Cashback Fraud: ಕ್ಯಾಶ್‌ಬ್ಯಾಕ್ ಆಫರ್​​ ನಂಬಿ 52 ಸಾವಿರ ಕಳೆದುಕೊಂಡ ಬಿರಿಯಾನಿ ಹೊಟೇಲ್​ ಮಾಲಿಕ!

Cashback Fraud: ಆನ್‌ಲೈನ್ ಪೇಮೆಂಟ್​ ಆ್ಯಪ್‌ನಲ್ಲಿ ನಿಮಗೆ ಕ್ಯಾಶ್ ಬ್ಯಾಕ್ ಬರುತ್ತದೆ ಎಂದು ಹೇಳಿ ಬೆಂಗಳೂರಿನ ಹೋಟೆಲ್‍ ಮಾಲೀಕ ಪ್ಯಾರುಲ್ ಷಾಗೆ ಇಬ್ಬರು ವ್ಯಕ್ತಿಗಳು ವಂಚನೆ ಎಸಗಿದ್ದಾರೆ. ​

Written by - Puttaraj K Alur | Last Updated : Aug 16, 2023, 05:02 PM IST
  • ಕ್ಯಾಶ್‍ಬ್ಯಾಕ್ ಆಫರ್ ನಂಬಿ 52 ಸಾವಿರ ರೂ. ಕಳೆದುಕೊಂಡ ಬೆಂಗಳೂರಿನ ಹೋಟೆಲ್‍ ಮಾಲೀಕ
  • ಆನ್‍ಲೈನ್ ಪೇಮೆಂಟ್ ಮಾಡಿದ್ರೆ ಪ್ರತಿದಿನ 300 ರೂ. ಕ್ಯಾಶ್‍ಬ್ಯಾಕ್ ಬರುತ್ತದೆ ಎಂದು ವಂಚನೆ
  • ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ರಾಮಮೂರ್ತಿನಗರ ಠಾಣೆ ಪೊಲೀಸರಿಂದ ಆರೋಪಿಗಳಿಗೆ ಶೋಧ
Cashback Fraud: ಕ್ಯಾಶ್‌ಬ್ಯಾಕ್ ಆಫರ್​​ ನಂಬಿ 52 ಸಾವಿರ ಕಳೆದುಕೊಂಡ ಬಿರಿಯಾನಿ ಹೊಟೇಲ್​ ಮಾಲಿಕ! title=
52 ಸಾವಿರ ರೂ. ಕಳೆದುಕೊಂಡ ಹೋಟೆಲ್‍ ಮಾಲೀಕ!

ಬೆಂಗಳೂರು: ಕ್ಯಾಶ್‍ಬ್ಯಾಕ್ ಆಫರ್ ನಂಬಿ ಬೆಂಗಳೂರಿನ ಹೋಟೆಲ್‍ ಮಾಲೀಕನೊಬ್ಬ 52 ಸಾವಿರ ರೂ. ಕಳೆದುಕೊಂಡಿದ್ದಾರೆ. ದಯಾನಂದ ಲೇಔಟ್‌ನ ರಾಮಮೂರ್ತಿನಗರದ ಬಿರಿಯಾನಿ ಹೋಟೆಲ್‌ ಮಾಲೀಕ ಪ್ಯಾರುಲ್ ಷಾ ವಂಚನೆಗೆ ಒಳಗಾದ ವ್ಯಕ್ತಿ.

ಆನ್‌ಲೈನ್ ಪೇಮೆಂಟ್​ ಆ್ಯಪ್‌ನಲ್ಲಿ ನಿಮಗೆ ಕ್ಯಾಶ್ ಬ್ಯಾಕ್ ಬರುತ್ತದೆ ಎಂದು ಹೇಳಿ ಪ್ಯಾರುಲ್ ಷಾಗೆ ಇಬ್ಬರು ವ್ಯಕ್ತಿಗಳು ವಂಚನೆ ಎಸಗಿದ್ದಾರೆ. ಶನಿವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಪ್ಯಾರುಲ್​ ಷಾ ತಮ್ಮ ಹೊಟೇಲ್‍ ಕೆಲಸದಲ್ಲಿ ಬ್ಯುಸಿಯಾಗಿದ್ದರು.​ ಈ ವೇಳೆ ಹೋಟೆಲ್​ಗೆ ಬಂದ ಇಬ್ಬರು ಅಪರಿಚಿತರು ತಾವು ಬ್ಯಾಂಕ್ ಎಕ್ಸಿಕ್ಯೂಟಿವ್‌ ಸಿಬ್ಬಂದಿ ಎಂದು ಪರಿಚಯಿಸಿಕೊಂಡಿದ್ದರು. ನೀವು ಆನ್‍ಲೈನ್ ಪೇಮೆಂಟ್‍ಗೆ ಯಾವ ಆ್ಯಪ್ ಬಳಸುತ್ತಿದ್ದೀರಿ ಎಂದು ಕೇಳಿದ್ದರು.

ಇದನ್ನೂ ಓದಿ: 27 Loves 53: ಅವನಿಗೆ 53, ಆಕೆಗೆ 27 ವರ್ಷ: ಓಡಿ ಹೋಗಿ ಆತ್ಮಹತ್ಯೆಯ ಹೈಡ್ರಾಮಾ ಮಾಡಿದ ಜೋಡಿ!

ಅದರಂತೆ ಪ್ಯಾರುಲ್ ಷಾ ತಾವು ಹೋಟೆಲ್‍ನಲ್ಲಿ ಬಳಸುತ್ತಿರುವ ಆ್ಯಪ್ ಬಗ್ಗೆ ಮಾಹಿತಿ ನೀಡಿದ್ದರು. ನೀವು ನಾವು ಹೇಳುವ ಆ್ಯಪ್ ಮೂಲಕ ಆನ್‍ಲೈನ್ ಪೇಮೆಂಟ್ ಮಾಡಿದರೆ ಪ್ರತಿದಿನವೂ 300 ರೂ. ಕ್ಯಾಶ್‍ಬ್ಯಾಕ್ ಬರುತ್ತದೆ ಎಂದು ತಿಳಿಸಿದ್ದಾರೆ. ಇದರಿಂದ ಖುಷಿಯಾದ ಪ್ಯಾರುಲ್ ಅವರು ಅವರಿಗೆ ತಮ್ಮ ಮೊಬೈಲ್ ನೀಡಿದ್ದಾರೆ. ನಂತರ ಬ್ಯಾಂಕ್ ಖಾತೆ ಸೇರಿದಂತೆ ತಮ್ಮ ವೈಯಕ್ತಿಕ ವಿವರಗಳನ್ನು ತಿಳಿಸಿದ್ದಾರೆ.

ಇಬ್ಬರು ವಂಚಕರು ಕೆಲಕಾಲ ಪ್ಯಾರುಲ್ ಷಾರ ಮೊಬೈಲ್ ಬಳಸಿ ಆ್ಯಪ್ ಇನ್‍ಸ್ಟಾಲ್ ಆಗಿದೆ. ಪ್ರತಿದಿನವೂ ನೀವು ಆನ್‍ಲೈನ್‍ ಪೇಮೆಂಟ್‍ಗೆ ಇದೇ ಆ್ಯಪ್ ಬಳಸಬೇಕು ಎಂದು ಅವರ ಮೊಬೈಲ್ ವಾಪಸ್ ನೀಡಿ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ನಂತರ ಪ್ಯಾರುಲ್ ಅವರು​ ತಮ್ಮ ಬ್ಯಾಂಕ್​ ಖಾತೆ ಪರಿಶೀಲಿಸಿದಾಗ ಅದರಿಂದ 52 ಸಾವಿರ ರೂ. ಕಡಿತವಾಗಿರುವುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ: Mandya: ಅನುಮಾನದ ಭೂತಕ್ಕೆ ಹೆಂಡತಿ ಕೊಂದು ಮಗನೊಂದಿಗೆ ಪತಿ ಎಸ್ಕೇಪ್!

ತಮಗೆ ವಂಚನೆಯಾಗಿರುವುದು ಗೊತ್ತಾಗುತ್ತಿದ್ದಂತೆಯೇ ಗಾಬರಿಯಾದ ಪ್ಯಾರುಲ್ ಷಾ ಅವರು ರಾಮಮೂರ್ತಿನಗರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಈ ಸಂಬಂಧ ಪೊಲೀಸರು ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News