ಬೆಳೆಗಳ ಕನಿಷ್ಠ ಬೆಂಬಲ ಬೆಲೆಯಲ್ಲಿ ಬಂಪರ್ ಹೆಚ್ಚಳ ! ರೈತರಿಗೆ ಭರ್ಜರಿ ಗಿಫ್ಟ್ ನೀಡಿದ ಮೋದಿ ಕ್ಯಾಬಿನೆಟ್ !

Cabinet Meeting Decision: ಇಂದು ಸರ್ಕಾರ ಅನೇಕ ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಿದೆ. ಸರ್ಕಾರದ ಈ ನಿರ್ಧಾರದಿಂದ ರೈತರಿಗೆ ಅನುಕೂಲವಾಗಲಿದೆ.

Written by - Ranjitha R K | Last Updated : Jun 7, 2023, 03:30 PM IST
  • ಸಂಪುಟ ಸಭೆಯಲ್ಲಿ ಸರ್ಕಾರದಿಂದ ಮಹತ್ವದ ನಿರ್ಧಾರ
  • ಎಷ್ಟು ಶೇಕಡಾ ಹೆಚ್ಚಾಗಿದೆ ಕನಿಷ್ಠ ಬೆಂಬಲ ಬೆಲೆ
  • ಈ ಬಾರಿ ಸಾಮಾನ್ಯವಾಗಿರಲಿದೆ ಮುಂಗಾರು
ಬೆಳೆಗಳ ಕನಿಷ್ಠ ಬೆಂಬಲ ಬೆಲೆಯಲ್ಲಿ ಬಂಪರ್ ಹೆಚ್ಚಳ ! ರೈತರಿಗೆ ಭರ್ಜರಿ ಗಿಫ್ಟ್ ನೀಡಿದ ಮೋದಿ ಕ್ಯಾಬಿನೆಟ್ !  title=

Cabinet Meeting Decision : ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಇಂದು ಸರ್ಕಾರ ಅನೇಕ ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಿದೆ. ಸರ್ಕಾರದ ಈ ನಿರ್ಧಾರದಿಂದ ರೈತರಿಗೆ ಅನುಕೂಲವಾಗಲಿದೆ. ಈ ಬಾರಿ ಭತ್ತದ ಮೇಲೆ ಶೇಕಡಾ 7 ರಷ್ಟು  ಕನಿಷ್ಠ ಬೆಂಬಲ ಬೆಲೆಯನ್ನು  ಹೆಚ್ಚಿಸಲಾಗಿದೆ. 

ಎಷ್ಟು ಶೇಕಡಾ ಹೆಚ್ಚಾಗಿದೆ ಕನಿಷ್ಠ ಬೆಂಬಲ ಬೆಲೆ : 
ದೆಹಲಿ ಹೆಸರು ಬೇಳೆ 10.4%, ನೆಲಗಡಲೆ 9%, ಎಳ್ಳು 10.3%, ಭತ್ತ 7%, ಜೋಳ, ಬಜ್ರಾ, ರಾಗಿ, ಮೇಜ್, ತೊಗರಿಬೇಳೆ, ಉದ್ದಿನ ಬೇಳೆ, ಸೋಯಾಬೀನ್ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಲಾಗಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ. 2023-2024 ರ ಹಣಕಾಸು ವರ್ಷದಲ್ಲಿ ಸೂರ್ಯಕಾಂತಿ ಬೀಜದ ಮೇಲೆ ಸುಮಾರು 6-7% ಕನಿಷ್ಠ ಬೆಂಬಲ ಬೆಲೆ ಘೋಷಿಸಲಾಗಿದೆ. ಉದ್ದಿನಬೇಳೆಯ ಬೆಂಬಲ ಬೆಲೆಯನ್ನು 350 ರೂ.ವರೆಗೆ ಹೆಚ್ಚಿಸಲಾಗಿದೆ. ಇದೇ ವೇಳೆ ಮೆಕ್ಕೆಜೋಳದ ಎಂಎಸ್‌ಪಿಯನ್ನು ಕ್ವಿಂಟಲ್‌ಗೆ 128 ರೂ. ಮತ್ತು ಭತ್ತದ ಎಂಎಸ್‌ಪಿಯನ್ನು ಕ್ವಿಂಟಲ್‌ಗೆ 143 ರೂ. ಹೆಚ್ಚಿಸಲಾಗಿದೆ. ಇನ್ನು ಹೆಸರು ಬೇಳೆಯ  ಎಂಎಸ್‌ಪಿಯನ್ನು ಪ್ರತಿ ಕ್ವಿಂಟಲ್‌ಗೆ ಗರಿಷ್ಠ 803 ರೂ ಹೆಚ್ಚಿಸಲಾಗಿದೆ. ಈ ಮೂಲಕ ಹೆಸರು ಬೇಳೆಯ ಎಂಎಸ್‌ಪಿ ಕ್ವಿಂಟಲ್‌ಗೆ 8,558 ರೂ.ಗೆ ಏರಿದಂತಾಗಿದೆ. 
 
ಇದನ್ನೂ ಓದಿ : ಕೇವಲ 5000 ರೂ. ಇದ್ದರೆ ಸಾಕು ಪ್ರತಿ ತಿಂಗಳಿಗೆ 50 ಸಾವಿರ ಆದಾಯದ ಕೆಲಸ ನಿಮಗಾಗಿ ! ಬಲು ಅದ್ಭುತ ಕೇಂದ್ರ ಸರ್ಕಾರದ ಈ ಯೋಜನೆ

ಸಚಿವ ಸಂಪುಟದಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ವಿವರಿಸಿದ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪಿಯೂಷ್ ಗೋಯಲ್, ಕೃಷಿಯಲ್ಲಿ ನಾವು ಕಾಲಕಾಲಕ್ಕೆ ಸಿಎಸಿಪಿ ಶಿಫಾರಸುಗಳನ್ನು ಆಧರಿಸಿ ಎಂಎಸ್‌ಪಿಯನ್ನು ನಿಗದಿಪಡಿಸುಲಾಗುತ್ತದೆ. ಕಳೆದ ಕೆಲವು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಖಾರಿಫ್ ಬೆಳೆಗಳಿಗೆ ಎಂಎಸ್‌ಪಿ ಹೆಚ್ಚಳವಾಗಿದೆ ಎಂದು ಹೇಳಿದ್ದಾರೆ. .

ಈ ಬಾರಿ ಸಾಮಾನ್ಯವಾಗಿರಲಿದೆ  ಮುಂಗಾರು :
ಈ ಬಾರಿ ಮುಂಗಾರು ಕೂಡಾ ಸಾಮಾನ್ಯವಾಗಿರಲಿದೆ. ಹವಾಮಾನ ವೈಪರೀತ್ಯದ ಕಾರಣದಿಂದಾಗಿ ಜೂನ್ 1ರಂದು ಮುಂಗಾರು ಕೇರಳಕ್ಕೆ ಸರಿಯಾದ ಸಮಯಕ್ಕೆ ತಲುಪಲು ಸಾಧ್ಯವಾಗಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ. 

ಇದನ್ನೂ ಓದಿ : Global Economy Outlook: ದುಬಾರಿ ಸಾಲ ವಿಶ್ವದ ಆರ್ಥಿಕ ಬೆಳವಣಿಗೆಗೆ ಭಾರಿ ಪೆಟ್ಟು ನೀಡಲಿದೆ ಎಂದ ವಿಶ್ವ ಬ್ಯಾಂಕ್

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News