PM kisan ಯೋಜನೆಯ 10ನೇ ಕಂತಿನ ₹2000 ನಿಮ್ಮ ಖಾತೆಗೆ ಬಂದಿಲ್ಲವೇ? ಹಾಗಿದ್ರೆ ತಕ್ಷಣ ಈ ಕೆಲಸ  ಮಾಡಿ

ಕೇಂದ್ರ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯಾದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ 2020 ರ ಸಹಾಯದಿಂದ 20,000 ಕೋಟಿ ರೂಪಾಯಿಗಳನ್ನು 10 ಕೋಟಿಗೂ ಹೆಚ್ಚು ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ.

Written by - Channabasava A Kashinakunti | Last Updated : Jan 2, 2022, 11:42 AM IST
  • ಪಿಎಂ ಕಿಸಾನ್‌ನ 10ನೇ ಕಂತು ಬಿಡುಗಡೆಯಾಗಿದೆ
  • ನಿಮ್ಮ ಖಾತೆಗೆ ಹಣ ಬರದಿದ್ದರೆ ದೂರು ನೀಡಿ
  • ಟೋಲ್ ಫ್ರೀ ಸಂಖ್ಯೆ ನೀಡಿದೆ ಕೃಷಿ ಸಚಿವಾಲಯ
PM kisan ಯೋಜನೆಯ 10ನೇ ಕಂತಿನ ₹2000 ನಿಮ್ಮ ಖಾತೆಗೆ ಬಂದಿಲ್ಲವೇ? ಹಾಗಿದ್ರೆ ತಕ್ಷಣ ಈ ಕೆಲಸ  ಮಾಡಿ title=

ನವದೆಹಲಿ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನಿನ್ನೆ ಪಿಎಂ ಕಿಸಾನ್ ಯೋಜನೆಯಡಿ 10 ನೇ ಕಂತು ಬಿಡುಗಡೆ ಮಾಡಿದ್ದಾರೆ. ಇದರಿಂದ ರೈತರ ಖಾತೆಗೆ 2000 ರೂ. ಜಮಾ ಮಾಡಲಾಗುತ್ತದೆ. ಕೇಂದ್ರ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯಾದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ 2020 ರ ಸಹಾಯದಿಂದ 20,000 ಕೋಟಿ ರೂಪಾಯಿಗಳನ್ನು 10 ಕೋಟಿಗೂ ಹೆಚ್ಚು ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ.

ರೈತರ ಖಾತೆಗೆ 2000 ರೂ. ಜಮಾ

ಪಿಎಂ-ಕಿಸಾನ್ ಯೋಜನೆ(PM Kisan Samman Nidhi)ಯು ಅತ್ಯಂತ ದುರ್ಬಲ ರೈತ ಕುಟುಂಬಗಳಿಗೆ ಪೂರಕ ಆದಾಯವನ್ನು ಖಾತ್ರಿಪಡಿಸುವುದು ಮಾತ್ರವಲ್ಲದೆ ವಿಶೇಷವಾಗಿ ಸುಗ್ಗಿಯ ಕಾಲದ ಮೊದಲು ಅವರ ಇತರ ಅಗತ್ಯಗಳನ್ನು ಪೂರೈಸುತ್ತದೆ. ಇದರ ಅಡಿಯಲ್ಲಿ ಪ್ರತಿ ರೈತರ ಖಾತೆಗೆ 2000 ರೂ. ಇದರ ಅಡಿಯಲ್ಲಿ, 20 ಸಾವಿರ ಕೋಟಿ ರೂಪಾಯಿಗಳ ಮೊತ್ತವನ್ನು ವರ್ಗಾವಣೆ ಮಾಡುವ ಮೂಲಕ 10 ಕೋಟಿಗೂ ಹೆಚ್ಚು ರೈತ ಕುಟುಂಬಗಳಿಗೆ ಲಾಭವಾಗಲಿದೆ. ಈ ಯೋಜನೆಯಡಿ ಹಣ ಸಿಗದೇ ಇದ್ದಲ್ಲಿ ತಕ್ಷಣವೇ ಕೇಂದ್ರ ಕೃಷಿ ಸಚಿವಾಲಯಕ್ಕೆ ದೂರು ನೀಡಬಹುದು. ಅದರ ಸಂಪೂರ್ಣ ಪ್ರಕ್ರಿಯೆಯನ್ನು ತಿಳಿಯೋಣ.

ಇದನ್ನೂ ಓದಿ : ಬ್ಯಾಂಕ್ ಲಾಕರ್‌ನಲ್ಲಿ ಪತ್ತೆಯಾದ 500 ಕೋಟಿ ಮೌಲ್ಯದ ಪಚ್ಚೆ ಶಿವಲಿಂಗ..!

ಎಲ್ಲಿ ಮತ್ತು ಹೇಗೆ ದೂರು ನೀಡಬೇಕು?

ನಿಮ್ಮ ಖಾತೆಗೆ 2000 ರೂಪಾಯಿ ಬರದೇ ಇದ್ದಲ್ಲಿ ಮೊದಲು ನಿಮ್ಮ ಪ್ರದೇಶದ ಲೆಕ್ಕಾಧಿಕಾರಿ ಹಾಗೂ ಕೃಷಿ ಅಧಿಕಾರಿಯನ್ನು ಸಂಪರ್ಕಿಸಬೇಕು. ಈ ಜನರು ನಿಮ್ಮ ಮಾತುಗಳನ್ನು ಕೇಳದಿದ್ದರೆ ಅಥವಾ ಈ ನಂತರವೂ ಖಾತೆಗೆ ಹಣ(Money) ಬರದಿದ್ದರೆ, ನೀವು ಅದಕ್ಕೆ ಸಂಬಂಧಿಸಿದ ಸಹಾಯವಾಣಿಗೆ ಸಹ ಕರೆ ಮಾಡಬಹುದು. ಈ ಡೆಸ್ಕ್ (PM-KISAN Help Desk) ಸೋಮವಾರದಿಂದ ಶುಕ್ರವಾರದವರೆಗೆ ತೆರೆದಿರುತ್ತದೆ. ಇದಲ್ಲದೇ, ನೀವು(Email) pmkisan-ict@gov.in ಇ-ಮೇಲ್ ಮೂಲಕವೂ ಸಂಪರ್ಕಿಸಬಹುದು. ಇನ್ನೂ ಕೆಲಸ ಮಾಡದಿದ್ದರೆ 011-23381092 (ನೇರ ಸಹಾಯವಾಣಿ) ಸಂಖ್ಯೆಗೆ ಕರೆ ಮಾಡಿ.

ಕೃಷಿ ಸಚಿವಾಲಯಕ್ಕೆ ನೀಡಿ ದೂರು 

ಕೃಷಿ ಸಚಿವಾಲಯದ ಪ್ರಕಾರ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣ(Money)ವು ರೈತರ ಬ್ಯಾಂಕ್ ಖಾತೆಗೆ ತಲುಪದಿದ್ದರೆ, ಅದನ್ನು ತಕ್ಷಣವೇ ಪರಿಹರಿಸಲಾಗುವುದು. ರೈತರ ಖಾತೆಗೆ ಹಣ ಬರದಿದ್ದಲ್ಲಿ ಅಥವಾ ತಾಂತ್ರಿಕ ಸಮಸ್ಯೆ ಕಂಡುಬಂದಲ್ಲಿ ಯಾವುದೇ ಸಂದರ್ಭದಲ್ಲಿ ಸರಿಪಡಿಸಲಾಗುವುದು. ಈ ಯೋಜನೆಯ ಲಾಭವನ್ನು ಪ್ರತಿಯೊಬ್ಬ ರೈತರು ಪಡೆದುಕೊಳ್ಳಲು ಸರ್ಕಾರ ಎಲ್ಲ ರೀತಿಯ ಪ್ರಯತ್ನದಲ್ಲಿದೆ.

ನೀವು ಕೂಡ ಇಲ್ಲಿ ಸಂಪರ್ಕಿಸಬಹುದು

ಈ ಯೋಜನೆಯ ಸ್ಥಿತಿಯನ್ನು ನೀವೇ ಪರಿಶೀಲಿಸಿ ಮತ್ತು ಅರ್ಜಿ ಸಲ್ಲಿಸಬಹುದು. ನೀವು ಯೋಜನೆಯ ರೈತ ಕಲ್ಯಾಣ ವಿಭಾಗದಲ್ಲಿ ಸಂಪರ್ಕಿಸಬಹುದು. ದೆಹಲಿ(Delhi)ಯಲ್ಲಿರುವ ಅದರ ಫೋನ್ ಸಂಖ್ಯೆ 011-23382401 ಆಗಿದ್ದರೆ, ಅದರ ಇ-ಮೇಲ್ ಐಡಿ (pmkisan-hqrs@gov.in).

ಇದನ್ನೂ ಓದಿ : ಹೊಸ ವರ್ಷದಲ್ಲಿ Omicron ವೈರಸ್ ಅಂತ್ಯವಾಗಲಿದೆ!: ವೈದ್ಯಕೀಯ ತಜ್ಞರ ಭರವಸೆ

ಸಚಿವಾಲಯವನ್ನು ಸಂಪರ್ಕಿಸುವ ಸೌಲಭ್ಯ

PM ಕಿಸಾನ್ ಟೋಲ್ ಫ್ರೀ ಸಂಖ್ಯೆ: 18001155266
PM ಕಿಸಾನ್ ಸಹಾಯವಾಣಿ ಸಂಖ್ಯೆ:155261
PM ಕಿಸಾನ್ ಸ್ಥಿರ ದೂರವಾಣಿ ಸಂಖ್ಯೆಗಳು: 011—23381092, 23382401
PM ಕಿಸಾನ್‌ನ ಹೊಸ ಸಹಾಯವಾಣಿ: 011-24300606
PM ಕಿಸಾನ್ ಮತ್ತೊಂದು ಸಹಾಯವಾಣಿಯನ್ನು ಹೊಂದಿದೆ: 0120-6025109 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News