ನಟ ದರ್ಶನ್, ಪವಿತ್ರಾ ಗೌಡ ಸೇರಿ 13 ಜನರ ಮೊಬೈಲ್ ಸೀಜ್! ಆರೋಪಿಗಳ ಫಿಂಗರ್ ಪ್ರಿಂಟ್ ಪಡೆದ ಪೊಲೀಸರು

Darshan Pavithra Gowda: ವಿಚಾರಣೆಯನ್ನು ಮುಂದುವರೆಸಿರುವ ಪೊಲೀಸರು ಆರೋಪಿಗಳ ಫಿಂಗರ್ ಪ್ರಿಂಟ್ ಹಾಗೂ ಫುಟ್ ಪ್ರಿಂಟ್ ಟೆಸ್ಟ್‌ಗೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. 

Written by - Chetana Devarmani | Last Updated : Jun 12, 2024, 08:50 AM IST
  • ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್‌ ಅರೆಸ್ಟ್‌
  • ಪೊಲೀಸ್​ ಕಸ್ಟಡಿಗೆ ನೀಡಿ ಕೋರ್ಟ್‌ ಆದೇಶ
  • ದರ್ಶನ್ ಮೊಬೈಲ್ ವಶಕ್ಕೆ ಪಡೆದ ಪೊಲೀಸರು
ನಟ ದರ್ಶನ್, ಪವಿತ್ರಾ ಗೌಡ ಸೇರಿ 13 ಜನರ ಮೊಬೈಲ್ ಸೀಜ್! ಆರೋಪಿಗಳ ಫಿಂಗರ್ ಪ್ರಿಂಟ್ ಪಡೆದ ಪೊಲೀಸರು title=

ಬೆಂಗಳೂರು: ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ಕೊಲೆ ಮಾಡಿರುವ ಆರೋಪದ ಮೇಲೆ ಬಂಧಿತರಾದ ನಟ ದರ್ಶನ್ ಸದ್ಯ ಪೊಲೀಸ್‌ ಕಸ್ಟಡಿಯಲ್ಲಿದ್ದಾರೆ. 6 ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ನೀಡಿ ಕೋರ್ಟ್‌ ಆದೇಶಿಸಿದೆ. ಬೆಂಗಳೂರಿನ ಅನ್ನಪೂರ್ಣೇಶ್ವರಿನಗರ ಪೊಲೀಸ್​ ಠಾಣೆಯಲ್ಲಿ 13 ಜನರನ್ನೂ ಇರಿಸಲಾಗಿದೆ.  

ವಿಚಾರಣೆಯನ್ನು ಮುಂದುವರೆಸಿರುವ ಪೊಲೀಸರು ಆರೋಪಿಗಳ ಫಿಂಗರ್ ಪ್ರಿಂಟ್ ಹಾಗೂ ಫುಟ್ ಪ್ರಿಂಟ್ ಟೆಸ್ಟ್‌ಗೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ಆರೋಪಿಗಳ ಫಿಂಗರ್ ಪ್ರಿಂಟ್ ಹಾಗೂ ಫುಟ್ ಪ್ರಿಂಟ್ ಅನ್ನು ಕೊಲೆ ನಡೆದ ಸ್ಥಳದಲ್ಲಿ ದೊರೆತ ಫಿಂಗರ್ ಪ್ರಿಂಟ್ ಹಾಗೂ ಫುಟ್ ಪ್ರಿಂಟ್ ಗೆ ಮ್ಯಾಚ್‌ ಮಾಡಿ ನೋಡಲಾಗುತ್ತದೆ. 

ಇದನ್ನೂ ಓದಿ: ಕೊಲೆಗೂ ನನಗೂ ಸಂಬಂಧವಿಲ್ಲ ಎಂದಿದ್ದ ದರ್ಶನ್‌.. ಈಗ ಪೊಲೀಸರ ಮುಂದೆ ಹೇಳಿದ್ದೆ ಬೇರೆ !?

ಪವಿತ್ರಾ ಗೌಡ ಮತ್ತು ದರ್ಶನ್ ಸೇರಿ 13 ಜನರ ಫಿಂಗರ್ ಪ್ರಿಂಟ್ ಹಾಗೂ ಫುಟ್ ಪ್ರಿಂಟ್ ಅನ್ನು ಪೊಲೀಸರು ಈಗಾಗಲೆ ಪಡೆದಿದ್ದಾರೆ ಎಂದು ಮಾಹಿತಿ ದೊರೆತಿದೆ. ಘಟನಾ ಸ್ಥಳದಲ್ಲಿ ದೊರೆತ ಫಿಂಗರ್ ಪ್ರಿಂಟ್, ಫುಟ್ ಪ್ರಿಂಟ್ ಗಳನ್ನ ಈ 13 ಜನರ ಫಿಂಗರ್ ಪ್ರಿಂಟ್ ಹಾಗೂ ಫುಟ್ ಪ್ರಿಂಟ್ ಜೊತೆಗೆ ಮ್ಯಾಚ್ ಮಾಡಲಾಗುತ್ತದೆ. 

ಎಫ್ಎಸ್ಎಲ್ ವರದಿಗೆ ಕಳಿಸಲು ತಯಾರಿ ನಡೆಯುತ್ತಿದೆ ಎಂದು ತಿಳಿದುಬಂದಿದೆ. ಫುಟ್ ಮತ್ತು ಫ್ರಿಂಗರ್ ಫ್ರಿಂಟ್ ಮ್ಯಾಚ್ ಆದ್ರೆ 6 ದಿನಗಳ ನಂತರ ಮತ್ತೆ ಪೊಲೀಸ್ ಕಸ್ಟಡಿಗೆ ಪಡೆಯುವ ಸಾಧ್ಯತೆ ಹೆಚ್ಚಾಗಿದೆ. 

ದರ್ಶನ್‌ ಪೊಲೀಸ್ ಕಸ್ಟಡಿ ಮುಗಿಯುವ ವೇಳೆಗೆ ಎಫ್ಎಸ್ಎಲ್ ವರದಿ ಪೊಲೀಸರ ಕೈ ಸೇರುವ ಸಾಧ್ಯತೆ ಇದೆ. ಸದ್ಯ ಜೂನ್ 09 ರ ಸಿಡಿಆರ್ ಹಾಗೂ ಟವರ್ ಡಂಪ್ ಆಧಾರದಲ್ಲಿ ದರ್ಶನ್, ಪವಿತ್ರಾ ಗೌಡ ಮತ್ತು ಇತರರನ್ನು ಪೊಲೀಸರು ಬಂಧಿಸಿದ್ದಾರೆ. 

ಇದನ್ನೂ ಓದಿ: Darshan Arrest: ಪೊಲೀಸರು ಕೊಟ್ಟ ಸಾಕ್ಷಿ ನೋಡಿ ಶಾಕ್ ಆದ ಚಾಲೆಂಜಿಂಗ್ ಸ್ಟಾರ್... ಆತಂಕದಲ್ಲಿ ನಟ ದರ್ಶನ್ !?

ಹತ್ಯೆ ನಡೆದಿದ್ದು ಯಾಕೆ?

ಪವಿತ್ರಾ ಗೌಡಗೆ ಚಿತ್ರದುರ್ಗದ ರೇಣುಕಾ ಸ್ವಾಮಿ ಅಶ್ಲೀಲ ಸಂದೇಶಗಳನ್ನು ಕಳಿಸಿದ್ದರು ಎಂದು ಆರೋಪಿಸಿ ರೇಣುಕಾ ಸ್ವಾಮಿಯನ್ನು ದರ್ಶನ್​ ಗ್ಯಾಂಗ್​ ಅಪಹರಿಸಿತ್ತು ಎಂದು ಹೇಳಲಾಗಿದೆ. ಬೆಂಗಳೂರಿನಲ್ಲಿ ರೇಣುಕಾ ಸ್ವಾಮಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ. 

ಈ ಕುರಿತು ವಿಚಾರಣೆ ತೀವ್ರವಾಗಿದೆ. ವಿಚಾರಣೆಗಾಗಿ ದರ್ಶನ್​ ಅವರನ್ನು 6 ದಿನಗಳ ಕಾಲ ಕಸ್ಟಡಿಗೆ ನೀಡಲಾಗಿದೆ. ಪ್ರತಿ ದಿನ ವಕೀಲರನ್ನು ಭೇಟಿ ಮಾಡಿಸಬೇಕು ಎಂದು ಆದೇಶಿಸಲಾಗಿದೆ. ಪ್ರತಿ 2 ದಿನಕ್ಕೆ ತನಿಖೆಯ ವಿವರವನ್ನು ಕೋರ್ಟ್‌ಗೆ ನೀಡಬೇಕು ಎಂದು ನ್ಯಾಯಾಲಯ ಸೂಚನೆ ನೀಡಿದೆ ಎಂದು ನಟ ದರ್ಶನ್​ ಪರ ವಕೀಲರು ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News