ಪಾರ್ಕಿಂಗ್ ವಿಚಾರಕ್ಕೆ ದಂಪತಿ ಮೇಲೆ ಹಲ್ಲೆ : ಅಟ್ಟಹಾಸ ಮೆರೆದ ಅವಿವೇಕಿಗಳು ಅಂದರ್

ಅವ್ರು ಟೆಕ್ಕಿ ದಂಪತಿ. ಒಂದು ತಿಂಗಳ‌ ಹಿಂದಷ್ಟೇ ದೊಡ್ಡನೆಕ್ಕುಂದಿಯಲ್ಲಿ ಬಂದು ನೆಲೆಸಿದ್ರು. ಖಾಲಿ ಜಾಗ ಇದೆ ಅಂತಾ ಕಾರ್ ಪಾರ್ಕ್ ಮಾಡಿದ್ರು. ಪಕ್ಕದಲ್ಲಿದ್ದ ಮನೆಯವ್ರಿಗೆ ಅದೇನಾಯ್ತೋ ಎನೋ ಅಮಾಯಕರ ಮೇಲೆ ಅಟ್ಟಹಾಸ ಮೆರೆದಿದ್ದಾರೆ. ಹೆಣ್ಣು ಅನ್ನೋದನ್ನು ನೋಡದ ಹೆಮ್ಮಾರಿ ಬಟ್ಟೆ ಹರಿದು ಹಲ್ಲೆ ಮಾಡಿದ್ದಾಳೆ.

Written by - VISHWANATH HARIHARA | Edited by - Krishna N K | Last Updated : Mar 18, 2024, 06:51 PM IST
    • ಒಂದು ವರ್ಷದ ಹಿಂದಷ್ಟೇ ಮದುವೆಯಾಗಿದ್ದ ದಂಪತಿ ಮೇಲೆ ಹಲ್ಲೆ
    • ಕಾರು ಪಾರ್ಕಿಂಗ್‌ ವಿಚಾರವಾಗಿ ಟೆಕ್ಕಿ ದಂಪತಿಯ ಮೇಲೆ ಹಲ್ಲೆ
    • ಮಾರತ್ತಹಳ್ಳಿ ಸಮೀಪದ ದೊಡ್ಡನೆಕ್ಕುಂದಿಯಲ್ಲಿ ನಡೆದ ಘಟನೆ
ಪಾರ್ಕಿಂಗ್ ವಿಚಾರಕ್ಕೆ ದಂಪತಿ ಮೇಲೆ ಹಲ್ಲೆ : ಅಟ್ಟಹಾಸ ಮೆರೆದ ಅವಿವೇಕಿಗಳು ಅಂದರ್ title=

ಬೆಂಗಳೂರು : ಅಮಾಯಕ ವ್ಯಕ್ತಿಯ ಮೇಲೆ ಮುಗಿ ಬಿದ್ದಿರೋ ಮೃಗಗಳು. ಕೆಳಗೆ ಬೀಳಿಸಿ ಅದ್ಹೇಗೆ ಹಲ್ಲೆ ಮಾಡ್ತಿದ್ದಾರೆ ನೋಡಿ. ಹೆಣ್ಣು ಅನ್ನೋದನ್ನು ನೋಡದ ಅವಿವೇಕಿಗಳು ಅಟ್ಟಹಾಸ ಮೆರೆದಿದ್ದಾರೆ. ರಾತ್ರಿ ಹೊತ್ತು ನಡೆದ ಈ ಗಲಾಟೆ ಕೇವಲ ಪಾರ್ಕಿಂಗ್ ವಿಚಾರಕ್ಕೆ ಅನ್ನೋದೆ ವಿಪರ್ಯಾಸ.

ಹೌದು... ಹೀಗೆ ಅಮಾಯಕರಂತೆ ನಿಂತಿರೊ ಈ ದಂಪತಿಗಳ ಹೆಸರು ಸಹಿಷ್ಣು ಮತ್ತು ರೋಹಿಣಿ. ಸಹಿಷ್ಣು ಬೆಳಗಾವಿ ಮೂಲದವ್ನಾದ್ರೆ ರೋಹಿಣಿ ಮೈಸೂರಿನವಳು. ಇಬ್ಬರು ಐಟಿ ಫೀಲ್ಡ್ ನಲ್ಲಿ ಕೆಲಸ ಮಾಡ್ತಾರೆ. ಒಂದು ವರ್ಷದ ಹಿಂದಷ್ಟೇ ಮದುವೆಯಾದ ಈ ಜೋಡಿ 1 ತಿಂಗಳ ಹಿಂದೆ ಮಾರತ್ತಹಳ್ಳಿ ಸಮೀಪದ ದೊಡ್ಡನೆಕ್ಕುಂದಿಯಲ್ಲಿರುವ ಎಸ್‌ಸಿಆರ್ ಅನ್ನೊ ಅಪಾರ್ಟ್ ಮೆಂಟ್ ನಲ್ಲಿ ಬಂದು ವಾಸವಾಗಿದ್ದಾರೆ‌‌‌.

ಇದನ್ನೂ ಓದಿ:ರಸ್ತೆ ಬದಿ ಮಲಗಿದ್ದ ಕರುವಿನ ಮೇಲೆ ಕಾರು ಹತ್ತಿಸಿ ಪ್ರಾಣ ತೆಗೆದ ಪಾಪಿ..!

ಕೆಲವು ಸಮಯ ಅಪಾರ್ಟ್ ಮೆಂಟ್ ಮುಂಭಾಗದಲ್ಲಿರೊ ಇದೇ ಖಾಲಿ ಜಾಗದಲ್ಲಿ ತಮ್ಮ ಐ20 ಕಾರನ್ನು ಪಾರ್ಕ್ ಮಾಡ್ತಾರೆ. ಇದೇ ಜಾಗದ ಪಕ್ಕದಲ್ಲೇ ಅನಂತಮೂರ್ತಿ ಅನ್ನೋರ ಮನೆ ಇದೆ. ಇದ್ದಕ್ಕಿದ್ದಂತೆ ಮನೆಯವ್ರು ಕಾರಿನ ಮೇಲೆ ಮಣ್ಣು ಹಾಕಿ ಉಗುಳೋದನ್ನ ಮಾಡಿದ್ದಾರೆ. ಅಲ್ಲದೆ ಕಾರಿನ ಚಕ್ರದ ಗಾಳಿ ಬಿಟ್ಟಿದ್ದಾರೆ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಅನಂತ ಮೂರ್ತಿ, ಪ್ರಶಾಂತ್ ಹಾಗೂ ಅನಂತ ಮೂರ್ತಿ ಪತ್ನಿ ಈ ಮುಗ್ಧ ದಂಪತಿ ಮೇಲೆ ಹಲ್ಲೆ ಮಾಡಿದ್ದಾರೆ‌‌. ಕ್ಷಮೆ ಕೇಳಿದ್ರು ಬಿಡದ ರಾಕ್ಷಸಕರು ಕೆಳಗೆ ಬೀಳಿಸಿ ಕಾಲಿನಿಂದ ಒದ್ದು ವಿಕೃತಿ ಮೆರೆದಿದ್ದಾರೆ.

ಇನ್ನು ಇದೆಲ್ಲವನ್ನು ಮೊಬೈಲ್ ಚಿತ್ರೀಕರಣ ಮಾಡಿಕೊಳ್ತಿದ್ದ ರೋಹಿಣಿ ಮೇಲೆ ಅನಂತ ಮೂರ್ತಿ ಪತ್ನಿ ಮುಗಿಬಿದ್ದಿದ್ದಾರೆ. ಮೊಬೈಲ್ ಕಸಿದುಕೊಳ್ಳಲು ನೋಡಿದ್ದಾರೆ. ಕೊಡದಿದ್ದಾಗ.. ಬಟ್ಟೆ ಹರಿದು ಹಲ್ಲೆ ಮಾಡಿದ್ದಾರೆ.. ಒಂದು ಹೆಣ್ಣು ಅನ್ನೋದನ್ನು ನೋಡದೇ ಈ‌ ರೀತಿ ವರ್ತಿಸಿರೋದು ಸ್ಥಳೀಯರ ಆಕ್ರೋಶಕ್ಕು ಕಾರಣವಾಗಿದೆ.

ಇದನ್ನೂ ಓದಿ:ಜಗದೀಶ್‌ ಶೆಟ್ಟರ್‌ಗೆ ಟಿಕೆಟ್ ತಪ್ಪಿದರೇ ಉಗ್ರ ಹೋರಾಟ: ಬಿಜೆಪಿಗೆ ವೀರಶೈವ ಲಿಂಗಾಯತ ಮಹಾಸಭಾ ಎಚ್ಚರಿಕೆ!

ಘಟನೆ ಸಂಬಂಧ ರೋಹಿಣಿ ಹೆಚ್ಎಎಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಎಫ್ಐಆರ್ ದಾಖಲಿಸಿಕೊಂಡ ಪೊಲೀಸರು ಅನಂತಮೂರ್ತಿ, ಪ್ರಶಾಂತ್ ಹಾಗೂ ಅನಂತಮೂರ್ತಿ ಪತ್ನಿಯನ್ನು ಬಂಧಿಸಿದ್ದಾರೆ. ಅದೇನೆ ಹೇಳಿ ಪಾರ್ಕಿಂಗ್ ಮಾಡ್ಬೇಡಿ ಅಂತಾ ಒಮ್ಮೆ ಹೇಳಿದ್ದಿದ್ರು. ಇಂತಹ ಅನಾಹುತ ಆಗ್ತಿರ್ಲಿಲ್ಲ. ಆದ್ರೆ ಏಕಾ ಏಕಿ ಈ ರೀತಿ ನಡುರಸ್ತೆಯಲ್ಲಿ ಹಲ್ಲೆ‌ ಮಾಡಿರೋಗೆ ಪೊಲೀಸರು ಬುದ್ಧಿ ಕಲಿಸಲೇಬೇಕು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News