DA Hike: ಈ ಸರ್ಕಾರಿ ನೌಕರರ ತುಟ್ಟಿಭತ್ಯೆಯಲ್ಲಿ ಶೇ.4 ರಷ್ಟು ಹೆಚ್ಚಳ, ಹಳೆ ಪಿಂಚಣಿ ಯೋಜನೆಯ ಜೊತೆಗೆ ಎಲ್ಟಿಸಿ ಕುರಿತೂ ಕೂಡ ಮಹತ್ವದ ಘೋಷಣೆ!

DA Hike: ಹಿಮಾಚಲ ಪ್ರದೇಶ ಸಿಎಂ ಸುಖ್ವಿಂದರ್ ಸಿಂಗ್ ಸುಖು ಅವರು ಬಜೆಟ್ ಭಾಷಣದಲ್ಲಿ ರಾಜ್ಯ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಎರಡು ಬಹುದೊಡ್ಡ ಉಡುಗೊರೆಗಳನ್ನು ನೀಡಿದ್ದಾರೆ. ಸಿಎಂ ಸುಕು ಬಜೆಟ್ ಭಾಷಣದ ಪ್ರಮುಖ ಅಂಶಗಳನ್ನು ಇಲ್ಲಿವೆ. (Business News In Kannada)  

Written by - Nitin Tabib | Last Updated : Feb 18, 2024, 04:38 PM IST
  • ಹಿಮಾಚಲ ಸಿಎಂ ತಮ್ಮ ಸರ್ಕಾರ ಅಧಿಕಾರ ವಹಿಸಿಕೊಂಡ ತಕ್ಷಣ ಹಳೆಯ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸಲಾಗುವುದು ಎಂದು ಘೋಷಣೆ ಮಾಡಿದ್ದರು.
  • ಸಿಎಂ ಪ್ರಕಾರ, “ಒಟ್ಟು 1,15,000 ಉದ್ಯೋಗಿಗಳು ಈಗಾಗಲೇ OPS ಆಯ್ಕೆ ಮಾಡಿಕೊಂಡಿದ್ದಾರೆ.
  • OPS ಗೆ ಸೇರಿದ ಎಲ್ಲಾ ಉದ್ಯೋಗಿಗಳು ಜನರಲ್ ಪ್ರಾವಿಡೆಂಟ್ ಫಂಡ್ (GPF) ಸದಸ್ಯತ್ವವನ್ನು ಪಡೆದಿದ್ದಾರೆ.
DA Hike: ಈ ಸರ್ಕಾರಿ ನೌಕರರ ತುಟ್ಟಿಭತ್ಯೆಯಲ್ಲಿ ಶೇ.4 ರಷ್ಟು ಹೆಚ್ಚಳ, ಹಳೆ ಪಿಂಚಣಿ ಯೋಜನೆಯ ಜೊತೆಗೆ ಎಲ್ಟಿಸಿ ಕುರಿತೂ ಕೂಡ ಮಹತ್ವದ ಘೋಷಣೆ! title=

DA Hike Update: ಹಿಮಾಚಲ ಪ್ರದೇಶ ಸಿಎಂ ಹಾಗೂ ಹಣಕಾಸು ಸಚಿವ ಸುಖ್ವಿಂದರ್ ಸಿಂಗ್ ಸುಖು ಅವರು 58,444 ಕೋಟಿ  ಗಾತ್ರದ ಬಜೆಟ್ ಮಂಡಿಸಿದ್ದಾರೆ. ಬಜೆಟ್ ಭಾಷಣದಲ್ಲಿ ರಾಜ್ಯ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಹಣಕಾಸು ಖಾತೆಯ ಖಾತೆ ಹೊಂದಿರುವ ಸಿಎಂ ಸುಕು ಭರ್ಜರಿ ಗಿಫ್ಟ್ ನೀಡಿದ್ದಾರೆ. ಹಿಮಾಚಲ ಪ್ರದೇಶ ಸಿಎಂ ಸರ್ಕಾರಿ ನೌಕರರ ತುಟ್ಟಿಭತ್ಯೆಯಲ್ಲಿ ಶೇಕಡಾ 4 ರಷ್ಟು ಹೆಚ್ಚಳ ಮಾಡಿ ಘೋಷಣೆ ಮಾಡಿದ್ದಾರೆ. ಅಷ್ಟೇ ಅಲ್ಲ, ಸಿಎಂ ಸುಖು ಎಲ್ ಟಿಸಿ ಬಗ್ಗೆ ಯೂ ಕೂಡ ಮಹತ್ವದ  ಘೋಷಣೆಯನ್ನು ಮಾಡಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಸರ್ಕಾರ ರಚನೆಯಾದ ನಂತರ ಸಿಎಂ ಸುಖು ಮತ್ತೊಮ್ಮೆ ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಜಾರಿಗೆ ತಂದಿರುವುದು ಇಲ್ಲಿ ಗಮನಾರ್ಹ.(Business News In Kannada)

ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಶನಿವಾರ ನೌಕರರಿಗೆ ನಾಲ್ಕು ಪ್ರತಿಶತ ತುಟ್ಟಿಭತ್ಯೆ ಹೆಚ್ಚಳ ಘೋಷಿಸಿದ್ದಾರೆ. ತಮ್ಮ ಬಜೆಟ್ ಭಾಷಣದಲ್ಲಿ ಸಿಎಂ ಸುಖ್ವಿಂದರ್ ಸಿಂಗ್ ಸುಖು, 'ಎಪ್ರಿಲ್ 1, 2024 ರಿಂದ ತುಟ್ಟಿಭತ್ಯೆಯ 4 ರಷ್ಟು ಹೆಚ್ಚಿಸಲಾಗುವುದು ಎಂದು ನಾನು ಘೋಷಿಸುತ್ತೇನೆ ಎಂದಿದಾರೆ. ಇದಕ್ಕಾಗಿ ಈ ವರ್ಷ ಸುಮಾರು 580 ಕೋಟಿ ರೂ. ಮೀಸಲಿರಿಸಲಾಗುವುದು ಎಂದಿದ್ದಾರೆ. ಎಲ್ಲಾ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ಸಂಬಂಧಿಸಿದ ಬಾಕಿ ಪಾವತಿ ಮತ್ತು ಪಿಂಚಣಿಯನ್ನು ಮಾರ್ಚ್ 01, 2024 ರಿಂದ ಹಂತ ಹಂತವಾಗಿ ಆರಂಭಿಸಲಾಗುವುದು ಎಂದು ಅವರು ಹೇಳಿದ್ದಾರೆ. 

ಇದನ್ನೂ ಓದಿ-PMKMY Scheme: ಈ ಸರ್ಕಾರಿ ಯೋಜನೆಯಲ್ಲಿ, ರೈತರು ತಿಂಗಳಿಗೆ 55 ರೂ. ಹೂಡಿಕೆ ಮಾಡಿ, ಮಾಸಿಕ 3000 ಪಿಂಚಣಿ ಪಡೆಯಬಹುದು!

ಸಿಎಂ ಸುಖು ಅವರು ತಮ್ಮ ಬಜೆಟ್ ಭಾಷಣದಲ್ಲಿ, '01 ಜನವರಿ 2016 ರಿಂದ 31 ಡಿಸೆಂಬರ್ 2021 ರ ನಡುವೆ ನಿವೃತ್ತರಾದ ನೌಕರರ ರಜೆ ನಗದೀಕರಣ ಮತ್ತು ಪದವಿಗೆ ಸಂಬಂಧಿಸಿದ ಬಾಕಿಗಳನ್ನು 01 ಮಾರ್ಚ್ 2024 ರಿಂದ ಹಂತ ಹಂತವಾಗಿ ಪಾವತಿಸಲಾಗುವುದು' ಎಂದು ಹೇಳಿದ್ದಾರೆ. ರಾಜ್ಯ ನೌಕರರ ಎಲ್‌ಟಿಸಿಗೆ ಸಂಬಂಧಿಸಿದಂತೆ ಸಿಎಂ ಸುಖು ಕೂಡ ಮಹತ್ವದ ಘೋಷಣೆ ಮಾಡಿದ್ದಾರೆ. ಬಜೆಟ್ ಭಾಷಣದಲ್ಲಿ ಮಾತನಾಡಿದ ಸಿಎಂ ಸುಖ್ವಿಂದರ್ ಸಿಂಗ್ ಸುಖು, 'ಇದುವರೆಗೆ ರಾಜ್ಯದ ನೌಕರರು ತಮ್ಮ ಸೇವಾ ಅವಧಿಯ ಕೊನೆಯಲ್ಲಿ ಒಮ್ಮೆ ಮಾತ್ರ ಎಲ್‌ಟಿಸಿ ತೆಗೆದುಕೊಳ್ಳಬಹುದಾಗಿತ್ತು ಆದರೆ, ಏಪ್ರಿಲ್ 01, 2024 ರ ನಂತರ, ರಾಜ್ಯದ ಉದ್ಯೋಗಿಗಳು ತಮ್ಮ ಸೇವಾ ಅವಧಿಯಲ್ಲಿ ಕನಿಷ್ಠ ಎರಡು ಬಾರಿ LTC ಯ ಸೌಲಭ್ಯವನ್ನು ಪಡೆಯಬಹುದು ಎಂದು ಘೋಷಿಸಲು ನನಗೆ ಸಂತಸವಾಗುತ್ತಿದೆ ಎಂದಿದ್ದಾರೆ.

ಇದನ್ನೂ ಓದಿ-Best Saving Scheme: ಮ್ಯಾಚುರಿಟಿ ಬಳಿಕ ನಿಮ್ಮ ಹಣ ದುಪ್ಪಟ್ಟಾಗಬೇಕೆ? ಕೇವಲ ₹1000 ಮೂಲಕ ಈ ಯೋಜನೆಯಲ್ಲಿ ಹೂಡಿಕೆ ಆರಂಭಿಸಿ!

ಹಿಮಾಚಲ ಸಿಎಂ ತಮ್ಮ ಸರ್ಕಾರ ಅಧಿಕಾರ ವಹಿಸಿಕೊಂಡ ತಕ್ಷಣ ಹಳೆಯ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸಲಾಗುವುದು ಎಂದು ಘೋಷಣೆ ಮಾಡಿದ್ದರು. ಸಿಎಂ ಪ್ರಕಾರ, “ಒಟ್ಟು 1,15,000 ಉದ್ಯೋಗಿಗಳು ಈಗಾಗಲೇ OPS ಆಯ್ಕೆ ಮಾಡಿಕೊಂಡಿದ್ದಾರೆ. OPS ಗೆ ಸೇರಿದ ಎಲ್ಲಾ ಉದ್ಯೋಗಿಗಳು ಜನರಲ್ ಪ್ರಾವಿಡೆಂಟ್ ಫಂಡ್ (GPF) ಸದಸ್ಯತ್ವವನ್ನು ಪಡೆದಿದ್ದಾರೆ. NPS ನಿಂದ OPS ಗೆ ಸ್ಥಳಾಂತರಗೊಂಡ ಸುಮಾರು 5,000 ಉದ್ಯೋಗಿಗಳಿಗೆ ನಿವೃತ್ತಿಯ ನಂತರ OPS ಪ್ರಕಾರ ವೇತನ ಮತ್ತು ಪಿಂಚಣಿ ಆದೇಶಗಳನ್ನು (PPO) ನೀಡಲಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News