ಡಬಲ್ ಮರ್ಡರ್ ಮಾಡಿ ಬಿಲ್ಡಪ್ ರೀಲ್ಸ್ ಹಾಕಿದ್ದ ಜೋಕರ್ ಫಿಲಿಕ್ಸ್ ಅಂದರ್

Bengaluru Crime News: ಜೋಗಯ್ಯ ಸಿನಿಮಾದ “ಪೇಪರ್ ಮುಂದ್ಗಡೆ ಬರ್ಕೊ ಬೆಂಗ್ಳೂರ್ ನಂದು” ಅನ್ನೋ ಡೈಲಾಗ್ ಗೆ ರೌಡಿ ಈರುಳ್ಳಿ ಬಾಬು ಜೊತೆಗಿನ ಫೋಟೋ ಮತ್ತು ತನ್ನ ಫೋಟೋ ಹಾಕಿ ಬಿಲ್ಡಪ್ ಕೊಟ್ಟಿದ್ದಾನೆ.

Written by - VISHWANATH HARIHARA | Edited by - Bhavishya Shetty | Last Updated : Jul 12, 2023, 10:24 AM IST
    • ಸಿಲಿಕಾನ್ ಸಿಟಿಯನ್ನೇ ಬೆಚ್ಚಿ ಬೀಳಿಸಿದ್ದ ಡಬಲ್ ಮರ್ಡರ್ ಕೇಸ್
    • ಕೊಲೆ‌ ನಡೆದ ಕೇವಲ 4 ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸಿದ ಪೊಲೀಸರು
    • ಕೊಲೆ ಮಾಡಿದ ನಂತರ ಇನ್ ಸ್ಟಾಗ್ರಾಂನಲ್ಲಿ ಬಿಲ್ಡಪ್ ರೀಲ್ಸ್ ಅಪ್ಲೋಡ್ ಮಾಡಿದ ಆರೋಪಿ
ಡಬಲ್ ಮರ್ಡರ್ ಮಾಡಿ ಬಿಲ್ಡಪ್ ರೀಲ್ಸ್ ಹಾಕಿದ್ದ ಜೋಕರ್ ಫಿಲಿಕ್ಸ್ ಅಂದರ್ title=
Joker Felix and Team

ಬೆಂಗಳೂರು: ಕಳೆದ ದಿನ ಸಿಲಿಕಾನ್ ಸಿಟಿಯನ್ನೇ ಬೆಚ್ಚಿ ಬೀಳಿಸಿದ್ದ ಡಬಲ್ ಮರ್ಡರ್ ಕೇಸ್ ಆರೋಪಿಗಳನ್ನ ಅಮೃತಹಳ್ಳಿ ಪೊಲೀಸರು ಕೊಲೆ‌ ನಡೆದ ಕೇವಲ 4 ಗಂಟೆಯಲ್ಲಿ ಬಂಧಿಸಿದ್ದಾರೆ. ಕೊಲೆಗೂ ಮುನ್ನ ಬಿಲ್ಡಪ್ ಸ್ಟೇಟಸ್ ಹಾಕಿದ್ದ ಫಿಲಿಕ್ಸ್, ಕೊಲೆ ಮಾಡಿದ ನಂತರವೂ ಇನ್ ಸ್ಟಾಗ್ರಾಂನಲ್ಲಿ ಬಿಲ್ಡಪ್ ರೀಲ್ಸ್ ಅಪ್ಲೋಡ್ ಮಾಡಿದ್ದಾನೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಮೊದಲ ಬಾರಿಗೆ ರೂ. 13,666 ಕೋಟಿ ರಾಜಸ್ವ ಕೊರತೆ..!

ಜೋಗಯ್ಯ ಸಿನಿಮಾದ “ಪೇಪರ್ ಮುಂದ್ಗಡೆ ಬರ್ಕೊ ಬೆಂಗ್ಳೂರ್ ನಂದು” ಅನ್ನೋ ಡೈಲಾಗ್ ಗೆ ರೌಡಿ ಈರುಳ್ಳಿ ಬಾಬು ಜೊತೆಗಿನ ಫೋಟೋ ಮತ್ತು ತನ್ನ ಫೋಟೋ ಹಾಕಿ ಬಿಲ್ಡಪ್ ಕೊಟ್ಟಿದ್ದಾನೆ.

ಕೊಲೆ‌ ನಂತರ ನ್ಯೂಸ್ ಹೆಡ್’ಲೈನ್ಸ್ ಇನ್ ಸ್ಟಾಗ್ರಾಂ ಸ್ಟೋರಿ ಹಾಕಿದ್ದ ಫಿಲಿಕ್ಸ್, ಕೊಲೆ ಮಾಡಿ ಕುಣಿಗಲ್ ತಲುಪುತ್ತಿದ್ದಂತೆ ಪೊಲೀಸರ ಕೈಯಲ್ಲಿ ಲಾಕ್ ಆಗಿದ್ದಾನೆ.

ಒಂದು ಕಡೆ ಡಬಲ್ ಮರ್ಡರ್ ಆಗುತ್ತಿದ್ದಂತೆ ಅಲರ್ಟ್ ಆಗಿದ್ದ ಪೊಲೀಸರು ಕಾರ್ಯಾಚರಣೆ ಶುರು ಮಾಡಿಕೊಂಡಿದ್ದರು. ಕೊಲೆ ಮಾಡಿ ಎಸ್ಕೇಪ್ ಆಗುತ್ತಿದ್ದ ಫಿಲಿಕ್ಸ್ ನಿರಂತರವಾಗಿ ಮೊಬೈಲ್ ಯೂಸ್ ಮಾಡುತ್ತಿದ್ದ. ಯಾವ ಯಾವ ನ್ಯೂಸ್ ನಲ್ಲಿ ಕೊಲೆ ಬಗ್ಗೆ ಸ್ಟೋರಿ ಬರುತ್ತಿದೆ ಎಂದು ನೋಡುತ್ತಿದ್ದ. ಅಷ್ಟೇ ಅಲ್ಲದೆ, ಇನ್ ಸ್ಟಾಗ್ರಾಂನಲ್ಲಿ ಆಗಾಗ ಸ್ಟೇಟಸ್ ಕೂಡ ಅಪ್ಡೇಟ್ ಮಾಡುತಿದ್ದರಿಂದ ಪೊಲೀಸರಿಗೆ ಕಿರಾತಕನನ್ನು ಪತ್ತೆ ಮಾಡಲು ಸಹಕಾರಿಯಾಗಿದೆ.

ಫಿಲಿಕ್ಸ್ ಜೊತೆಗೆ ವಿನಯ್ ರೆಡ್ಡಿ, ಶಿವು ಎಂಬುವವರನ್ನ ಸಹ ಪೊಲೀಸರು ಬಂಧಿಸಿದ್ದಾರೆ. ಕೊಲೆಯಾದ ಫಣೀಂದ್ರ, ಫಿಲಿಕ್ಸ್’ನನ್ನು ಇತ್ತೀಚೆಗೆ ಕೆಲಸದಿಂದ ತೆಗೆದು ಹಾಕಿದ್ದನಂತೆ. ಅಷ್ಟೇ ಅಲ್ಲದೆ ಕೆಲಸದ ವೇಳೆಯಲ್ಲಿ ಫಿಲಿಕ್ಸ್ ಗೆ ಬೈಯ್ಯುತ್ತಿದ್ದನಂತೆ. ಅದೇ ದ್ವೇಷದ ಹಿನ್ನೆಲೆಯಕ್ಕು ಫಣೀಂದ್ರನನ್ನ ಹತ್ಯೆ ಮಾಡಲು ಫಿಲಿಕ್ಸ್ ಪ್ಲಾನ್ ಮಾಡಿದ್ದ ಎಂದು ಹೇಳಲಾಗುತ್ತಿದೆ.

ಆರೋಪಿಗಳಿಗೆ ವಿನು ಕುಮಾರ್ ಹತ್ಯೆ ಮಾಡುವ ಉದ್ದೇಶವಿರಲಿಲ್ಲ. ಆದರೆ ಫಣೀಂದ್ರನ ಹತ್ಯೆ ವೇಳೆ ವಿನುಕುಮಾರ್ ಬಿಡಿಸಲು ಬಂದಿದ್ದರಿಂದ ಆತನನ್ನು ಕೂಡ ಹಂತಕರು ಕೊಂದು ಮುಗಿಸಿದ್ದರು. ಆರೋಪಿಗಳಾದ ವಿನಯ್ ರೆಡ್ಡಿ ಹಾಗೂ ಶಿವುಗೂ ಫಣೀಂಧ್ರನ ಮೇಲೆ ಯಾವುದೇ ದ್ವೇಷವಿರಲಿಲ್ಲ. ಆದರೆ ಫಿಲಿಕ್ಸ್ ಮಾತನ್ನ ಕೇಳಿ ಹತ್ಯೆಗೆ ಕೈ ಜೋಡಿಸಿದ್ದಾರೆ.

ಇದನ್ನೂ ಓದಿ: ಪೋಷಕರೇ ಹುಷಾರ್! ರಾಜ್ಯದ ಈ ಭಾಗದಲ್ಲಿ ಸಕ್ರಿಯವಾಗಿದೆ ಮಕ್ಕಳ ಅಪಹರಣಕಾರರ ಗ್ಯಾಂಗ್!

ಟವರ್ ಡಂಪ್ ಆಧರಿಸಿ ಆರೋಪಿಗಳನ್ನ ಬಂಧಿಸಿರುವ ಅಮೃತಹಳ್ಳಿ ಪೊಲೀಸರುಮ ಆರೋಪಿಗಳ ಪತ್ತೆಗೆ 5 ತಂಡ ರಚಿಸಿದ್ದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News