್ಯಗಳು ಹೊರ ಬರುತ್ತಿವೆ. ಪಟ್ಟಣಗೆರೆ ಶೆಡ್ ನಲ್ಲಿ ಡಿ ಗ್ಯಾಂಗ್  ರೇಣುಕಾಸ್ವಾಮಿ ಮೇಲೆ ತೋರಿದ ಕ್ರೂರತೆಗೆ  ಸಾಕ್ಷಿಯಾಗಿರೋದು ಪ್ರದೋಷ್ ಮೊಬೈಲ್ ನಲ್ಲಿ ಇರುವ ಮೂರ್ನಾಲ್ಕು ಸೆಕೆಂಡ್ ವಿಡಿಯೋ.  ಹೌದು ಶೆಡ್ ನಲ್ಲಿ ರೇಣುಕಾಸ್ವಾಮಿ ಮೇಲೆ ದರ್ಶನ್ ಹಲ್ಲೆ ನಡೆಸುವಾಗ ಆರೋಪಿ ಪ್ರದೋಷ್ ತನ್ನ  ಐ ಫೋನ್ ನಲ್ಲಿ ದರ್ಶನ್ ಸೂಚನೆ ಮೇರೆಗೆ ವಿಡಿಯೋ ಮಾಡಿದ್ದಾನೆ.‌

Written by - VISHWANATH HARIHARA | Edited by - Manjunath N | Last Updated : Jul 20, 2024, 03:47 PM IST
  • ಹಲ್ಲೆ ನಡೆಯುತ್ತಿದ್ದಾಗ ತನ್ನ ಐ ಪೋನ್ ತೆಗೆದು ರೆಕಾರ್ಡ್ ಆನ್ ಮಾಡಿದ್ದಾನೆ.
  • ಆದರೆ ಮೂರ್ನಾಲ್ಕು ಸೆಕೆಂಡ್ ವಿಡಿಯೋ ರೆಕಾರ್ಡ್ ಆದ ತಕ್ಷಣ ವಿಡಿಯೋ ಸ್ಟಾಪ್ ಮಾಡಿ ವಿಡಿಯೋವನ್ನು ಡಿಲಿಟ್ ಮಾಡಿದ್ದಾನೆ.
  • ಸದ್ಯ ಡಿಲಿಟ್ ಆಗಿರುವ ವಿಡಿಯೋನಾ ರಿಟ್ರಿವ್ ಮಾಡಲು ಕಾಮಾಕ್ಷಿಪಾಳ್ಯ ಪೊಲೀಸರು ಸಿಐಡಿ ಟೆಕ್ನಿಕಲ್ ಸೆಲ್ ಗೆ ರವಾನಿಸಿದ್ದಾರೆ.
 ರೇಣುಕಾಸ್ವಾಮಿ ಮೇಲಿನ ಹಲ್ಲೆ ವಿಡಿಯೋ ರೆಕಾರ್ಡ್:  3 ಸೆಕೆಂಡ್ ವಿಡಿಯೋದಲ್ಲಿದೆ ದರ್ಶನ್ ಕರಾಳತೆ title=

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸರು ತನಿಖೆಯ ವೇಳೆ ಬಗೆದಷ್ಟು ಕರಾಳ‌ಸತ್ಯಗಳು ಹೊರ ಬರುತ್ತಿವೆ. ಪಟ್ಟಣಗೆರೆ ಶೆಡ್ ನಲ್ಲಿ ಡಿ ಗ್ಯಾಂಗ್  ರೇಣುಕಾಸ್ವಾಮಿ ಮೇಲೆ ತೋರಿದ ಕ್ರೂರತೆಗೆ  ಸಾಕ್ಷಿಯಾಗಿರೋದು ಪ್ರದೋಷ್ ಮೊಬೈಲ್ ನಲ್ಲಿ ಇರುವ ಮೂರ್ನಾಲ್ಕು ಸೆಕೆಂಡ್ ವಿಡಿಯೋ.  ಹೌದು ಶೆಡ್ ನಲ್ಲಿ ರೇಣುಕಾಸ್ವಾಮಿ ಮೇಲೆ ದರ್ಶನ್ ಹಲ್ಲೆ ನಡೆಸುವಾಗ ಆರೋಪಿ ಪ್ರದೋಷ್ ತನ್ನ  ಐ ಫೋನ್ ನಲ್ಲಿ ದರ್ಶನ್ ಸೂಚನೆ ಮೇರೆಗೆ ವಿಡಿಯೋ ಮಾಡಿದ್ದಾನೆ.‌

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ & ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬಿಜೆಪಿ ನಾಯಕರ ಆಕ್ರೋಶ!

ಹಲ್ಲೆ ನಡೆಯುತ್ತಿದ್ದಾಗ ತನ್ನ ಐ ಪೋನ್ ತೆಗೆದು ರೆಕಾರ್ಡ್ ಆನ್ ಮಾಡಿದ್ದಾನೆ. ಆದರೆ ಮೂರ್ನಾಲ್ಕು ಸೆಕೆಂಡ್ ವಿಡಿಯೋ ರೆಕಾರ್ಡ್ ಆದ ತಕ್ಷಣ ವಿಡಿಯೋ ಸ್ಟಾಪ್ ಮಾಡಿ ವಿಡಿಯೋವನ್ನು ಡಿಲಿಟ್ ಮಾಡಿದ್ದಾನೆ. ಸದ್ಯ ಡಿಲಿಟ್ ಆಗಿರುವ ವಿಡಿಯೋನಾ ರಿಟ್ರಿವ್ ಮಾಡಲು ಕಾಮಾಕ್ಷಿಪಾಳ್ಯ ಪೊಲೀಸರು ಸಿಐಡಿ ಟೆಕ್ನಿಕಲ್ ಸೆಲ್ ಗೆ ರವಾನಿಸಿದ್ದಾರೆ.  ಆದರೆ ಐಫೋನ್ ನಿಂದ ಡಿಲೀಟ್ ಆಗಿರುವ ವಿಡಿಯೋ ರಿಟ್ರಿವ್ ಮಾಡೊದು ಅಷ್ಟು ಸುಲಭದ ಕೆಲಸವಲ್ಲ. ಇದೇ ಕಾರಣಕ್ಕೆ ಹೊಸ ಟೆಕ್ನಾಲಜಿ ಬಳಸಿ ವಿಡಿಯೋ ರಿಟ್ರಿವ್ ಗೆ ಸಿಐಡಿ ಅಧಿಕಾರಿಗಳು ಮುಂದಾಗಿದ್ದಾರಂತೆ.‌ ಒಂದು ವೇಳೆ ಆ ವಿಡಿಯೋ ರಿಟ್ರಿವ್ ಆದರೆ ಅದು ಕೊಲೆ  ಕೇಸ್ ಗೆ ಪ್ರಮುಖ ಸಾಕ್ಷ್ಯವಾಗಲಿದೆ.

ಇದನ್ನೂ ಓದಿ: ವರುಣನ ಕೃಪೆಯಿಂದ ಕೋರ್ಟ್ ಆದೇಶ ಪಾಲನೆ, ರೈತರ ಹಿತ ರಕ್ಷಣೆ ಸಾಧ್ಯವಾಗಿದೆ: ಡಿಸಿಎಂ ಡಿ.ಕೆ ಶಿವಕುಮಾರ್

ಇನ್ನೂ ಕೊಲೆ ಪ್ರಕರಣದಲ್ಲಿ ಮಹತ್ವದ ಸಾಕ್ಷ್ಯಗಳನ್ನ ನಾಶಪಡಿಸಲು ಆರೋಪಿಗಳು ಸಖತ್ ಪ್ಲಾನ್ ಮಾಡಿ ಮಾಡಿದ್ದರು. ಇನ್ನೂ ರೇಣುಕಾಸ್ವಾಮಿ ಮೇಲೆ ಮಾರಣಾಂತಿಕ ಹಲ್ಲೆ ನಂತರ ಶೆಡ್ ನಿಂದ, ದರ್ಶನ್ , ವಿನಯ್, ಪ್ರದೋಷ್ ನಾಗರಾಜ್ ಶೆಡ್ ನಿಂದ ಹೊರಟಿದ್ದರು. ಅಷ್ಟರಲ್ಲಾಗಲೇ ಸಾಯುವ ಪರಿಸ್ಥಿತಿಯಲ್ಲಿದ್ದ ರೇಣುಕಾಸ್ವಾಮಿ ಮೇಲೆ ಮತ್ತು ನಿಖಿಲ್, ಪವನ್ ಹಲ್ಲೆ ನಡೆಸಿದ್ದಾರೆ.

ಇದಾದ ನಂತರ ಬಹುತೇಕ ಪ್ರಾಣ ಕಳೆದುಕೊಂಡಿದ್ದ ರೇಣುಕಾಸ್ವಾಮಿಯನ್ನ ನಿಖಿಲ್ ಪವನ್ ಹಾಗೂ ಇನ್ನಿತರರು ಸೇರಿ ಶೆಡ್ ನ‌ ಒಂದು ಒಂದು ರೂಮ್ ನಿಂದ ಮತ್ತೊಂದು ಸೈಡ್ ನಲ್ಲಿದ್ದ ರೂಮ್ ಗೆ ಎಳೆದು ಹೋಗಿದ್ದಾರೆ. ಆ ರೂಮ್ ದ್ವಾರದಲ್ಲಿದ್ದ ಸಿಸಿಟಿವಿಯಲ್ಲಿ ಆರೋಪಿಗಳು ರೇಣುಕಾಸ್ವಾಮಿಯನ್ನ ಎಳೆದು ತರುವ ವಿಡಿಯೋ ಕ್ಲಿಯರ್ ಆಗಿ ರೆಕಾರ್ಡ್ ಆಗಿದೆ. ಇದನ್ನ ಗಮನಿಸಿದ್ದ ಆರೋಪಿ ವಿನಯ್ ಸಿಸಿಟಿವಿ ಫುಟೇಜ್ ಡಿಲಿಟ್ ಮಾಡಿದ್ದಾನೆ. ಸದ್ಯ ಸಿಸಿಟಿವಿ ಡಿವಿಆರ್ ನ ಕೂಡ ರಿಟ್ರಿವ್ ಮಾಡಲು ಸಿಐಡಿಗೆ ಕಳುಹಿಸಲಾಗಿದೆ. ಈ ವಿಡಿಯೋ ರಿಟ್ರಿವ್ ಆದರೆ ಪ್ರಕರಣಕ್ಕೆ ಮತ್ತೊಂದು ಪ್ರಬಲ ಸಾಕ್ಷಿ ಸಿಕ್ಕಂತಾಗುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

 

Trending News