ಭಾರತೀಯ ಉದ್ಯೋಗಿಗಳಿಗಿದೆ ಗುಣಮಟ್ಟದ ತರಬೇತಿಯ ಕೊರತೆ

ವರ್ಲ್ಡ್ ಎಕನಾಮಿಕ್ ಫೋರಮ್ ಬಿಡುಗಡೆಗೊಳಿಸಿದ 2021ರ ಜಾಗತಿಕ ಸ್ಪರ್ಧಾತ್ಮಕ ವರದಿಯಲ್ಲಿ ಕೌಶಲ್ಯ ಹೊಂದಿರುವ ಉದ್ಯೋಗಿಗಳ ಲಭ್ಯತಾ ಪಟ್ಟಿಯಲ್ಲಿ ಭಾರತ 141 ರಾಷ್ಟ್ರಗಳಲ್ಲಿ 57ನೇ ಸ್ಥಾನ ಹೊಂದಿದೆ. ಈ ವರದಿಯ ಪ್ರಕಾರ, ಭಾರತೀಯ ಉದ್ಯೋಗಿಗಳು ನಾಲ್ಕನೇ ಔದ್ಯಮಿಕ ಕ್ರಾಂತಿ ನಡೆಯಲು ಬೇಕಾಗಿರುವ ಕೌಶಲಗಳನ್ನು ಹೊಂದಿಲ್ಲ.

Written by - Girish Linganna | Edited by - Yashaswini V | Last Updated : May 25, 2023, 03:57 PM IST
  • ಯುವ ಜನತೆಯಲ್ಲಿ ಕೌಶಲಗಳನ್ನು ಅಭಿವೃದ್ಧಿಪಡಿಸಲು ಭಾರತ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ.
  • 2015ರಲ್ಲಿ ಸರ್ಕಾರ ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನಾ (ಪಿಎಂಕೆವಿವೈ) ಎಂಬ ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ಯೋಜನೆಯನ್ನು ಆರಂಭಿಸಿತು.
  • ಪಿಎಂಕೆವಿವೈ ಆರಂಭಗೊಂಡ ಬಳಿಕ 10 ಮಿಲಿಯನ್‌ಗೂ ಹೆಚ್ಚು ಯುವಕರಿಗೆ ತರಬೇತಿ ಒದಗಿಸಿದೆ. ಆದರೆ, ಈ ಯೋಜನೆ ಕೇವಲ ಅಲ್ಪಾವಧಿಯ ತರಬೇತಿ ನೀಡುತ್ತಿದ್ದು, ಸ್ಥಿರ ಉದ್ಯೋಗ ಪಡೆಯಲು ಪೂರಕವಾಗಿಲ್ಲ ಎಂಬ ಟೀಕೆಗಳೂ ವ್ಯಕ್ತವಾಗಿವೆ.
ಭಾರತೀಯ ಉದ್ಯೋಗಿಗಳಿಗಿದೆ ಗುಣಮಟ್ಟದ ತರಬೇತಿಯ ಕೊರತೆ title=

ಭಾರತೀಯ ಯುವಜನತೆಯಲ್ಲಿ ಕೌಶಲ್ಯಾಭಿವೃದ್ಧಿ ಸಾಧಿಸುವುದು ಒಂದು ಕಳವಳದ ವಿಚಾರವಾಗಿದೆ. ವಿಶ್ವಬ್ಯಾಂಕ್ ವರದಿಯೊಂದರ ಪ್ರಕಾರ, ಭಾರತದಲ್ಲಿ 600 ಮಿಲಿಯನ್‌ಗೂ ಅಧಿಕ ಯುವಜನತೆ 25 ವರ್ಷ ವಯಸ್ಸಿನ ಕೆಳಗಿನವರಾಗಿದ್ದು, ಭಾರತ ಜಗತ್ತಿನ ಅತಿಹೆಚ್ಚು ಯುವ ಜನತೆಯ ಸಂಖ್ಯೆಯನ್ನು ಹೊಂದಿದೆ. ಆದರೆ, ಈ ಭಾರೀ ಪ್ರಮಾಣದ ಜನರಲ್ಲಿ ಕೆಲವರಿಗಷ್ಟೇ ಉದ್ಯೋಗದಲ್ಲಿ ಯಶಸ್ವಿಯಾಗಲು ಬೇಕಾಗಿರುವ ಕೌಶಲಗಳಿವೆ.

ವರ್ಲ್ಡ್ ಎಕನಾಮಿಕ್ ಫೋರಮ್ ಬಿಡುಗಡೆಗೊಳಿಸಿದ 2021ರ ಜಾಗತಿಕ ಸ್ಪರ್ಧಾತ್ಮಕ ವರದಿಯಲ್ಲಿ ಕೌಶಲ್ಯ ಹೊಂದಿರುವ ಉದ್ಯೋಗಿಗಳ ಲಭ್ಯತಾ ಪಟ್ಟಿಯಲ್ಲಿ ಭಾರತ 141 ರಾಷ್ಟ್ರಗಳಲ್ಲಿ 57ನೇ ಸ್ಥಾನ ಹೊಂದಿದೆ. ಈ ವರದಿಯ ಪ್ರಕಾರ, ಭಾರತೀಯ ಉದ್ಯೋಗಿಗಳು ನಾಲ್ಕನೇ ಔದ್ಯಮಿಕ ಕ್ರಾಂತಿ ನಡೆಯಲು ಬೇಕಾಗಿರುವ ಕೌಶಲಗಳನ್ನು ಹೊಂದಿಲ್ಲ.

ಭಾರತೀಯ ಯುವಜನರಲ್ಲಿ ಕೌಶಲ್ಯಾಭಿವೃದ್ಧಿ ಯಾಕೆ ಇಷ್ಟೊಂದು ಕೆಳಮಟ್ಟದಲ್ಲಿದೆ ಎನ್ನುವುದಕ್ಕೆ ಹಲವು ಕಾರಣಗಳಿವೆ. ಅವುಗಳಲ್ಲಿ ಒಂದು ಕಾರಣವೆಂದರೆ, ಭಾರತದ ಶಿಕ್ಷಣ ವ್ಯವಸ್ಥೆ ವಿದ್ಯಾರ್ಥಿಗಳಿಗೆ ಔದ್ಯೋಗಿಕ ಹಂತದಲ್ಲಿ ಅಗತ್ಯವಿರುವ ಕೌಶಲಗಳನ್ನು ಕಲಿಸಲು ಸಮರ್ಥವಾಗಿಲ್ಲ. ಇನ್ನೊಂದು ಕಾರಣವೆಂದರೆ, ಗುಣಮಟ್ಟದ ತರಬೇತಿಯ ಕೊರತೆ ಭಾರತೀಯ ಯುವಜನರನ್ನು ಕಾಡುತ್ತಿದೆ. ಅಂತಿಮವಾಗಿ, ಭಾರತದಲ್ಲಿ ಬಹಳಷ್ಟು ಯುವಕರು ಬಡ ಕುಟುಂಬಗಳಿಂದ ಬರುತ್ತಿದ್ದು, ತರಬೇತಿಗಾಗಿ ಹೆಚ್ಚಿನ ಹಣ ವೆಚ್ಚ ಮಾಡುವ ಸಾಮರ್ಥ್ಯ ಹೊಂದಿಲ್ಲ.

ಇದನ್ನೂ ಓದಿ- ಆಗಸದಲ್ಲಿನ ಅಪಾಯಗಳು: ವಿಮಾನಕ್ಕೆ ಹಕ್ಕಿ ಡಿಕ್ಕಿ ಹೊಡೆಯುವುದು ಯಾಕೆ ಗಂಭೀರ ತೊಂದರೆ?

ಕರ್ನಾಟಕ ಸರ್ಕಾರವನ್ನೂ ಕೌಶಲ್ಯಾಭಿವೃದ್ಧಿಯ ಕುರಿತು ಗಮನ ಹರಿಸಿಲ್ಲ ಎಂಬ ಆರೋಪಕ್ಕಾಗಿ ಟೀಕೆಗೆ ಗುರಿಯಾಗಿಸಲಾಗಿದೆ. ಕರ್ನಾಟಕವೂ ಯುವ ಜನತೆಯ ಪಡೆಯನ್ನೇ ಹೊಂದಿದ್ದರೂ, ಅವರು ಉದ್ಯೋಗ ಪಡೆಯಲು ಅಗತ್ಯವಿರುವ ಕೌಶಲಗಳನ್ನು ಗಳಿಸಿಕೊಂಡಿಲ್ಲ.

ಯುವ ಜನತೆಯಲ್ಲಿ ಕೌಶಲಗಳನ್ನು ಅಭಿವೃದ್ಧಿಪಡಿಸಲು ಭಾರತ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. 2015ರಲ್ಲಿ ಸರ್ಕಾರ ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನಾ (ಪಿಎಂಕೆವಿವೈ) ಎಂಬ ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ಯೋಜನೆಯನ್ನು ಆರಂಭಿಸಿತು. ಪಿಎಂಕೆವಿವೈ ಆರಂಭಗೊಂಡ ಬಳಿಕ 10 ಮಿಲಿಯನ್‌ಗೂ ಹೆಚ್ಚು ಯುವಕರಿಗೆ ತರಬೇತಿ ಒದಗಿಸಿದೆ. ಆದರೆ, ಈ ಯೋಜನೆ ಕೇವಲ ಅಲ್ಪಾವಧಿಯ ತರಬೇತಿ ನೀಡುತ್ತಿದ್ದು, ಸ್ಥಿರ ಉದ್ಯೋಗ ಪಡೆಯಲು ಪೂರಕವಾಗಿಲ್ಲ ಎಂಬ ಟೀಕೆಗಳೂ ವ್ಯಕ್ತವಾಗಿವೆ.

ಯುವ ಜನತೆಯಲ್ಲಿ ಕೌಶಲ್ಯಾಭಿವೃದ್ಧಿ ಮೂಡಿಸಲು ಭಾರತ ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳಬಹುದಾಗಿದೆ. ಸರ್ಕಾರ ಶಿಕ್ಷಣ ವ್ಯವಸ್ಥೆಯನ್ನು ಸುಧಾರಣೆಗೊಳಿಸಿ, ಉದ್ಯೋಗ ವಲಯಕ್ಕೆ ಅಗತ್ಯವಿರುವ ಬದಲಾವಣೆಗಳನ್ನು ತರಬಹುದಾಗಿದೆ. ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಸಕ್ತಿ ಹೊಂದಿರುವ ಯುವಕರಿಗೆ ಆರ್ಥಿಕ ಸಹಾಯವನ್ನು ಸರ್ಕಾರ ಮಾಡಬಹುದು. ಅಂತಿಮವಾಗಿ, ಸರ್ಕಾರ ಖಾಸಗಿ ವಲಯದೊಂದಿಗೆ ಸಹಯೋಗ ಹೊಂದಿ ಆ ಮೂಲಕ ಯುವಕರಿಗೆ ಉದ್ಯೋಗ ಕ್ಷೇತ್ರದಲ್ಲಿ ಯಶಸ್ವಿಯಾಗಲು ಬೇಕಾದ ಕೌಶಲ್ಯಗಳನ್ನು ಸಂಪಾದಿಸಲು ನೆರವಾಗಬಹುದು.

ಯುವಜನತೆಯಲ್ಲಿ ಕೌಶಲ್ಯಾಭಿವೃದ್ಧಿ ಸಾಧಿಸಲು ಭಾರತ ಎದುರಿಸುತ್ತಿರುವ ಕೆಲವು ಸವಾಲುಗಳು:
* ಗುಣಮಟ್ಟದ ತರಬೇತಿ ಕಾರ್ಯಕ್ರಮಗಳ ಕೊರತೆ:

ಭಾರತದಲ್ಲಿ ಉದ್ಯೋಗ ಪಡೆಯಲು ಅಗತ್ಯವಿರುವ ಕೌಶಲ್ಯಗಳನ್ನು ಬೋಧಿಸುವ ಗುಣಮಟ್ಟದ ತರಬೇತಿಯ ಕೊರತೆಯಿದೆ. ಹಲವು ತರಬೇತಿ ಕಾರ್ಯಕ್ರಮಗಳು ಹಳೆಯದಾಗಿದ್ದು, ಇಂದಿನ ಉದ್ಯೋಗ ಮಾರುಕಟ್ಟೆಗೆ ಅಗತ್ಯವಿರುವ ಕೌಶಲಗಳನ್ನು ಯುವಜನತೆಗೆ ಕಲಿಸಲು ವಿಫಲವಾಗಿವೆ.

* ಹೆಚ್ಚು ವೆಚ್ಚದಾಯಕವಾದ ತರಬೇತಿ:
ತಮ್ಮ ಕೌಶಲಗಳನ್ನು ಸುಧಾರಿಸಬೇಕು, ತರಬೇತಿ ಹೊಂದಬೇಕು ಎಂದು ಬಯಸುವ ಯುವಜನತೆಗೆ ಅದಕ್ಕೆ ತಗಲುವ ವೆಚ್ಚ ಒಂದು ಅಡ್ಡಿಯಾಗಿ ಪರಿಣಮಿಸಬಹುದು. ಆದ್ದರಿಂದ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಬಯಸುವ ಯುವ ಜನತೆಗೆ ಸರ್ಕಾರ ಆರ್ಥಿಕ ಸಹಾಯ ಒದಗಿಸಬೇಕು.

* ಅರಿವಿನ ಕೊರತೆ:
ಬಹಳಷ್ಟು ಯುವಜನರಿಗೆ ಕೌಶಲ್ಯಾಭಿವೃದ್ಧಿಯ ಪ್ರಯೋಜನಗಳ ಕುರಿತು ಅರಿವಿಲ್ಲ. ಆದ್ದರಿಂದ ಸರ್ಕಾರ ಕೌಶಲ್ಯಾಭಿವೃದ್ಧಿಯ ಮಹತ್ವದ ಕುರಿತು ಅರಿವು ಮೂಡಿಸುವ ಮತ್ತು ಅದರಿಂದ ಲಭಿಸುವ ಅವಕಾಶಗಳ ಕುರಿತಾದ ಜ್ಞಾನ ಒದಗಿಸುವ ಅಗತ್ಯವಿದೆ.

ಇದನ್ನೂ ಓದಿ- ಯುದ್ಧ ವಿಮಾನದಿಂದ ಜಿಗಿದ ಬಳಿಕ ಯಾಕೆ ಪೈಲಟ್ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ?

ಈ ಎಲ್ಲ ಸವಾಲುಗಳ ಹೊರತಾಗಿಯೂ, ಭಾರತೀಯ ಯುವಜನತೆಯಲ್ಲಿ ಕೌಶಲ್ಯಾಭಿವೃದ್ಧಿ ಸಾಧಿಸಲು ಇನ್ನಷ್ಟು ಕ್ರಮಗಳನ್ನು ಕೈಗೊಳ್ಳಬಹುದಾಗಿದೆ. ಸರ್ಕಾರ, ಖಾಸಗಿ ವಲಯ, ಹಾಗೂ ನಾಗರಿಕ ಸಮಾಜ ಎಲ್ಲರೂ ತಮ್ಮ ಪಾತ್ರಗಳನ್ನು ನಿರ್ವಹಿಸಿ, ಯುವಜನರು ಕೌಶಲ್ಯಭರಿತ ಉದ್ಯೋಗಿಗಳಾಗುತ್ತಾರೆ ಎಂದು ಖಾತ್ರಿಪಡಿಸಬೇಕಿದೆ.

ಕೌಶಲ್ಯಾಭಿವೃದ್ಧಿಯ ಕೊರತೆಗೆ ಇನ್ನೊಂದು ಪ್ರಮುಖ ಕಾರಣವೆಂದರೆ ಅಪಾರ ಪ್ರಮಾಣದ ಭ್ರಷ್ಟಾಚಾರ:-
ಹೌದು, ಭಾರತದ ಕೌಶಲ್ಯಾಭಿವೃದ್ಧಿ ವಲಯದಲ್ಲಿ ತಾಂಡವವಾಡುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರ ಯುವಜನರ ಕೌಶಲ್ಯದ ಕೊರತೆಗೆ ಇನ್ನೊಂದು ಕಾರಣ. ಕೌಶಲ್ಯಾಭಿವೃದ್ಧಿಯನ್ನು ಹಿಂದುಳಿಯುವಂತೆ ಮಾಡಲು ಇನ್ನಷ್ಟು ಕಾರಣಗಳಿವೆ. ಅವೆಂದರೆ,

ನಿಧಿಯ ದುರ್ಬಳಕೆ:
ಭ್ರಷ್ಟ ಅಧಿಕಾರಿಗಳು ಕೌಶಲ್ಯಾಭಿವೃದ್ಧಿಗಾಗಿ ಮೀಸಲಿಡಲಾದ ನಿಧಿಯನ್ನು ದುರ್ಬಳಕೆ ಮಾಡುವ ಸಾಧ್ಯತೆಗಳಿವೆ. ಇದರ ಪರಿಣಾಮವಾಗಿ ಸಂಪನ್ಮೂಲಗಳ ಕೊರತೆ ಮತ್ತು ತರಬೇತಿಯ ಗುಣಮಟ್ಟದ ಕೊರತೆ ಎದುರಾಗಬಹುದು.

ಲಂಚ:
ಭ್ರಷ್ಟ ಅಧಿಕಾರಿಗಳು ಕೌಶಲ್ಯಾಭಿವೃದ್ಧಿ ತರಬೇತಿಗಳಲ್ಲಿ ಭಾಗವಹಿಸಲು ಆಕಾಂಕ್ಷೆ ಹೊಂದಿರುವವರ ಬಳಿ ಲಂಚಕ್ಕಾಗಿ ಬೇಡಿಕೆ ಸಲ್ಲಿಸುತ್ತಾರೆ. ಇದು ಬಡವರು ಮತ್ತು ಅನಾನುಕೂಲತೆ ಹೊಂದಿರುವ ಯುವಕರಿಗೆ ತರಬೇತಿ ಪಡೆಯಲು ಸಾಧ್ಯವಾಗದಂತೆ ಮಾಡಬಹುದು.

ವಂಶಪಾರಂಪರ್ಯ:
ಭ್ರಷ್ಟ ಅಧಿಕಾರಿಗಳು, ರಾಜಕಾರಣಿಗಳು ಕೌಶಲ್ಯಾಭಿವೃದ್ಧಿ ಸಂಬಂಧಿಸಿದ ಉದ್ಯೋಗಗಳನ್ನು ಅವರ ಕುಟುಂಬಸ್ಥರಿಗೆ, ಸ್ನೇಹಿತರಿಗೆ ನೀಡುತ್ತಾರೆ. ಇದರಿಂದಾಗಿ ನುರಿತ ತರಬೇತುದಾರರ ಕೊರತೆ ಎದುರಾಗಿ, ತರಬೇತಿ ಗುಣಮಟ್ಟವೂ ಕುಂಠಿತವಾಗುತ್ತದೆ.

ರಾಜಕೀಯ ಹಸ್ತಕ್ಷೇಪ:
ಭ್ರಷ್ಟ ರಾಜಕಾರಣಿಗಳು ಕೌಶಲ್ಯಾಭಿವೃದ್ಧಿ ಯೋಜನೆಗಳಲ್ಲಿ ಹಸ್ತಕ್ಷೇಪ ನಡೆಸುತ್ತಾರೆ. ಇದರಿಂದಾಗಿ ತರಬೇತಿಯಲ್ಲಿ ಪಾರದರ್ಶಕತೆ, ಹೊಣೆಗಾರಿಕೆಯ ಕೊರತೆ, ಹಾಗೂ ಗುಣಮಟ್ಟದ ಕುಸಿತಕ್ಕೆ ಹಾದಿ ಮಾಡಿಕೊಡಬಹುದು.

ಕೌಶಲ್ಯಾಭಿವೃದ್ಧಿ ಕ್ಷೇತ್ರದಲ್ಲಿ ಈ ರೀತಿಯ ಭ್ರಷ್ಟಾಚಾರಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ಕೈಗೊಳ್ಳಬಹುದು.

ಪಾರದರ್ಶಕತೆಯ ಅಭಿವೃದ್ಧಿ:
ಸರ್ಕಾರ ಕೌಶಲ್ಯಾಭಿವೃದ್ಧಿ ಯೋಜನೆಗಳಿಗೆ ಮಾಡುವ ಖರ್ಚು ವೆಚ್ಚ ಹಾಗೂ ಯೋಜನೆಗಳ ಫಲಶ್ರುತಿಯ ಕುರಿತು ಸಾರ್ವಜನಿಕರಿಗೆ ಮಾಹಿತಿ ಒದಗಿಸಬೇಕು. ಇದು ಭ್ರಷ್ಟ ಅಧಿಕಾರಿಗಳ ನಿಧಿಯ ದುರ್ಬಳಕೆ ಮಾಡುವುದಕ್ಕೆ ಕಡಿವಾಣ ಹಾಕಲಾಗುತ್ತದೆ.

ಹೊಣೆಗಾರಿಕೆಯಲ್ಲಿ ಹೆಚ್ಚಳ:
ಸರ್ಕಾರ ಕೌಶಲ್ಯಾಭಿವೃದ್ಧಿ ಅಧಿಕಾರಿಗಳನ್ನು ಅವರ ಕ್ರಮಗಳಿಗೆ ಜವಾಬ್ದಾರರನ್ನಾಗಿಸುವ ವ್ಯವಸ್ಥೆಯನ್ನು ಜಾರಿಗೆ ತರಬೇಕು. ಈ ವ್ಯವಸ್ಥೆ ಇದಕ್ಕೆ ಸೂಕ್ತ ವಿಚಾರಣಾ ಕ್ರಮಗಳನ್ನೂ ಜಾರಿಗೆ ತರಬೇಕು.

ಕಾನೂನು ಜಾರಿ:
ಸರ್ಕಾರ ಕೌಶಲ್ಯಾಭಿವೃದ್ಧಿ ವಲಯದಲ್ಲಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಇದು ಭ್ರಷ್ಟಾಚಾರದ ಕುರಿತು ಸರ್ಕಾರ ಶೂನ್ಯ ಸಹಿಷ್ಣುತೆ ಹೊಂದಿದೆ ಎಂಬ ಸಂದೇಶ ರವಾನಿಸುತ್ತದೆ.

ಈ ಕ್ರಮಗಳನ್ನು ಕೈಗೊಳ್ಳುವ ಮೂಲಕ ಸರ್ಕಾರ ಕೌಶಲ್ಯಾಭಿವೃದ್ಧಿ ವಲಯದಲ್ಲಿನ ಭ್ರಷ್ಟಾಚಾರ ಕಡಿಮೆಗೊಳಿಸಿ, ಭಾರತದ ಯುವಜನತೆಗೆ ಕೌಶಲ್ಯಾಭಿವೃದ್ಧಿ ತರಬೇತಿಯ ಗುಣಮಟ್ಟವನ್ನು ಹೆಚ್ಚಿಸಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News